ETV Bharat / sitara

'ಶ್ರೀ ಭರತ ಬಾಹುಬಲಿ' ನೋಡಿ ಕೋಟಿ ರೂಪಾಯಿ ಬಹುಮಾನ ಗೆಲ್ಲಿ​​​​​​... ಹೇಗೆ ಗೊತ್ತಾ!? - ಶ್ರೀ ಭರತ ಬಾಹುಬಲಿ ವೀಕ್ಷಕರಿಗೆ ಬಹುಮಾನ ಘೋಷಿಸಿದ ನಿರ್ಮಾಪಕ

ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ನಿರ್ಮಾಪಕ ಶಿವಪ್ರಕಾಶ್ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. 'ಶ್ರೀ ಭರತ ಬಾಹುಬಲಿ' ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶಿಸಿದ್ದಾರೆ.

Sri Bharata bahubali
'ಶ್ರೀ ಭರತ ಬಾಹುಬಲಿ'
author img

By

Published : Jan 4, 2020, 12:05 PM IST

ನಿರ್ಮಾಪಕ ಶಿವಪ್ರಕಾಶ್ ತಮ್ಮ ಪ್ರಥಮ ಪ್ರಯತ್ನದಲ್ಲಿ ‘ಶ್ರೀ ಭರತ ಬಾಹುಬಲಿ’ ಚಿತ್ರಕ್ಕೆ ಆರು ಕೋಟಿ ರೂಪಾಯಿ ಸುರಿದಿದ್ದಾರೆ. ಅಲ್ಲದೆ ಜನವರಿ 17ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾಗೆ ಬರುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಬಹುಮಾನ ಕೂಡಾ ನೀಡಲಿದ್ದಾರೆ.

Sri bharata bahubali
ನಿರ್ಮಾಪಕ ಶಿವಪ್ರಕಾಶ್, ನಿರ್ದೇಶಕ ಮಂಜು ಮಾಂಡವ್ಯ

ಎಲ್ಲಾ ಪ್ರೇಕ್ಷಕರಿಗೂ ಹೇಗೆ ಬಹುಮಾನ ನೀಡಲು ಸಾಧ್ಯ ಎಂದು ಆಶ್ಚರ್ಯ ಪಡಬೇಡಿ, ಮುಂದೆ ಓದಿ. ಶಿವಪ್ರಕಾಶ್ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಧ್ಯಮ ವರ್ಗದ ಬಹಳಷ್ಟು ಜನರಿಗೆ ನಿವೇಶನಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಜನವರಿ 17ರಂದು 'ಶ್ರೀ ಭರತ ಬಾಹುಬಲಿ ಚಿತ್ರವನ್ನು ನೋಡಿದ ಪ್ರೇಕ್ಷಕರು ತಮ್ಮ ಟಿಕೆಟ್​​ನ ಅರ್ಧ ಭಾಗವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಮತ್ತೊಂದು ಕೂಪನ್ ಕೂಡಾ ನೀಡಲಾಗುವುದು. ಎರಡು ವಾರಗಳ ನಂತರ ಥಿಯೇಟರ್​​ನಲ್ಲಿ ಗೇಟ್ ಕೀಪರ್ ಪಡೆದ ಇನ್ನುಳಿದ ಅರ್ಧ ಭಾಗವನ್ನು ಸಾರ್ವಜನಿಕರ ಮುಂದೆ ಲಕ್ಕಿ ಡಿಪ್​​​ನಲ್ಲಿ ತೆಗೆಯಲಾಗುವುದು. ಅದೃಷ್ಟವಂತ ವಿಜೇತರಿಗೆ 10 ಕಾರುಗಳು ಹಾಗೂ 50 ಲಕ್ಷ ಬೆಲೆ ಬಾಳುವ ಚಿನ್ನವನ್ನು ನೀಡಲಾಗುವುದು. ಆದರೆ ಎಷ್ಟು ಜನರಿಗೆ ಈ ಬಹುಮಾನ ಎಂದು ಇನ್ನೂ ತಿರ್ಮಾನಿಸಿಲ್ಲ.

Producer Shivaprakash
ನಿರ್ಮಾಪಕ ಶಿವಪ್ರಕಾಶ್

ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ನಿರ್ಮಾಪಕ ಶಿವಪ್ರಕಾಶ್ ಈ ಪ್ಲ್ಯಾನ್ ಮಾಡಿದ್ದಾರೆ. 'ಶ್ರೀ ಭರತ ಬಾಹುಬಲಿ' ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶಿಸಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಅವರು ನಾಯಕರಾಗಿ ಕೂಡಾ ಎಂಟ್ರಿ ನೀಡಿದ್ದಾರೆ. ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾವನ್ನು ನಿರ್ದೇಶಿಸಿದ್ದವರು ಮಂಜು ಮಾಂಡವ್ಯ ಅವರೇ. ಚಿತ್ರದಲ್ಲಿ ಕಾಮಿಡಿ ನಟ ಚಿಕ್ಕಣ್ಣ ಕೂಡಾ ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಈ ಚಿತ್ರದ 8 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ನಿರ್ಮಾಪಕ ಶಿವಪ್ರಕಾಶ್ ತಮ್ಮ ಪ್ರಥಮ ಪ್ರಯತ್ನದಲ್ಲಿ ‘ಶ್ರೀ ಭರತ ಬಾಹುಬಲಿ’ ಚಿತ್ರಕ್ಕೆ ಆರು ಕೋಟಿ ರೂಪಾಯಿ ಸುರಿದಿದ್ದಾರೆ. ಅಲ್ಲದೆ ಜನವರಿ 17ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾಗೆ ಬರುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಬಹುಮಾನ ಕೂಡಾ ನೀಡಲಿದ್ದಾರೆ.

Sri bharata bahubali
ನಿರ್ಮಾಪಕ ಶಿವಪ್ರಕಾಶ್, ನಿರ್ದೇಶಕ ಮಂಜು ಮಾಂಡವ್ಯ

ಎಲ್ಲಾ ಪ್ರೇಕ್ಷಕರಿಗೂ ಹೇಗೆ ಬಹುಮಾನ ನೀಡಲು ಸಾಧ್ಯ ಎಂದು ಆಶ್ಚರ್ಯ ಪಡಬೇಡಿ, ಮುಂದೆ ಓದಿ. ಶಿವಪ್ರಕಾಶ್ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಧ್ಯಮ ವರ್ಗದ ಬಹಳಷ್ಟು ಜನರಿಗೆ ನಿವೇಶನಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಜನವರಿ 17ರಂದು 'ಶ್ರೀ ಭರತ ಬಾಹುಬಲಿ ಚಿತ್ರವನ್ನು ನೋಡಿದ ಪ್ರೇಕ್ಷಕರು ತಮ್ಮ ಟಿಕೆಟ್​​ನ ಅರ್ಧ ಭಾಗವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಮತ್ತೊಂದು ಕೂಪನ್ ಕೂಡಾ ನೀಡಲಾಗುವುದು. ಎರಡು ವಾರಗಳ ನಂತರ ಥಿಯೇಟರ್​​ನಲ್ಲಿ ಗೇಟ್ ಕೀಪರ್ ಪಡೆದ ಇನ್ನುಳಿದ ಅರ್ಧ ಭಾಗವನ್ನು ಸಾರ್ವಜನಿಕರ ಮುಂದೆ ಲಕ್ಕಿ ಡಿಪ್​​​ನಲ್ಲಿ ತೆಗೆಯಲಾಗುವುದು. ಅದೃಷ್ಟವಂತ ವಿಜೇತರಿಗೆ 10 ಕಾರುಗಳು ಹಾಗೂ 50 ಲಕ್ಷ ಬೆಲೆ ಬಾಳುವ ಚಿನ್ನವನ್ನು ನೀಡಲಾಗುವುದು. ಆದರೆ ಎಷ್ಟು ಜನರಿಗೆ ಈ ಬಹುಮಾನ ಎಂದು ಇನ್ನೂ ತಿರ್ಮಾನಿಸಿಲ್ಲ.

Producer Shivaprakash
ನಿರ್ಮಾಪಕ ಶಿವಪ್ರಕಾಶ್

ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ನಿರ್ಮಾಪಕ ಶಿವಪ್ರಕಾಶ್ ಈ ಪ್ಲ್ಯಾನ್ ಮಾಡಿದ್ದಾರೆ. 'ಶ್ರೀ ಭರತ ಬಾಹುಬಲಿ' ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶಿಸಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಅವರು ನಾಯಕರಾಗಿ ಕೂಡಾ ಎಂಟ್ರಿ ನೀಡಿದ್ದಾರೆ. ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾವನ್ನು ನಿರ್ದೇಶಿಸಿದ್ದವರು ಮಂಜು ಮಾಂಡವ್ಯ ಅವರೇ. ಚಿತ್ರದಲ್ಲಿ ಕಾಮಿಡಿ ನಟ ಚಿಕ್ಕಣ್ಣ ಕೂಡಾ ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಈ ಚಿತ್ರದ 8 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಒಂದು ಕೋಟಿ ಬಹುಮಾನ ನಿರ್ಮಾಪಕ ಶಿವಪ್ರಕಾಶ್ ನೀಡಲಿದ್ದಾರೆ

ಪ್ರಥಮ ಪ್ರಯತ್ನದಲ್ಲಿ ಶ್ರೀ ಭರತ ಬಾಹುಬಲಿ ಚಿತ್ರಕ್ಕೆ ಆರು ಕೋಟಿ ರೂಪಾಯಿ ಸುರಿದಿರುವ ನಿರ್ಮಾಪಕ ಶಿವಪ್ರಕಾಶ್ ಜನವರಿ 17 ರಂದು ಬಿಡುಗಡೆ ಆಗಲಿರುವ ಚಿತ್ರಕ್ಕೆ ಪ್ರೇಕ್ಷಕರಿಗೆ ಒಂದು ಕೋಟಿ ಬಹುಮಾನ ರೂಪದಲ್ಲಿ ನೀಡಲಿದ್ದಾರೆ.

ಇದು ಹೇಗೆ ಎಂದು ಶಿವಪ್ರಕಾಶ್ ರಿಯಲ್ ಎಸ್ಟೇಟ್ ಉಧ್ಯಮಿ (ಬೆಂಗಳೂರು ಹಾಗೂ ಮೈಸೂರಿನಲ್ಲಿ 10000 ನಿವೇಶನ ಮಧ್ಯಮ ವರ್ಗದ ಜನರಿಗೆ ಈಗಾಗಲೇ ನೀಡಿದ್ದಾರೆ) ತಿಳಿಸಿದ್ದಾರೆ.

ಶ್ರೀ ಭರತ ಬಾಹುಬಲಿ ಚಿತ್ರವನ್ನ ಎರಡು ವಾರಗಳ ಕಾಲ ಕರ್ನಾಟಕಾದ್ಯಂತ ಚಿತ್ರಮಂದಿರಗಳಲ್ಲಿ ನೋಡಿದ ಪ್ರೇಕ್ಷಕರು ಅವರ ಟಿಕೆಟ್ ಅರ್ಧ ಭಾಗವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು ಮತ್ತು ಅವರಿಗೆ ಮತ್ತೊಂದು ಕೂಪನ್ ಸಹ ಚಿತ್ರಮಂದಿರದಲ್ಲಿ ನೀಡಲಾಗುವುದು. ಎರಡು ವಾರಗಳ ನಂತರ ಚಿತ್ರಮಂದಿರದಲ್ಲಿ ಗೇಟ್ ಕೀಪರ್ ಪಡೆದ ಇನ್ನುಳಿದ ಅರ್ಧ ಭಾಗವನ್ನು ಲಕ್ಕಿ ಡಿಪ್ ಅಲ್ಲಿ ಸಾರ್ವಜನಿಕರ ಮುಂದೆ ತೆಗೆಯಲಾಗುವುದು.

20 ಕಾರುಗಳು – 50 ಲಕ್ಷ ಅಷ್ಟು ಬೆಲೆ ಬಾಳುವುದು ಮತ್ತು 50 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ಜನರಿಗೆ ನೀಡಲಾಗುವುದು. 50 ಲಕ್ಷದ ಚಿನ್ನವನ್ನು ಎಷ್ಟು ಜನರಿಗೆ ಲಕ್ಕಿ ಡಿಪ್ ಮೂಲಕ ನೀಡುವುದು ಎಂದು ಇನ್ನೂ ತೀರ್ಮಾನಿಸಿಲ್ಲ. ವ್ಯಾಪಾರದಲ್ಲಿ ಜಾಣ ನಿರ್ಮಾಪಕ ಶಿವಪ್ರಕಾಶ್ ಚಿನ್ನವನ್ನು ಹೆಣ್ಣು ಮಕ್ಕಳನ್ನು ಚಿತ್ರಮಂದಿರಕ್ಕೆ ಆಕರ್ಷಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೀ ಭರತ ಬಾಹುಬಲಿ ಸಿನಿಮಾ ಮೂಲಕ ನಾಯಕ ನಟ ಸಹ ಆಗಿರುವ ಸಂಭಾಷಣೆಗಾರ ಹಾಗೂ ನಿರ್ದೇಶಕ ಮಂಜು ಮಾಂಡವ್ಯ (ಯಷ್ ಅವರ ಮಾಸ್ಟೆರ್ ಪೀಸ್ ನಿರ್ದೇಶಕ) ಇಷ್ಟೊಂದು ಬಗೆಯಲ್ಲಿ ನಿರ್ಮಾಪಕರು ತೋರಿರುವ ಕಾಳಜಿಗೆ ಈ ಚಿತ್ರದಲ್ಲಿ ಕೆಲವು ಸಾಲುಗಳನ್ನು ಸಹ ಒಂದು ಹಾಡಿನಲ್ಲಿ ರಚಿಸಿದ್ದಾರೆ. ಈ ಚಿತ್ರಕ್ಕೂ ಸಹ ಮಂಜು ಮಾಂಡವ್ಯ ಅವರೇ ನಿರ್ದೇಶಕರು.

ಭರತ ಆಗಿ ಮಂಜು ಮಾಂಡವ್ಯ ಹಾಗೂ ಬಾಹುಬಲಿ ಆಗಿ ಜನಪ್ರಿಯ ಕಾಮಿಡಿ ನಟ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ. ಕದ್ರಿ ಮಣಿಕಾಂತ್ ಎಂಟು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.