ETV Bharat / sitara

ಮಂಜು ಮಾಂಡವ್ಯ ಮೊದಲ ಬಾರಿ ನಾಯಕನಾಗಿ ನಟಿಸಿರುವ 'ಭರತ ಬಾಹುಬಲಿ' ರಿಲೀಸ್​​​​ಗೆ ರೆಡಿ - ನಾಯಕನಾಗಿ ನಟಿಸುತ್ತಿರುವ ಮಂಜು ಮಾಂಡವ್ಯ

'ಭರತ ಬಾಹುಬಲಿ' ಸಿನಿಮಾದಲ್ಲಿ ಮಂಜು ಮಾಂಡವ್ಯ ಭರತನಾಗಿ ಕಾಣಿಸಿಕೊಂಡರೆ, ಕಾಮಿಡಿ ನಟ ಚಿಕ್ಕಣ್ಣ ಬಾಹುಬಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್​​​​​ನಲ್ಲಿ ಬ್ಯುಸಿಯಾಗಿದ್ದು, ನಿನ್ನೆ ಚಿತ್ರದ ಟ್ರೇಲರ್ ಹಾಗೂ ಮೂರು ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದೆ.

Bharata bahubali
'ಭರತ ಬಾಹುಬಲಿ'
author img

By

Published : Jan 4, 2020, 11:34 AM IST

'ಮಾಸ್ಟರ್ ಪೀಸ್​​​' ನಿರ್ದೇಶಕ ಮಂಜು ಮಾಂಡವ್ಯ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಮಂಜು ಮಾಂಡವ್ಯ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನದ ಜೊತೆ ನಾಯಕನಾಗಿ ನಟಿಸುತ್ತಿದ್ದಾರೆ.

'ಭರತ ಬಾಹುಬಲಿ' ಟ್ರೇಲರ್ ಬಿಡುಗಡೆ ಸಮಾರಂಭ

ಮಂಜು ಮಾಂಡವ್ಯ ಈ ಸಿನಿಮಾದಲ್ಲಿ ಭರತನಾಗಿ ಕಾಣಿಸಿಕೊಂಡರೆ, ಕಾಮಿಡಿ ನಟ ಚಿಕ್ಕಣ್ಣ ಬಾಹುಬಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್​​​​​ನಲ್ಲಿ ಬ್ಯುಸಿಯಾಗಿದ್ದು, ನಿನ್ನೆ ಚಿತ್ರದ ಟ್ರೇಲರ್ ಹಾಗೂ ಮೂರು ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಕೊಡಗಿನ ಬೆಡಗಿ ಸಾರಾ ಹರೀಶ್ ಹಾಗೂ ಬೆಂಗಳೂರಿನ‌ ಟೆಕ್ಕಿ ಶ್ರೇಯಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು, ಕದ್ರಿ ಮಣಿಕಾಂತ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಹಾಗೂ 'ನಡುವೆ ಅಂತರವಿರಲಿ' ಖ್ಯಾತಿಯ ಪ್ರಖ್ಯಾತ್ ಪರಮೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಬಿಗ್​​​​​​​​​​​​​​​​​​​ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Manju mandavya
ಮಂಜು ಮಾಂಡವ್ಯ

ಚಿತ್ರವನ್ನು ಮೈಸೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ನಿರ್ಮಿಸಿದ್ದು, ಇದೇ ತಿಂಗಳ 17ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರವನ್ನು ಕೆಆರ್​ಜಿ ಸ್ಟುಡಿಯೋಸ್ ಮೂಲಕ ವಿತರಕ ಕಾರ್ತಿಕ್ ಗೌಡ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮೊದಲ ದಿನ ಈ ಸಿನಿಮಾ ನೋಡಲು ಬರುವ ಜನರಿಗೆ ಲಕ್ಕಿ ಡ್ರಾ ಮೂಲಕ ಕೋಟಿ ರೂಪಾಯಿ ಮೌಲ್ಯದ ಬಹುಮಾನ ನೀಡುವುದಾಗಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಹೇಳಿದ್ದಾರೆ.

  • " class="align-text-top noRightClick twitterSection" data="">

'ಮಾಸ್ಟರ್ ಪೀಸ್​​​' ನಿರ್ದೇಶಕ ಮಂಜು ಮಾಂಡವ್ಯ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಮಂಜು ಮಾಂಡವ್ಯ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನದ ಜೊತೆ ನಾಯಕನಾಗಿ ನಟಿಸುತ್ತಿದ್ದಾರೆ.

'ಭರತ ಬಾಹುಬಲಿ' ಟ್ರೇಲರ್ ಬಿಡುಗಡೆ ಸಮಾರಂಭ

ಮಂಜು ಮಾಂಡವ್ಯ ಈ ಸಿನಿಮಾದಲ್ಲಿ ಭರತನಾಗಿ ಕಾಣಿಸಿಕೊಂಡರೆ, ಕಾಮಿಡಿ ನಟ ಚಿಕ್ಕಣ್ಣ ಬಾಹುಬಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್​​​​​ನಲ್ಲಿ ಬ್ಯುಸಿಯಾಗಿದ್ದು, ನಿನ್ನೆ ಚಿತ್ರದ ಟ್ರೇಲರ್ ಹಾಗೂ ಮೂರು ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಕೊಡಗಿನ ಬೆಡಗಿ ಸಾರಾ ಹರೀಶ್ ಹಾಗೂ ಬೆಂಗಳೂರಿನ‌ ಟೆಕ್ಕಿ ಶ್ರೇಯಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು, ಕದ್ರಿ ಮಣಿಕಾಂತ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಹಾಗೂ 'ನಡುವೆ ಅಂತರವಿರಲಿ' ಖ್ಯಾತಿಯ ಪ್ರಖ್ಯಾತ್ ಪರಮೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಬಿಗ್​​​​​​​​​​​​​​​​​​​ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Manju mandavya
ಮಂಜು ಮಾಂಡವ್ಯ

ಚಿತ್ರವನ್ನು ಮೈಸೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ನಿರ್ಮಿಸಿದ್ದು, ಇದೇ ತಿಂಗಳ 17ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರವನ್ನು ಕೆಆರ್​ಜಿ ಸ್ಟುಡಿಯೋಸ್ ಮೂಲಕ ವಿತರಕ ಕಾರ್ತಿಕ್ ಗೌಡ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮೊದಲ ದಿನ ಈ ಸಿನಿಮಾ ನೋಡಲು ಬರುವ ಜನರಿಗೆ ಲಕ್ಕಿ ಡ್ರಾ ಮೂಲಕ ಕೋಟಿ ರೂಪಾಯಿ ಮೌಲ್ಯದ ಬಹುಮಾನ ನೀಡುವುದಾಗಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಹೇಳಿದ್ದಾರೆ.

  • " class="align-text-top noRightClick twitterSection" data="">
Intro:ಭರತ ಬಾಹುಬಲಿ ಚಿತ್ರನೋಡಿ ಕಾರ್ ಹಾಗೂ ಚಿನ್ನಡ ಒಡವೆ ಗೆಲ್ಲಿ ಅಂತಿದ್ದಾರೆ ಭರತಬಾಹುಬಲಿ ಚಿತ್ರತಂಡ, ಹೌದು ಇದೇ ಜನವರಿ ೧೭ ಕ್ಕೆ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನ ಮಾಡಿ ನಟಿಸಿರುವ ಭರತ‌ಬಾಹುಬಲಿ ಚಿತ್ರ ರಿಲೀಸ್ ಆಗ್ತಿದ್ದು, ಸಿನಿಪ್ರಿಯರನ್ನು ಥಿಯೇಟರ್ ಗೆ ಕರೆತರಲು ಚಿತ್ರತಂಡ ಸೂಪರ್ ಪ್ಲಾನ್ ಮಾಡಿದ್ದು, ಪ್ರೇಕ್ಷಕರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.ಹೌದು ಭರತ ಬಾಹುಬಲಿ ಚಿತ್ರನೋಡಿದವರಿಗೆ ಚಿನ್ನ ಹಾಗೂ ಕಾರ್ ಗೆಲ್ಲುವ ಸುವರ್ಣವಕಾಶವನ್ನು ಚಿತ್ರತಂಡ ಕೊಟ್ಟಿದೆ.ಯಾರು ಭರತ ಬಾಹುಬಲಿ ಚಿತ್ರವನ್ನು ಥಿಯೇಟರ್ ಗೆ ಹೋಗಿ ಟಿಕೆಟ್ ಖರೀದಿಸಿ ಸಿನಿಮಾ‌ ನೋಡ್ತಾರೋ ಅಂತವರಿಗೆ ಚಿತ್ರತಂಡ ಥಿಯೇಟರ್ ನಲ್ಲಿ ಒಂದು ಕೂಪನ್ ಕೊಡ್ತಾರೆ , ಆ ಕೂಪನ್ ಹಾಗೂ ಟಿಕೆಟ್ ಅನ್ನು ಥಿಯೇಟರ್ ನಲ್ಲಿ ಇರುವ ಲಕ್ಕಿಡ್ರಾ ಬಾಕ್ಸ್ ಗೆ ಹಾಕಬೇಕು.ಇದಕ್ಕೆ ಚಿತ್ರಕ್ಕೆ ಸಿನಿಮಾ ಬಿಡುಗಡೆ ಯಾದ ದಿನದಿಂದ ಹದಿನಾಲ್ಕು ದಿನದ ನಂತರ ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಕೈಲಿ ಲಕ್ಕಿ ಡ್ರಾ ಕೂಪನ್ ಎತ್ತಿಸಿ , ವಿಜೇತರಿಗೆ ೫೦ ಲಕ್ಷ ಮೌಲ್ಯದ ಚಿನ್ನದ ಒಡವೆ ಹಾಗೂ ೫೦ ಲಕ್ಷ ಮೌಲ್ಯದ ಹತ್ತು ಕಾರುಗಳನ್ನು ಕೊಡಲಿದ್ದಾರೆ.


Body:ಚಿತ್ರದ ಬೇರೆ ರೀತಿಯ ಪ್ರಚಾರಕ್ಕೆ ಕೋಟ್ಯಾಂತರ ರೂಪಾಯಿ ಖರ್ಚ್ ಮಾಡುವ ಬದಲು ಆ ಹಣವನ್ನು ಪ್ರೇಕ್ಷಕರಿಗೆ ಕೋಡಣ ಎಂದು ನಿರ್ಧರಿಸಿರುವ ನಿರ್ಮಾಪಕರು, ಪ್ರೇಕ್ಷಕರಿಗಾಗಿ ಸುಮಾರು ಒಂದು ಕೋಟಿ ರೂ ಮೀಸಲಿಟ್ಟಿದ್ದಾರೆ.ಅಲ್ಲದೆ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರಲು ಚಿತ್ರತಂಡ ಸೂಪರ್ ಐಡಿಯಾ ಮಾಡಿದೆ.ಒಂದು‌ ವೇಳೆ ಈ ಐಡಿಯಾ ಯಶಸ್ವಿಯಾದ್ರೆ.ಕನ್ನಡದಲ್ಲಿ ಬರುವ ಮುಂದಿನ ಚಿತ್ರಗಳ ಪ್ರಮೋಷನ್ ಗೆ ಹೊಸ ದಾರಿ ಸಿಕ್ಕಂತಾಗುತ್ತದೆ.

ಸತೀಶ ಎಂಬಿ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.