ETV Bharat / sitara

ಮಹಾರಾಷ್ಟ್ರ ಲಾಕ್​ಡೌನ್​​: ಪ್ರಭಾಸ್​ ಆದಿಪುರುಷ್​ ಶೂಟಿಂಗ್​ ಮುಂಬೈನಿಂದ ಹೈದ್ರಾಬಾದ್​ಗೆ ಶಿಫ್ಟ್​?

author img

By

Published : May 11, 2021, 4:24 PM IST

ಕೊರೊನಾ ಲಾಕ್​ಡೌನ್​ ಹಿನ್ನೆಲೆ ಎಲ್ಲಾ ಸಿನಿಮಾಗಳ ಚಿತ್ರೀಕರಣಕ್ಕೆ ಮಹಾರಾಷ್ಟ್ರ ಸರ್ಕಾರ ನಿರ್ಬಂಧ ಹೇರಿದ ಹಿನ್ನೆಲೆ ನಟ ಪ್ರಭಾಸ್​ ಅಭಿನಯದ ಆದಿಪುರುಷ್​ ಚಿತ್ರದ ಚಿತ್ರೀಕರಣವನ್ನು ಹೈದ್ರಾಬಾದ್​ನಲ್ಲಿ​ ನಡೆಸಲು ಚಿತ್ರ ತಂಡ ಮುಂದಾಗಿದೆ..

prabhas
prabhas

ಹೈದ್ರಾಬಾದ್​ : ಮುಂಬೈನಲ್ಲಿ ಚಿತ್ರೀಕರಣವಾಗಬೇಕಿದ್ದ ಪ್ರಭಾಸ್​ ಅಭಿನಯದ 'ಆದಿಪುರುಷ್' ಚಿತ್ರ ಇದೀಗ ಹೈದ್ರಾಬಾದ್​ಗೆ ಶಿಫ್ಟ್​ ಆಗುವ ಸಾಧ್ಯತೆಗಳು ದಟ್ಟವಾಗಿವೆ.

ಎಲ್ಲಾ ಚಲನಚಿತ್ರಗಳು ಮತ್ತು ಟಿವಿ ನಿರ್ಮಾಣಗಳ ಚಿತ್ರೀಕರಣವನ್ನು ನಿಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದ ನಂತರ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ನಿರ್ಮಾಣವನ್ನು ಹೈದರಾಬಾದ್‌ಗೆ ವರ್ಗಾಯಿಸುವ ಆಲೋಚನೆ ನಡೆದಿದೆ. ಅದಕ್ಕಾಗಿ ಈಗಾಗಲೇ ಹೈದರಾಬಾದ್‌ನಲ್ಲಿ ಬೃಹತ್​ ಸೆಟ್‌ಗಳನ್ನು ರೆಡಿ ಮಾಡಲಾಗಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣವಾಗ್ತಿದೆ.

ಕೋವಿಡ್​ ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಬಂಧಗಳನ್ನು ಹೇರಿರುವುದರಿಂದ ಪ್ರಭಾಸ್ ಅವರ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಚಿತ್ರವನ್ನು ಹೈದರಾಬಾದ್‌ಗೆ ಸ್ಥಳಾಂತರಿಸಬಹುದು ಎನ್ನಲಾಗಿದೆ.

ಸಿನಿಮಾ ತಯಾರಕರು ಈಗಾಗಲೇ ಮುಂಬಯಿಯಲ್ಲಿ ಸಿನಿಮಾಗಾಗಿ ಎರಡು ಬೃಹತ್​ ಸೆಟ್‌ಗಳನ್ನು ನಿರ್ಮಿಸಿದ್ದರು- ಒಂದು ಫಿಲ್ಮ್ ಸಿಟಿಯಲ್ಲಿ ಮತ್ತು ಅದರ ಹೊರಗೆ ಒಂದು. ಆದರೆ, ಮೊದಲಿನಿಂದಲೂ ನಟ ಪ್ರಭಾಸ್​ಗೆ ಮುಂಬೈನಲ್ಲಿ ಚಿತ್ರೀಕರಣ ಮಾಡುವುದು ಇಷ್ಟವಿರಲಿಲ್ಲ ಎನ್ನಲಾಗಿದೆ.

ಆದರೆ, ಇದೀಗ ಕೊರೊನಾ ಲಾಕ್​ಡೌನ್​ ಹಿನ್ನೆಲೆ ಸಿನಿಮಾ ಚಿತ್ರೀಕರಣಕ್ಕೆ ನಿರ್ಬಂಧ ಇರುವುದರಿಂದ ಈ ಹಿಂದೆ ಪ್ರಭಾಸ್​ ಹೈದ್ರಾಬಾದ್​ನಲ್ಲಿ ಶೂಟಿಂಗ್​ ಮಾಡುವಂತೆ ಸೂಚಿಸಿದ್ದನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹೈದ್ರಾಬಾದ್​ : ಮುಂಬೈನಲ್ಲಿ ಚಿತ್ರೀಕರಣವಾಗಬೇಕಿದ್ದ ಪ್ರಭಾಸ್​ ಅಭಿನಯದ 'ಆದಿಪುರುಷ್' ಚಿತ್ರ ಇದೀಗ ಹೈದ್ರಾಬಾದ್​ಗೆ ಶಿಫ್ಟ್​ ಆಗುವ ಸಾಧ್ಯತೆಗಳು ದಟ್ಟವಾಗಿವೆ.

ಎಲ್ಲಾ ಚಲನಚಿತ್ರಗಳು ಮತ್ತು ಟಿವಿ ನಿರ್ಮಾಣಗಳ ಚಿತ್ರೀಕರಣವನ್ನು ನಿಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದ ನಂತರ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ನಿರ್ಮಾಣವನ್ನು ಹೈದರಾಬಾದ್‌ಗೆ ವರ್ಗಾಯಿಸುವ ಆಲೋಚನೆ ನಡೆದಿದೆ. ಅದಕ್ಕಾಗಿ ಈಗಾಗಲೇ ಹೈದರಾಬಾದ್‌ನಲ್ಲಿ ಬೃಹತ್​ ಸೆಟ್‌ಗಳನ್ನು ರೆಡಿ ಮಾಡಲಾಗಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣವಾಗ್ತಿದೆ.

ಕೋವಿಡ್​ ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಬಂಧಗಳನ್ನು ಹೇರಿರುವುದರಿಂದ ಪ್ರಭಾಸ್ ಅವರ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಚಿತ್ರವನ್ನು ಹೈದರಾಬಾದ್‌ಗೆ ಸ್ಥಳಾಂತರಿಸಬಹುದು ಎನ್ನಲಾಗಿದೆ.

ಸಿನಿಮಾ ತಯಾರಕರು ಈಗಾಗಲೇ ಮುಂಬಯಿಯಲ್ಲಿ ಸಿನಿಮಾಗಾಗಿ ಎರಡು ಬೃಹತ್​ ಸೆಟ್‌ಗಳನ್ನು ನಿರ್ಮಿಸಿದ್ದರು- ಒಂದು ಫಿಲ್ಮ್ ಸಿಟಿಯಲ್ಲಿ ಮತ್ತು ಅದರ ಹೊರಗೆ ಒಂದು. ಆದರೆ, ಮೊದಲಿನಿಂದಲೂ ನಟ ಪ್ರಭಾಸ್​ಗೆ ಮುಂಬೈನಲ್ಲಿ ಚಿತ್ರೀಕರಣ ಮಾಡುವುದು ಇಷ್ಟವಿರಲಿಲ್ಲ ಎನ್ನಲಾಗಿದೆ.

ಆದರೆ, ಇದೀಗ ಕೊರೊನಾ ಲಾಕ್​ಡೌನ್​ ಹಿನ್ನೆಲೆ ಸಿನಿಮಾ ಚಿತ್ರೀಕರಣಕ್ಕೆ ನಿರ್ಬಂಧ ಇರುವುದರಿಂದ ಈ ಹಿಂದೆ ಪ್ರಭಾಸ್​ ಹೈದ್ರಾಬಾದ್​ನಲ್ಲಿ ಶೂಟಿಂಗ್​ ಮಾಡುವಂತೆ ಸೂಚಿಸಿದ್ದನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.