ETV Bharat / sports

'ವಿಶ್ವಕಪ್​ನಲ್ಲಿ ರೋಹಿತ್​, ಕೊಹ್ಲಿಯಿಂದ ಬೌಲಿಂಗ್': ಆಲ್‌ರೌಂಡರ್‌ಗಳ ಕೊರತೆ ಬಗ್ಗೆ ಹಾಸ್ಯ ಚಟಾಕಿ

author img

By ETV Bharat Karnataka Team

Published : Aug 21, 2023, 8:24 PM IST

ವಿಶ್ವಕಪ್​ ತಂಡಕ್ಕೆ ಭಾರತದಲ್ಲಿ ಆಲ್​ರೌಂಡರ್​ಗಳ ಕೊರತೆ ಇದೆ ಎಂದು ಪತ್ರಕರ್ತರು ಕೇಳಿದ್ದಕ್ಕೆ ರೋಹಿತ್​ ಶರ್ಮಾ, ಆ ಸಮಯಕ್ಕೆ ವಿರಾಟ್ ಕೊಹ್ಲಿ​, ರೊಹಿತ್​ ಬೌಲಿಂಗ್​ ಮಾಡುತ್ತಾರೆ ಎಂದು ತಮಾಷೆ ಮಾಡಿದರು.

Etv Bharat
Etv Bharat

ಭಾರತ ಕ್ರಿಕೆಟ್‌ ತಂಡದಲ್ಲಿ ಆಳವಾದ ಬ್ಯಾಟಿಂಗ್ ಶಕ್ತಿ​ ಇಲ್ಲ ಎಂಬುದು ಹೆಚ್ಚಾಗಿ ಕೇಳಿಬರುವ ಆರೋಪಗಳಲ್ಲಿ ಒಂದು. ಆರು ಅಥವಾ 7ನೇ ವಿಕೆಟ್​ ಪತನವಾದಲ್ಲಿ ಕೊನೆಯ ಬಾಲಂಗೋಚಿಗಳು 20 ರನ್‌ಗಳಿಸಲೂ ಪರದಾಡುತ್ತಾರೆ. ಇಂಗ್ಲೆಂಡ್​, ಆಸ್ಟ್ರೇಲಿಯಾ ತಂಡಗಳು 9ನೇ ಆಟಗಾರನವರೆಗೂ ಬ್ಯಾಟಿಂಗ್​ ಸಾಮರ್ಥ್ಯ ಬೆಳೆಸಿಕೊಂಡಿದೆ ಎಂಬುದು ಕೆಲವು ಕ್ರಿಕೆಟ್​ ತಜ್ಞರ ಅಭಿಮತ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ನಾಯಕ ರೋಹಿತ್​ ಶರ್ಮಾ, "2011ರಲ್ಲಿ ತಂಡ ಉತ್ತಮವಾಗಿತ್ತು. ಎಲ್ಲರೂ ಲಯದಲ್ಲಿದ್ದರು. ನಮ್ಮ ಬಳಿ ಸದ್ಯ ಯಾರೆಲ್ಲಾ ಉತ್ತಮವಾಗಿದ್ದಾರೆ ಮತ್ತು ಅವರಲ್ಲಿ ಯಾರು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಮನಗಂಡು ಅಂಥವರಿಗೆ ಅವಕಾಶ ನೀಡುತ್ತಾ ಬಂದಿದ್ದೇವೆ. ನಾವು ರಾತ್ರೋರಾತ್ರಿ ಒಬ್ಬರನ್ನು ಬೌಲರ್​ ಆಗಿ ಮಾಡಲು ಸಾಧ್ಯವಿಲ್ಲ. ಈಗ ಆಡುತ್ತಿರುವ ಆಟಗಾರರು ಅವರ ಆಟ ಮತ್ತು ಕೌಶಲ್ಯದಿಂದಾಗಿ ಈ ಸ್ಥಾನದಲ್ಲಿದ್ದಾರೆ. ವಿಶ್ವಕಪ್​ ವೇಳೆಗೆ ಸಾಧ್ಯವಾದಲ್ಲಿ ಶರ್ಮಾ ಮತ್ತು ಕೊಹ್ಲಿ ಬೌಲಿಂಗ್​ ಮಾಡುತ್ತಾರೆ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದೇ ವೇಳೆ ಅಜಿತ್​ ಅಗರ್ಕರ್​ "ಅವರಿಗೆ ಮನವರಿಕೆ ಮಾಡಿದ್ದೇವೆ" ಎಂದು ಹೇಳಿದರು.

ಎಲ್ಲರೂ ಬೌಲಿಂಗ್​ ಮಾಡಬೇಕು, ಬ್ಯಾಟಿಂಗ್​ ಮಾಡಬೇಕು ಎಂಬುದು ಕಷ್ಟ. ಪ್ರತಿಯೊಬ್ಬ ಆಟಗಾರನಿಗೂ ಅವನದೇ ಆದ ಬಲ ಮತ್ತು ದೌರ್ಬಲ್ಯಗಳು ಇರುತ್ತವೆ. ತಂಡ ಸಮತೋಲನ ಕಾಯ್ದುಕೊಳ್ಳಲು ಬ್ಯಾಟರ್​, ಆಲ್​ರೌಂಡರ್​ ಮತ್ತು ಬೌಲರ್​ಗಳ ಮಿಶ್ರಣ ಬೇಕು. ಆದರೆ ಹೆಚ್ಚು ಆಲ್​ರೌಂಡರ್​​ಗಳು ಇರುವ ತಂಡ ಬಲಿಷ್ಠವಾಗಿ ಗೋಚರಿಸುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೇಲ್‌ ಎಂಡ್​ ಬ್ಯಾಟರ್​ಗಳು ರನ್ ಗಳಿಸುತ್ತಿದ್ದಾರೆ. ಇದನ್ನು ಈಗ ಎಲ್ಲಾ ತಂಡಗಳಲ್ಲೂ ನಿರೀಕ್ಷಿಸಲಾಗುತ್ತಿದೆ.

ಭಾರತ ತಂಡದಲ್ಲಿ ಸದ್ಯ ಟೇಲ್​ ಎಂಡ್​ ಬ್ಯಾಟರ್​​​ಗಳೆಂದರೆ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ ಮಾತ್ರ. ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಬ್ಯಾಟಿಂಗ್​ ಸಾಮರ್ಥ್ಯ ಹೊಂದಿಲ್ಲ. 7 ವಿಕೆಟ್​ ಪತನದ ನಂತರ ಭಾರತಕ್ಕೆ ಕೊನೆಯಲ್ಲಿ 20 ರನ್ ಬೇಕಾಗಿದ್ದಲ್ಲಿ ಅದನ್ನೂ ಗಳಿಸುವುದು ಕಠಿಣವಾಗಿರುತ್ತದೆ. ಒತ್ತಡದಲ್ಲಿ ಬ್ಯಾಟ್​ ಮಾಡುವ ಆಟಗಾರರು ಯಾರೂ ಇಲ್ಲ. ಒಂದು ತುದಿಯಲ್ಲಿ ಬ್ಯಾಟರ್ ಇದ್ದರೆ ಅವರಿಗೆ ಕ್ರೀಸ್​ ಬಿಟ್ಟು ಕೊಡುವಷ್ಟಾದರೂ ಬ್ಯಾಟಿಂಗ್​ ಸಾಮರ್ಥ್ಯವಿದ್ದಲ್ಲಿ ತಂಡಕ್ಕೆ ಲಾಭವಾಗುತ್ತದೆ.

  • Rohit Sharma said "2011 team had players who could bat & bowl, this time around, we have to work with players we have for the World Cup, we cannot overnight create players who can bowl". pic.twitter.com/yffQ0GXxrB

    — Johns. (@CricCrazyJohns) August 21, 2023 " class="align-text-top noRightClick twitterSection" data=" ">

ಪ್ರಬಲ ಎದುರಾಳಿ ಯಾರು?: ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್​ ಶರ್ಮಾ, "ಟೂರ್ನಮೆಂಟ್​ ಗೆಲ್ಲುವ ಫೇವರೆಟ್‌ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ನಾವು ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಪಂದ್ಯಗಳನ್ನು ಗೆಲ್ಲಬೇಕು. ಭಾಗವಹಿಸುತ್ತಿರುವ ಯಾವುದೇ ತಂಡವನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಎಲ್ಲರೂ ತಮ್ಮದೇ ಕ್ರಿಕೆಟ್ ಆಡಬಲ್ಲರು. ಹೀಗಾಗಿ ಯಾರನ್ನೂ ಬಲಷ್ಠ ಎಂದು ಹೇಳಲು ಸಾಧ್ಯವಿಲ್ಲ" ಎಂದರು.

ಇದನ್ನೂ ಓದಿ: ತಿಲಕ್ ವರ್ಮಾ ಭಾರತದ ಭರವಸೆಯ ಕ್ರಿಕೆಟ್‌ ಪ್ರತಿಭೆ; ಏಷ್ಯಾಕಪ್​ ಅವರಿಗೆ ದೊಡ್ಡ ಅವಕಾಶ: ಅಜಿತ್​ ಅಗರ್ಕರ್​

ಭಾರತ ಕ್ರಿಕೆಟ್‌ ತಂಡದಲ್ಲಿ ಆಳವಾದ ಬ್ಯಾಟಿಂಗ್ ಶಕ್ತಿ​ ಇಲ್ಲ ಎಂಬುದು ಹೆಚ್ಚಾಗಿ ಕೇಳಿಬರುವ ಆರೋಪಗಳಲ್ಲಿ ಒಂದು. ಆರು ಅಥವಾ 7ನೇ ವಿಕೆಟ್​ ಪತನವಾದಲ್ಲಿ ಕೊನೆಯ ಬಾಲಂಗೋಚಿಗಳು 20 ರನ್‌ಗಳಿಸಲೂ ಪರದಾಡುತ್ತಾರೆ. ಇಂಗ್ಲೆಂಡ್​, ಆಸ್ಟ್ರೇಲಿಯಾ ತಂಡಗಳು 9ನೇ ಆಟಗಾರನವರೆಗೂ ಬ್ಯಾಟಿಂಗ್​ ಸಾಮರ್ಥ್ಯ ಬೆಳೆಸಿಕೊಂಡಿದೆ ಎಂಬುದು ಕೆಲವು ಕ್ರಿಕೆಟ್​ ತಜ್ಞರ ಅಭಿಮತ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ನಾಯಕ ರೋಹಿತ್​ ಶರ್ಮಾ, "2011ರಲ್ಲಿ ತಂಡ ಉತ್ತಮವಾಗಿತ್ತು. ಎಲ್ಲರೂ ಲಯದಲ್ಲಿದ್ದರು. ನಮ್ಮ ಬಳಿ ಸದ್ಯ ಯಾರೆಲ್ಲಾ ಉತ್ತಮವಾಗಿದ್ದಾರೆ ಮತ್ತು ಅವರಲ್ಲಿ ಯಾರು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಮನಗಂಡು ಅಂಥವರಿಗೆ ಅವಕಾಶ ನೀಡುತ್ತಾ ಬಂದಿದ್ದೇವೆ. ನಾವು ರಾತ್ರೋರಾತ್ರಿ ಒಬ್ಬರನ್ನು ಬೌಲರ್​ ಆಗಿ ಮಾಡಲು ಸಾಧ್ಯವಿಲ್ಲ. ಈಗ ಆಡುತ್ತಿರುವ ಆಟಗಾರರು ಅವರ ಆಟ ಮತ್ತು ಕೌಶಲ್ಯದಿಂದಾಗಿ ಈ ಸ್ಥಾನದಲ್ಲಿದ್ದಾರೆ. ವಿಶ್ವಕಪ್​ ವೇಳೆಗೆ ಸಾಧ್ಯವಾದಲ್ಲಿ ಶರ್ಮಾ ಮತ್ತು ಕೊಹ್ಲಿ ಬೌಲಿಂಗ್​ ಮಾಡುತ್ತಾರೆ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದೇ ವೇಳೆ ಅಜಿತ್​ ಅಗರ್ಕರ್​ "ಅವರಿಗೆ ಮನವರಿಕೆ ಮಾಡಿದ್ದೇವೆ" ಎಂದು ಹೇಳಿದರು.

ಎಲ್ಲರೂ ಬೌಲಿಂಗ್​ ಮಾಡಬೇಕು, ಬ್ಯಾಟಿಂಗ್​ ಮಾಡಬೇಕು ಎಂಬುದು ಕಷ್ಟ. ಪ್ರತಿಯೊಬ್ಬ ಆಟಗಾರನಿಗೂ ಅವನದೇ ಆದ ಬಲ ಮತ್ತು ದೌರ್ಬಲ್ಯಗಳು ಇರುತ್ತವೆ. ತಂಡ ಸಮತೋಲನ ಕಾಯ್ದುಕೊಳ್ಳಲು ಬ್ಯಾಟರ್​, ಆಲ್​ರೌಂಡರ್​ ಮತ್ತು ಬೌಲರ್​ಗಳ ಮಿಶ್ರಣ ಬೇಕು. ಆದರೆ ಹೆಚ್ಚು ಆಲ್​ರೌಂಡರ್​​ಗಳು ಇರುವ ತಂಡ ಬಲಿಷ್ಠವಾಗಿ ಗೋಚರಿಸುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೇಲ್‌ ಎಂಡ್​ ಬ್ಯಾಟರ್​ಗಳು ರನ್ ಗಳಿಸುತ್ತಿದ್ದಾರೆ. ಇದನ್ನು ಈಗ ಎಲ್ಲಾ ತಂಡಗಳಲ್ಲೂ ನಿರೀಕ್ಷಿಸಲಾಗುತ್ತಿದೆ.

ಭಾರತ ತಂಡದಲ್ಲಿ ಸದ್ಯ ಟೇಲ್​ ಎಂಡ್​ ಬ್ಯಾಟರ್​​​ಗಳೆಂದರೆ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ ಮಾತ್ರ. ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಬ್ಯಾಟಿಂಗ್​ ಸಾಮರ್ಥ್ಯ ಹೊಂದಿಲ್ಲ. 7 ವಿಕೆಟ್​ ಪತನದ ನಂತರ ಭಾರತಕ್ಕೆ ಕೊನೆಯಲ್ಲಿ 20 ರನ್ ಬೇಕಾಗಿದ್ದಲ್ಲಿ ಅದನ್ನೂ ಗಳಿಸುವುದು ಕಠಿಣವಾಗಿರುತ್ತದೆ. ಒತ್ತಡದಲ್ಲಿ ಬ್ಯಾಟ್​ ಮಾಡುವ ಆಟಗಾರರು ಯಾರೂ ಇಲ್ಲ. ಒಂದು ತುದಿಯಲ್ಲಿ ಬ್ಯಾಟರ್ ಇದ್ದರೆ ಅವರಿಗೆ ಕ್ರೀಸ್​ ಬಿಟ್ಟು ಕೊಡುವಷ್ಟಾದರೂ ಬ್ಯಾಟಿಂಗ್​ ಸಾಮರ್ಥ್ಯವಿದ್ದಲ್ಲಿ ತಂಡಕ್ಕೆ ಲಾಭವಾಗುತ್ತದೆ.

  • Rohit Sharma said "2011 team had players who could bat & bowl, this time around, we have to work with players we have for the World Cup, we cannot overnight create players who can bowl". pic.twitter.com/yffQ0GXxrB

    — Johns. (@CricCrazyJohns) August 21, 2023 " class="align-text-top noRightClick twitterSection" data=" ">

ಪ್ರಬಲ ಎದುರಾಳಿ ಯಾರು?: ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್​ ಶರ್ಮಾ, "ಟೂರ್ನಮೆಂಟ್​ ಗೆಲ್ಲುವ ಫೇವರೆಟ್‌ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ನಾವು ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಪಂದ್ಯಗಳನ್ನು ಗೆಲ್ಲಬೇಕು. ಭಾಗವಹಿಸುತ್ತಿರುವ ಯಾವುದೇ ತಂಡವನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಎಲ್ಲರೂ ತಮ್ಮದೇ ಕ್ರಿಕೆಟ್ ಆಡಬಲ್ಲರು. ಹೀಗಾಗಿ ಯಾರನ್ನೂ ಬಲಷ್ಠ ಎಂದು ಹೇಳಲು ಸಾಧ್ಯವಿಲ್ಲ" ಎಂದರು.

ಇದನ್ನೂ ಓದಿ: ತಿಲಕ್ ವರ್ಮಾ ಭಾರತದ ಭರವಸೆಯ ಕ್ರಿಕೆಟ್‌ ಪ್ರತಿಭೆ; ಏಷ್ಯಾಕಪ್​ ಅವರಿಗೆ ದೊಡ್ಡ ಅವಕಾಶ: ಅಜಿತ್​ ಅಗರ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.