ಕೊಲಂಬೊ: ಕೊರೊನಾ ವೈರಸ್ಗೋಸ್ಕರ ಮಾಂತ್ರಿಕನೋರ್ವ ತಯಾರಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ ಶ್ರೀಲಂಕಾ ಆರೋಗ್ಯ ಸಚಿವೆ ಇದೀಗ ಸೋಂಕಿಗೊಳಗಾಗಿರುವ ಘಟನೆ ನಡೆದಿದೆ. ಇದರ ವಿರುದ್ಧ ಅನೇಕ ಟೀಕೆಗಳು ಕೇಳಿ ಬರುತ್ತಿವೆ.
ಓದಿ: ಲಡಾಕ್ ಗಡಿ ವಿವಾದ: ಭಾರತ-ಚೀನಾ ನಡುವೆ ಇಂದು 9ನೇ ಸುತ್ತಿನ ಮಾತುಕತೆ!
ಶ್ರೀಲಂಕಾ ರಾಜಧಾನಿ ಕೊಲಂಬೊದ ಈಶಾನ್ಯ ಕೆಗಾಲೆ ಪಟ್ಟಣದಲ್ಲಿ ಡಿಸೆಂಬರ್ ತಿಂಗಳಲ್ಲಿ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಈ ಲಸಿಕೆ ತೆಗೆದುಕೊಂಡಿದ್ದು, ಇದರ ಜತೆಗೆ ಅನೇಕ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕವಾಗಿ ಸೇವನೆ ಮಾಡಿದ್ದರು.
ಅಲ್ಲಿನ ಮಾಂತ್ರಿಕನೋರ್ವ ಗಿಡಮೂಲಿಕೆಯಿಂದ ಸಿರಪ್ ತಯಾರಿಸಿದ್ದರು. ಇದನ್ನ ಅಲ್ಲಿನ ಆರೋಗ್ಯ ಸಚಿವೆ ಪವಿತ್ರಾ ವನ್ನಿಯಾರಾಚಿ ತೆಗೆದುಕೊಂಡಿದ್ದರು. ಆದರೆ ಇದೀಗ ಕೋವಿಡ್-19 ಸೋಂಕಿಗೊಳಗಾಗಿದ್ದಾರೆ. ಜಾಜಿಕಾಯಿ ಹಾಗೂ ಜೇನುತುಪ್ಪ ಬಳಕೆ ಮಾಡಿ ಈ ಲಸಿಕೆ ಕಂಡು ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಭಾರತದಲ್ಲಿ ತಯಾರುಗೊಂಡಿರುವ ಕೊವಿಶೀಲ್ಡ್ ಲಸಿಕೆ ಶ್ರೀಲಂಕಾಗೆ ಜನವರಿ 27ರಂದು ತಲುಪಲಿದೆ.
ಲಂಕಾದಲ್ಲಿ 278 ಸಾವುಗಳೊಂದಿಗೆ 52,964 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.