ETV Bharat / sitara

ಸುವರ್ಣ ವಾಹಿನಿಯಲ್ಲೂ ಆರಂಭವಾಯ್ತು ಧಾರಾವಾಹಿಗಳ ಮಹಾಸಂಗಮ

author img

By

Published : Sep 14, 2020, 3:40 PM IST

ಸುವರ್ಣ ವಾಹಿನಿಯಲ್ಲಿ ಕೂಡಾ ಧಾರಾವಾಹಿಗಳ ಮಹಾಸಂಗಮ ಆರಂಭವಾಗಿದ್ದು ಈ ವಾರ 'ಸಂಘರ್ಷ' ಹಾಗೂ 'ಮುದ್ದುಲಕ್ಷ್ಮಿ' ಧಾರಾವಾಹಿಗಳ ಮಹಾಸಂಚಿಕೆ ಪ್ರಸಾರವಾಗಲಿದೆ.

Small screen serials Mega episodes
ಧಾರಾವಾಹಿಗಳ ಮಹಾಸಂಗಮ

ಇತ್ತೀಚಿನ ದಿನಗಳಲ್ಲಿ 2 ಧಾರಾವಾಹಿಗಳನ್ನು ಒಟ್ಟಾಗಿರುವ ಮಹಾಸಂಚಿಕೆ ಪ್ರಸಾರವಾಗುತ್ತಿರುವುದು ಕಿರುತೆರೆಯಲ್ಲಿ ಸಾಮಾನ್ಯವಾಗಿದೆ. ಕಳೆದ ವಾರ 'ಗಟ್ಟಿಮೇಳ' ಹಾಗೂ 'ಜೊತೆಜೊತೆಯಲಿ' ಮಹಾ ಸಂಚಿಕೆ ಪ್ರಸಾರವಾಗಿ ವೀಕ್ಷಕರಿಂದ ಮೆಚ್ಚುಗೆ ದೊರೆತಿತ್ತು. 'ಕಸ್ತೂರಿ ನಿವಾಸ' ಹಾಗೂ 'ಸೇವಂತಿ' ಮತ್ತು 'ಕಾವ್ಯಾಂಜಲಿ' ಹಾಗೂ 'ಮನಸಾರೆ' ಧಾರಾವಾಹಿಗಳ ಮಹಾಸಂಚಿಕೆಗಳು ಪ್ರಸಾರವಾಗಿತ್ತು.

ಇದೀಗ ಸ್ಟಾರ್ ಸುವರ್ಣ ವಾಹಿನಿಯ ಸರದಿ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಹಾಗೂ 'ಮುದ್ದುಲಕ್ಷ್ಮಿ' ಒಂದಾಗಿರುವ ಮಹಾಸಂಚಿಕೆ ಇದೇ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಬಾಲ್ಯದ ಗೆಳತಿಯಾಗಿರುವ ಮುದ್ದುಲಕ್ಷ್ಮಿ ಹಾಗೂ ಇಂದಿರಾ ತುಂಬಾ ವರ್ಷಗಳ ನಂತರ ಭೇಟಿಯಾಗುತ್ತಾರೆ. ಮಾತ್ರವಲ್ಲ ಗೆಳತಿಯರಿಬ್ಬರೂ ಜೊತೆಯಾಗಿ ಭೈರಾದೇವಿಯನ್ನು ಎದುರಿಸಲಿದ್ದಾರೆ. ಭೈರಾದೇವಿ ಧ್ರುವಂತ್ ಕುಟುಂಬಕ್ಕೆ ಸೇರಿರುವ ಜಮೀನನ್ನು ಅಕ್ರಮವಾಗಿ ತನ್ನ ವಶ ಮಾಡಿಕೊಂಡಿರುತ್ತಾಳೆ. ಇದೇ ಕಾರಣದಿಂದ ಧ್ರುವಂತ್, ರಾಜೇಶ್, ದೃಷ್ಟಿ, ಸೃಷ್ಟಿ ಹಾಗೂ ಮುದ್ದುಲಕ್ಷ್ಮಿ ಪಾಪನಾಶಂಗೆ ಬರುತ್ತಾರೆ.

Small screen serials Mega episodes
ಧಾರಾವಾಹಿಗಳ ಮಹಾಸಂಗಮ (ಫೋಟೋ ಕೃಪೆ: ಸ್ಟಾರ್ ಸುವರ್ಣ)

ತಮಗಾಗಿರುವ ಅನ್ಯಾಯದ ವಿರುದ್ಧ 'ಮುದ್ದುಲಕ್ಷ್ಮಿ' ಕುಟುಂಬ ಹೋರಾಡಲಿದ್ದು ಅವರಿಗೆ ಇಂದಿರಾ ಸಾಥ್ ನೀಡಲಿದ್ದಾಳೆ. ತನ್ನ ಮಡದಿ ಮುದ್ದುಲಕ್ಷ್ಮಿಯನ್ನು ನಂಬದ ಧ್ರುವಂತ್ ಆಕೆಯ ಶೀಲದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಾನೆ. ಇವರಿಬ್ಬರ ನಡುವಿನ ಸಂಘರ್ಷ ಪಾಪನಾಶಂನಲ್ಲಿ ಕೊನೆಯಾಗಲಿದೆಯಾ..? ಮುನಿಸು ಮರೆತು ಇವರು ಒಂದಾಗುತ್ತಾರಾ...? ದೂರವಿರುವ ಇಂದಿರಾ ಹಾಗೂ ರಾಜ ಹತ್ತಿರವಾಗುತ್ತಾರಾ..? ಎಂಬ ಪ್ರಶ್ನೆಗಳಿಗೆ ಈ ವಾರ ಉತ್ತರ ಸಿಗಲಿದೆ.

ಇತ್ತೀಚಿನ ದಿನಗಳಲ್ಲಿ 2 ಧಾರಾವಾಹಿಗಳನ್ನು ಒಟ್ಟಾಗಿರುವ ಮಹಾಸಂಚಿಕೆ ಪ್ರಸಾರವಾಗುತ್ತಿರುವುದು ಕಿರುತೆರೆಯಲ್ಲಿ ಸಾಮಾನ್ಯವಾಗಿದೆ. ಕಳೆದ ವಾರ 'ಗಟ್ಟಿಮೇಳ' ಹಾಗೂ 'ಜೊತೆಜೊತೆಯಲಿ' ಮಹಾ ಸಂಚಿಕೆ ಪ್ರಸಾರವಾಗಿ ವೀಕ್ಷಕರಿಂದ ಮೆಚ್ಚುಗೆ ದೊರೆತಿತ್ತು. 'ಕಸ್ತೂರಿ ನಿವಾಸ' ಹಾಗೂ 'ಸೇವಂತಿ' ಮತ್ತು 'ಕಾವ್ಯಾಂಜಲಿ' ಹಾಗೂ 'ಮನಸಾರೆ' ಧಾರಾವಾಹಿಗಳ ಮಹಾಸಂಚಿಕೆಗಳು ಪ್ರಸಾರವಾಗಿತ್ತು.

ಇದೀಗ ಸ್ಟಾರ್ ಸುವರ್ಣ ವಾಹಿನಿಯ ಸರದಿ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಹಾಗೂ 'ಮುದ್ದುಲಕ್ಷ್ಮಿ' ಒಂದಾಗಿರುವ ಮಹಾಸಂಚಿಕೆ ಇದೇ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಬಾಲ್ಯದ ಗೆಳತಿಯಾಗಿರುವ ಮುದ್ದುಲಕ್ಷ್ಮಿ ಹಾಗೂ ಇಂದಿರಾ ತುಂಬಾ ವರ್ಷಗಳ ನಂತರ ಭೇಟಿಯಾಗುತ್ತಾರೆ. ಮಾತ್ರವಲ್ಲ ಗೆಳತಿಯರಿಬ್ಬರೂ ಜೊತೆಯಾಗಿ ಭೈರಾದೇವಿಯನ್ನು ಎದುರಿಸಲಿದ್ದಾರೆ. ಭೈರಾದೇವಿ ಧ್ರುವಂತ್ ಕುಟುಂಬಕ್ಕೆ ಸೇರಿರುವ ಜಮೀನನ್ನು ಅಕ್ರಮವಾಗಿ ತನ್ನ ವಶ ಮಾಡಿಕೊಂಡಿರುತ್ತಾಳೆ. ಇದೇ ಕಾರಣದಿಂದ ಧ್ರುವಂತ್, ರಾಜೇಶ್, ದೃಷ್ಟಿ, ಸೃಷ್ಟಿ ಹಾಗೂ ಮುದ್ದುಲಕ್ಷ್ಮಿ ಪಾಪನಾಶಂಗೆ ಬರುತ್ತಾರೆ.

Small screen serials Mega episodes
ಧಾರಾವಾಹಿಗಳ ಮಹಾಸಂಗಮ (ಫೋಟೋ ಕೃಪೆ: ಸ್ಟಾರ್ ಸುವರ್ಣ)

ತಮಗಾಗಿರುವ ಅನ್ಯಾಯದ ವಿರುದ್ಧ 'ಮುದ್ದುಲಕ್ಷ್ಮಿ' ಕುಟುಂಬ ಹೋರಾಡಲಿದ್ದು ಅವರಿಗೆ ಇಂದಿರಾ ಸಾಥ್ ನೀಡಲಿದ್ದಾಳೆ. ತನ್ನ ಮಡದಿ ಮುದ್ದುಲಕ್ಷ್ಮಿಯನ್ನು ನಂಬದ ಧ್ರುವಂತ್ ಆಕೆಯ ಶೀಲದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಾನೆ. ಇವರಿಬ್ಬರ ನಡುವಿನ ಸಂಘರ್ಷ ಪಾಪನಾಶಂನಲ್ಲಿ ಕೊನೆಯಾಗಲಿದೆಯಾ..? ಮುನಿಸು ಮರೆತು ಇವರು ಒಂದಾಗುತ್ತಾರಾ...? ದೂರವಿರುವ ಇಂದಿರಾ ಹಾಗೂ ರಾಜ ಹತ್ತಿರವಾಗುತ್ತಾರಾ..? ಎಂಬ ಪ್ರಶ್ನೆಗಳಿಗೆ ಈ ವಾರ ಉತ್ತರ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.