ETV Bharat / sitara

ಬಾಂಬರ್​ ಆದಿತ್ಯ ರಾವ್ ಬಗ್ಗೆ ಬರಲಿದ್ಯಾ ಸಿನಿಮಾ...ಚಿತ್ರದ ನಾಯಕ ಯಾರು...? - ಆದಿತ್ಯ ರಾವ್ ಬಗ್ಗೆ ಸಿನಿಮಾ ಮಾಡಲು ಪ್ರಯತ್ನ

'ಫಸ್ಟ್​​​ ರ್‍ಯಾಂಕ್ ಟೆರರಿಸ್ಟ್ ಆದಿತ್ಯ' ಟೈಟಲ್​​ಗೆ ನಿರ್ಮಾಪಕ ತುಳಸಿ ರಾಮ್ ಫಿಲ್ಮ್​ ಚೇಂಬರ್​​​ನಲ್ಲಿ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಧೂತನ ಹೆಸರಿನಲ್ಲಿ ಸಿನಿಮಾ ಹೆಸರು ರಿಜಿಸ್ಟರ್ ಮಾಡಲು ನಿರ್ಮಾಪಕರು ಮುಂದಾಗಿದ್ದು ಒಂದು ವೇಳೆ ಈ ಸಿನಿಮಾ ತಯಾರಾದರೆ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ.

Aditya rao
ಆದಿತ್ಯ ರಾವ್
author img

By

Published : Jan 23, 2020, 1:50 PM IST

ದೇಶದಲ್ಲಿ ಏನಾದರೂ ಘಟನೆಗಳಾದರೆ ಸಾಕು ಸಿನಿಮಾ ತಯಾರಕರು ಅದರ ಸ್ಫೂರ್ತಿಯಿಂದ ಸಿನಿಮಾ ಮಾಡಲು ಮುಂದಾಗುತ್ತಾರೆ. ಈ ರೀತಿಯ ಸಾಕಷ್ಟು ಸಿನಿಮಾಗಳು ಈಗಾಗಲೇ ತಯಾರಾಗಿವೆ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಭಯ ಹುಟ್ಟಿಸಿದ್ದ ಆದಿತ್ಯ ರಾವ್ ಬಗ್ಗೆ ಕನ್ನಡದಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

Bomber Aditya rao
ಟೈಟಲ್​​ಗಾಗಿ ಅರ್ಜಿ
Bomber Aditya rao
'ಫಸ್ಟ್​​​ ರ್‍ಯಾಂಕ್ ಟೆರರಿಸ್ಟ್ ಆದಿತ್ಯ' ಟೈಟಲ್​​ಗೆ ಅರ್ಜಿ

'ಫಸ್ಟ್​​​ ರ್‍ಯಾಂಕ್ ಟೆರರಿಸ್ಟ್ ಆದಿತ್ಯ' ಟೈಟಲ್​​ಗೆ ನಿರ್ಮಾಪಕ ತುಳಸಿ ರಾಮ್ ಫಿಲ್ಮ್​ ಚೇಂಬರ್​​​ನಲ್ಲಿ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಧೂತನ ಹೆಸರಿನಲ್ಲಿ ಸಿನಿಮಾ ಹೆಸರು ರಿಜಿಸ್ಟರ್ ಮಾಡಲು ನಿರ್ಮಾಪಕರು ಮುಂದಾಗಿದ್ದು ಒಂದು ವೇಳೆ ಈ ಸಿನಿಮಾ ತಯಾರಾದರೆ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ. ಆದರೆ ಈ ಟೈಟಲ್​​ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇನ್ನೂ ಒಪ್ಪಿಗೆ ದೊರೆತಿಲ್ಲ. ಒಂದು ವೇಳೆ ಟೈಟಲ್​​​​ಗೆ ಗ್ರಿನ್ ಸಿಗ್ನಲ್ ಸಿಕ್ಕರೆ ಈ ಚಿತ್ರಕ್ಕೆ ನಾಯಕ ಯಾರಾಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ನಿರ್ಮಾಪಕ ತುಳಸಿರಾಮ್ ಈಗಾಗಲೇ ' ಗಡ್ಡಪ್ಪ ಸರ್ಕಲ್' ಹಾಗೂ 'ಭೂತದ ಮನೆ' ಎಂಬ ಚಿತ್ರಗಳನ್ನು ನಿರ್ಮಿಸಿದ್ದು ಈಗ ಸೈಕೋ ಬಾಂಬರ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಗಡ್ಡಪ್ಪ ಸರ್ಕಲ್' ಸಿನಿಮಾ ನಿರ್ದೇಶಕ ಕೇಶವ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

Bomber Aditya rao
ನಿರ್ಮಾಪಕ ತುಳಸಿರಾಮ್

ದೇಶದಲ್ಲಿ ಏನಾದರೂ ಘಟನೆಗಳಾದರೆ ಸಾಕು ಸಿನಿಮಾ ತಯಾರಕರು ಅದರ ಸ್ಫೂರ್ತಿಯಿಂದ ಸಿನಿಮಾ ಮಾಡಲು ಮುಂದಾಗುತ್ತಾರೆ. ಈ ರೀತಿಯ ಸಾಕಷ್ಟು ಸಿನಿಮಾಗಳು ಈಗಾಗಲೇ ತಯಾರಾಗಿವೆ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಭಯ ಹುಟ್ಟಿಸಿದ್ದ ಆದಿತ್ಯ ರಾವ್ ಬಗ್ಗೆ ಕನ್ನಡದಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

Bomber Aditya rao
ಟೈಟಲ್​​ಗಾಗಿ ಅರ್ಜಿ
Bomber Aditya rao
'ಫಸ್ಟ್​​​ ರ್‍ಯಾಂಕ್ ಟೆರರಿಸ್ಟ್ ಆದಿತ್ಯ' ಟೈಟಲ್​​ಗೆ ಅರ್ಜಿ

'ಫಸ್ಟ್​​​ ರ್‍ಯಾಂಕ್ ಟೆರರಿಸ್ಟ್ ಆದಿತ್ಯ' ಟೈಟಲ್​​ಗೆ ನಿರ್ಮಾಪಕ ತುಳಸಿ ರಾಮ್ ಫಿಲ್ಮ್​ ಚೇಂಬರ್​​​ನಲ್ಲಿ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಧೂತನ ಹೆಸರಿನಲ್ಲಿ ಸಿನಿಮಾ ಹೆಸರು ರಿಜಿಸ್ಟರ್ ಮಾಡಲು ನಿರ್ಮಾಪಕರು ಮುಂದಾಗಿದ್ದು ಒಂದು ವೇಳೆ ಈ ಸಿನಿಮಾ ತಯಾರಾದರೆ ಹೇಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ. ಆದರೆ ಈ ಟೈಟಲ್​​ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇನ್ನೂ ಒಪ್ಪಿಗೆ ದೊರೆತಿಲ್ಲ. ಒಂದು ವೇಳೆ ಟೈಟಲ್​​​​ಗೆ ಗ್ರಿನ್ ಸಿಗ್ನಲ್ ಸಿಕ್ಕರೆ ಈ ಚಿತ್ರಕ್ಕೆ ನಾಯಕ ಯಾರಾಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ನಿರ್ಮಾಪಕ ತುಳಸಿರಾಮ್ ಈಗಾಗಲೇ ' ಗಡ್ಡಪ್ಪ ಸರ್ಕಲ್' ಹಾಗೂ 'ಭೂತದ ಮನೆ' ಎಂಬ ಚಿತ್ರಗಳನ್ನು ನಿರ್ಮಿಸಿದ್ದು ಈಗ ಸೈಕೋ ಬಾಂಬರ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಗಡ್ಡಪ್ಪ ಸರ್ಕಲ್' ಸಿನಿಮಾ ನಿರ್ದೇಶಕ ಕೇಶವ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

Bomber Aditya rao
ನಿರ್ಮಾಪಕ ತುಳಸಿರಾಮ್
Intro:ಬಾಂಬ್ ಇಟ್ಟು ಭಯ ಉತ್ಪಾದನೆ ಮಾಡಿದ್ಧ ಮೋಸ್ಟ್ ವಾಟೆಂಡ್ ಆದಿತ್ಯ ರಾವ್ ಕಥೆ ಸಿನಿಮಾವಾಗಲಿದ್ಯ?


ಕನ್ನಡ ಚಿತ್ರರಂಗದಲ್ಲಿ ರಿಜಿಸ್ಟರ್ ಆಗಲಿದೆ ಮತ್ತೊಂದು ವಿಶೇಷ ಟೈಟಲ್.‌ಮೋಸ್ಟ್ ವಾಂಟೆಡ್‌ ಬಾಂಬರ್ ಅದಿತ್ಯ ರಾವ್ ಹೆಸರಿನ ಟೈಟಲ್ ಗೆ ನಿರ್ಮಾಪಕ ತುಳಿಸಿ ರಾಮ್ ಮನವಿಸಲ್ಲಿಸಿದ್ದಾರೆ. ಮಂಗಳೂರು ವಿಮಾನ‌ನಿಲ್ದಾಣದಲ್ಲಿ ಬಾಂಬ್ ಇಟ್ಟು ಭಯ ಉತ್ಪಾದನೆ ಮಾಡಿದ್ದ, ಬಾಂಬರ್ ಆದಿತ್ಯ ರಾವ್ ಹೆಸರಿಗೆ ಹೋಲಿಕೆ ಯಾಗುವಂತೆ "ಫಸ್ಟ್ ರ್ಯಾರ್ ಟೆರರಿಸ್ಟ್ ಆದಿತ್ಯ "ಎಂಬ ಟೈಟಲ್ ರಿಜಿಸ್ಟ್ರೇಷನ್ ಮಾಡಿಸಲು ಮನವಿ ಸಲ್ಲಿಸಿದ್ದಾರೆ.ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಧೂತನ ಹೆಸರಿನಲ್ಲಿ ಟೈಟಲ್ ಬ್ಲಾಕ್ ಆಗಿದ್ದು ಬಾಂಬರ್ ಆಗಿ ಕುಖ್ಯಾತಿ ಪಡೆದವನ ಹೆಸರಿನಲ್ಲಿ ಬರಲಿದೆ ಸಿನಿಮಾ ಎಂಬ ಕುತೂಹಲ ಮೂಡಿಸಿದೆ.ಅದ್ರೆ ಈ ಟೈಟಲ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇನ್ನು ಅನುಮೋದನೆ ಕೊಟ್ಟಿಲ್ಲ.ಒಂದು ವೇಳೆ ಈ ಟೈಟಲ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಅದ್ರೆ ಈ ಚಿತ್ರದಲ್ಲಿ ಯಾರು ನಾಯಕನಾಗಿ ನಟಿಸ್ತಾರೆ ಅನ್ನೋ ಚರ್ಚೆ ಈಗಾಗಲೇ ಗಾಂಧಿ ನಗರದಲ್ಲಿ ಶುರುವಾಗಿದೆBody:ಇನ್ನು ನಿರ್ಮಾಪಕ ಈಗಾಗಲೇ ಕನ್ನಡದಲ್ಲಿ ಗಡ್ಡಪ್ಪ ಸರ್ಕಲ್ ಹಾಗೂ ಭೂತದ ಮನೆ ಎಂಬ ಚಿತ್ರಗಳ ನಿರ್ಮಾಣ ಮಾಡಿದ್ದು.ಈಗ ಸೈಕೋ ಬಾಂಬರ್ ಕಥೆಯನ್ನು ಸಿನಿಮಾ ಮಾಡಲು ತುಳಸಿರಾಮ್ ತಯಾರಾಗ್ತಿದ್ದಾರೆ .ಅಲ್ಲದೆ ಈ ಚಿತ್ರವನ್ನು ಗಡ್ಡಪ್ಪ ಸರ್ಕಲ್ ಚಿತ್ರ ನಿರ್ದೇಶನ ಮಾಡಿದ್ದ ಕೇಶವ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದು.ಈ ಚಿತ್ರದಲ್ಲಿ ಅದಿತ್ಯ ರಾವ್ ಬಾಲ್ಯದಿಂದ ಹಿಡಿದು ಬಾಂಬ್ ಇಡುವ ತನಕ ಸ್ಟೋರಿಯನ್ನು ತೆರೆಮೇಲೆ ತೋರಿಸುವ ಪ್ರಯತ್ನಕ್ಕೆ ಕೈಹಾಕಿರುವುದಾಗಿ ನಿರ್ಮಾಪಕ ತುಳಸಿರಾಮ್ ತಿಳಿಸಿದ್ದಾರೆ.

ಸತೀಶ ಎಂಬಿ
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.