ETV Bharat / city

ಮತ ಜಾಗೃತಿ ಮೂಡಿಸಲು ಮಕ್ಕಳಿಂದ ಅಣುಕು ಮತದಾನ - undefined

ಮಕ್ಕಳ ಮೂಲಕ ಪೋಷಕರಲ್ಲಿ ಮತದಾನದ ಅರಿವು‌ ಮೂಡಿಸಲು ಅಣುಕು ಮತದಾನವನ್ನು ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಆಯೋಜನೆ ಮಾಡಲಾಯಿತು.

ಮಕ್ಕಳಿಂದ ಅಣುಕು ಮತದಾನ
author img

By

Published : Apr 19, 2019, 11:57 PM IST

ಶಿವಮೊಗ್ಗ:ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮಕ್ಕಳ ಅಣುಕು ಮತದಾನವನ್ನು ನಡೆಸಲಾಯಿತು.

ಮಕ್ಕಳ ಅಣುಕು ಮತದಾನವು ಸಾಮಾನ್ಯ ಮತದಾನದಂತೆಯೇ ನಡೆದಿದ್ದು, ಸಾಮಾನ್ಯ ಮತದಾನ ನಡೆಯುವ ಪ್ರತಿ ಹಂತವನ್ನು ಇಲ್ಲಿ ಅನುಸರಿಸಲಾಯಿತು. ಮೊದಲು ಮತದಾನಕ್ಕೆ ಬಂದ ಮಕ್ಕಳಿಗೆ ಬೂತ್ ಚೀಟಿ ನೀಡಿ, ಅವರು ಅದನ್ನು ತೆಗೆದುಕೊಂಡು ಬೂತ್ ಒಳಗೆ ಹೋಗಿ ಹೆಸರು ಹೇಳಿ ಕೈಗೆ ಶಾಯಿ ಹಾಕಿಸಿಕೊಂಡು ಮತದಾನ ಮಾಡಿ ಬಂದರು.

ಮಕ್ಕಳಿಂದ ಅಣುಕು ಮತದಾನ ಆಯೋಜನೆ

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಹಾಲ್​ನಲ್ಲಿ ಮತದಾನಕ್ಕೆ ಸಿದ್ಧತೆ ಮಾಡಲಾಗಿತ್ತು. ಇಲ್ಲಿ ಮತದಾನಕ್ಕೆ‌ ಮತಗಟ್ಟೆಯನ್ನು ಹಾಗೂ‌ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಡಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಹಾಗೂ ಜಿಲ್ಲಾ ವೀಕ್ಷಕರಾಗಿ ಪೂರ್ಣಿಮರವರು ಕಾರ್ಯನಿರ್ವಹಿಸಿದರು. ಮತಗಟ್ಟೆಗೆ ಬಂದ ಮಕ್ಕಳು ತಮ್ಮ ಚೀಟಿಯನ್ನು ತೋರಿಸಿ, ಮತಗಟ್ಟೆಯ ಅಧಿಕಾರಿಗಳ ಪರಿಶೀಲನೆಯ ನಂತj ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.‌ ಈ ವೇಳೆ ಮತದಾನ ಮಾಡಲು ಇವಿಎಂ ಯಂತ್ರ ಬಳಸಲಾಗಿತ್ತು.

ಅಣುಕು ಮತದಾನವನ್ನು‌ 6 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಆಯೋಜನೆ ಮಾಡಲಾಗಿತ್ತು.‌ 250 ಮಕ್ಕಳಿಗೆ ಅವಕಾಶ ಮಾಡಿ ಕೊಡಲಾಯಿತಾದರೂ ಪೋಷಕರ ಒತ್ತಡ ಮೇರೆಗೆ ಇತರೆ ಮಕ್ಕಳಿಗೂ ಅವಕಾಶ ದೊರೆಯಿತು.

ಮತದಾನದ ಪ್ರಕ್ರಿಯೆಯ ಬಗ್ಗೆ ಅರಿವು ಹಾಗು ಮಕ್ಕಳ ಮೂಲಕ ಪೋಷಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಅಣುಕು ಮತದಾನ ಸಹಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದರು.‌ ಮಕ್ಕಳು ಮತದಾನ ಮಾಡಲು ತಮ್ಮ ಪೋಷಕರ ಜೊತೆ ಬಂದು ಮತ ಹಾಕಿ ಖುಷಿ ಪಟ್ಟರು.

ಶಿವಮೊಗ್ಗ:ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮಕ್ಕಳ ಅಣುಕು ಮತದಾನವನ್ನು ನಡೆಸಲಾಯಿತು.

ಮಕ್ಕಳ ಅಣುಕು ಮತದಾನವು ಸಾಮಾನ್ಯ ಮತದಾನದಂತೆಯೇ ನಡೆದಿದ್ದು, ಸಾಮಾನ್ಯ ಮತದಾನ ನಡೆಯುವ ಪ್ರತಿ ಹಂತವನ್ನು ಇಲ್ಲಿ ಅನುಸರಿಸಲಾಯಿತು. ಮೊದಲು ಮತದಾನಕ್ಕೆ ಬಂದ ಮಕ್ಕಳಿಗೆ ಬೂತ್ ಚೀಟಿ ನೀಡಿ, ಅವರು ಅದನ್ನು ತೆಗೆದುಕೊಂಡು ಬೂತ್ ಒಳಗೆ ಹೋಗಿ ಹೆಸರು ಹೇಳಿ ಕೈಗೆ ಶಾಯಿ ಹಾಕಿಸಿಕೊಂಡು ಮತದಾನ ಮಾಡಿ ಬಂದರು.

ಮಕ್ಕಳಿಂದ ಅಣುಕು ಮತದಾನ ಆಯೋಜನೆ

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಹಾಲ್​ನಲ್ಲಿ ಮತದಾನಕ್ಕೆ ಸಿದ್ಧತೆ ಮಾಡಲಾಗಿತ್ತು. ಇಲ್ಲಿ ಮತದಾನಕ್ಕೆ‌ ಮತಗಟ್ಟೆಯನ್ನು ಹಾಗೂ‌ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಡಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಹಾಗೂ ಜಿಲ್ಲಾ ವೀಕ್ಷಕರಾಗಿ ಪೂರ್ಣಿಮರವರು ಕಾರ್ಯನಿರ್ವಹಿಸಿದರು. ಮತಗಟ್ಟೆಗೆ ಬಂದ ಮಕ್ಕಳು ತಮ್ಮ ಚೀಟಿಯನ್ನು ತೋರಿಸಿ, ಮತಗಟ್ಟೆಯ ಅಧಿಕಾರಿಗಳ ಪರಿಶೀಲನೆಯ ನಂತj ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.‌ ಈ ವೇಳೆ ಮತದಾನ ಮಾಡಲು ಇವಿಎಂ ಯಂತ್ರ ಬಳಸಲಾಗಿತ್ತು.

ಅಣುಕು ಮತದಾನವನ್ನು‌ 6 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಆಯೋಜನೆ ಮಾಡಲಾಗಿತ್ತು.‌ 250 ಮಕ್ಕಳಿಗೆ ಅವಕಾಶ ಮಾಡಿ ಕೊಡಲಾಯಿತಾದರೂ ಪೋಷಕರ ಒತ್ತಡ ಮೇರೆಗೆ ಇತರೆ ಮಕ್ಕಳಿಗೂ ಅವಕಾಶ ದೊರೆಯಿತು.

ಮತದಾನದ ಪ್ರಕ್ರಿಯೆಯ ಬಗ್ಗೆ ಅರಿವು ಹಾಗು ಮಕ್ಕಳ ಮೂಲಕ ಪೋಷಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಅಣುಕು ಮತದಾನ ಸಹಾಯಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದರು.‌ ಮಕ್ಕಳು ಮತದಾನ ಮಾಡಲು ತಮ್ಮ ಪೋಷಕರ ಜೊತೆ ಬಂದು ಮತ ಹಾಕಿ ಖುಷಿ ಪಟ್ಟರು.

Intro:ಇಂದು ಜಿಲ್ಲಾಧಿಕಾರಿಗಳ ಕಟ್ಟಡದಲ್ಲಿ ಇಂದು ಮಕ್ಕಳ ಕಲರವ ಮೂಡಿತ್ತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಕ್ಕಳ ಅಣಕ ಮತದಾನ ನಡೆಯಿತು. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಮಕ್ಕಳ ಅಣಕ ಮತದಾನವನ್ನು ನಡೆಸಿದರು. ಮಕ್ಕಳ ಅಣಕ ಮತದಾನವು ಸಾಮಾನ್ಯ ಮತದಾನದಂತೆಯೇ ನಡೆಯಿತು. ಸಾಮಾನ್ಯ ಮತದಾನ ನಡೆಯುವ ಪ್ರತಿ ಹಂತವನ್ನು ಇಲ್ಲಿ ಅನುಸರಿಸಲಾಯಿತು. ಮೊದಲು ಮತದಾನಕ್ಕೆ ಬಂದ ಮಕ್ಕಳಿಗೆ ಬೂತ್ ಚೀಟಿ ನೀಡಲಾಯಿತು. ಅವರು ಅದನ್ನು ತೆಗೆದು ಕೊಂಡು ಬೂತ್ ಒಳಗೆ ಹೋಗಿ ಹೆಸರು ಹೇಳಿ ಕೈಗೆ ಶಾಯಿ ಹಾಕಿಸಿಕೊಂಡು ಮತದಾನ ಮಾಡಿ ಬಂದರು.


Body:ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಹಾಲ್ ನಲ್ಲಿ ಮತದಾನಕ್ಕೆ ಸಿದ್ದತೆ ಮಾಡಲಾಗಿತ್ತು. ಇಲ್ಲಿ ಮತದಾನಕ್ಕೆ‌ ಮತಗಟ್ಟೆಯನ್ನು ಹಾಗೂ‌ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಡಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ವೀಕ್ಷಕರಾಗಿ ಎಡಿಸಿ ಪೂರ್ಣಿಮ ರವರು ಕಾರ್ಯ ನಿರ್ವಹಿಸಿದರು. ಮತಗಟ್ಟೆಗೆ ಬಂದ ಮಕ್ಕಳು ತಮ್ಮ ಚೀಟಿಯನ್ನು ತೋರಿಸಿ, ಮತಗಟ್ಟೆಯ ಅಧಿಕಾರಿಗಳ ಪರಿಶೀಲನೆಯ ನಂತ್ರ ಮತದಾನಕ್ಕೆ ಅವಕಾಶ ಮಾಡಿ ಕೊಟ್ಟರು.‌ ಅಲ್ಲೂ‌‌ ಸಹ ಮತದಾನ ಮಾಡಲು ಇವಿಎಂ ಯಂತ್ರ ಬಳಸಲಾಗಿತ್ತು. ಮತದಾನ ಮಾಡುವ ಇವಿಎಂ ಯಂತ್ರಕ್ಕೆ ಅಡ್ಡಲಾಗಿ ಚುನಾವಣಾ ಆಯೋಗದ ಶೀಟ್ ನ್ನು ಇಡಲಾಗಿತ್ತು.


Conclusion:ಅಲ್ಲೂ‌ ಸಹ ಇವಿಎಂ ಯಂತ್ರ ಸೌಂಡ್ ಮಾಡಿದ ನಂತ್ರ ಮತದಾನವಾದ ಬಗ್ಗೆ ಖಚಿತತೆ ಪಡಿಸಿ ಕೊಂಡ ನಂತ್ರ ಮಕ್ಕಳು ಹೊರಗಡೆ ಬರುತ್ತಿದ್ದರು. ಇವಿಎಂ ಯಂತ್ರದ ಬಳಿ ಹೋಗುವ ಮುನ್ನಾ ಮಕ್ಕಳ ಕೈಗೆ ಶಾಹಿಯನ್ನು ಹಾಕಲಾಗುತ್ತಿತ್ತು. ಈ ಅಣಕ ಮತದಾನವನ್ನು‌ 6 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಆಯೋಜನೆ ಮಾಡಲಾಗಿತ್ತು.‌ಇಲ್ಲಿ 250 ಮಕ್ಕಳಿಗೆ ಅವಕಾಶ ಮಾಡಿ ಕೊಡಲಾಗಿತ್ತಾದ್ರೂ ಪೋಷಕರ ಒತ್ತಡ ಮೇರೆಗೆ ಇತರೆ ಮಕ್ಕಳಿಗೂ ಅವಕಾಶ ಮಾಡಿ ಕೊಡಲಾಗಿತ್ರ. ಅಣಕ ಮತದಾನವು ವಿದೇಶದಲ್ಲಿ ಹೆಚ್ಚು‌ ಪ್ರಸಿದ್ದಿಯನ್ನು ಅದೇ ರೀತಿ‌‌ ಶಿವಮೊಗ್ಗದಲ್ಲೂ ಸಹ ಮಾಡಲಾಗಿದೆ. ಮತದಾನದ ಪ್ರಕ್ರಿಯೆ ಯಾವ ರೀತಿ ಇರುತ್ತದೆ. ಹಾಗೂ ಮಕ್ಕಳಿಗೆ ಇದು ಮರೆಯಲಾರದ ಸುಂದರ ನೆನಪಿನಲ್ಲಿ‌ ಉಳಿಯುವಂತೆ ಆಗುತ್ತದೆ. ಮಕ್ಕಳ ಮೂಲಕ ಪೋಷಕರಲ್ಲಿ ಮತದಾನದ ಅರಿವು‌ ಮೂಡಿಸಲು ಈ ಅಣಕ ಮತದಾನ ಸಹಾಯಕವಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್ ತಿಳಿಸಿದ್ದಾರೆ.‌ ಇನ್ನೂ ಮಕ್ಕಳು ಮತದಾನ ಮಾಡಲು ತಮ್ಮ ಪೋಷಕರ ಜೊತೆ ಬಂದು ಮತದಾನ ಮಾಡಿ ಖುಷಿ ಪಟ್ಟರು. ಮತದಾನದ ನಂತ್ರ ಸೆಲ್ಫಿ ತೆಗೆದು ಕೊಳ್ಳಲು ಸೆಲ್ಫಿ ಸ್ಟಾಂಡ್ ಮಾಡಲಾಗಿತ್ತು.‌ ಒಟ್ಟಾರೆ ಸ್ವೀಪ್ ಚಟುವಟಿಕೆಯಲ್ಲಿ ತೂಡಗಿಸಿ ಕೊಂಡ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ನಡೆಸುತ್ತಿರುವ ಜಿಲ್ಲಾ ಚುನಾವಣಾಧಿಕಾರಿಗಳು ಶ್ರಮ ಉತ್ತಮ ಫಲನೀಡುವಂತೆ ಆಗಲಿ ಎನ್ನುವುದು ನಮ್ಮ‌ ಆಯಯವಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.