ETV Bharat / international

ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿದ್ದ ರಾಜಪಕ್ಸ ಕುಟುಂಬ ಮಾಲ್ಡೀವ್ಸ್​ಗೆ ಪಲಾಯನ

ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿ ಸಂಪೂರ್ಣವಾಗಿ ತತ್ತರಿಸಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆಗಳು ಜೋರಾಗಿವೆ. ಜನರು ಅಗತ್ಯ ವಸ್ತುಗಳಿಗೂ ಹೆಣಗಾಡುತ್ತಿರುವ ಸಂದರ್ಭದಲ್ಲೇ ಇದೀಗ ಗೊಟಬಯ ರಾಜಪಕ್ಸ ಕುಟುಂಬ ದೇಶದಿಂದಲೇ ಪರಾರಿಯಾಗಿದೆ.

author img

By

Published : Jul 13, 2022, 7:32 AM IST

Updated : Jul 13, 2022, 9:32 AM IST

Gotabaya Rajapaksa leaves Sri Lanka, Gotabaya Rajapaksa arrives in Maldives, Sri Lanka economic crisis, Sri Lanka fuel crisis, Sri Lanka news, ಶ್ರೀಲಂಕಾ ತೊರೆದ ಗೋತಬಯ ರಾಜಪಕ್ಸೆ , ಮಾಲ್ಡೀವ್ಸ್‌ನಲ್ಲಿ ಬೀಡು ಬಿಟ್ಟ ಗೋತಬಯ ರಾಜಪಕ್ಸೆ ಕುಟುಂಬ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು, ಶ್ರೀಲಂಕಾ ಇಂಧನ ಬಿಕ್ಕಟ್ಟು, ಶ್ರೀಲಂಕಾ ಸುದ್ದಿ,
ಶ್ರೀಲಂಕಾದಲ್ಲೇ ತಲೆಮರಿಸಿಕೊಂಡಿದ್ದ ರಾಜಪಕ್ಸ ಕುಟುಂಬ ಮಾಲ್ಡೀವ್ಸ್​ಗೆ​ ಪ್ರಯಾಣ

ಕೊಲಂಬೊ(ಶ್ರೀಲಂಕಾ): ಶ್ರೀಲಂಕಾದಲ್ಲಿ ಗಂಭೀರ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶದಿಂದ ಪಲಾಯನ ಮಾಡಿ ಮಾಲ್ಡಿವ್ಸ್‌ಗೆ ಬಂದಿಳಿದಿದ್ದಾರೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರಕ್ಕೆ ರಾಜಪಕ್ಸ ಸಹಿ ಹಾಕಿದ್ದು, ಇಂದು ಸ್ಪೀಕರ್‌ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ರಾಜಪಕ್ಸ ಅವರು ಪತ್ನಿ, ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್‌ನ ಮಾಲೆ ನಗರ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಲಂಕಾದಿಂದ ತಪ್ಪಿಸಿಕೊಳ್ಳಲು ಅವರು ವಾಯುಪಡೆಯ ಎಎನ್-32 ಬಳಸಿದ್ದಾರೆ. ಪ್ರತಿಭಟನಾಕಾರರು ಮುತ್ತಿಗೆ ಸಂದರ್ಭದಲ್ಲಿ ಇವರು ಶ್ರೀಲಂಕಾದಲ್ಲೇ ತಲೆಮರೆಸಿಕೊಂಡಿದ್ದರು. ಇದೀಗ ದೇಶದಿಂದಲೇ ಕಾಲ್ಕಿತ್ತಿದ್ದಾರೆ.

ಸ್ಪೀಕರ್​ಗೆ ಅಧ್ಯಕ್ಷ ಪಟ್ಟ?: ರಾಜಪಕ್ಸ ರಾಜೀನಾಮೆಯ ನಂತರ ಅಧ್ಯಕ್ಷ ಸ್ಥಾನ ಈಗ ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಭಯವರ್ಧನ ಅವರ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ. ಸಂವಿಧಾನದ ಪ್ರಕಾರ, ದೇಶದಲ್ಲಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯ ಅನುಪಸ್ಥಿತಿಯಲ್ಲಿ ಸರ್ಕಾರದ ನೇತೃತ್ವವನ್ನು ಸಂಸತ್ತಿನ ಸ್ಪೀಕರ್‌ಗೆ ನೀಡಬೇಕಿದೆ.

ಇದನ್ನೂ ಓದಿ: ಲಂಕಾ ಪಿಎಂ ರಾಜೀನಾಮೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ: ಸಂಸದ ಸಾವು, ಮಾಜಿ ಸಚಿವರ ಮನೆಗೆ ಬೆಂಕಿ

ಅಧ್ಯಕ್ಷರ ನಿವಾಸದ ಸುತ್ತಲೂ ಸಾವಿರಾರು ಜನ: ರಾಜಪಕ್ಸ ಪರಾರಿಯಾದ ಹೊರತಾಗಿಯೂ ಸಾವಿರಾರು ಜನರು ಇನ್ನೂ ಅಧ್ಯಕ್ಷರ ನಿವಾಸ ಹಾಗು ಸಂಸತ್ತನ್ನು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಲಂಬೊ(ಶ್ರೀಲಂಕಾ): ಶ್ರೀಲಂಕಾದಲ್ಲಿ ಗಂಭೀರ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶದಿಂದ ಪಲಾಯನ ಮಾಡಿ ಮಾಲ್ಡಿವ್ಸ್‌ಗೆ ಬಂದಿಳಿದಿದ್ದಾರೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರಕ್ಕೆ ರಾಜಪಕ್ಸ ಸಹಿ ಹಾಕಿದ್ದು, ಇಂದು ಸ್ಪೀಕರ್‌ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ರಾಜಪಕ್ಸ ಅವರು ಪತ್ನಿ, ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್‌ನ ಮಾಲೆ ನಗರ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಲಂಕಾದಿಂದ ತಪ್ಪಿಸಿಕೊಳ್ಳಲು ಅವರು ವಾಯುಪಡೆಯ ಎಎನ್-32 ಬಳಸಿದ್ದಾರೆ. ಪ್ರತಿಭಟನಾಕಾರರು ಮುತ್ತಿಗೆ ಸಂದರ್ಭದಲ್ಲಿ ಇವರು ಶ್ರೀಲಂಕಾದಲ್ಲೇ ತಲೆಮರೆಸಿಕೊಂಡಿದ್ದರು. ಇದೀಗ ದೇಶದಿಂದಲೇ ಕಾಲ್ಕಿತ್ತಿದ್ದಾರೆ.

ಸ್ಪೀಕರ್​ಗೆ ಅಧ್ಯಕ್ಷ ಪಟ್ಟ?: ರಾಜಪಕ್ಸ ರಾಜೀನಾಮೆಯ ನಂತರ ಅಧ್ಯಕ್ಷ ಸ್ಥಾನ ಈಗ ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಭಯವರ್ಧನ ಅವರ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ. ಸಂವಿಧಾನದ ಪ್ರಕಾರ, ದೇಶದಲ್ಲಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯ ಅನುಪಸ್ಥಿತಿಯಲ್ಲಿ ಸರ್ಕಾರದ ನೇತೃತ್ವವನ್ನು ಸಂಸತ್ತಿನ ಸ್ಪೀಕರ್‌ಗೆ ನೀಡಬೇಕಿದೆ.

ಇದನ್ನೂ ಓದಿ: ಲಂಕಾ ಪಿಎಂ ರಾಜೀನಾಮೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ: ಸಂಸದ ಸಾವು, ಮಾಜಿ ಸಚಿವರ ಮನೆಗೆ ಬೆಂಕಿ

ಅಧ್ಯಕ್ಷರ ನಿವಾಸದ ಸುತ್ತಲೂ ಸಾವಿರಾರು ಜನ: ರಾಜಪಕ್ಸ ಪರಾರಿಯಾದ ಹೊರತಾಗಿಯೂ ಸಾವಿರಾರು ಜನರು ಇನ್ನೂ ಅಧ್ಯಕ್ಷರ ನಿವಾಸ ಹಾಗು ಸಂಸತ್ತನ್ನು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Last Updated : Jul 13, 2022, 9:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.