ETV Bharat / sitara

'ನಾ ಹಣದ ಹಿಂದೆ ಹೋದವನಲ್ಲ.. ಆದರೆ, ಮಗಳ ಮದುವೆ ಹಣದ ಮಹತ್ವ ತಿಳಿಸಿತು'

ಕ್ರೇಜಿಸ್ಟಾರ್‌ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ನಟ-ನಿರ್ದೇಶಕ ಅಂದರೆ ತಪ್ಪಾಗುವುದಿಲ್ಲ. ಸಿನಿಮಾಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಕನಸು ಕಾಣುವ ಈ ಕನಸುಗಾರ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಿನಿಮಾ ಮೇಲಿನ ಪ್ರೀತಿ ಹಾಗೂ ನಡೆದು ಬಂದ ಹೆಜ್ಜೆ ಮೆಲುಕು ಹಾಕುತ್ತಾರೆ. ಈ ರವಿಮಾಮ ಕನ್ನಡ ಚಿತ್ರರಂಗಕ್ಕೆ ಕಳಶವಿದ್ದಂತೆ.

author img

By

Published : Jul 31, 2019, 12:57 PM IST

ರವಿಚಂದ್ರನ್

ತಾನೂ ಬೆಳೆದು ತನ್ನ ಸುತ್ತಮುತ್ತ ಇರುವವರನ್ನೂ ಕೈ ಹಿಡಿಯುವ ಕ್ರೇಜಿಸ್ಟಾರ್ ರವಿಚಂದ್ರನ್​​ ಎಂದೂ ಹಣದ ಹಿಂದೆ ಹೋದವರಲ್ಲ. ಆದರೆ, ಈಗ ಈ ಕಲಾವಿದನಿಗೆ ತನ್ನ ಮಗಳ ಮದುವೆಯಿಂದ ಹಣದ ಮಹತ್ವ ಗೊತ್ತಾಗಿದೆಯಂತೆ. ಇನ್ನು ಮುಂದೆ ನಾನು ಚಿತ್ರರಂಗದಲ್ಲಿ ಹಣ ಮಾಡ್ತೀನಿ ಎಂದು ಧೈರ್ಯವಾಗಿ ಹೇಳುತ್ತಾರೆ ರವಿಚಂದ್ರನ್​​. ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ 'ಬಯಲಾಟದ ಭೀಮಣ್ಣ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಆಗಮಿಸಿದ್ದ ವೇಳೆ ಕ್ರೇಜಿಸ್ಟಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

'ಚಾಮುಂಡೇಶ್ವರಿ ಸ್ಟುಡಿಯೋಗೂ ನನಗೂ ಬಹಳ ಅವಿನಾಭಾವ ಸಂಬಂಧವಿದೆ. ಸ್ಟುಡಿಯೋದಲ್ಲಿ ಕೊನೆಯದಾಗಿ ಶೂಟಿಂಗ್ ಆಗಿದ್ದು ನನ್ನ 'ರಣಧೀರ' ಸಿನಿಮಾ. ಇಲ್ಲಿಗೆ ಬಂದರೆ ಹಳೆಯದ್ದೆಲ್ಲಾ ನೆನಪಾಗುತ್ತದೆ ಎಂದರು. ಏನೂ ಗೊತ್ತಿಲ್ಲದೆ ಚಿತ್ರರಂಗಕ್ಕೆ ಬಂದು ತೋಚಿದ್ದನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಸಿನಿಮಾ ಕ್ಷೇತ್ರದಲ್ಲಿ ಏನನ್ನೂ ಮಾಡಬೇಕು ಅಂದುಕೊಂಡವನಲ್ಲ. ಆದರೆ, ಯಾವುದೇ ಕೆಲಸ ಮಾಡಬೇಕಾದರೂ ಶ್ರದ್ಧೆ, ಪ್ರೀತಿಯಿಂದ ಮಾಡುವುದನ್ನಷ್ಟೇ ನಾನು ಕಲಿತಿರುವುದು' ಎಂದು ಹೇಳಿದರು.

'ಬಯಲಾಟದ ಭೀಮಣ್ಣ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ರವಿಚಂದ್ರನ್

ನನಗೆ ಗಾ​​​ಢ್​​​​​​​ ಮತ್ತು ಫಾದರ್ ಎರಡು ಒಬ್ಬರೇ. ಅವರೇ ನನ್ನ ತಂದೆ ವೀರಾಸ್ವಾಮಿ. ಯಾರು ಬೇಕಾದರೂ ಕನಸು ಕಾಣಬಹುದು. ಕನಸು ಕಾಣುವವನೇ ನಿಜವಾದ ಸಾಹುಕಾರ. ಕನಸು ಕಾಣುವವರಿಗಿಂತ ದೊಡ್ಡ ಸಾಹುಕಾರ ಯಾರೂ ಇಲ್ಲ. ನನಗೆ ಬಹಳ ಹತ್ತಿರವಾದ ಬಹಳ ನೋವು ಕೊಟ್ಟ ಸಿನಿಮಾ ಎಂದರೆ ಅದು 'ಏಕಾಂಗಿ'. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಯಾವುದೋ ಒಂದು ಮೂಲೆಯಲ್ಲಿ ಚೇರ್ ಹಾಕಿಕೊಂಡು ಕುಳಿತು ಆ್ಯಕ್ಷನ್-ಕಟ್ ಹೇಳುತ್ತಾರೆ. ಆದರೆ, ನಾನು ಈವರೆಗೂ ಒಬ್ಬ ನಿರ್ದೇಶಕನಾಗಿ ಚೇರ್ ಹಾಕಿ ಕುಳಿತುಕೊಂಡವನಲ್ಲ. ಆರ್ಟಿಸ್ಟ್​​​​​ಗಳ ಎದುರು ನಿಂತುಕೊಂಡೇ ಆ್ಯಕ್ಟ್ ಮಾಡಿಸಿ ಕೆಲಸ ಮಾಡಿಸಿ ನನಗೆ ಅಭ್ಯಾಸ ಎಂದು ಕ್ರೇಜಿಸ್ಟಾರ್ ಹೇಳಿದರು.

ಅಲ್ಲದೆ ನನಗೆ ಖಾಲಿ ಕುಳಿತು ಅಭ್ಯಾಸವಿಲ್ಲ. ಚಿತ್ರರಂಗದಲ್ಲಿ ಸೋಲು-ಗೆಲುವು ಎಂಬುದು ಕಲೆಕ್ಷನ್ ಮೇಲೆ ನಿಂತಿಲ್ಲ. ಈವರೆಗೂ ನಾನು ಡುಡ್ಡಿನ ಬಗ್ಗೆ ಚಿಂತಿಸಿಲ್ಲ. ಆದರೆ, ನನ್ಮ ಮಗಳ ಮದುವೆ ವೇಳೆ ದುಡ್ಡು ಎಷ್ಟು ಮುಖ್ಯ ಎಂದು ನನಗೆ ಅರಿವಾಯಿತು. ಪ್ರತಿ ಲೆಕ್ಕಾಚಾರವೂ ದುಡ್ಡಿನಿಂದಲೇ ಎಂಬುದು ನನಗೆ ಗೊತ್ತಾಯಿತು. ಗುರಿ ಇಟ್ಟುಕೊಂಡು ದುಡ್ಡು ಮಾಡಬೇಕು ಎಂದು ಈಗ ಅನ್ನಿಸುತ್ತಿದೆ. ಇನ್ನು ಮುಂದೆ ನಾನು ದುಡ್ಡು ಸಂಪಾದಿಸುತ್ತೇನೆ ಎಂದು ರವಿಮಾಮ ಆತ್ಮಿವಿಶ್ವಾಸದಿಂದಲೇ ಹೇಳಿದರು.

ತಾನೂ ಬೆಳೆದು ತನ್ನ ಸುತ್ತಮುತ್ತ ಇರುವವರನ್ನೂ ಕೈ ಹಿಡಿಯುವ ಕ್ರೇಜಿಸ್ಟಾರ್ ರವಿಚಂದ್ರನ್​​ ಎಂದೂ ಹಣದ ಹಿಂದೆ ಹೋದವರಲ್ಲ. ಆದರೆ, ಈಗ ಈ ಕಲಾವಿದನಿಗೆ ತನ್ನ ಮಗಳ ಮದುವೆಯಿಂದ ಹಣದ ಮಹತ್ವ ಗೊತ್ತಾಗಿದೆಯಂತೆ. ಇನ್ನು ಮುಂದೆ ನಾನು ಚಿತ್ರರಂಗದಲ್ಲಿ ಹಣ ಮಾಡ್ತೀನಿ ಎಂದು ಧೈರ್ಯವಾಗಿ ಹೇಳುತ್ತಾರೆ ರವಿಚಂದ್ರನ್​​. ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ 'ಬಯಲಾಟದ ಭೀಮಣ್ಣ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಆಗಮಿಸಿದ್ದ ವೇಳೆ ಕ್ರೇಜಿಸ್ಟಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

'ಚಾಮುಂಡೇಶ್ವರಿ ಸ್ಟುಡಿಯೋಗೂ ನನಗೂ ಬಹಳ ಅವಿನಾಭಾವ ಸಂಬಂಧವಿದೆ. ಸ್ಟುಡಿಯೋದಲ್ಲಿ ಕೊನೆಯದಾಗಿ ಶೂಟಿಂಗ್ ಆಗಿದ್ದು ನನ್ನ 'ರಣಧೀರ' ಸಿನಿಮಾ. ಇಲ್ಲಿಗೆ ಬಂದರೆ ಹಳೆಯದ್ದೆಲ್ಲಾ ನೆನಪಾಗುತ್ತದೆ ಎಂದರು. ಏನೂ ಗೊತ್ತಿಲ್ಲದೆ ಚಿತ್ರರಂಗಕ್ಕೆ ಬಂದು ತೋಚಿದ್ದನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಸಿನಿಮಾ ಕ್ಷೇತ್ರದಲ್ಲಿ ಏನನ್ನೂ ಮಾಡಬೇಕು ಅಂದುಕೊಂಡವನಲ್ಲ. ಆದರೆ, ಯಾವುದೇ ಕೆಲಸ ಮಾಡಬೇಕಾದರೂ ಶ್ರದ್ಧೆ, ಪ್ರೀತಿಯಿಂದ ಮಾಡುವುದನ್ನಷ್ಟೇ ನಾನು ಕಲಿತಿರುವುದು' ಎಂದು ಹೇಳಿದರು.

'ಬಯಲಾಟದ ಭೀಮಣ್ಣ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ರವಿಚಂದ್ರನ್

ನನಗೆ ಗಾ​​​ಢ್​​​​​​​ ಮತ್ತು ಫಾದರ್ ಎರಡು ಒಬ್ಬರೇ. ಅವರೇ ನನ್ನ ತಂದೆ ವೀರಾಸ್ವಾಮಿ. ಯಾರು ಬೇಕಾದರೂ ಕನಸು ಕಾಣಬಹುದು. ಕನಸು ಕಾಣುವವನೇ ನಿಜವಾದ ಸಾಹುಕಾರ. ಕನಸು ಕಾಣುವವರಿಗಿಂತ ದೊಡ್ಡ ಸಾಹುಕಾರ ಯಾರೂ ಇಲ್ಲ. ನನಗೆ ಬಹಳ ಹತ್ತಿರವಾದ ಬಹಳ ನೋವು ಕೊಟ್ಟ ಸಿನಿಮಾ ಎಂದರೆ ಅದು 'ಏಕಾಂಗಿ'. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಯಾವುದೋ ಒಂದು ಮೂಲೆಯಲ್ಲಿ ಚೇರ್ ಹಾಕಿಕೊಂಡು ಕುಳಿತು ಆ್ಯಕ್ಷನ್-ಕಟ್ ಹೇಳುತ್ತಾರೆ. ಆದರೆ, ನಾನು ಈವರೆಗೂ ಒಬ್ಬ ನಿರ್ದೇಶಕನಾಗಿ ಚೇರ್ ಹಾಕಿ ಕುಳಿತುಕೊಂಡವನಲ್ಲ. ಆರ್ಟಿಸ್ಟ್​​​​​ಗಳ ಎದುರು ನಿಂತುಕೊಂಡೇ ಆ್ಯಕ್ಟ್ ಮಾಡಿಸಿ ಕೆಲಸ ಮಾಡಿಸಿ ನನಗೆ ಅಭ್ಯಾಸ ಎಂದು ಕ್ರೇಜಿಸ್ಟಾರ್ ಹೇಳಿದರು.

ಅಲ್ಲದೆ ನನಗೆ ಖಾಲಿ ಕುಳಿತು ಅಭ್ಯಾಸವಿಲ್ಲ. ಚಿತ್ರರಂಗದಲ್ಲಿ ಸೋಲು-ಗೆಲುವು ಎಂಬುದು ಕಲೆಕ್ಷನ್ ಮೇಲೆ ನಿಂತಿಲ್ಲ. ಈವರೆಗೂ ನಾನು ಡುಡ್ಡಿನ ಬಗ್ಗೆ ಚಿಂತಿಸಿಲ್ಲ. ಆದರೆ, ನನ್ಮ ಮಗಳ ಮದುವೆ ವೇಳೆ ದುಡ್ಡು ಎಷ್ಟು ಮುಖ್ಯ ಎಂದು ನನಗೆ ಅರಿವಾಯಿತು. ಪ್ರತಿ ಲೆಕ್ಕಾಚಾರವೂ ದುಡ್ಡಿನಿಂದಲೇ ಎಂಬುದು ನನಗೆ ಗೊತ್ತಾಯಿತು. ಗುರಿ ಇಟ್ಟುಕೊಂಡು ದುಡ್ಡು ಮಾಡಬೇಕು ಎಂದು ಈಗ ಅನ್ನಿಸುತ್ತಿದೆ. ಇನ್ನು ಮುಂದೆ ನಾನು ದುಡ್ಡು ಸಂಪಾದಿಸುತ್ತೇನೆ ಎಂದು ರವಿಮಾಮ ಆತ್ಮಿವಿಶ್ವಾಸದಿಂದಲೇ ಹೇಳಿದರು.

Intro:ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ನಟ-ನಿರ್ದೇಶಕ ಅಂದರೆ ತಪ್ಪಲ್ಲ. ಸಿನಿಮಾಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟು ಕನಸು ಕಾಣುವ ಈ ಕನಸುಗಾರ ಚಿತ್ರರಂಗದಲ್ಲಿ "ಏಕಾಂಗಿ". ಯಾವುದೇ ಕಾರ್ಯಕ್ರಮಕ್ಕೆ ಹೋದರು ಸಿನಿಮಾ ಮೇಲಿನ ಪ್ರೀತಿ ನಡೆದುಬಂದ ಹೆಜ್ಜೆಯನ್ನು ಮೆಲುಕುಹಾಕುವ ಇ ರವಿಮಾಮ ಕನ್ನಡ ಚಿತ್ರರಂಗಕ್ಕೆ ಕಳಶವಿದ್ದಂತೆ. ತಾನು ಬೆಳೆದು ತನ್ನ ಸುತ್ತಮುತ್ತ‌ ಇರುವವರನ್ನು ಕೈ ಹಿಡಿಯುವ ಈ ಸಿಪಾಯಿ ಎಂದು ಹಣದ ಹಿಂದೆ ಹೋದವರಲ್ಲ. ಆದರೆ ಈಗ ಈ ಕಲಾವಿದನಿಗೆ ತನ್ನ ಮಗಳ ಮದುವೆ ಇಂದ ಹಣದ ಮಹತ್ವ ಗೊತ್ತಾಗಿದ್ದು ಇನ್ನು ಮುಂದೆ ನಾನು ಚಿತ್ರರಂಗದಲ್ಲಿ ಹಣ ಮಾಡಿ ಮಾಡ್ತೀನಿ ಎಂದು ತುಂಬಾ ಕಾನ್ಫಿಡೆನ್ಸ್ ಅಲ್ಲೇ ಹೇಳಿದ್ರು.


Body:ಎಸ್ ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶನ ಮಾಡಿರುವ ಬಯಲಾಟದ ಭೀಮಣ್ಣ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಆಗಮಿಸಿದ ವೇಳೆ ಕ್ರೇಜಿಸ್ಟಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಅದರಲ್ಲೂ ಚಾಮುಂಡೇಶ್ವರಿ ಸ್ಟುಡಿಯೋಗೂ ನನಗೂ ತುಂಬಾ ಅವಿನವಭಾವ ಸಂಬಂಧವಿದೆ ಸ್ಟುಡಿಯೋದಲ್ಲಿ ಕೊನೆಯದಾಗಿ ಶೂಟಿಂಗ್ ಆಗಿದ್ದು ನನ್ನ ರಣಧೀರ ಸಿನಿಮಾ. ಅದರಿಂದ ಇಲ್ಲಿಗೆ ಬಂದರೆ ಹಳೆಯದು ನೆನಪಾಗುತ್ತೆ ಎಂದರು. ಅಲ್ಲದೆ ಚಿತ್ರರಂಗದಲ್ಲಿ ಏನು ಗೊತ್ತಿಲ್ಲದೆ ಏನೇನೋ ಮಾಡಿಕೊಂಡು ಬಂದಿದ್ದೇನೆ. ಯಾವತ್ತೂ ನಾನು ಸಿನಿಮಾ ಕ್ಷೇತ್ರದಲ್ಲಿ ಏನನ್ನು ಮಾಡಬೇಕು ಅಂದುಕೊಂಡವನಲ್ಲ ಆದರೆ ಯಾವುದೇ ಕೆಲಸ ಮಾಡಬೇಕಾದರೂ ಶ್ರದ್ಧೆಯಿಂದ ಪ್ರೀತಿಯಿಂದ ಮಾಡುವುದಷ್ಟೆ ನಾನು ಕಲಿತಿರುವುದು ಎಂದು ಹೇಳಿದರು.


Conclusion:ಇನ್ನು ಈ ಕ್ರೇಜಿಸ್ಟಾರ್ ಗೆ ಗಾಢ್ ಮತ್ತು ಫಾದರ್ ಎರಡು ಒಬ್ಬರೆ ಅವರೆ ನಮ್ಮ ತಂದೆ ವೀರಸ್ವಾಮಿ.ಅಲ್ಲದೆ ಕನಸು ಕಾಣುವವರು ಬಡವರಾಗಿ ಇರಬಹುದು ಅಥವಾ ಶ್ರೀಮಂತರಾಗಬಹುದು, ಸಾಹುಕಾರರ ಕನಸು ಕನಸು ನನಸಾಗುತ್ತೆ ,ಬಡವರ ಕನಸು ನನಸಾಗಲ್ಲ ಎಂಬ ಮಾತು ಸುಳ್ಳು, ನಿಜವಾಗಲೂ ಕನಸು ಕಾಣುವ ನಿಜವಾದ ಸಾಹುಕಾರ.ಕನಸು ಕಾಣುವ ವರಿಗಿಂತ ದೊಡ್ಡ ಸಾಹುಕಾರ ಈ ಪ್ರಪಂಚದಲ್ಲಿ ಯಾರೂ ಇಲ್ಲ. ಅಲ್ಲದೆ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ಗೆ ತುಂಬಾ ಹತ್ತಿರವಾದ ತುಂಬಾ ಪ್ರೀತಿಸಿದ ತುಂಬಾ ನೋವು ಕೊಟ್ಟ ಸಿನಿಮಾ ಅಂದರೆ ಅದು "ಏಕಾಂಗಿ" ಎಂದ ಕ್ರೇಜಿ ಸ್ಟಾರ್ ಇತ್ತೀಚಿನ ಕೆಲವು ನಿರ್ದೇಶಕರ ಕಾರ್ಯ ವೈಖರಿಯನ್ನು ವ್ಯಂಗ್ಯವಾಗಿ ಬಣ್ಣಿಸಿದ್ರು. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರುಗಳು ಯಾವುದೋ ಒಂದು ಮೂಲೆಯಲ್ಲಿ ಚೇರ್ ಹಾಕಿಕೊಂಡು ಕುಳಿತುಕೊಂಡು ಆರ್ಟಿಸ್ಟ್ ಗಳಿಗೆ ಆಕ್ಷನ್-ಕಟ್ ಹೇಳ್ತಾರೆ.ಅದ್ರೆ ನಾನು ಇವತ್ತಿಗೂ ಶೂಟಿಂಗ್ ಸ್ಪಾಟ್ ನಲ್ಲಿ ನಾನು ಒಬ್ಬ ನಿರ್ದೇಶಕನಾಗಿ ಚೇರ್ ಹಾಕಿಕೊಂಡು ಕುಳಿತುಕೊಳ್ಳುವುದಿಲ್ಲ. ಆರ್ಟಿಸ್ಟ್ ಗಳ ಎದುರು ನಿಂತುಕೊಂಡೆ ಆಕ್ಟ್ ಮಾಡಿಸಿ ಕೆಲಸ ಮಾಡಿ ನನಗೆ ಅಭ್ಯಾಸ. ಅಲ್ಲದೆ ನನಗೆ ಹೆಚ್ಚು ಕುಳಿತು ಅಭ್ಯಾಸವಿಲ್ಲ ಹಾಗೇನಾದರೂ ಕುಳಿತರೆ ಅದು ಮನೆಯಲ್ಲಿ ಇಲ್ಲ ಸ್ಕ್ರಿಪ್ಟ್ ಗೆ ಸಂಬಂಧಿಸಿದಂತೆ ಬರವಣಿಗೆ ವಿಚಾರವಾಗಿ ಕುಳಿತುಕೊಳ್ಳುತ್ತೇನೆ.ಅದನ್ನು ಹೊರತುಪಡಿಸಿ ಬಾಕಿ ಯಾವುದೇ ಟೈಮ್ನಲ್ಲಿ ನಾನು ಕುಳಿತುಕೊಳ್ಳುವುದಿಲ್ಲ ಎಂದು ಕ್ರೇಜಿಸ್ಟಾರ್ ಹೇಳಿದರು. ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ಕ್ಲಬ್ ಮಾಡಿದ ಸಿನಿಮಾಗಳು ಹೆಚ್ಚು ಸಕ್ಸಸ್ ಆಗುತ್ತವೆ ಎಂಬ ಮಾತಿದೆ. ಆದರೆ ಇತ್ತೀಚಿಗೆ ಕ್ರೇಜಿಸ್ಟಾರ್ ಯಾವುದೇ ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಹಾಗೂ ಕಾರ್ಯಕ್ರಮಕ್ಕೆ ಹೋಗುತ್ತಿರುವಂತೆ ಕಾರಣ ಏನಪ್ಪಾ ಅಂದ್ರೆ. ಕ್ರೇಜಿಸ್ಟಾರ್ ರವಿಚಂದ್ರನ್ ಯಾವುದೇ ಮುಹೂರ್ತ ಕಾರ್ಯಕ್ರಮ ಅಥವಾ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಹೋದರೆ ನಿಮ್ಮ ಅದೃಷ್ಟವನ್ನು ನಮಗೆ ಕೊಟ್ಟು ಹೋಗಿ ಎಂದು ಹೇಳುತ್ತಿದ್ದರು. ಹೀಗೆ ಹೋದ ಕಡೆಯಲ್ಲೆಲ್ಲ ನನ್ನ ಅದೃಷ್ಟವನ್ನು ಕೊಟ್ಟು ಹೋದರೆ ನಾನು ಎಲ್ಲಿಗೆ ಹೋಗಲಿ ಎಂದು ನಗುತ್ತಲೇ ಹೇಳಿದರು ರವಿ ಮಾಮ. ಅಲ್ಲದೆ ಹಠವಾದಿ ಪ್ರಕಾರ ಚಿತ್ರರಂಗದಲ್ಲಿ ಸೋಲು-ಗೆಲುವು ಎಂಬುವುದು ಕಲೆಕ್ಷನ್ ಮೇಲೆ ನಿಂತಿಲ್ಲ, ದುಡ್ಡು ಬಂತು ಇಲ್ಲ ಹೋಯ್ತು ಎಂಬುದರ ಮೇಲೆ ಸಕ್ಸಸ್ ನಿಂತಿಲ್ಲ ನಾವು ಏನು ಕನಸು ಕಾಣುತ್ತಿವೋ ಆ ಕನಸು ಸ್ಕ್ರೀನ್ ಮೇಲೆ ಬಂತು ಎಂದರೆ ಅದು ಗೆದ್ದ ಹಾಗೆ ಆ ವಿಚಾರದಲ್ಲಿ ನಾನು ಪ್ರತಿ ಬಾರಿಯೂ ಗೆದ್ದಿದ್ದೇನೆ, ವಿಚಾರವಾಗಿ ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ದುಡ್ಡಿನ ಮೇಲೆ ಇಲ್ಲ ಲೆಕ್ಕಚಾರ ಹಾಕುವುದಾದರೆ ಅದು ನಿಮಗೆ ಬಿಟ್ಟ ವಿಷಯ, ಆದರೆ ನನಗೆ ನನ್ನ ಕನಸು ಪರದೆ ಮೇಲೆ ಬಂದಾಗ ನಾನು ಸಂತೋಷಪಟ್ಟಿದ್ದೇನೆ, ಆದ್ದರಿಂದ ನನಗೆ ಯಾವತ್ತು ನಾನು ಸೋತಿದ್ದೇನೆ ಎಂದು ನನಗೆ ಅನಿಸಿಯೇ ಇಲ್ಲ. ಆದರೆ ನನಗೆ ನನ್ನ ಮಗಳ ಮದುವೆ ವೇಳೆ ಅನಿಸಿದ್ದು ಅಂದರೆ ಈಗ ದುಡ್ಡು ಮಾಡಿಕೊಳ್ಳಬೇಕು ಎಂದು ಅನಿಸಿತು. ಯಾಕೆಂದರೆ ಪ್ರತಿಯೊಂದು ಲೆಕ್ಕಾಚಾರವು ದುಡ್ಡಿನಿಂದಲೇ ಎಂಬುದು ನನ್ನ ಮಗಳ ಮದುವೆ ಸಮಯದಲ್ಲೇ ಗೊತ್ತಾಗಿದ್ದು. ಆಗ ನನಗೆ ಅನಿಸಿದ್ದು ಗುರಿ ಇಟ್ಟು ದುಡ್ಡು ಮಾಡಬೇಕೆಂದು. ಅದಕ್ಕಾಗಿ ಈಗ ನಾನು ಹೇಳ್ತೀನಿ ಮುಂದೆ ನಾನು ದುಡ್ಡನ್ನು ಸಂಪಾದಿಸುತ್ತೇನೆ ಎಂದು ಕ್ರೇಜಿಸ್ಟಾರ್ ತುಂಬಾ ಆತ್ಮವಿಶ್ವಾಸದಿಂದಲೇ ಹೇಳಿದರು.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.