ETV Bharat / sitara

ಚೆನ್ನೈನಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್​​ ಪತ್ತೆ ಹಚ್ಚಿದ ರಾಂಧವ ತಂಡ

author img

By

Published : Aug 20, 2019, 11:15 PM IST

ಕೊಳಕು ಬಟ್ಟೆ ಹಾಗೂ ಕಾಲಲ್ಲಿ ಚಪ್ಪಲಿ ಇಲ್ಲದೆ ಚೆನ್ನೈನ ಬೀದಿಗಳಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಅವರನ್ನು ರಾಂಧವ ತಂಡ ಪತ್ತೆ ಹಚ್ಚಿದ್ದು, ಬೆಂಗಳೂರಿಗೆ ಕರೆತರುತ್ತಿದೆ.

Hucha Venkat

ಚೆನ್ನೈ : ಇಲ್ಲಿಯ ಬೀದಿಗಳಲ್ಲಿ ಅಲೆಯುತ್ತಿದ್ದ ನಟ ಹುಚ್ಚ ವೆಂಕಟ್​ ಅವರನ್ನು ರಾಂಧವ ಚಿತ್ರತಂಡ ಪತ್ತೆ ಹೆಚ್ಚಿದೆ.

ಯುಎಫ್​ಓ ಕ್ಯೂಬ್ ಅಪ್​ಲೋಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ ರಾಂಧವ ಚಿತ್ರತಂಡದ ಕಣ್ಣಿಗೆ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದರು. ಕೊಳಕಾದ ಬಟ್ಟೆ ಹಾಗೂ ಕಾಲಲ್ಲಿ ಚಪ್ಪಲಿ ಇಲ್ಲದೆ ಅಲ್ಲಿಯ ಬೀದಿಗಳಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಅವರನ್ನು ನೋಡಿದ ನಿರ್ದೇಶಕ ಸುನೀಲ್ ಹಾಗೂ ನಿರ್ಮಾಪಕರು ಶಾಕ್ ಆಗಿದ್ದರು. ವೆಂಕಟ್ ಅವರನ್ನು ಮಾತನಾಡಿಸಲು ಮುಂದಾಗಿದ್ದರು. ಆದ್ರೆ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿರಲಿಲ್ಲ.

ಹುಚ್ಚ ವೆಂಕಟ್​​ ಪತ್ತೆ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ಭುವನ್ ಪೊನ್ನಪ್ಪ ಹುಚ್ಚ ವೆಂಕಟ್ ಮನೆಯವ್ರಿಗೆ ವಿಷಯ ತಿಳಿಸುವ ಕೆಲಸ ಮಾಡಿದ್ದರು. ಜತೆಗೆ ವೆಂಕಟ್ ಅವರನ್ನು ಪತ್ತೆ ಹಚ್ಚುವಂತೆ ತಮ್ಮ ತಂಡಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ರಾಂಧವ ತಂಡದವರು ಹುಚ್ಚ ವೆಂಕಟ್ ಅವರನ್ನು ಪತ್ತೆ ಹಚ್ಚಿದ್ದು, ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

ಚೆನ್ನೈ : ಇಲ್ಲಿಯ ಬೀದಿಗಳಲ್ಲಿ ಅಲೆಯುತ್ತಿದ್ದ ನಟ ಹುಚ್ಚ ವೆಂಕಟ್​ ಅವರನ್ನು ರಾಂಧವ ಚಿತ್ರತಂಡ ಪತ್ತೆ ಹೆಚ್ಚಿದೆ.

ಯುಎಫ್​ಓ ಕ್ಯೂಬ್ ಅಪ್​ಲೋಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ ರಾಂಧವ ಚಿತ್ರತಂಡದ ಕಣ್ಣಿಗೆ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದರು. ಕೊಳಕಾದ ಬಟ್ಟೆ ಹಾಗೂ ಕಾಲಲ್ಲಿ ಚಪ್ಪಲಿ ಇಲ್ಲದೆ ಅಲ್ಲಿಯ ಬೀದಿಗಳಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಅವರನ್ನು ನೋಡಿದ ನಿರ್ದೇಶಕ ಸುನೀಲ್ ಹಾಗೂ ನಿರ್ಮಾಪಕರು ಶಾಕ್ ಆಗಿದ್ದರು. ವೆಂಕಟ್ ಅವರನ್ನು ಮಾತನಾಡಿಸಲು ಮುಂದಾಗಿದ್ದರು. ಆದ್ರೆ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿರಲಿಲ್ಲ.

ಹುಚ್ಚ ವೆಂಕಟ್​​ ಪತ್ತೆ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ಭುವನ್ ಪೊನ್ನಪ್ಪ ಹುಚ್ಚ ವೆಂಕಟ್ ಮನೆಯವ್ರಿಗೆ ವಿಷಯ ತಿಳಿಸುವ ಕೆಲಸ ಮಾಡಿದ್ದರು. ಜತೆಗೆ ವೆಂಕಟ್ ಅವರನ್ನು ಪತ್ತೆ ಹಚ್ಚುವಂತೆ ತಮ್ಮ ತಂಡಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ರಾಂಧವ ತಂಡದವರು ಹುಚ್ಚ ವೆಂಕಟ್ ಅವರನ್ನು ಪತ್ತೆ ಹಚ್ಚಿದ್ದು, ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

Intro:ಚೆನ್ನೈನಲ್ಲಿ ಹುಚ್ಚು ವೆಂಕಟ್ ಕಾಲಿಗೆ ಚಪ್ಪಲಿ ಇಲ್ಲದೆ ಅಲೆದಾಟ!!

ತನ್ನ ಹುಚ್ಚಾಟಗಳಿಂದ ಯೂ ಟ್ಯೂಬ್ ಸ್ಟಾರ್ ಆದ ಹುಚ್ಚ ವೆಂಕಟ್..ಕೆಲ‌ ದಿನಗಳ ಹಿಂದೆ ನಿರ್ದೇಶಕ ಆರ್ ಚಂದ್ರು ವಿರುದ್ಧ, ಗುಡುಗಿದ್ರು.‌ಇದಾದ ಬಳಿಕ ನಾಪತ್ತೆಯಾಗಿದ್ದ,ಹುಚ್ಚ ವೆಂಕಟ್ ಕೊಳಕು ಬಟ್ಟೆ, ಕಾಲಲ್ಲಿ ಚಪ್ಪಲಿ ಇಲ್ಲದೆ, ಚೆನ್ನೈನ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ..ಸದ್ಯ ಹುಚ್ಚ ವೆಂಕಟ್ ಅಲೆದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವನೆನೇ ಹುಚ್ಚ ವೆಂಕಟ್ ಎಂಬಂತೆ ನಿಜವಾಗಿ ಹುಚ್ಚನಾಗಿದ್ದಾರೆ..ಚೆನ್ನೈನ ಬೀದಿಗಳಲ್ಲಿ ಅಲೆದಾಡುತ್ತಿರುವ ಹುಚ್ಚ ವೆಂಕಟ್ ನ್ನ, ಭುವನ್ ಪೊನ್ನಪ್ಪ ಅಭಿನಯದ ರಾಂಧವ ಚಿತ್ರದ ನಿರ್ದೇಶಕ ಸುನೀಲ್ ಹಾಗು ನಿರ್ಮಾಪಕರು, ಯುಎಫ್ ಓ ಕ್ಯೂಬ್ ಅಪ್ ಲೌಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ ಸಂಧರ್ಭದಲ್ಲಿ ವೆಂಕಟ್ ಕಾಣಿಸಿಕೊಂಡಿದ್ದಾರೆ.ವೆಂಕಟ್ ಅವರನ್ನ ಕಂಡು ಅಚ್ಚರಿಯಾದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹಿತರು, ಅವರನ್ನ ಮಾತನಾಡಿಸಲು ಮುಂದಾಗಿದ್ದಾರೆ. ಆದ್ರೆ, ವೆಂಕಟ್ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲವಂತೆ.Body:ಈ ವಿಷ್ಯ ತಿಳಿದ ಭುವನ್ ಪೊನ್ನಪ್ಪ ಹುಚ್ಚ ವೆಂಕಟ್ ಮನೆಯವ್ರಿಗೆ ತಿಳಿಸುವ ಕೆಲಸ ಮಾಡಿದ್ದಾರೆ..ಹಾಗೇ ತಮ್ಮ‌ ರಾಂಧವ ಚಿತ್ರತಂಡದವ್ರಿಗೆ ಹೇಳಿ ಹುಚ್ಚ ವೆಂಕಟ್ ನ್ನ ಹುಡುಕಿಸಿದ್ದಾರೆ..ಹಾಗೇ ಬೆಂಗಳೂರಿಗೆ ಹುಚ್ಚ ವೆಂಕಟ್ ನ್ನ ಕರೆ ತರುವ ಭುವನ್ ಪೊನ್ನಪ್ಪ ತಮ್ಮ ಚಿತ್ರತಂಡಕ್ಕೆ ಹೇಳಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.