ETV Bharat / sports

ಧೋನಿ ಕ್ರಿಕೆಟ್​ ರೀಎಂಟ್ರಿಗೆ ವೇದಿಕೆ ಸಜ್ಜು... ಐಪಿಎಲ್​ ತಯಾರಿಗೆ ಚೆನ್ನೈಗೆ ಬರಲಿರುವ ಕೂಲ್​ಗೆ​ ಕ್ಯಾಪ್ಟನ್​ - ಧೋನಿ ಕಮ್​ಬ್ಯಾಕ್

2019ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಧೋನಿ ಕೊನೆಯ ಬಾರಿ ಕ್ರಿಕೆಟ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಡೆದ ಭಾರತ ತಂಡದ ಯಾವುದೇ ಸರಣಿಯಲ್ಲೂ ಅವರಿಗೆ ಅವಕಾಶ ನೀಡಿಲ್ಲ. 2020ರ ಐಪಿಎಲ್​ ಆವೃತ್ತಿಗೆ ಮಾರ್ಚ್​ 1 ರಿಂದ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್​ ನಡೆಸಲಿರುವ ಪೂರ್ವ ಸಿದ್ಧತಾ ಶಿಬಿರದಲ್ಲಿ ಧೋನಿ ಅಭ್ಯಾಸ ಆರಂಭಿಸಲಿದ್ದಾರೆ.

MS Dhoni to make comeback
ಐಪಿಎಲ್​ 2020ಗೆ ಧೋನಿ
author img

By

Published : Feb 16, 2020, 7:51 PM IST

ಚೆನ್ನೈ: ಕ್ರಿಕೆಟ್​ನಿಂದ ಕೆಲವು ತಿಂಗಳಗಳ ಕಾಲ ದೂರವಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ಗೂ ಮುನ್ನ ನಡೆಯುವ ಸಿಎಸ್​ಕೆ ಪೂರ್ವ ಸಿದ್ದತಾ ತರಬೇತಿ ಶಿಬಿರದಲ್ಲಿ ಪಾಲಗೊಳ್ಳಲಿದ್ದಾರೆ.

2019ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಧೋನಿ ಕೊನೆಯ ಬಾರಿ ಕ್ರಿಕೆಟ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಡೆದ ಭಾರತ ತಂಡದ ಯಾವುದೇ ಸರಣಿಯಲ್ಲೂ ಅವರಿಗೆ ಅವಕಾಶ ನೀಡಿಲ್ಲ. 2020ರ ಐಪಿಎಲ್​ ಆವೃತ್ತಿಗೆ ಮಾರ್ಚ್​ 1 ರಿಂದ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್​ ನಡೆಸಲಿರುವ ಪೂರ್ವ ಸಿದ್ದತಾ ಶಿಬಿರದಲ್ಲಿ ಧೋನಿ ಅಭ್ಯಾಸ ಆರಂಭಿಸಲಿದ್ದಾರೆ.

ಈಗಾಗಲೆ ಭಾರತ ತಂಡದ ಕೋಚ್​ ರವಿ ಶಾಸ್ತ್ರಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಭಾರತ ತಂಡಕ್ಕೆ ಧೋನಿ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಮರಳಬಹುದು ಎಂದು ಸೂಚನೆ ನೀಡಿದ್ದರು.

ಇದೀಗ ಧೋನಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020 ಟಿ20 ವಿಶ್ವಕಪ್​ನಲ್ಲಿ ಆಡಬೇಕಾದರೆ ಈ ಬಾರಿ ಐಪಿಎಲ್​ ಪ್ರಮುಖವಾಗಿದೆ. ಧೋನಿ ಕೂಡ ಭಾರತ ತಂಡಕ್ಕೆ ಮರಳುವ ಹಂಬಲದಲ್ಲಿದ್ದು, ಈ ಹಿಂದೆಯೇ ಇನ್ನು ಮೂರು ತಿಂಗಳು ತಮ್ಮನ್ನು ಏನು ಕೇಳಬೇಡಿ ಎಂದಿದ್ದರು. ಇದೀಗ ಅವರ ಸಮಯ ಬಂದಿದ್ದು, ಐಪಿಎಲ್​ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದುನೋಡಬೇಕಿದೆ.

ಧೋನಿ ಸಿಎಸ್​ಕೆ ತಂಡವನ್ನು 10 ಬಾರಿ ಮುನ್ನಡೆಸಿದ್ದು, 10 ಬಾರಿಯೂ ಕಡಿಮೆ ಎಂದರೆ ಸೆಮಿಫೈನಲ್​ ಹಂತಕ್ಕೆ ತೆಗದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಮೂರು ಬಾರಿ ಚಾಂಪಿಯನ್​ ಹಾಗೂ 5 ಬಾರಿ ರನ್ನರ್ ಅಪ್​ ಆಗಿದೆ.

ಚೆನ್ನೈ: ಕ್ರಿಕೆಟ್​ನಿಂದ ಕೆಲವು ತಿಂಗಳಗಳ ಕಾಲ ದೂರವಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ಗೂ ಮುನ್ನ ನಡೆಯುವ ಸಿಎಸ್​ಕೆ ಪೂರ್ವ ಸಿದ್ದತಾ ತರಬೇತಿ ಶಿಬಿರದಲ್ಲಿ ಪಾಲಗೊಳ್ಳಲಿದ್ದಾರೆ.

2019ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಧೋನಿ ಕೊನೆಯ ಬಾರಿ ಕ್ರಿಕೆಟ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಡೆದ ಭಾರತ ತಂಡದ ಯಾವುದೇ ಸರಣಿಯಲ್ಲೂ ಅವರಿಗೆ ಅವಕಾಶ ನೀಡಿಲ್ಲ. 2020ರ ಐಪಿಎಲ್​ ಆವೃತ್ತಿಗೆ ಮಾರ್ಚ್​ 1 ರಿಂದ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್​ ನಡೆಸಲಿರುವ ಪೂರ್ವ ಸಿದ್ದತಾ ಶಿಬಿರದಲ್ಲಿ ಧೋನಿ ಅಭ್ಯಾಸ ಆರಂಭಿಸಲಿದ್ದಾರೆ.

ಈಗಾಗಲೆ ಭಾರತ ತಂಡದ ಕೋಚ್​ ರವಿ ಶಾಸ್ತ್ರಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಭಾರತ ತಂಡಕ್ಕೆ ಧೋನಿ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಮರಳಬಹುದು ಎಂದು ಸೂಚನೆ ನೀಡಿದ್ದರು.

ಇದೀಗ ಧೋನಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020 ಟಿ20 ವಿಶ್ವಕಪ್​ನಲ್ಲಿ ಆಡಬೇಕಾದರೆ ಈ ಬಾರಿ ಐಪಿಎಲ್​ ಪ್ರಮುಖವಾಗಿದೆ. ಧೋನಿ ಕೂಡ ಭಾರತ ತಂಡಕ್ಕೆ ಮರಳುವ ಹಂಬಲದಲ್ಲಿದ್ದು, ಈ ಹಿಂದೆಯೇ ಇನ್ನು ಮೂರು ತಿಂಗಳು ತಮ್ಮನ್ನು ಏನು ಕೇಳಬೇಡಿ ಎಂದಿದ್ದರು. ಇದೀಗ ಅವರ ಸಮಯ ಬಂದಿದ್ದು, ಐಪಿಎಲ್​ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದುನೋಡಬೇಕಿದೆ.

ಧೋನಿ ಸಿಎಸ್​ಕೆ ತಂಡವನ್ನು 10 ಬಾರಿ ಮುನ್ನಡೆಸಿದ್ದು, 10 ಬಾರಿಯೂ ಕಡಿಮೆ ಎಂದರೆ ಸೆಮಿಫೈನಲ್​ ಹಂತಕ್ಕೆ ತೆಗದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಮೂರು ಬಾರಿ ಚಾಂಪಿಯನ್​ ಹಾಗೂ 5 ಬಾರಿ ರನ್ನರ್ ಅಪ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.