ETV Bharat / entertainment

'ಗುಂಟೂರು ಖಾರಂ' ಬಿಡುಗಡೆ ದಿನಾಂಕ ಮುಂದೂಡಿಕೆ? ಮಹೇಶ್​ ಬಾಬು ಹೇಳಿದ್ದೇನು?

author img

By ETV Bharat Karnataka Team

Published : Aug 22, 2023, 5:43 PM IST

Guntur Kaaram: 'ಗುಂಟೂರು ಖಾರಂ' ಸಿನಿಮಾ ಈಗಾಗಲೇ ನಿರ್ಧರಿಸಿದಂತೆ 2024ರ ಜನವರಿ 13 ರಂದೇ ಬಿಡುಗಡೆಯಾಗಲಿದೆ ಎಂದು ನಟ ಮಹೇಶ್​ ಬಾಬು ತಿಳಿಸಿದ್ದಾರೆ.

Guntur Kaaram
'ಗುಂಟೂರು ಖಾರಂ'

ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ 'ಗುಂಟೂರು ಖಾರಂ'. ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಹೀಗಾಗಿ ಸಿನಿಮಾ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ನಿರ್ಧರಿಸಿದ ದಿನಾಂಕದಂದೇ ಚಿತ್ರ ತೆರೆ ಕಾಣಲಿದೆ ಎಂದು ಮಹೇಶ್​ ಬಾಬು ಸ್ಪಷ್ಟಪಡಿಸಿದ್ದಾರೆ.

'ಗುಂಟೂರು ಖಾರಂ' 2024ರ ಜನವರಿ 13 ರಂದೇ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಹೇಶ್​ ಬಾಬು ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಹೇಶ್​ ಬಾಬು ಅವರ 28ನೇ ಚಿತ್ರ ಇದಾಗಿದೆ. ಸಂಕ್ರಾತಿ ಹಬ್ಬಕ್ಕೆ ನಟ ಅಭಿಮಾನಿಗಳಿಗೆ ಈ ಸಿನಿಮಾವನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಮಹೇಶ್ ಬಾಬು ಅವರ ಈ ಚಿತ್ರಕ್ಕೆ ಮೊದಲು ತಾತ್ಕಾಲಿಕವಾಗಿ SSMB28 ಎಂದು ಹೆಸರಿಡಲಾಗಿತ್ತು. ಬಹು ಸಮಯದಿಂದ SSMB28 ಎಂದೇ ಕರೆಯಲಾಗುತ್ತಿತ್ತು. ಬಳಿಕ ಮೇ 31 ರಂದು 'ಗುಂಟೂರು ಖಾರಂ' ಎಂದು ಹೆಸರನ್ನು ಫೈನಲ್​ ಮಾಡಲಾಯಿತು. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರಕ್ಕೂ ಮೊದಲು ನಟ ಮತ್ತು ನಿರ್ದೇಶಕರು ಬ್ಲಾಕ್​ಬಸ್ಟರ್ ಹಿಟ್ ಚಿತ್ರಗಳಾದ ಅತಡು ಮತ್ತು ಖಲೇಜಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 12 ವರ್ಷಗಳ ನಂತರ ಈ ನಟ ನಿರ್ದೇಶಕ ಜೋಡಿ ಮತ್ತೊಂದು ಬಿಗ್​ ಬಜೆಟ್​ ಸಿನಿಮಾ ಮಾಡುತ್ತಿದೆ.

ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ತೆಲುಗು ನಟಿ ಮೀನಾಕ್ಷಿ ಚೌಧರಿ ಈ ಸಿನಿಮಾಗೆ ಅಧಿಕೃತ ಸೇರ್ಪಡೆಯಾಗಿರುವುದು ಗೊತ್ತೇ ಇದೆ. ಸದ್ಯ ಅವರು 'ಗುಂಟೂರು ಖಾರಂ' ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದ ತಯಾರಕರು ಮೀನಾಕ್ಷಿ ಚೌಧರಿ ಅವರನ್ನು ಎರಡನೇ ನಾಯಕಿಯಾಗಿ ಸ್ವಾಗತಿಸಿದ್ದಾರೆ. ಮೊದಲ ನಟಿಯಾಗಿ ಕನ್ನಡತಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲದೇ ಸಿನಿಮಾದ ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಈಗಾಗಲೇ ಪೂಜಾ ಹೆಗ್ಡೆ ಸ್ಥಾನವನ್ನು ಮೀನಾಕ್ಷಿ ಚೌಧರಿ ತುಂಬಿದ್ದಾರೆ. ಸಂಗೀತ ಸಂಯೋಜಕ ತಮನ್ ಕೂಡ ಹೊರಗುಳಿದಿದ್ದಾರೆ. ನಾಲ್ಕು ಹಾಡುಗಳಿಗೆ ಹೇಶಮ್​ ಅಬ್ದುಲ್​ ವಹಾಬ್​ ಮತ್ತು ಎರಡು ಮಾಸ್​ ಹಾಡುಗಳಿಗೆ ಭೀಮ್ಸ್​ ಸಿಸಿಲಿಯೊ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇವರೇ ಸರಿಯಾದ ಆಯ್ಕೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವಿಚಾರವನ್ನು ಮಹೇಶ್​ ಬಾಬು ಮುಂದೆ ಇಡಲಾಗಿದೆ ಎನ್ನಲಾಗಿದೆ. ಅಂತೂ ಚಿತ್ರ 2024ರ ಜನವರಿ 13ರಂದು ತೆರೆ ಕಾಣುವುದು ಪಕ್ಕಾ ಆಗಿದೆ.

ಇದನ್ನೂ ಓದಿ: Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ 'ಗುಂಟೂರು ಖಾರಂ'. ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಹೀಗಾಗಿ ಸಿನಿಮಾ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ನಿರ್ಧರಿಸಿದ ದಿನಾಂಕದಂದೇ ಚಿತ್ರ ತೆರೆ ಕಾಣಲಿದೆ ಎಂದು ಮಹೇಶ್​ ಬಾಬು ಸ್ಪಷ್ಟಪಡಿಸಿದ್ದಾರೆ.

'ಗುಂಟೂರು ಖಾರಂ' 2024ರ ಜನವರಿ 13 ರಂದೇ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಹೇಶ್​ ಬಾಬು ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಹೇಶ್​ ಬಾಬು ಅವರ 28ನೇ ಚಿತ್ರ ಇದಾಗಿದೆ. ಸಂಕ್ರಾತಿ ಹಬ್ಬಕ್ಕೆ ನಟ ಅಭಿಮಾನಿಗಳಿಗೆ ಈ ಸಿನಿಮಾವನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಮಹೇಶ್ ಬಾಬು ಅವರ ಈ ಚಿತ್ರಕ್ಕೆ ಮೊದಲು ತಾತ್ಕಾಲಿಕವಾಗಿ SSMB28 ಎಂದು ಹೆಸರಿಡಲಾಗಿತ್ತು. ಬಹು ಸಮಯದಿಂದ SSMB28 ಎಂದೇ ಕರೆಯಲಾಗುತ್ತಿತ್ತು. ಬಳಿಕ ಮೇ 31 ರಂದು 'ಗುಂಟೂರು ಖಾರಂ' ಎಂದು ಹೆಸರನ್ನು ಫೈನಲ್​ ಮಾಡಲಾಯಿತು. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರಕ್ಕೂ ಮೊದಲು ನಟ ಮತ್ತು ನಿರ್ದೇಶಕರು ಬ್ಲಾಕ್​ಬಸ್ಟರ್ ಹಿಟ್ ಚಿತ್ರಗಳಾದ ಅತಡು ಮತ್ತು ಖಲೇಜಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 12 ವರ್ಷಗಳ ನಂತರ ಈ ನಟ ನಿರ್ದೇಶಕ ಜೋಡಿ ಮತ್ತೊಂದು ಬಿಗ್​ ಬಜೆಟ್​ ಸಿನಿಮಾ ಮಾಡುತ್ತಿದೆ.

ಈ ಆ್ಯಕ್ಷನ್​ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ತೆಲುಗು ನಟಿ ಮೀನಾಕ್ಷಿ ಚೌಧರಿ ಈ ಸಿನಿಮಾಗೆ ಅಧಿಕೃತ ಸೇರ್ಪಡೆಯಾಗಿರುವುದು ಗೊತ್ತೇ ಇದೆ. ಸದ್ಯ ಅವರು 'ಗುಂಟೂರು ಖಾರಂ' ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದ ತಯಾರಕರು ಮೀನಾಕ್ಷಿ ಚೌಧರಿ ಅವರನ್ನು ಎರಡನೇ ನಾಯಕಿಯಾಗಿ ಸ್ವಾಗತಿಸಿದ್ದಾರೆ. ಮೊದಲ ನಟಿಯಾಗಿ ಕನ್ನಡತಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲದೇ ಸಿನಿಮಾದ ಕಾಸ್ಟಿಂಗ್​, ರಿಲೀಸ್​ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಈಗಾಗಲೇ ಪೂಜಾ ಹೆಗ್ಡೆ ಸ್ಥಾನವನ್ನು ಮೀನಾಕ್ಷಿ ಚೌಧರಿ ತುಂಬಿದ್ದಾರೆ. ಸಂಗೀತ ಸಂಯೋಜಕ ತಮನ್ ಕೂಡ ಹೊರಗುಳಿದಿದ್ದಾರೆ. ನಾಲ್ಕು ಹಾಡುಗಳಿಗೆ ಹೇಶಮ್​ ಅಬ್ದುಲ್​ ವಹಾಬ್​ ಮತ್ತು ಎರಡು ಮಾಸ್​ ಹಾಡುಗಳಿಗೆ ಭೀಮ್ಸ್​ ಸಿಸಿಲಿಯೊ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇವರೇ ಸರಿಯಾದ ಆಯ್ಕೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವಿಚಾರವನ್ನು ಮಹೇಶ್​ ಬಾಬು ಮುಂದೆ ಇಡಲಾಗಿದೆ ಎನ್ನಲಾಗಿದೆ. ಅಂತೂ ಚಿತ್ರ 2024ರ ಜನವರಿ 13ರಂದು ತೆರೆ ಕಾಣುವುದು ಪಕ್ಕಾ ಆಗಿದೆ.

ಇದನ್ನೂ ಓದಿ: Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.