ETV Bharat / sitara

ದಯಾಳ್​ ನಿರ್ದೇಶನದ ಕನ್ನಡ ಚಿತ್ರವನ್ನು ತೆಲುಗಿಗೆ ರೀಮೇಕ್​ ಮಾಡಲು ಮುಂದಾದ ಅಲ್ಲು ಅರವಿಂದ್​

author img

By

Published : Apr 9, 2020, 2:19 PM IST

ಈಗಾಗಲೇ ನಿಪುಣ ನಿರ್ದೇಶಕ ದಯಾಳ್ ಪದ್ಮನಾಭನ್ ಈಗ ‘ಆ ಕರಾಳ ರಾತ್ರಿ’ ತೆಲುಗು ಅಲ್ಲಿ ರಿಮೇಕ್ ಮಾಡಲು ಸಜ್ಜಾಗಿದ್ದಾರೆ. ತೆಲುಗು ನೇಟಿವಿಟಿ ಗಮನದಲ್ಲಿ ಇಟ್ಟುಕೊಂಡು ಚಿತ್ರಕಥೆಗೆ ಮರುರೂಪ ಕೊಟ್ಟಿದ್ದಾರೆ. ತೆಲುಗು ಭಾಷೆಯ ದೊಡ್ಡ ತಾರಗಣವೇ ದಯಾಳ್ ಪದ್ಮನಾಭನ್ ಅವರ ಪ್ರಥಮ ತೆಲುಗು ಚಿತ್ರ ನಿರ್ದೇಶನದಲ್ಲಿ ಇರಲಿದೆ.

ಅಲ್ಲು ಅರವಿಂದ್
ಅಲ್ಲು ಅರವಿಂದ್

ಪಕ್ಕದ ತೆಲುಗು ಚಿತ್ರ ರಂಗದಲ್ಲಿ ಖ್ಯಾತ ನಿರ್ಮಾಪಕ ಅಲ್ಲುಅರವಿಂದ್ ಅವರು ಕನ್ನಡದಲ್ಲಿ 1998 ರಲ್ಲಿ ‘ಮಾಂಗಲ್ಯಂ ತಂತು ನಾನೇನ’ ಮತ್ತು 2016ರಲ್ಲಿ ತೆರೆಕಂಡ ‘ಸುಂದರಾಂಗ ಜಾಣ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇವರು ಈಗ ಕನ್ನಡದ ಸೂಪರ್ ಹಿಟ್ ಚಿತ್ರ ‘ಆ ಕರಾಳ ರಾತ್ರಿ’ಯನ್ನು ತೆಲುಗಿಗೆ ರೀಮೇಕ್​ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ನಿರ್ದೇಶಕ ದಯಾಳ್ ಪದ್ಮನಾಭನ್ ಅವರನ್ನು ಸಂಪರ್ಕಿಸಿದ್ದಾರೆ.

ಯಾಳ್ ಪದ್ಮನಾಭನ್
ಯಾಳ್ ಪದ್ಮನಾಭನ್

ಅಲ್ಲು ಅರವಿಂದ್ ಅವರು ಇತ್ತೀಚಿಗೆ ‘ಆಹಾ’ ಡಿಜಿಟಲ್ ಸಂಸ್ಥೆ ಒ ಟಿ ಟಿ ಪ್ಲಾಟ್ ಫಾರ್ಮ್ ಸ್ಥಾಪನೆ ಮಾಡಿ ವಿಶ್ವಾದ್ಯಂತ ಸಿನಿಮಾಗಳ ಬಿಡುಗಡೆ ಮಾಡುವ ಯೋಚನೆ ಹೊಂದಿದ್ದಾರೆ. ಜೀ 5 ಸಂಸ್ಥೆಯು ಕನ್ನಡದಲ್ಲಿ ‘ಭಿನ್ನ’ ಚಿತ್ರ ತಯಾರಿಸಿ ಅದನ್ನು ಕಳೆದ ವರ್ಷ ಅಕ್ಟೋಬರ್ 8 ರಂದು ವಿಶ್ವಾದ್ಯಂತ ಪ್ರಿಮಿಯರ್ ಶೋ ಮಾಡಿದ ಹಾಗೆ ಅಲ್ಲು ಅವರ ಆಹಾ ವಾಹಿನಿ ಈ ಸಹ ಈ ಕಾರ್ಯ ಮಾಡಲಿದೆ.

ಈಗಾಗಲೇ ನಿಪುಣ ನಿರ್ದೇಶಕ ದಯಾಳ್ ಪದ್ಮನಾಭನ್ ಈಗ ‘ಆ ಕರಾಳ ರಾತ್ರಿ’ ತೆಲುಗಿನಲ್ಲಿ ರೀಮೇಕ್ ಮಾಡಲು ಸಜ್ಜಾಗಿದ್ದಾರೆ. ತೆಲುಗು ನೇಟಿವಿಟಿ ಗಮನದಲ್ಲಿ ಇಟ್ಟುಕೊಂಡು ಚಿತ್ರಕಥೆಗೆ ಮರುರೂಪ ಕೊಟ್ಟಿದ್ದಾರೆ. ತೆಲುಗು ಭಾಷೆಯ ದೊಡ್ಡ ತಾರಗಣವೇ ದಯಾಳ್ ಪದ್ಮನಾಭನ್ ಅವರ ಪ್ರಥಮ ತೆಲುಗು ಚಿತ್ರ ನಿರ್ದೇಶನದಲ್ಲಿ ಇರಲಿದೆ.

ಸದ್ಯಕ್ಕೆ ದಯಾಳ್ ಪದ್ಮನಾಭನ್ ‘ಒಂಬತ್ತನೇ ದಿಕ್ಕು’ ಸೆನ್ಸಾರ್ ಮುಂದೆ ಹೋಗಲು ಸಿದ್ದಪಡಿಸಿದ್ದಾರೆ. ಮಾತಿನ ಮಲ್ಲ, ಹಲವಾರು ವಿಚಾರಗಳ ಬಗ್ಗೆ ನಿರರ್ಗಳವಾಗಿ ಚರ್ಚೆ ಮಾಡಬಲ್ಲ ದಯಾಳ್ ಪದ್ಮನಾಭನ್ ಈ ಲಾಕ್ ಡೌನ್ ಸಂದರ್ಭದಲ್ಲಿ ‘ಮಾರುತಿ ನಗರ ಪೊಲೀಸ್ ಸ್ಟೇಷನ್’ ಹಾಗೂ ‘ಮಾಯಾವತಿ’ಎಂಬ ಎರಡು ಚಿತ್ರಕ್ಕೆ ಕಥೆ ಸಿದ್ದಮಾಡಿಕೊಂಡಿದ್ದಾರೆ.

ಪಕ್ಕದ ತೆಲುಗು ಚಿತ್ರ ರಂಗದಲ್ಲಿ ಖ್ಯಾತ ನಿರ್ಮಾಪಕ ಅಲ್ಲುಅರವಿಂದ್ ಅವರು ಕನ್ನಡದಲ್ಲಿ 1998 ರಲ್ಲಿ ‘ಮಾಂಗಲ್ಯಂ ತಂತು ನಾನೇನ’ ಮತ್ತು 2016ರಲ್ಲಿ ತೆರೆಕಂಡ ‘ಸುಂದರಾಂಗ ಜಾಣ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇವರು ಈಗ ಕನ್ನಡದ ಸೂಪರ್ ಹಿಟ್ ಚಿತ್ರ ‘ಆ ಕರಾಳ ರಾತ್ರಿ’ಯನ್ನು ತೆಲುಗಿಗೆ ರೀಮೇಕ್​ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ನಿರ್ದೇಶಕ ದಯಾಳ್ ಪದ್ಮನಾಭನ್ ಅವರನ್ನು ಸಂಪರ್ಕಿಸಿದ್ದಾರೆ.

ಯಾಳ್ ಪದ್ಮನಾಭನ್
ಯಾಳ್ ಪದ್ಮನಾಭನ್

ಅಲ್ಲು ಅರವಿಂದ್ ಅವರು ಇತ್ತೀಚಿಗೆ ‘ಆಹಾ’ ಡಿಜಿಟಲ್ ಸಂಸ್ಥೆ ಒ ಟಿ ಟಿ ಪ್ಲಾಟ್ ಫಾರ್ಮ್ ಸ್ಥಾಪನೆ ಮಾಡಿ ವಿಶ್ವಾದ್ಯಂತ ಸಿನಿಮಾಗಳ ಬಿಡುಗಡೆ ಮಾಡುವ ಯೋಚನೆ ಹೊಂದಿದ್ದಾರೆ. ಜೀ 5 ಸಂಸ್ಥೆಯು ಕನ್ನಡದಲ್ಲಿ ‘ಭಿನ್ನ’ ಚಿತ್ರ ತಯಾರಿಸಿ ಅದನ್ನು ಕಳೆದ ವರ್ಷ ಅಕ್ಟೋಬರ್ 8 ರಂದು ವಿಶ್ವಾದ್ಯಂತ ಪ್ರಿಮಿಯರ್ ಶೋ ಮಾಡಿದ ಹಾಗೆ ಅಲ್ಲು ಅವರ ಆಹಾ ವಾಹಿನಿ ಈ ಸಹ ಈ ಕಾರ್ಯ ಮಾಡಲಿದೆ.

ಈಗಾಗಲೇ ನಿಪುಣ ನಿರ್ದೇಶಕ ದಯಾಳ್ ಪದ್ಮನಾಭನ್ ಈಗ ‘ಆ ಕರಾಳ ರಾತ್ರಿ’ ತೆಲುಗಿನಲ್ಲಿ ರೀಮೇಕ್ ಮಾಡಲು ಸಜ್ಜಾಗಿದ್ದಾರೆ. ತೆಲುಗು ನೇಟಿವಿಟಿ ಗಮನದಲ್ಲಿ ಇಟ್ಟುಕೊಂಡು ಚಿತ್ರಕಥೆಗೆ ಮರುರೂಪ ಕೊಟ್ಟಿದ್ದಾರೆ. ತೆಲುಗು ಭಾಷೆಯ ದೊಡ್ಡ ತಾರಗಣವೇ ದಯಾಳ್ ಪದ್ಮನಾಭನ್ ಅವರ ಪ್ರಥಮ ತೆಲುಗು ಚಿತ್ರ ನಿರ್ದೇಶನದಲ್ಲಿ ಇರಲಿದೆ.

ಸದ್ಯಕ್ಕೆ ದಯಾಳ್ ಪದ್ಮನಾಭನ್ ‘ಒಂಬತ್ತನೇ ದಿಕ್ಕು’ ಸೆನ್ಸಾರ್ ಮುಂದೆ ಹೋಗಲು ಸಿದ್ದಪಡಿಸಿದ್ದಾರೆ. ಮಾತಿನ ಮಲ್ಲ, ಹಲವಾರು ವಿಚಾರಗಳ ಬಗ್ಗೆ ನಿರರ್ಗಳವಾಗಿ ಚರ್ಚೆ ಮಾಡಬಲ್ಲ ದಯಾಳ್ ಪದ್ಮನಾಭನ್ ಈ ಲಾಕ್ ಡೌನ್ ಸಂದರ್ಭದಲ್ಲಿ ‘ಮಾರುತಿ ನಗರ ಪೊಲೀಸ್ ಸ್ಟೇಷನ್’ ಹಾಗೂ ‘ಮಾಯಾವತಿ’ಎಂಬ ಎರಡು ಚಿತ್ರಕ್ಕೆ ಕಥೆ ಸಿದ್ದಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.