ETV Bharat / sitara

ಆಯುಷ್ಮಾನ್ ಭವ ಸಿನಿಮಾ ವಿವಾದ: ಯೋಗೀಶ್​ ದ್ವಾರಕೀಶ್​ ವಿರುದ್ಧ ವಿತರಕ ಜಯಣ್ಣ ಹೇಳಿದ್ದೇನು?

ದ್ವಾರಕೀಶ್ ಪುತ್ರ ಯೋಗೀಶ್​​​ ನನ್ನ ಬಳಿ ಒಂದು ಕಾಲು ಕೋಟಿ ರೂಪಾಯಿ ತೆಗೆದುಕೊಂಡಿದ್ದು, ಅದರಲ್ಲಿ ನನಗೆ 80 ಲಕ್ಷ ಬಾಕಿ ಕೊಟ್ಟಿಲ್ಲ ಎಂದು ಚಿತ್ರ ವಿತರಕ ಜಯಣ್ಣ ಆರೋಪಿಸಿದ್ದಾರೆ.

author img

By

Published : Feb 2, 2020, 3:30 PM IST

jayanna speak about ayushman bhava Controversy
ಆಯುಷ್ಮಾನ್ ಭವ ಸಿನಿಮಾ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವಿತರಕ ಜಯಣ್ಣ

ಯೋಗೀಶ್​ ದ್ವಾರಕೀಶ್ ಹಂಚಿಕೆದಾರರ ಬಳಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಿತ್ರ ವಿತರಕ ಜಯಣ್ಣ ಅರೋಪಿಸಿದ್ದಾರೆ. ಆಯುಷ್ಮಾನ್ ಭವ ಚಿತ್ರದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವಿತರಕ ಜಯಣ್ಣ ಅಮ್ಮ ಐ ಲವ್ ಯು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಯೋಗೀಶ್​ ನನ್ನ ಬಳಿ ಒಂದು ಕಾಲು ಕೋಟಿ ರೂಪಾಯಿ ತೆಗೆದುಕೊಂಡಿದ್ರು. ಅದರಲ್ಲಿ ನನಗೆ 80 ಲಕ್ಷ ರೂ. ಬಾಕಿ ಹಣ ಕೊಟ್ಟಿಲ್ಲ ಎಂದು ಜಯಣ್ಣ ಆರೋಪಿಸಿದ್ದಾರೆ.

ಆಯುಷ್ಮಾನ್ ಭವ ಸಿನಿಮಾ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವಿತರಕ ಜಯಣ್ಣ

ಶಿವಣ್ಣ ಅವರಿಗೆ ಯೋಗೀಶ್​ ದ್ವಾರಕೀಶ್​​​ ಜೊತೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ನಾನು ಹೇಳಿ ಸಿನಿಮಾ ಮಾಡಲು ಒಪ್ಪಿಸಿದ್ದೆ. ಸಿನಿಮಾ ಹಂಚಿಕೆಗೆ 3 ಕೋಟಿ 80 ಸಾವಿರ ಒಪ್ಪಂದ ಮಾಡಿಕೊಂಡಿದ್ವಿ. ನಂತ್ರ ನಮ್ಮಿಬ್ಬರ ಮಧ್ಯೆ ಸೆಟಲ್​ಮೆಂಟ್ ಮಾಡಿಕೊಂಡ್ವಿ. ಶಿವಣ್ಣನ ಮನೆಯಲ್ಲಿ ದ್ವಾರಕೀಶ್ ಕುಟುಂಬದವರು​​ ತಮ್ಮ ಮನೆ ಮಾರಿ ಹಣ ಕೊಡುತ್ತೇನೆ ಅಂತ ಹೇಳಿದ್ರು.

ಸಿನಿಮಾ ರಿಲೀಸ್ ಆದ ನಂತ್ರ ಮೀಟಿಂಗ್ ಮಾಡಿದ್ವಿ. ಹಣ ವಾಪಸ್​ ಕೊಡಲು ಜನವರಿ 30 ರವರೆಗೆ ಸಮಯ ಕೇಳಿದ್ರು. ನಾನು ಒಪ್ಪಲಿಲ್ಲ. ಆಗ ಕೆ.ಮಂಜು ಮಧ್ಯೆ ಬಂದು ಒಪ್ಪಿಸಿದ್ರು. ಯೋಗೀಶ್ ಜನವರಿ 27 ರಂದು ನನ್ನ ಫೋನ್ ನಂಬರ್​ ಬ್ಲಾಕ್ ಮಾಡಿದ್ರು. ನಂತ್ರ 31 ರಂದು ಮನೆಗೆ ಹೋಗಿ ಕೇಳಿದ್ವಿ. ಆಗ ದ್ವಾರಕೀಶ್​ ತನ್ನನ್ನು ಬಿಟ್ಟು ಬಿಡಿ ಅಂತಾ ಕೇಳಿದ್ರು. ಸಮಾಧಾನ ಮಾಡಿ, ಎಲ್ಲ ವಿಚಾರದ ಬಗ್ಗೆ ಅವರಿಗೆ ತಿಳಿಸಿದ್ವಿ. ನಾನು ಅವರ ಬಳಿ ಕೈಮುಗಿದು ಕಣ್ಣೀರು ಹಾಕಿಕೊಂಡು ಕೇಳಿಕೊಂಡ್ವಿ. ಮತ್ತೆ ರಸ್ತೆಗೆ ಬಂದು 20 ನಿಮಿಷ ಮಾತನಾಡಿದ್ರು. ಕೊನೆಗೆ ಅವರ ಕಾಲಿಗೆ ನಮಸ್ಕಾರ ಮಾಡಿ ಬಂದ್ವಿ ಎಂದು ವಿತರಕ ಜಯಣ್ಣ ಹೇಳಿದ್ದಾರೆ.

ಯೋಗೀಶ್​ ದ್ವಾರಕೀಶ್ ಹಂಚಿಕೆದಾರರ ಬಳಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಿತ್ರ ವಿತರಕ ಜಯಣ್ಣ ಅರೋಪಿಸಿದ್ದಾರೆ. ಆಯುಷ್ಮಾನ್ ಭವ ಚಿತ್ರದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವಿತರಕ ಜಯಣ್ಣ ಅಮ್ಮ ಐ ಲವ್ ಯು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಯೋಗೀಶ್​ ನನ್ನ ಬಳಿ ಒಂದು ಕಾಲು ಕೋಟಿ ರೂಪಾಯಿ ತೆಗೆದುಕೊಂಡಿದ್ರು. ಅದರಲ್ಲಿ ನನಗೆ 80 ಲಕ್ಷ ರೂ. ಬಾಕಿ ಹಣ ಕೊಟ್ಟಿಲ್ಲ ಎಂದು ಜಯಣ್ಣ ಆರೋಪಿಸಿದ್ದಾರೆ.

ಆಯುಷ್ಮಾನ್ ಭವ ಸಿನಿಮಾ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವಿತರಕ ಜಯಣ್ಣ

ಶಿವಣ್ಣ ಅವರಿಗೆ ಯೋಗೀಶ್​ ದ್ವಾರಕೀಶ್​​​ ಜೊತೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ನಾನು ಹೇಳಿ ಸಿನಿಮಾ ಮಾಡಲು ಒಪ್ಪಿಸಿದ್ದೆ. ಸಿನಿಮಾ ಹಂಚಿಕೆಗೆ 3 ಕೋಟಿ 80 ಸಾವಿರ ಒಪ್ಪಂದ ಮಾಡಿಕೊಂಡಿದ್ವಿ. ನಂತ್ರ ನಮ್ಮಿಬ್ಬರ ಮಧ್ಯೆ ಸೆಟಲ್​ಮೆಂಟ್ ಮಾಡಿಕೊಂಡ್ವಿ. ಶಿವಣ್ಣನ ಮನೆಯಲ್ಲಿ ದ್ವಾರಕೀಶ್ ಕುಟುಂಬದವರು​​ ತಮ್ಮ ಮನೆ ಮಾರಿ ಹಣ ಕೊಡುತ್ತೇನೆ ಅಂತ ಹೇಳಿದ್ರು.

ಸಿನಿಮಾ ರಿಲೀಸ್ ಆದ ನಂತ್ರ ಮೀಟಿಂಗ್ ಮಾಡಿದ್ವಿ. ಹಣ ವಾಪಸ್​ ಕೊಡಲು ಜನವರಿ 30 ರವರೆಗೆ ಸಮಯ ಕೇಳಿದ್ರು. ನಾನು ಒಪ್ಪಲಿಲ್ಲ. ಆಗ ಕೆ.ಮಂಜು ಮಧ್ಯೆ ಬಂದು ಒಪ್ಪಿಸಿದ್ರು. ಯೋಗೀಶ್ ಜನವರಿ 27 ರಂದು ನನ್ನ ಫೋನ್ ನಂಬರ್​ ಬ್ಲಾಕ್ ಮಾಡಿದ್ರು. ನಂತ್ರ 31 ರಂದು ಮನೆಗೆ ಹೋಗಿ ಕೇಳಿದ್ವಿ. ಆಗ ದ್ವಾರಕೀಶ್​ ತನ್ನನ್ನು ಬಿಟ್ಟು ಬಿಡಿ ಅಂತಾ ಕೇಳಿದ್ರು. ಸಮಾಧಾನ ಮಾಡಿ, ಎಲ್ಲ ವಿಚಾರದ ಬಗ್ಗೆ ಅವರಿಗೆ ತಿಳಿಸಿದ್ವಿ. ನಾನು ಅವರ ಬಳಿ ಕೈಮುಗಿದು ಕಣ್ಣೀರು ಹಾಕಿಕೊಂಡು ಕೇಳಿಕೊಂಡ್ವಿ. ಮತ್ತೆ ರಸ್ತೆಗೆ ಬಂದು 20 ನಿಮಿಷ ಮಾತನಾಡಿದ್ರು. ಕೊನೆಗೆ ಅವರ ಕಾಲಿಗೆ ನಮಸ್ಕಾರ ಮಾಡಿ ಬಂದ್ವಿ ಎಂದು ವಿತರಕ ಜಯಣ್ಣ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.