ETV Bharat / sports

ಡಿಆರ್​ಎಸ್​ ಪ್ರಶ್ನಿಸಿ ಡಿಆರ್​ಎಸ್​ ಪಡೆದ ಆರ್​ ಅಶ್ವಿನ್​: ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲು

author img

By

Published : Jun 15, 2023, 1:21 PM IST

ತಮಿಳುನಾಡು ಪ್ರೀಮಿಯರ್​ ಲೀಗ್​ನಲ್ಲಿ ಮೈದಾನ ಅಂಪೈರ್​ ಅಲ್ಲದೇ, ಕೊನೆಯ ನಿರ್ಣಯವಾಗಿರುವ ಮೂರನೇ ಅಂಪೈರ್​ ನಿರ್ಧಾರವನ್ನು ಪ್ರಶ್ನಿಸಿ ಡಿಆರ್​ಎಸ್​ ಸಲ್ಲಿಸಲಾಗಿದೆ. ಅದು ಕೇಳಿದ್ದು ಭಾರತದ ಹಿರಿಯ ಸ್ಪಿನ್ನರ್​ ಆರ್​ ಅಶ್ವಿನ್.

ಡಿಆರ್​ಎಸ್​ ಪ್ರಶ್ನಿಸಿ ಡಿಆರ್​ಎಸ್​ ಪಡೆದ ಆರ್​ ಅಶ್ವಿನ್
ಡಿಆರ್​ಎಸ್​ ಪ್ರಶ್ನಿಸಿ ಡಿಆರ್​ಎಸ್​ ಪಡೆದ ಆರ್​ ಅಶ್ವಿನ್

ಚೆನ್ನೈ(ತಮಿಳುನಾಡು): ಔಟ್​ ಅಥವಾ ನಾಟೌಟ್​ ವಿಚಾರದಲ್ಲಿ ಅನುಮಾನ ಮೂಡಿದಾಗ ತಂಡ ಅಥವಾ ಆಟಗಾರ ಮೈದಾನದ ಅಂಪೈರ್​ ನಿರ್ಧಾರವನ್ನು ಪ್ರಶ್ನಿಸಿ ಮೂರನೇ ಅಂಪೈರ್​ಗೆ ಡಿಆರ್​ಎಸ್​ ನಿಯಮದ ಮೂಲಕ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಂದ ಬರುವ ನಿರ್ಣಯ ಅಂತಿಮವಾಗಿರುತ್ತದೆ. ಆದರೆ, ತಮಿಳುನಾಡು ಪ್ರೀಮಿಯರ್​ ಲೀಗ್(ಟಿಎನ್​ಪಿಎಲ್​)​ನಲ್ಲಿ ವಿಚಿತ್ರ ವಿದ್ಯಮಾನವೊಂದು ನಡೆದಿದ್ದು, ಡಿಆರ್​ಎಸ್​ ಮೂಲಕ ಥರ್ಡ್​ ಅಂಪೈರ್​ ನೀಡಿದ ನಿರ್ಣಯವನ್ನು ಮರುಪ್ರಶ್ನಿಸಿ ಭಾರತ ತಂಡದ ಹಿರಿಯ ಸ್ಪಿನ್​ ಮಾಂತ್ರಿಕ ಆರ್​.ಅಶ್ವಿನ್​ ಮತ್ತೊಂದು ಡಿಆರ್​ಎಸ್​ ಪಡೆದಿದ್ದಾರೆ. ಇದು ಕ್ರಿಕೆಟ್​ ಇತಿಹಾಸದಲ್ಲಿಯೇ ಮೊದಲ ಘಟನೆಯಾಗಿದೆ.

ಕೊಯಮತ್ತೂರಿನಲ್ಲಿ ಬುಧವಾರ ರಾತ್ರಿ ನಡೆದ ದಿಂಡಿಗಲ್ ಡ್ರ್ಯಾಗನ್ ಮತ್ತು ತಿರುಚ್ಚಿ ಪಂದ್ಯದಲ್ಲಿ ಈ ವಿಚಿತ್ರ ಘಟಿಸಿತು. ಸ್ಪಿನ್ನರ್​ ಆರ್​. ಅಶ್ವಿನ್​ ಬೌಲಿಂಗ್​ನಲ್ಲಿ ದಿಂಡಿಗಲ್​ ತಂಡದ ಬ್ಯಾಟರ್​ ರಾಜ್‌ಕುಮಾರ್‌ ಬಲವಾಗಿ ಹೊಡೆಯಲು ಹೋದಾಗ ಚೆಂಡು ಕೀಪರ್​ ಕೈಗವಸು ಸೇರಿತು. ಬ್ಯಾಟ್​- ಬೌಲ್​ ತಾಕಿದ ಸದ್ದು ಕೇಳಿ ಬಂದಂತಾಗಿ ಅಶ್ವಿನ್​ ಔಟ್​ ಮಾಡಿದ ಸಂಭ್ರಮದಲ್ಲಿದ್ದರು. ಮೈದಾನದ ಅಂಪೈರ್​ ಕೂಡ ಔಟ್​ ನಿರ್ಣಯ ನೀಡಿದರು.

ಆದರೆ, ತಕ್ಷಣವೇ ಬ್ಯಾಟರ್​ ಅಂಪೈರ್​ ನಿರ್ಧಾರದ ವಿರುದ್ಧ ಡಿಆರ್​ಎಸ್​ ಪಡೆದು ಮೇಲ್ಮನವಿ ಸಲ್ಲಿಸಿದರು. ಬ್ಯಾಟರ್ ತಕರಾರು ಸ್ವೀಕರಿಸಿದ ಅಂಪೈರ್​ ಮೂರನೇ ಅಂಪೈರ್​ಗೆ ಸಲ್ಲಿಸಿದರು. ದೃಶ್ಯಾವಳಿಗಳನ್ನು ಪರಿಶೀಲನೆಯ ವೇಳೆ ಚೆಂಡು ಬ್ಯಾಟ್​ನ ಅತಿ ಸಮೀಪದಲ್ಲಿ ಸಾಗುತ್ತಿರುವುದು ಕಂಡು ಬಂದಿತು. ಇದೇ ವೇಳೆ ಬ್ಯಾಟ್​ ನೆಲಕ್ಕೆ ಬಡಿದಿತ್ತು. ಹೀಗಾಗಿ ಬ್ಯಾಟ್​ಗೆ ಚೆಂಡು ತಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿಲ್ಲ. ಹಲವು ಬಾರಿ ಮರುಪರಿಶೀಲನೆಯ ಬಳಿಕ ಅಂಪೈರ್​ ನಾಟೌಟ್​ ಎಂದು ಘೋಷಿಸಿದರು.

ಅಶ್ವಿನ್​ ಮರು ಡಿಆರ್​ಎಸ್​: ಬ್ಯಾಟರ್​ನ ಡಿಆರ್​ಎಸ್​ ಯಶಸ್ವಿಯಾಗಿ ಮೂರನೇ ಅಂಪೈರ್​​ ನಾಟೌಟ್​ ಎಂದು ಘೋಷಿಸುತ್ತಿದ್ದಂತೆ ಅಶ್ವಿನ್​ ಮೂರನೇ ಅಂಪೈರ್​ ತೀರ್ಪನ್ನೇ ಪ್ರಶ್ನಿಸಿ ಮರುಕ್ಷಣವೇ ಅದರ ವಿರುದ್ಧ ಡಿಆರ್​ಎಸ್​​ ಸಲ್ಲಿಸಿದರು. ಇದನ್ನು ಪುರಸ್ಕರಿಸಿದ ಅಂಪೈರ್​ ಪುನರ್​ಪರಿಶೀಲನೆಗೆ ಸೂಚಿಸಿದರು. ಇದು ಆಟಗಾರರು ಮತ್ತು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತು. ವೀಕ್ಷಕ ವಿವರಣೆಗಾರರು ಕೂಡ ಇದನ್ನು ಅಚ್ಚರಿ ಗಣ್ಣಿನಿಂದ ನೋಡಿ ಇದು ಕ್ರಿಕೆಟ್​ ಇತಿಹಾಸದಲ್ಲಿಯೇ ಮೊದಲ ಸಲವಾಗಿದೆ ಎಂದು ಉದ್ಗರಿಸಿದರು.

ಅಶ್ವಿನ್​ರ ಮೇಲ್ಮನವಿಯನ್ನು ಮರು ಪರಿಶೀಲಿಸಿದಾಗ್ಯೂ ಬ್ಯಾಟ್​ ನೆಲಕ್ಕೆ ತಾಗಿರುವುದು ಕಂಡುಬಂತು. ಇದರಿಂದ ಮೂರನೇ ಅಂಪೈರ್​ ನಾಟೌಟ್​ ತೀರ್ಪನ್ನೇ ಮತ್ತೊಮ್ಮೆ ನೀಡಿದರು. ಇದರಿಂದ ಅಶ್ವಿನ್​ ಈ ವಿಶೇಷ ಮೇಲ್ಮನವಿ ಸಫಲತೆ ಕಾಣಲಿಲ್ಲ.

ಪಂದ್ಯದ ಮುಗಿದ ಬಳಿಕ ಈ ಬಗ್ಗೆ ವಿವರಣೆ ನೀಡಿದ ಅಶ್ವಿನ್​, 'ಟೂರ್ನಿಯಲ್ಲಿ ಡಿಆರ್‌ಎಸ್ ಮೊದಲ ಬಾರಿಗೆ ನೀಡಲಾಗಿದೆ. ಚೆಂಡು ಬ್ಯಾಟ್‌ಗೆ ಸವರಿ ಹೋಗುತ್ತಿರುವುದು ಕಂಡುಬಂತು. ಇನ್ನೊಂದು ಕೋನದಿಂದ ಪರಿಶೀಲಿಸಲಾಗುತ್ತದೆ ಎಂದು ಭಾವಿಸಿ ತೀರ್ಪನ್ನೇ ಮರುಪ್ರಶ್ನಿಸಿದೆ. ಆದರೆ, ಅದೇ ಹಿಂದಿನ ನಿರ್ಣಯವೇ ಬಂದಿತು' ಎಂದು ಹೇಳಿದರು. ಡಿಆರ್‌ಎಸ್ ಗೊಂದಲದ ನಡುವೆಯೂ ಅಶ್ವಿನ್ ನೇತೃತ್ವದ ದಿಂಡಿಗಲ್​ ತಿರುಚ್ಚಿ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ: ICC Test Ranking: ಅಗ್ರ ಮೂರರಲ್ಲಿ ಆಸೀಸ್​ ಬ್ಯಾಟರ್ಸ್​.. 1984 ರ ಬಳಿಕ ಅಪರೂಪದ ದಾಖಲೆ

ಚೆನ್ನೈ(ತಮಿಳುನಾಡು): ಔಟ್​ ಅಥವಾ ನಾಟೌಟ್​ ವಿಚಾರದಲ್ಲಿ ಅನುಮಾನ ಮೂಡಿದಾಗ ತಂಡ ಅಥವಾ ಆಟಗಾರ ಮೈದಾನದ ಅಂಪೈರ್​ ನಿರ್ಧಾರವನ್ನು ಪ್ರಶ್ನಿಸಿ ಮೂರನೇ ಅಂಪೈರ್​ಗೆ ಡಿಆರ್​ಎಸ್​ ನಿಯಮದ ಮೂಲಕ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಂದ ಬರುವ ನಿರ್ಣಯ ಅಂತಿಮವಾಗಿರುತ್ತದೆ. ಆದರೆ, ತಮಿಳುನಾಡು ಪ್ರೀಮಿಯರ್​ ಲೀಗ್(ಟಿಎನ್​ಪಿಎಲ್​)​ನಲ್ಲಿ ವಿಚಿತ್ರ ವಿದ್ಯಮಾನವೊಂದು ನಡೆದಿದ್ದು, ಡಿಆರ್​ಎಸ್​ ಮೂಲಕ ಥರ್ಡ್​ ಅಂಪೈರ್​ ನೀಡಿದ ನಿರ್ಣಯವನ್ನು ಮರುಪ್ರಶ್ನಿಸಿ ಭಾರತ ತಂಡದ ಹಿರಿಯ ಸ್ಪಿನ್​ ಮಾಂತ್ರಿಕ ಆರ್​.ಅಶ್ವಿನ್​ ಮತ್ತೊಂದು ಡಿಆರ್​ಎಸ್​ ಪಡೆದಿದ್ದಾರೆ. ಇದು ಕ್ರಿಕೆಟ್​ ಇತಿಹಾಸದಲ್ಲಿಯೇ ಮೊದಲ ಘಟನೆಯಾಗಿದೆ.

ಕೊಯಮತ್ತೂರಿನಲ್ಲಿ ಬುಧವಾರ ರಾತ್ರಿ ನಡೆದ ದಿಂಡಿಗಲ್ ಡ್ರ್ಯಾಗನ್ ಮತ್ತು ತಿರುಚ್ಚಿ ಪಂದ್ಯದಲ್ಲಿ ಈ ವಿಚಿತ್ರ ಘಟಿಸಿತು. ಸ್ಪಿನ್ನರ್​ ಆರ್​. ಅಶ್ವಿನ್​ ಬೌಲಿಂಗ್​ನಲ್ಲಿ ದಿಂಡಿಗಲ್​ ತಂಡದ ಬ್ಯಾಟರ್​ ರಾಜ್‌ಕುಮಾರ್‌ ಬಲವಾಗಿ ಹೊಡೆಯಲು ಹೋದಾಗ ಚೆಂಡು ಕೀಪರ್​ ಕೈಗವಸು ಸೇರಿತು. ಬ್ಯಾಟ್​- ಬೌಲ್​ ತಾಕಿದ ಸದ್ದು ಕೇಳಿ ಬಂದಂತಾಗಿ ಅಶ್ವಿನ್​ ಔಟ್​ ಮಾಡಿದ ಸಂಭ್ರಮದಲ್ಲಿದ್ದರು. ಮೈದಾನದ ಅಂಪೈರ್​ ಕೂಡ ಔಟ್​ ನಿರ್ಣಯ ನೀಡಿದರು.

ಆದರೆ, ತಕ್ಷಣವೇ ಬ್ಯಾಟರ್​ ಅಂಪೈರ್​ ನಿರ್ಧಾರದ ವಿರುದ್ಧ ಡಿಆರ್​ಎಸ್​ ಪಡೆದು ಮೇಲ್ಮನವಿ ಸಲ್ಲಿಸಿದರು. ಬ್ಯಾಟರ್ ತಕರಾರು ಸ್ವೀಕರಿಸಿದ ಅಂಪೈರ್​ ಮೂರನೇ ಅಂಪೈರ್​ಗೆ ಸಲ್ಲಿಸಿದರು. ದೃಶ್ಯಾವಳಿಗಳನ್ನು ಪರಿಶೀಲನೆಯ ವೇಳೆ ಚೆಂಡು ಬ್ಯಾಟ್​ನ ಅತಿ ಸಮೀಪದಲ್ಲಿ ಸಾಗುತ್ತಿರುವುದು ಕಂಡು ಬಂದಿತು. ಇದೇ ವೇಳೆ ಬ್ಯಾಟ್​ ನೆಲಕ್ಕೆ ಬಡಿದಿತ್ತು. ಹೀಗಾಗಿ ಬ್ಯಾಟ್​ಗೆ ಚೆಂಡು ತಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿಲ್ಲ. ಹಲವು ಬಾರಿ ಮರುಪರಿಶೀಲನೆಯ ಬಳಿಕ ಅಂಪೈರ್​ ನಾಟೌಟ್​ ಎಂದು ಘೋಷಿಸಿದರು.

ಅಶ್ವಿನ್​ ಮರು ಡಿಆರ್​ಎಸ್​: ಬ್ಯಾಟರ್​ನ ಡಿಆರ್​ಎಸ್​ ಯಶಸ್ವಿಯಾಗಿ ಮೂರನೇ ಅಂಪೈರ್​​ ನಾಟೌಟ್​ ಎಂದು ಘೋಷಿಸುತ್ತಿದ್ದಂತೆ ಅಶ್ವಿನ್​ ಮೂರನೇ ಅಂಪೈರ್​ ತೀರ್ಪನ್ನೇ ಪ್ರಶ್ನಿಸಿ ಮರುಕ್ಷಣವೇ ಅದರ ವಿರುದ್ಧ ಡಿಆರ್​ಎಸ್​​ ಸಲ್ಲಿಸಿದರು. ಇದನ್ನು ಪುರಸ್ಕರಿಸಿದ ಅಂಪೈರ್​ ಪುನರ್​ಪರಿಶೀಲನೆಗೆ ಸೂಚಿಸಿದರು. ಇದು ಆಟಗಾರರು ಮತ್ತು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತು. ವೀಕ್ಷಕ ವಿವರಣೆಗಾರರು ಕೂಡ ಇದನ್ನು ಅಚ್ಚರಿ ಗಣ್ಣಿನಿಂದ ನೋಡಿ ಇದು ಕ್ರಿಕೆಟ್​ ಇತಿಹಾಸದಲ್ಲಿಯೇ ಮೊದಲ ಸಲವಾಗಿದೆ ಎಂದು ಉದ್ಗರಿಸಿದರು.

ಅಶ್ವಿನ್​ರ ಮೇಲ್ಮನವಿಯನ್ನು ಮರು ಪರಿಶೀಲಿಸಿದಾಗ್ಯೂ ಬ್ಯಾಟ್​ ನೆಲಕ್ಕೆ ತಾಗಿರುವುದು ಕಂಡುಬಂತು. ಇದರಿಂದ ಮೂರನೇ ಅಂಪೈರ್​ ನಾಟೌಟ್​ ತೀರ್ಪನ್ನೇ ಮತ್ತೊಮ್ಮೆ ನೀಡಿದರು. ಇದರಿಂದ ಅಶ್ವಿನ್​ ಈ ವಿಶೇಷ ಮೇಲ್ಮನವಿ ಸಫಲತೆ ಕಾಣಲಿಲ್ಲ.

ಪಂದ್ಯದ ಮುಗಿದ ಬಳಿಕ ಈ ಬಗ್ಗೆ ವಿವರಣೆ ನೀಡಿದ ಅಶ್ವಿನ್​, 'ಟೂರ್ನಿಯಲ್ಲಿ ಡಿಆರ್‌ಎಸ್ ಮೊದಲ ಬಾರಿಗೆ ನೀಡಲಾಗಿದೆ. ಚೆಂಡು ಬ್ಯಾಟ್‌ಗೆ ಸವರಿ ಹೋಗುತ್ತಿರುವುದು ಕಂಡುಬಂತು. ಇನ್ನೊಂದು ಕೋನದಿಂದ ಪರಿಶೀಲಿಸಲಾಗುತ್ತದೆ ಎಂದು ಭಾವಿಸಿ ತೀರ್ಪನ್ನೇ ಮರುಪ್ರಶ್ನಿಸಿದೆ. ಆದರೆ, ಅದೇ ಹಿಂದಿನ ನಿರ್ಣಯವೇ ಬಂದಿತು' ಎಂದು ಹೇಳಿದರು. ಡಿಆರ್‌ಎಸ್ ಗೊಂದಲದ ನಡುವೆಯೂ ಅಶ್ವಿನ್ ನೇತೃತ್ವದ ದಿಂಡಿಗಲ್​ ತಿರುಚ್ಚಿ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ: ICC Test Ranking: ಅಗ್ರ ಮೂರರಲ್ಲಿ ಆಸೀಸ್​ ಬ್ಯಾಟರ್ಸ್​.. 1984 ರ ಬಳಿಕ ಅಪರೂಪದ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.