ETV Bharat / sports

ಐಪಿಎಲ್‌ನಲ್ಲಿ ಭಾರತೀಯ ನಾಯಕರ ಯಶಸ್ಸು ರಾಷ್ಟ್ರೀಯ ತಂಡಕ್ಕೆ ಸಹಕಾರಿ: ರಾಹುಲ್​ ದ್ರಾವಿಡ್

author img

By

Published : Jun 7, 2022, 9:23 PM IST

ಐಪಿಎಲ್​ನಲ್ಲಿ ನಾಯಕರಾಗಿ ಯಶಸ್ಸು ಸಾಧಿಸಿದ ಭಾರತ ತಂಡದ ಕ್ರಿಕೆಟಿಗರ ಬಗ್ಗೆ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕತ್ವವು ಆಟಗಾರರನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದಿದ್ದಾರೆ.

team-dravid
ರಾಹುಲ್​ ದ್ರಾವಿಡ್

ನವದೆಹಲಿ: ಐಪಿಎಲ್‌ನಂತಹ ಟೂರ್ನಿಯಲ್ಲಿ ನಾಯಕರಾಗಿ ಭಾರತೀಯ ಆಟಗಾರರು ಯಶಸ್ಸು ಕಂಡರೆ ಅದು ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ನಾಯಕತ್ವದಲ್ಲಿ ಪಳಗಿದ ಕ್ರಿಕೆಟಿಗ ವೃತ್ತಿ ಬದುಕಿನಲ್ಲಿ ಇನ್ನಷ್ಟು ವೇಗವನ್ನು ಪಡೆಯಲಿದ್ದಾನೆ ಎಂದು ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಟ್ಟಿದ್ದಾರೆ.

ಗುಜರಾತ್​ ಟೈಟಾನ್ಸ್​ ಅನ್ನು ಚಾಂಪಿಯನ್​ ಮಾಡಿದ ಹಾರ್ದಿಕ್​ ಪಾಂಡ್ಯಾ ನಿಜಕ್ಕೂ ಅಭಿನಂದನಾರ್ಹ. ಅವರೊಬ್ಬ ಅದ್ಭುತ ಆಟಗಾರ. ಇನ್ನೊಂದು ಹೊಸ ತಂಡದ ಸಾರಥ್ಯ ವಹಿಸಿದ್ದ ಕೆ.ಎಲ್​ ರಾಹುಲ್ ಕೂಡ ಉತ್ತಮ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಫೈನಲ್​ನಲ್ಲಿ ಸೋತರೂ ರಾಜಸ್ತಾನ ರಾಯಲ್ಸ್​ ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಸಂಜು ಸ್ಯಾಮ್ಸನ್​ ನಾಯಕತ್ವ ಕೂಡ ಪ್ರಭಾವದಿಂದ ಕೂಡಿದೆ ಎಂದು ರಾಹುಲ್​ ಹೊಗಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ದ್ರಾವಿಡ್, ಯುವ ಬ್ಯಾಟರ್‌ಗಳು ತಂಡವನ್ನು ಮುನ್ನಡೆಸುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ಇದು ಆಟಗಾರರಾಗಿ ಬೆಳೆಯಲು ಮತ್ತು ರಾಷ್ಟ್ರೀಯ ತಂಡಕ್ಕೆ ನಿಜಕ್ಕೂ ಸಹಾಯವಾಗಲಿದೆ. ಕಠಿಣ ಪರಿಸ್ಥಿತಿಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ತಂಡಗಳನ್ನು ಮುನ್ನಡೆಸಿದ ಅನುಭವ ಇರಬೇಕು. ಈ ನಿಟ್ಟಿನಲ್ಲಿ ಐಪಿಎಲ್​ನಲ್ಲಿ ಭಾರತೀಯ ಆಟಗಾರರು ತೋರಿದ ನಾಯಕತ್ವ ಗುಣವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್​ ಸೇವೆ ತಂಡಕ್ಕೆ ಅಗತ್ಯವಾಗಿದೆ. ಹಾರ್ದಿಕ್​ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸಿ ತಮ್ಮಲ್ಲಿ ಒಬ್ಬ ನಾಯಕನಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಬೌಲಿಂಗ್​ಗೆ ಮರಳಿರುವುದು ನಿಜಕ್ಕೂ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ.

ಐಪಿಎಲ್‌ನಲ್ಲಿ ಅವರ ನಾಯಕತ್ವವು ತುಂಬಾ ಪ್ರಭಾವಶಾಲಿಯಾಗಿತ್ತು. ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್​ ಮಾಡಲು ಶಕ್ತರಾದ ಕಾರಣ ಅವರ ಸೇವೆ ಭಾರತ ತಂಡಕ್ಕೆ ಸಂಪೂರ್ಣವಾಗಿ ಸಿಗಲಿದೆ. ಕ್ರಿಕೆಟಿಗನಾಗಿ ನಾವು ಅವರಿಂದ ಉತ್ಕೃಷ್ಟ ಆಟವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ-20 ಸರಣಿಯಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ಸಜ್ಜಾಗಿದೆ.

ಓದಿ: ಸಿಡಬ್ಲ್ಯುಜಿ ತಂಡಕ್ಕೆ ಮತ್ತೆ ಸೇರ್ಪಡೆಗೊಂಡ ಟೇಬಲ್‌ ಟೆನಿಸ್​​​ ಆಟಗಾರ್ತಿ ದಿಯಾ ಚಿತಾಲೆ

ನವದೆಹಲಿ: ಐಪಿಎಲ್‌ನಂತಹ ಟೂರ್ನಿಯಲ್ಲಿ ನಾಯಕರಾಗಿ ಭಾರತೀಯ ಆಟಗಾರರು ಯಶಸ್ಸು ಕಂಡರೆ ಅದು ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ನಾಯಕತ್ವದಲ್ಲಿ ಪಳಗಿದ ಕ್ರಿಕೆಟಿಗ ವೃತ್ತಿ ಬದುಕಿನಲ್ಲಿ ಇನ್ನಷ್ಟು ವೇಗವನ್ನು ಪಡೆಯಲಿದ್ದಾನೆ ಎಂದು ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಟ್ಟಿದ್ದಾರೆ.

ಗುಜರಾತ್​ ಟೈಟಾನ್ಸ್​ ಅನ್ನು ಚಾಂಪಿಯನ್​ ಮಾಡಿದ ಹಾರ್ದಿಕ್​ ಪಾಂಡ್ಯಾ ನಿಜಕ್ಕೂ ಅಭಿನಂದನಾರ್ಹ. ಅವರೊಬ್ಬ ಅದ್ಭುತ ಆಟಗಾರ. ಇನ್ನೊಂದು ಹೊಸ ತಂಡದ ಸಾರಥ್ಯ ವಹಿಸಿದ್ದ ಕೆ.ಎಲ್​ ರಾಹುಲ್ ಕೂಡ ಉತ್ತಮ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಫೈನಲ್​ನಲ್ಲಿ ಸೋತರೂ ರಾಜಸ್ತಾನ ರಾಯಲ್ಸ್​ ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಸಂಜು ಸ್ಯಾಮ್ಸನ್​ ನಾಯಕತ್ವ ಕೂಡ ಪ್ರಭಾವದಿಂದ ಕೂಡಿದೆ ಎಂದು ರಾಹುಲ್​ ಹೊಗಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ದ್ರಾವಿಡ್, ಯುವ ಬ್ಯಾಟರ್‌ಗಳು ತಂಡವನ್ನು ಮುನ್ನಡೆಸುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ಇದು ಆಟಗಾರರಾಗಿ ಬೆಳೆಯಲು ಮತ್ತು ರಾಷ್ಟ್ರೀಯ ತಂಡಕ್ಕೆ ನಿಜಕ್ಕೂ ಸಹಾಯವಾಗಲಿದೆ. ಕಠಿಣ ಪರಿಸ್ಥಿತಿಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ತಂಡಗಳನ್ನು ಮುನ್ನಡೆಸಿದ ಅನುಭವ ಇರಬೇಕು. ಈ ನಿಟ್ಟಿನಲ್ಲಿ ಐಪಿಎಲ್​ನಲ್ಲಿ ಭಾರತೀಯ ಆಟಗಾರರು ತೋರಿದ ನಾಯಕತ್ವ ಗುಣವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್​ ಸೇವೆ ತಂಡಕ್ಕೆ ಅಗತ್ಯವಾಗಿದೆ. ಹಾರ್ದಿಕ್​ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸಿ ತಮ್ಮಲ್ಲಿ ಒಬ್ಬ ನಾಯಕನಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಬೌಲಿಂಗ್​ಗೆ ಮರಳಿರುವುದು ನಿಜಕ್ಕೂ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ.

ಐಪಿಎಲ್‌ನಲ್ಲಿ ಅವರ ನಾಯಕತ್ವವು ತುಂಬಾ ಪ್ರಭಾವಶಾಲಿಯಾಗಿತ್ತು. ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್​ ಮಾಡಲು ಶಕ್ತರಾದ ಕಾರಣ ಅವರ ಸೇವೆ ಭಾರತ ತಂಡಕ್ಕೆ ಸಂಪೂರ್ಣವಾಗಿ ಸಿಗಲಿದೆ. ಕ್ರಿಕೆಟಿಗನಾಗಿ ನಾವು ಅವರಿಂದ ಉತ್ಕೃಷ್ಟ ಆಟವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ-20 ಸರಣಿಯಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ಸಜ್ಜಾಗಿದೆ.

ಓದಿ: ಸಿಡಬ್ಲ್ಯುಜಿ ತಂಡಕ್ಕೆ ಮತ್ತೆ ಸೇರ್ಪಡೆಗೊಂಡ ಟೇಬಲ್‌ ಟೆನಿಸ್​​​ ಆಟಗಾರ್ತಿ ದಿಯಾ ಚಿತಾಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.