ETV Bharat / sports

ಪುತ್ರ  ಅರ್ಜುನ್​ಗೆ ತೆಂಡೂಲ್ಕರ್​ ಆ ಮುತ್ತಿನಂತ ಮಾತು ಹೇಳಿದ್ಯಾಕೆ... ಅಷ್ಟಕ್ಕೂ ಆ ಸಲಹೆ ಏನು?

author img

By

Published : May 27, 2019, 12:58 PM IST

ಜೀವನದಲ್ಲಿ ಶಾರ್ಟ್​ಕಟ್​​​ ಬಳಸಬೇಡ ಎಂದು ತನ್ನ ತಂದೆ ಹೇಳಿದ್ದ ಕಿವಿ ಮಾತನ್ನೇ ಸಚಿನ್​ ತೆಂಡೂಲ್ಕರ್, ಪುತ್ರ ಅರ್ಜುನ್​ ತೆಂಡೂಲ್ಕರ್​ಗೆ ಹೇಳಿದ್ದಾರೆ.

ಪುತ್ರನಿಗೆ ಸಚಿನ್​ ತೆಂಡುಲ್ಕರ್​ ಸಲಹೆ

ಮುಂಬೈ: ಜೀವನದಲ್ಲಿ ಶಾರ್ಟ್​ಕಟ್​ ಇರಬಾರದು ಎಂದು ಭಾರತ ತಂಡದ ಮಾಜಿ ಆಟಗಾರ ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​, ಪುತ್ರ ಅರ್ಜುನ್​ ತೆಂಡೂಲ್ಕರ್​ಗೆ ಸಲಹೆ ನೀಡಿದ್ದಾರೆ.

ಮುಂಬೈ ಟಿ-20 ಲೀಗ್​ನಲ್ಲಿ ಅರ್ಜುನ್​ ತೆಂಡೂಲ್ಕರ್​ ಮುಂಬೈ ವೆಸ್ಟ್ರನ್​ ಸೂಪರ್ಬ್​ ತಂಡದ ಪರ ಆಡುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದ ವೇಳೆ ಸಚಿನ್​ ತೆಂಡೂಲ್ಕರ್​ ಕೂಡ ಹಾಜರಿದ್ರು. ಈ ವೇಳೆ ಒತ್ತಡ ಸಮಯವನ್ನ ನಿಭಾಯಿಸುವುದು ಹೇಗೆ ಎಂದು ನಿಮ್ಮ ಪುತ್ರನಿಗೆ ಯಾವ ರೀತಿ ಸಲಹೆ ನೀಡುತ್ತೀರಿ ಎಂದು ಪ್ರಶ್ನೆ ಕೇಳಲಾಯ್ತು.

SACHIN
ತಂದೆ ಸಚಿತ್​ ತೆಂಡುಲ್ಕರ್​ ಜೊತೆ ಅರ್ಜುನ್​ ತೆಂಡುಲ್ಕರ್

ಈ ವೇಳೆ ಮಾತನಾಡಿದ ಸಚಿನ್​, ನಾನು ಯಾವ ವಿಷಯದಲ್ಲೂ ಅರ್ಜುನ್​ಗೆ ಒತ್ತಾಯ ಮಾಡಲ್ಲ. ಕ್ರಿಕೆಟ್​ ಆಡು ಎಂದೂ ನಾನು ಎಂದೂ ಒತ್ತಾಯ ಮಾಡಿಲ್ಲ. ಮೊದಲು ಅರ್ಜುನ್​ ಫುಟ್ಬಾಲ್ ಇಷ್ಟಪಡುತ್ತಿದ್ದ. ನಂತರ ಕ್ರಿಕೆಟ್​ ಆಡಲು ಶುರು ಮಾಡಿದ. ನಿನಗೆ ಯಾವುದು ಇಷ್ಟವೋ ಅದನ್ನೇ ಮಾಡು ಆದ್ರೆ ಯಾವುದಕ್ಕೂ ಶಾರ್ಟ್​ ಕಟ್​ ಬಳಸಬೇಡ ಎಂದು ಸಲಹೆ ಎಂದು ಹೇಳುತ್ತೇನೆ. ನನ್ನ ತಂದೆ ಕೂಡ ಇದನ್ನೇ ಹೇಳಿದ್ದರು ಎಂದಿದ್ದಾರೆ.

ಮುಂಬೈ ಟಿ-20 ಲೀಗ್ ಒಂದು ಉತ್ತಮ ವೇದಿಕೆಯಾಗಿದೆ. ಯುವ ಆಟಗಾರರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮುಂಬೈ: ಜೀವನದಲ್ಲಿ ಶಾರ್ಟ್​ಕಟ್​ ಇರಬಾರದು ಎಂದು ಭಾರತ ತಂಡದ ಮಾಜಿ ಆಟಗಾರ ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​, ಪುತ್ರ ಅರ್ಜುನ್​ ತೆಂಡೂಲ್ಕರ್​ಗೆ ಸಲಹೆ ನೀಡಿದ್ದಾರೆ.

ಮುಂಬೈ ಟಿ-20 ಲೀಗ್​ನಲ್ಲಿ ಅರ್ಜುನ್​ ತೆಂಡೂಲ್ಕರ್​ ಮುಂಬೈ ವೆಸ್ಟ್ರನ್​ ಸೂಪರ್ಬ್​ ತಂಡದ ಪರ ಆಡುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದ ವೇಳೆ ಸಚಿನ್​ ತೆಂಡೂಲ್ಕರ್​ ಕೂಡ ಹಾಜರಿದ್ರು. ಈ ವೇಳೆ ಒತ್ತಡ ಸಮಯವನ್ನ ನಿಭಾಯಿಸುವುದು ಹೇಗೆ ಎಂದು ನಿಮ್ಮ ಪುತ್ರನಿಗೆ ಯಾವ ರೀತಿ ಸಲಹೆ ನೀಡುತ್ತೀರಿ ಎಂದು ಪ್ರಶ್ನೆ ಕೇಳಲಾಯ್ತು.

SACHIN
ತಂದೆ ಸಚಿತ್​ ತೆಂಡುಲ್ಕರ್​ ಜೊತೆ ಅರ್ಜುನ್​ ತೆಂಡುಲ್ಕರ್

ಈ ವೇಳೆ ಮಾತನಾಡಿದ ಸಚಿನ್​, ನಾನು ಯಾವ ವಿಷಯದಲ್ಲೂ ಅರ್ಜುನ್​ಗೆ ಒತ್ತಾಯ ಮಾಡಲ್ಲ. ಕ್ರಿಕೆಟ್​ ಆಡು ಎಂದೂ ನಾನು ಎಂದೂ ಒತ್ತಾಯ ಮಾಡಿಲ್ಲ. ಮೊದಲು ಅರ್ಜುನ್​ ಫುಟ್ಬಾಲ್ ಇಷ್ಟಪಡುತ್ತಿದ್ದ. ನಂತರ ಕ್ರಿಕೆಟ್​ ಆಡಲು ಶುರು ಮಾಡಿದ. ನಿನಗೆ ಯಾವುದು ಇಷ್ಟವೋ ಅದನ್ನೇ ಮಾಡು ಆದ್ರೆ ಯಾವುದಕ್ಕೂ ಶಾರ್ಟ್​ ಕಟ್​ ಬಳಸಬೇಡ ಎಂದು ಸಲಹೆ ಎಂದು ಹೇಳುತ್ತೇನೆ. ನನ್ನ ತಂದೆ ಕೂಡ ಇದನ್ನೇ ಹೇಳಿದ್ದರು ಎಂದಿದ್ದಾರೆ.

ಮುಂಬೈ ಟಿ-20 ಲೀಗ್ ಒಂದು ಉತ್ತಮ ವೇದಿಕೆಯಾಗಿದೆ. ಯುವ ಆಟಗಾರರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.