ETV Bharat / sitara

'ಕಾಲಚಕ್ರ' ಚಿತ್ರದ ತರಗೆಲೆ ಸಂಸಾರ ಹಾಡಿಗೆ ಸೆಲಬ್ರಿಟಿಗಳು ಫಿದಾ

author img

By

Published : Aug 1, 2020, 12:06 PM IST

ಸುಮಂತ್ ಕ್ರಾಂತಿ ನಿರ್ದೇಶನದಲ್ಲಿ ವಸಿಷ್ಠ ಎನ್​. ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಾಲಚಕ್ರ' ಸಿನಿಮಾದ ತರಗೆಲೆ ಸಂಸಾರ ಹಾಡು ನಿನ್ನೆ ಬಿಡುಗಡೆಯಾಗಿದ್ದು ಈ ಹಾಡಿಗೆ ಸೆಲಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

kalachakra movie
'ಕಾಲಚಕ್ರ'

ಕಂಚಿನ ಕಂಠದ ನಾಯಕ, ಗಾಯಕ, ಖಳ ನಾಯಕ ವಸಿಷ್ಠ ಎನ್. ಸಿಂಹ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ 'ಕಾಲಚಕ್ರ' ಸಿನಿಮಾದ 'ತರಗೆಲೆ ಸಂಸಾರ' ಹಾಡು ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಿದ್ದು ಈ ಹಾಡಿಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

  • " class="align-text-top noRightClick twitterSection" data="">

ಆನಂದ್ ಆಡಿಯೋ ಈ ಹಾಡನ್ನು ಬಿಡುಗಡೆ ಮಾಡಿದ್ದು ಸ್ಯಾಂಡಲ್​ವುಡ್ ಸ್ಟಾರ್​​ಗಳು ಕೂಡಾ ಈ ಹಾಡಿಗೆ ಫಿದಾ ಆಗಿದ್ದಾರೆ. ಇಷ್ಟು ದಿನ ತಮ್ಮ ಖಡಕ್ ಡೈಲಾಗ್​​​​​​​ನಿಂದ ಅಬ್ಬರಿಸುತ್ತಿದ್ದ ವಸಿಷ್ಠ ಸಿಂಹ, ಈ ಹಾಡಿನಲ್ಲಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್​​​​​​ಕುಮಾರ್, ಪವರ್​​​​​​​​​​​​​​​​​​ಸ್ಟಾರ್ ಪುನೀತ್ ರಾಜ್​​​​​​​ಕುಮಾರ್, ಡಾಲಿ ಧನಂಜಯ್​​​​, ಪ್ರಜ್ವಲ್ ದೇವರಾಜ್, ಟಗರು ಪುಟ್ಟಿ ಮಾನ್ವಿತ, ಸಿಂಪಲ್ ಸುನಿ, ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹಾಗೂ ಇನ್ನಿತರರು 'ಕಾಲಚಕ್ರ' ಚಿತ್ರಕ್ಕೆ ಶುಭ ಕೋರಿದ್ದಾರೆ.

'ಕಾಲಚಕ್ರ' ಚಿತ್ರಕ್ಕೆ ಶುಭ ಕೋರಿದ ರವಿ ಡಿ. ಚೆನ್ನಣ್ಣನವರ್

'ತರಗೆಲೆ ಸಂಸಾರ' ಹಾಡಿಗೆ ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದರೆ ಗುರುಕಿರಣ್ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಬಾಲಿವುಡ್ ಖ್ಯಾತ ಗಾಯಕ ಕೈಲಾಶ್ ಕೇರ್ ಹಾಡಿದ್ದಾರೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ. ರಕ್ಷಾ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಹಾಗೂ ಇನ್ನಿತರರು ನಟಿಸಿರುವ ಈ ಚಿತ್ರ ಶೀಘ್ರವೇ ತೆರೆಗೆ ಬರಲಿದೆ.

ತರಗೆಲೆ ಹಾಡಿಗೆ ಸೆಲಬ್ರಿಟಿಗಳ ಪ್ರತಿಕ್ರಿಯೆ

ಕಂಚಿನ ಕಂಠದ ನಾಯಕ, ಗಾಯಕ, ಖಳ ನಾಯಕ ವಸಿಷ್ಠ ಎನ್. ಸಿಂಹ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ 'ಕಾಲಚಕ್ರ' ಸಿನಿಮಾದ 'ತರಗೆಲೆ ಸಂಸಾರ' ಹಾಡು ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಿದ್ದು ಈ ಹಾಡಿಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

  • " class="align-text-top noRightClick twitterSection" data="">

ಆನಂದ್ ಆಡಿಯೋ ಈ ಹಾಡನ್ನು ಬಿಡುಗಡೆ ಮಾಡಿದ್ದು ಸ್ಯಾಂಡಲ್​ವುಡ್ ಸ್ಟಾರ್​​ಗಳು ಕೂಡಾ ಈ ಹಾಡಿಗೆ ಫಿದಾ ಆಗಿದ್ದಾರೆ. ಇಷ್ಟು ದಿನ ತಮ್ಮ ಖಡಕ್ ಡೈಲಾಗ್​​​​​​​ನಿಂದ ಅಬ್ಬರಿಸುತ್ತಿದ್ದ ವಸಿಷ್ಠ ಸಿಂಹ, ಈ ಹಾಡಿನಲ್ಲಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್​​​​​​ಕುಮಾರ್, ಪವರ್​​​​​​​​​​​​​​​​​​ಸ್ಟಾರ್ ಪುನೀತ್ ರಾಜ್​​​​​​​ಕುಮಾರ್, ಡಾಲಿ ಧನಂಜಯ್​​​​, ಪ್ರಜ್ವಲ್ ದೇವರಾಜ್, ಟಗರು ಪುಟ್ಟಿ ಮಾನ್ವಿತ, ಸಿಂಪಲ್ ಸುನಿ, ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹಾಗೂ ಇನ್ನಿತರರು 'ಕಾಲಚಕ್ರ' ಚಿತ್ರಕ್ಕೆ ಶುಭ ಕೋರಿದ್ದಾರೆ.

'ಕಾಲಚಕ್ರ' ಚಿತ್ರಕ್ಕೆ ಶುಭ ಕೋರಿದ ರವಿ ಡಿ. ಚೆನ್ನಣ್ಣನವರ್

'ತರಗೆಲೆ ಸಂಸಾರ' ಹಾಡಿಗೆ ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದರೆ ಗುರುಕಿರಣ್ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಬಾಲಿವುಡ್ ಖ್ಯಾತ ಗಾಯಕ ಕೈಲಾಶ್ ಕೇರ್ ಹಾಡಿದ್ದಾರೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ. ರಕ್ಷಾ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಹಾಗೂ ಇನ್ನಿತರರು ನಟಿಸಿರುವ ಈ ಚಿತ್ರ ಶೀಘ್ರವೇ ತೆರೆಗೆ ಬರಲಿದೆ.

ತರಗೆಲೆ ಹಾಡಿಗೆ ಸೆಲಬ್ರಿಟಿಗಳ ಪ್ರತಿಕ್ರಿಯೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.