ಬಾಗಲಕೋಟೆ: ಅರಣ್ಯ ಇಲಾಖೆ ಅಧಿಕಾರಿ ಮನೆಯ ಮೇಲೆ ಎಸಿಬಿ ದಾಳಿ ಮಾಡಿಸಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದೆ.
ನವಗರದ 15ನೇ ಸೆಕ್ಟರ್ನಲ್ಲಿರುವ ಬಾದಾಮಿ ಆರ್ಎಫ್ಒ ಶಿವಾನಂದ ಖೇಡಗಿ ಅವರ ಕಚೇರಿ, ಮನೆ ಮತ್ತು ಅಂಗಡಿ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬಾದಾಮಿಯಲ್ಲಿರುವ ಅರಣ್ಯ ಇಲಾಖೆ ಕಚೇರಿ ಹಾಗೂ ಶಿವಾನಂದ ಅವರ ಅಳಿಯಂದಿರ ಎರಡು ಮನೆಗಳ ಮೇಲೂ ದಾಳಿ ಮಾಡಿ ಪ್ರಮುಖ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಗಂಧದ ತುಂಡುಗಳು ಪತ್ತೆ:
ದಾಳಿ ವೇಳೆ ಶಿವಾನಂದ ಖೇಡಗಿ ಅವರ ನಿವಾಸದಲ್ಲಿ ಕೌಂಟಿಂಗ್ ಮಷಿನ್ ಪತ್ತೆ, ಗಂಧದ ತುಂಡುಗಳು ಪತ್ತೆಯಾಗಿದ್ದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಕಾಗದ ಪತ್ರಗಳ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಮಂಗಳೂರು: ಮೆಸ್ಕಾಂ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ