ETV Bharat / entertainment

'ಕುತಂತ್ರಿ ನರಿಗಳ ಮಾನವ ರೂಪ'.. 'ಕರಟಕ ದಮನಕ' ಮೊದಲ ಝಲಕ್​ ನೋಡಿ..​

author img

By

Published : Jul 14, 2023, 7:13 PM IST

ಬಹುನಿರೀಕ್ಷಿತ 'ಕರಟಕ ದಮನಕ' ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಯಾಗಿದೆ.

karataka damanaka
ಕರಟಕ ದಮನಕ
ನಿರ್ದೇಶಕ ಯೋಗರಾಜ್ ಭಟ್ ಮಾತನಾಡುತ್ತಿರುವುದು

ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಹಾಗೂ ಭಾರತದ ಮೈಕಲ್​ ಜಾಕ್ಸನ್​ ಪ್ರಭುದೇವ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ 'ಕರಟಕ ದಮನಕ'. ಕ್ಯಾಚಿ ಟೈಟಲ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರವನ್ನು ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಇದೀಗ ಬಿಡುಗಡೆಯಾಗಿದೆ.

'ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು 'ಕರಟಕ' ಇನ್ನೊಂದರ ಹೆಸರು 'ದಮನಕ'. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ!!ಎಚ್ಚರಿಕೆ' ಎಂಬ ಬರಹದ ಮೂಲಕ ಪೋಸ್ಟರ್​ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್ರು.

ಚಿತ್ರತಂಡ ಹೀಗಿದೆ.. ಶಿವ ರಾಜ್​ಕುಮಾರ್​, ಪ್ರಭುದೇವ ಅಲ್ಲದೇ ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.

ಚಿತ್ರಕ್ಕೆ ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್​ ಸಂಕಲನವಿದೆ. ಯೋಗರಾಜ್​ ಭಟ್​ ಹಾಗೂ ರವಿ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್​ ಭಟ್​, ರವಿ ಮತ್ತು ಸುಬ್ರಹ್ಮಣ್ಯ ಬರೆದಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ರಾಕ್​ಲೈನ್​ ಎಂಟರ್ಟೈನ್​ಮೆಂಟ್​ ಲಾಂಛನದ ಅಡಿ ರಾಕ್​ಲೈನ್​ ವೆಂಕಟೇಶ್​ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಒಂದು ಮಿಲಿಯನ್​​ಗೂ ಅಧಿಕ ವೀಕ್ಷಣೆ ಕಂಡ 'ಉಸಿರೇ ಉಸಿರೇ' ಟೀಸರ್... ಅದೃಷ್ಟ ಪರೀಕ್ಷೆಗಿಳಿದ ರಾಜೀವ್

ಸದ್ಯ ಪೋಸ್ಟ್​ ಪ್ರೊಡಕ್ಷನ್ಸ್​ ಹಂತದಲ್ಲಿರುವ 'ಕರಟಕ ದಮನಕ' ಚಿತ್ರದ ಟ್ರೇಲರ್​ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಿನಿ ದಿಗ್ಗಜರ ಕಾಂಬಿನೇಶನ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಅಪರೂಪದ ಚಿತ್ರವನ್ನು ಕಣ್ತುಂಬಿಕೊಳ್ಳಲು ಕನ್ನಡ ಕಲಾರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ಬ್ಯುಸಿ ಶೆಡ್ಯೂಲ್​ನಲ್ಲಿ ಶಿವಣ್ಣ: ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಈಗಾಗಲೇ ಅನೇಕ ಸಿನಿಮಾಗಳನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. 2022ರಲ್ಲಿ ಕೊನೆಯದಾಗಿ ಪ್ಯಾನ್​ ಇಂಡಿಯಾ ಸಿನಿಮಾ 'ವೇದ'ದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಘೋಸ್ಟ್'​ ಸಿನಿಮಾವಾಗಿ ಬ್ಯುಸಿಯಾದರು. ಸದ್ಯ ಈ ಚಿತ್ರದ ಶೂಟಿಂಗ್​ ಮುಕ್ತಾಯಗೊಂಡಿದ್ದು, 'ಪೋಸ್ಟ್​' ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ಇದರ ಬೆನ್ನಲ್ಲೇ 'ಮಫ್ತಿ' ಸಿನಿಮಾದ ಸೀಕ್ವೆಲ್​ ಆದ 'ಬೈರತಿ ರಣಗಲ್'​ನಲ್ಲೂ ಶಿವರಾಜ್​ಕುಮಾರ್​ ಬಣ್ಣ ಹಚ್ಚುತ್ತಿದ್ದಾರೆ.

'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ನಿರ್ದೇಶಿಸಿದ್ದ ಸಚಿನ್​ ಬಿ.ರವಿ ಜೊತೆ 'ಸಾಗಾ ಆಫ್​ ಅಶ್ವತ್ಥಾಮ' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಈಗಾಗಲೇ ಬಿಡುಗಡೆಗೆ ತಯಾರಾಗಿರುವ 'ಘೋಸ್ಟ್'​ ಚಿತ್ರದ ಸೀಕ್ವೆಲ್​ ಕೂಡ ತಯಾರಾಗುತ್ತಿದೆ. ಅಲ್ಲದೇ 'ಧೀರ' ಶೀರ್ಷಿಕೆಯ ಸಿನಿಮಾ ಕೂಡ ನಿರ್ಮಾಣವಾಗಲಿದೆ. ಹ್ಯಾಟ್ರಿಕ್​ ಹೀರೋ ಅವರಿಗೆಂದೇ ಮಾಡಿಕೊಂಡಿದ್ದ 'ಧೀರ' ಕಥೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ. ನವೀನ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ನಿಗೆ ಪ್ರಶಸ್ತಿಗಳ ಮಳೆ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ

ನಿರ್ದೇಶಕ ಯೋಗರಾಜ್ ಭಟ್ ಮಾತನಾಡುತ್ತಿರುವುದು

ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಹಾಗೂ ಭಾರತದ ಮೈಕಲ್​ ಜಾಕ್ಸನ್​ ಪ್ರಭುದೇವ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ 'ಕರಟಕ ದಮನಕ'. ಕ್ಯಾಚಿ ಟೈಟಲ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರವನ್ನು ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಇದೀಗ ಬಿಡುಗಡೆಯಾಗಿದೆ.

'ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು 'ಕರಟಕ' ಇನ್ನೊಂದರ ಹೆಸರು 'ದಮನಕ'. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ!!ಎಚ್ಚರಿಕೆ' ಎಂಬ ಬರಹದ ಮೂಲಕ ಪೋಸ್ಟರ್​ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್ರು.

ಚಿತ್ರತಂಡ ಹೀಗಿದೆ.. ಶಿವ ರಾಜ್​ಕುಮಾರ್​, ಪ್ರಭುದೇವ ಅಲ್ಲದೇ ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.

ಚಿತ್ರಕ್ಕೆ ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್​ ಸಂಕಲನವಿದೆ. ಯೋಗರಾಜ್​ ಭಟ್​ ಹಾಗೂ ರವಿ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್​ ಭಟ್​, ರವಿ ಮತ್ತು ಸುಬ್ರಹ್ಮಣ್ಯ ಬರೆದಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ರಾಕ್​ಲೈನ್​ ಎಂಟರ್ಟೈನ್​ಮೆಂಟ್​ ಲಾಂಛನದ ಅಡಿ ರಾಕ್​ಲೈನ್​ ವೆಂಕಟೇಶ್​ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಒಂದು ಮಿಲಿಯನ್​​ಗೂ ಅಧಿಕ ವೀಕ್ಷಣೆ ಕಂಡ 'ಉಸಿರೇ ಉಸಿರೇ' ಟೀಸರ್... ಅದೃಷ್ಟ ಪರೀಕ್ಷೆಗಿಳಿದ ರಾಜೀವ್

ಸದ್ಯ ಪೋಸ್ಟ್​ ಪ್ರೊಡಕ್ಷನ್ಸ್​ ಹಂತದಲ್ಲಿರುವ 'ಕರಟಕ ದಮನಕ' ಚಿತ್ರದ ಟ್ರೇಲರ್​ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಿನಿ ದಿಗ್ಗಜರ ಕಾಂಬಿನೇಶನ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಅಪರೂಪದ ಚಿತ್ರವನ್ನು ಕಣ್ತುಂಬಿಕೊಳ್ಳಲು ಕನ್ನಡ ಕಲಾರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ಬ್ಯುಸಿ ಶೆಡ್ಯೂಲ್​ನಲ್ಲಿ ಶಿವಣ್ಣ: ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಈಗಾಗಲೇ ಅನೇಕ ಸಿನಿಮಾಗಳನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. 2022ರಲ್ಲಿ ಕೊನೆಯದಾಗಿ ಪ್ಯಾನ್​ ಇಂಡಿಯಾ ಸಿನಿಮಾ 'ವೇದ'ದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಘೋಸ್ಟ್'​ ಸಿನಿಮಾವಾಗಿ ಬ್ಯುಸಿಯಾದರು. ಸದ್ಯ ಈ ಚಿತ್ರದ ಶೂಟಿಂಗ್​ ಮುಕ್ತಾಯಗೊಂಡಿದ್ದು, 'ಪೋಸ್ಟ್​' ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ಇದರ ಬೆನ್ನಲ್ಲೇ 'ಮಫ್ತಿ' ಸಿನಿಮಾದ ಸೀಕ್ವೆಲ್​ ಆದ 'ಬೈರತಿ ರಣಗಲ್'​ನಲ್ಲೂ ಶಿವರಾಜ್​ಕುಮಾರ್​ ಬಣ್ಣ ಹಚ್ಚುತ್ತಿದ್ದಾರೆ.

'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ನಿರ್ದೇಶಿಸಿದ್ದ ಸಚಿನ್​ ಬಿ.ರವಿ ಜೊತೆ 'ಸಾಗಾ ಆಫ್​ ಅಶ್ವತ್ಥಾಮ' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಈಗಾಗಲೇ ಬಿಡುಗಡೆಗೆ ತಯಾರಾಗಿರುವ 'ಘೋಸ್ಟ್'​ ಚಿತ್ರದ ಸೀಕ್ವೆಲ್​ ಕೂಡ ತಯಾರಾಗುತ್ತಿದೆ. ಅಲ್ಲದೇ 'ಧೀರ' ಶೀರ್ಷಿಕೆಯ ಸಿನಿಮಾ ಕೂಡ ನಿರ್ಮಾಣವಾಗಲಿದೆ. ಹ್ಯಾಟ್ರಿಕ್​ ಹೀರೋ ಅವರಿಗೆಂದೇ ಮಾಡಿಕೊಂಡಿದ್ದ 'ಧೀರ' ಕಥೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ. ನವೀನ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ನಿಗೆ ಪ್ರಶಸ್ತಿಗಳ ಮಳೆ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.