ETV Bharat / sports

ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ್ದೇಕೆ: ಕೊನೆಗೂ ಬಾಯ್ಬಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

author img

By

Published : Dec 9, 2021, 6:40 PM IST

ಎಎನ್​ಐ ಜೊತೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರು, ಕ್ರಿಕೆಟ್​ ಮಂಡಳಿ ವಿರಾಟ್​ ಕೊಹ್ಲಿಯನ್ನು ಟಿ20 ನಾಯಕತ್ವ ತ್ಯಜಿಸುವಂತೆ ಹೇಳಿರಲಿಲ್ಲ. ಸ್ವತಃ ವಿರಾಟ್​ ಆ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಆಯ್ಕೆಗಾರರು ವೈಟ್​ ಬಾಲ್​​ ತಂಡಗಳಿಗೆ ಪ್ರತ್ಯೇಕ ನಾಯಕರ ಅಗತ್ಯವಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

BCCI President Ganguly opens up on  why removed Kohli as  India's ODI skipper
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಮುಂಬೈ: ಬುಧವಾರ ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್​ ತಂಡವನ್ನು ಘೋಷಿಸಿದ್ದಲ್ಲದೆ, ವಿರಾಟ್​ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸಿತ್ತು. ಆಯ್ಕೆ ಸಮಿತಿ ಸೀಮಿತ ಓವರ್​ಗಳ ತಂಡಗಳಿಗೆ ಇಬ್ಬರು ನಾಯಕರ ಅವಶ್ಯಕತೆಯಿಲ್ಲ ಎಂದು ಭಾವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

ಟಿ20 ನಾಯಕತ್ವ ತ್ಯಜಿಸಲು ಬಿಸಿಸಿಐ ಹೇಳಿರಲಿಲ್ಲ:

ಎಎನ್​ಐ ಜೊತೆ ಮಾತನಾಡಿದ ದಾದಾ, ಕ್ರಿಕೆಟ್​ ಮಂಡಳಿ ವಿರಾಟ್​ ಕೊಹ್ಲಿಯವರನ್ನು ಟಿ20 ನಾಯಕತ್ವ ತ್ಯಜಿಸುವಂತೆ ಹೇಳಿರಲಿಲ್ಲ. ಸ್ವತಃ ವಿರಾಟ್​ ಆ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಆಯ್ಕೆಗಾರರು ವೈಟ್​ ಬಾಲ್​​ ತಂಡಗಳಿಗೆ ಪ್ರತ್ಯೇಕ ನಾಯಕರ ಅಗತ್ಯವಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

"ಬಿಸಿಸಿಐ ಟಿ20 ನಾಯಕತ್ವವನ್ನು ತ್ಯಜಿಸದಂತೆ ಕೊಹ್ಲಿಗೆ ಮನವಿ ಮಾಡಿತ್ತು. ಆದರೆ ಕೊಹ್ಲಿ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಇದೀಗ ಆಯ್ಕೆಗಾರರು ಸೀಮಿತ ಓವರ್​ಗಳ ತಂಡಗಳಿಗೆ ಇಬ್ಬರು ನಾಯಕರಾಗುವುದು ಸರಿಯಲ್ಲ ಎಂದು ಭಾವಿಸಿದ್ದಾರೆ. ಹಾಗಾಗಿ ವಿರಾಟ್​ ಕೊಹ್ಲಿಯನ್ನು ಟೆಸ್ಟ್​ ತಂಡದಲ್ಲಿ ನಾಯಕನಾಗಿ ಮುಂದುವರಿಸಲು ಮತ್ತು ರೋಹಿತ್​ ಶರ್ಮಾ ಅವರಿಗೆ ವೈಟ್ ಬಾಲ್ ತಂಡಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಅಧ್ಯಕ್ಷನಾಗಿ ನಾನು ವೈಯಕ್ತಿಕವಾಗಿ ವಿರಾಟ್​ ಕೊಹ್ಲಿ ಜೊತೆ ಈ ಕುರಿತು ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರೂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ" ಎಂದು ಗಂಗೂಲಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಮೇಲೆ ಭರವಸೆಯಿದೆ:

ರೋಹಿತ್ ಶರ್ಮಾ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ವಿರಾಟ್​ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಭಾರತೀಯ ಕ್ರಿಕೆಟ್​ ಒಳ್ಳೆಯ ಕೈಯಲ್ಲಿದೆ ಎಂದು ಬಿಸಿಸಿಐಗೆ ವಿಶ್ವಾಸವಿದೆ. ಸೀಮಿತ ಓವರ್​ಗಳ ಕ್ರಿಕೆಟ್​ಗೆ ನಾಯಕನಾಗಿ ಇಷ್ಟು ವರ್ಷ ತಂಡವನ್ನು ಮುನ್ನಡೆಸಿದ್ದಕ್ಕೆ ವಿರಾಟ್​ಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಹೇಳಿದ್ದಾರೆ.

ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರೋಹಿತ್ ಶರ್ಮಾ ಟೆಸ್ಟ್ ತಂಡದ ಉಪನಾಯಕನಾಗಿಯೂ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ಬೋರ್ಡ್​ ನೀಡಿದ್ದ 48 ಗಂಟೆ ಸಮಯದಲ್ಲಿ ನಾಯಕತ್ವ ತ್ಯಜಿಸದ ಕೊಹ್ಲಿ, ಬಲವಂತದಿಂದ ಕೆಳಗಿಳಿಸಿದ ಬಿಸಿಸಿಐ

ಮುಂಬೈ: ಬುಧವಾರ ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್​ ತಂಡವನ್ನು ಘೋಷಿಸಿದ್ದಲ್ಲದೆ, ವಿರಾಟ್​ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸಿತ್ತು. ಆಯ್ಕೆ ಸಮಿತಿ ಸೀಮಿತ ಓವರ್​ಗಳ ತಂಡಗಳಿಗೆ ಇಬ್ಬರು ನಾಯಕರ ಅವಶ್ಯಕತೆಯಿಲ್ಲ ಎಂದು ಭಾವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

ಟಿ20 ನಾಯಕತ್ವ ತ್ಯಜಿಸಲು ಬಿಸಿಸಿಐ ಹೇಳಿರಲಿಲ್ಲ:

ಎಎನ್​ಐ ಜೊತೆ ಮಾತನಾಡಿದ ದಾದಾ, ಕ್ರಿಕೆಟ್​ ಮಂಡಳಿ ವಿರಾಟ್​ ಕೊಹ್ಲಿಯವರನ್ನು ಟಿ20 ನಾಯಕತ್ವ ತ್ಯಜಿಸುವಂತೆ ಹೇಳಿರಲಿಲ್ಲ. ಸ್ವತಃ ವಿರಾಟ್​ ಆ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಆಯ್ಕೆಗಾರರು ವೈಟ್​ ಬಾಲ್​​ ತಂಡಗಳಿಗೆ ಪ್ರತ್ಯೇಕ ನಾಯಕರ ಅಗತ್ಯವಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

"ಬಿಸಿಸಿಐ ಟಿ20 ನಾಯಕತ್ವವನ್ನು ತ್ಯಜಿಸದಂತೆ ಕೊಹ್ಲಿಗೆ ಮನವಿ ಮಾಡಿತ್ತು. ಆದರೆ ಕೊಹ್ಲಿ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಇದೀಗ ಆಯ್ಕೆಗಾರರು ಸೀಮಿತ ಓವರ್​ಗಳ ತಂಡಗಳಿಗೆ ಇಬ್ಬರು ನಾಯಕರಾಗುವುದು ಸರಿಯಲ್ಲ ಎಂದು ಭಾವಿಸಿದ್ದಾರೆ. ಹಾಗಾಗಿ ವಿರಾಟ್​ ಕೊಹ್ಲಿಯನ್ನು ಟೆಸ್ಟ್​ ತಂಡದಲ್ಲಿ ನಾಯಕನಾಗಿ ಮುಂದುವರಿಸಲು ಮತ್ತು ರೋಹಿತ್​ ಶರ್ಮಾ ಅವರಿಗೆ ವೈಟ್ ಬಾಲ್ ತಂಡಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಅಧ್ಯಕ್ಷನಾಗಿ ನಾನು ವೈಯಕ್ತಿಕವಾಗಿ ವಿರಾಟ್​ ಕೊಹ್ಲಿ ಜೊತೆ ಈ ಕುರಿತು ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರೂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ" ಎಂದು ಗಂಗೂಲಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಮೇಲೆ ಭರವಸೆಯಿದೆ:

ರೋಹಿತ್ ಶರ್ಮಾ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ವಿರಾಟ್​ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಭಾರತೀಯ ಕ್ರಿಕೆಟ್​ ಒಳ್ಳೆಯ ಕೈಯಲ್ಲಿದೆ ಎಂದು ಬಿಸಿಸಿಐಗೆ ವಿಶ್ವಾಸವಿದೆ. ಸೀಮಿತ ಓವರ್​ಗಳ ಕ್ರಿಕೆಟ್​ಗೆ ನಾಯಕನಾಗಿ ಇಷ್ಟು ವರ್ಷ ತಂಡವನ್ನು ಮುನ್ನಡೆಸಿದ್ದಕ್ಕೆ ವಿರಾಟ್​ಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಹೇಳಿದ್ದಾರೆ.

ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರೋಹಿತ್ ಶರ್ಮಾ ಟೆಸ್ಟ್ ತಂಡದ ಉಪನಾಯಕನಾಗಿಯೂ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ಬೋರ್ಡ್​ ನೀಡಿದ್ದ 48 ಗಂಟೆ ಸಮಯದಲ್ಲಿ ನಾಯಕತ್ವ ತ್ಯಜಿಸದ ಕೊಹ್ಲಿ, ಬಲವಂತದಿಂದ ಕೆಳಗಿಳಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.