ನಾಗಿಣಿ ಅಮೃತಾಳಾಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಅಭಿನಯಕ್ಕೆ ಮನಸೋಲದವರಿಲ್ಲ. ಕಿರುತೆರೆ ಮೂಲಕ ಬಣ್ಣದ ಪಯಣ ಆರಂಭಿಸಿದ ದೀಪಿಕಾರನ್ನು ಜನ ಮೆಚ್ಚಿಕೊಂಡಿದ್ದು, ನಾಗಿಣಿಯಾಗಿ ಬದಲಾದ ಬಳಿಕವೇ.
ಮುದ್ದು ಮುಖದ ಚೆಲುವೆ ದೀಪಿಕಾ, ಕಿರುತೆರೆ ಪ್ರಿಯರಿಗೆ ಮಗದಷ್ಟು ಹತ್ತಿರವಾಗಿದ್ದು, ಬಿಗ್ ಬಾಸ್ ಮನೆ ಹೊಕ್ಕ ಬಳಿಕ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟ ದೀಪಿಕಾ, ಮನೆಯೊಳಗಿನ ಸ್ಟ್ರಾಂಗ್ ಆಟಗಾರ್ತಿ ಎಂಬುದಕ್ಕೆ ಟಾಪ್ 4 ಸ್ಥಾನ ಪಡೆದುದೇ ಸಾಕ್ಷಿ.
ಪ್ರವಾಸ ಅಂದ್ರೆ ತುಂಬಾ ಇಷ್ಟ ಪಡುವ ದೀಪಿಕಾಗೆ ಲಾಕ್ಡೌನ್ ಬೇಸರ ತಂದಿದೆಯಂತೆ. ತಿಂಗಳಿನಲ್ಲಿ 15 ದಿನ ಶೂಟಿಂಗ್, ಉಳಿದ 15 ದಿನ ಪ್ರವಾಸಕ್ಕೆ ಮೀಸಲು. ಆದರೆ, ಇದೀಗ ಕೊರೊನಾ ಮಹಾಮಾರಿಯಿಂದ ಬಚಾವಾಗಲು ಪ್ರವಾಸ ಬಿಡಿ, ಮನೆಯಿಂದ ಹೊರಬರಲು ಕೂಡಾ ಎರಡೆರಡು ಬಾರಿ ಆಲೋಚಿಸಬೇಕಾಗಿದೆ.
ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರೆ ಅದಕ್ಕೆ ಮೂಲ ಕಾರಣ ಪ್ರವಾಸ. ಅಲ್ಲದೇ ನಾನಿಂದು ಸ್ವಾವಲಂಬಿಯಾಗಿದ್ದೇನೆ, ಸ್ವಾಭಿಮಾನಿಯುಳ್ಳವಳಾಗಿದ್ದೇನೆಂದರೆ ಅದು ಪ್ರವಾಸದಿಂದಾಗಿ. ಟೂರ್ ಕೇವಲ ಹೊಸ ಪ್ರಪಂಚದ ಪರಿಚಯ ಮಾಡಲ್ಲ. ಬದಲಿಗೆ ಅಲ್ಲಿನ ಸಂಸ್ಕೃತಿ, ಊಟ ಉಪಚಾರದ ಪರಿಚಯ ಕೂಡಾ ಆಗುತ್ತದೆ. ಅದೇ ಕಾರಣದಿಂದಾಗಿ ಪರ್ಯಟನೆ ಅಂದ್ರೆ ನನಗೆ ಫೇವರಿಟ್ ಎನ್ನುವ ನಾಗಿಣಿ ಸಮಯ ಸಿಕ್ಕರೆ ಯಾರಿಗೂ ಕಾಣಲ್ಲ.
ಹೆಚ್ಚಾಗಿ ಸೋಲೋ ಟ್ರಿಪ್ಗಳನ್ನೇ ಇಷ್ಟಪಡುವ ಈಕೆ ಈಗಾಗಲೇ ಶ್ರೀಲಂಕಾ, ಪುಕೆಟ್, ವಯನಾಡು, ಗೋವಾ ಸೇರಿದಂತೆ ಹಲವಾರು ಸ್ಥಳಗಳನ್ನು ಸುತ್ತಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಸಾಂಗವಾಗಿ ನೇರವೇರಿದಿದ್ದರೆ ಈ ಬಾರಿ ಅವರು ಯುರೋಪ್ನಲ್ಲಿರುತ್ತಿದ್ದರು. ಆದರೆ, ಕೊರೊನಾ ಅದಕ್ಕೆ ಕತ್ತರಿಯಾಕಿದೆಯಂತೆ.
ಸದ್ಯ ಈ ವರ್ಷದ ಪ್ರವಾಸ ಕ್ಯಾನ್ಸೆಲ್ ಮಾಡಿರುವ ದೀಪಿಕಾ ಇನ್ನು ಒಂದು ವರ್ಷದ ತನಕ ಅಂತಾರಾಷ್ಟ್ರೀಯ ಪ್ರವಾಸದ ಪ್ಲಾನ್ ಮಾಡುವುದೇ ಇಲ್ಲವಂತೆ! ಪ್ರವಾಸದ ಬದಲಿಗೆ ಕೋವಿಡ್ ಹಾವಳಿ ನಿಂತ ಬಳಿಕ ಸಣ್ಣ ಸಣ್ಣ ಟ್ರಿಪ್ ಹೋಗುತ್ತಾರಂತೆ.