ETV Bharat / crime

ಕರೆಂಟ್​ ಬಿಲ್​ ಕಂಡು ಶಾಕ್​: ರೈತ ನೇಣಿಗೆ ಶರಣು

author img

By

Published : Feb 15, 2021, 12:55 PM IST

ಉತ್ತರ ಪ್ರದೇಶದ ಅಲಿಗಢ್​ನಲ್ಲಿ ರೈತನೋರ್ವ ವಿದ್ಯುತ್​ ಬಿಲ್ ಪಾವತಿಸಲಾಗದೆ ಹಾಗೂ ಅಧಿಕಾರಿಗಳ ದರ್ಪಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

Farmer commits suicide over inflated power bill in UP
ಕರೆಂಟ್​ ಬಿಲ್​ ಕಂಡು ಶಾಕ್​: ರೈತ ನೇಣಿಗೆ ಶರಣು

ಅಲಿಗಢ್​ (ಉತ್ತರ ಪ್ರದೇಶ): ಒಂದೂವರೆ ಲಕ್ಷ ರೂಪಾಯಿ ಕರೆಂಟ್​ ಬಿಲ್ ನೀಡಿದ್ದಲ್ಲದೇ ವಿದ್ಯುತ್ ಇಲಾಖೆ ಅಧಿಕಾರಿಗಳು ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ವರ್ತನೆಯಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರ ಪ್ರದೇಶದ ಅಲಿಗಢ್​ನ ಸುನೈರಾ ಗ್ರಾಮದ ರಾಮ್‌ಜಿ ಲಾಲ್ ಮೃತ ರೈತ. ವಿದ್ಯುತ್​ ಬಿಲ್​ ಕಂಡು ಆಘಾತಕ್ಕೊಳಗಾದ ರಾಮ್‌ಜಿ ಲಾಲ್, ಬಿಲ್ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ಕುಟುಂಬಸ್ಥರ ಮುಂದೆಯೇ ಅಧಿಕಾರಿಗಳು ರೈತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ.

ರಾಮ್‌ಜಿ ಲಾಲ್ ಅವರ ಕುಟುಂಬಸ್ಥರು 1,500 ರೂಪಾಯಿಯನ್ನು 1,50,000 ಎಂದು ತಪ್ಪಾಗಿ ತೋರಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಲಾಗಿದೆ. ಎಲ್ಲಾ ಪ್ರಯತ್ನಗಳು ವಿಫಲವಾದಾಗ ರಾಮ್‌ಜಿ ಲಾಲ್ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರತಿಭಟನೆಗೆ ಟೂಲ್​ಕಿಟ್ ಪ್ರಸಾರ ಮಾಡಿದ ಆರೋಪಿ ದಿಶಾ ರವಿ ಹಿನ್ನೆಲೆ ಗೊತ್ತಾ?

ಆಕ್ರೋಶಗೊಂದ ಕುಟುಂಬಸ್ಥರು ಹಾಗೂ ಸ್ಥಳೀಯರು ವಿದ್ಯುತ್ ಇಲಾಖೆ ಕಚೇರಿ ಮುಂದೆ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್‌ಡಿಒ ಮತ್ತು ಜೂನಿಯರ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಪೊಲೀಸರು ಭರವಸೆ ನೀಡಿದ್ದಾರೆ.

ಅಲಿಗಢ್​ (ಉತ್ತರ ಪ್ರದೇಶ): ಒಂದೂವರೆ ಲಕ್ಷ ರೂಪಾಯಿ ಕರೆಂಟ್​ ಬಿಲ್ ನೀಡಿದ್ದಲ್ಲದೇ ವಿದ್ಯುತ್ ಇಲಾಖೆ ಅಧಿಕಾರಿಗಳು ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ವರ್ತನೆಯಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರ ಪ್ರದೇಶದ ಅಲಿಗಢ್​ನ ಸುನೈರಾ ಗ್ರಾಮದ ರಾಮ್‌ಜಿ ಲಾಲ್ ಮೃತ ರೈತ. ವಿದ್ಯುತ್​ ಬಿಲ್​ ಕಂಡು ಆಘಾತಕ್ಕೊಳಗಾದ ರಾಮ್‌ಜಿ ಲಾಲ್, ಬಿಲ್ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ಕುಟುಂಬಸ್ಥರ ಮುಂದೆಯೇ ಅಧಿಕಾರಿಗಳು ರೈತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ.

ರಾಮ್‌ಜಿ ಲಾಲ್ ಅವರ ಕುಟುಂಬಸ್ಥರು 1,500 ರೂಪಾಯಿಯನ್ನು 1,50,000 ಎಂದು ತಪ್ಪಾಗಿ ತೋರಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಲಾಗಿದೆ. ಎಲ್ಲಾ ಪ್ರಯತ್ನಗಳು ವಿಫಲವಾದಾಗ ರಾಮ್‌ಜಿ ಲಾಲ್ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರತಿಭಟನೆಗೆ ಟೂಲ್​ಕಿಟ್ ಪ್ರಸಾರ ಮಾಡಿದ ಆರೋಪಿ ದಿಶಾ ರವಿ ಹಿನ್ನೆಲೆ ಗೊತ್ತಾ?

ಆಕ್ರೋಶಗೊಂದ ಕುಟುಂಬಸ್ಥರು ಹಾಗೂ ಸ್ಥಳೀಯರು ವಿದ್ಯುತ್ ಇಲಾಖೆ ಕಚೇರಿ ಮುಂದೆ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್‌ಡಿಒ ಮತ್ತು ಜೂನಿಯರ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಪೊಲೀಸರು ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.