ETV Bharat / city

ನಕಲಿ ಮತದಾನಕ್ಕೆ ಯತ್ನ: ಬಂಟ್ವಾಳದಲ್ಲಿ ಮೂವರ ಬಂಧನ - undefined

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಕಲಿ ಮತದಾನ ಮಾಡಲು ಬಂದ ಮೂವರು ಆರೋಪಿಗಳ ದಸ್ತಗಿರಿ. ಪ್ರಕರಣ ದಾಖಲು.

ದಸ್ತಗಿರಿಯಾದ ಆರೋಪಿಗಳು
author img

By

Published : Apr 19, 2019, 11:33 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಕಲಿ ಮತದಾನ ಮಾಡಲು ಬಂದ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ ಘಟನೆ ನಿನ್ನೆ ನಡೆದಿದೆ.

ಕಲ್ಲಡ್ಕದ ಗೋಳ್ತಮಜಲು ಗ್ರಾಮದ ಮಹಮ್ಮದ್ ಶಾಫಿ (23), ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ (19) ಹಾಗೂ ಅನ್ವರ್ (30) ದಸ್ತಗಿರಿಯಾದ ಆರೋಪಿಗಳು.

ಮೊದಲನೇ ಪ್ರಕರಣ:

ಮಂಗಳೂರು ಲೋಕಸಭಾ ಕ್ಷೇತ್ರದ 205ನೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 177‌ರಲ್ಲಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಹಮ್ಮದ್ ಶಾಫಿ ಎಂಬಾತನು ಮಜೀದ್ ರೆಹ್ಮಾನ್ ಎಂಬಾತನ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಆಧಾರ್ ಕಾರ್ಡ್ ಹಾಜರು ಪಡಿಸಿದ್ದಾನೆ. ಆದರೆ ಚುನಾವಣಾ ಏಜೆಂಟ್ ಈತನು‌ ಮಜೀದ್ ರೆಹ್ಮಾನ್ ಅಲ್ಲ ಎಂದು ಹೇಳಿದ್ದು, ಈ ಸಂದರ್ಭ ವಿಚಾರಣೆ ಮಾಡಿದಾಗ ಈತ ಮತ್ತೊಬ್ಬನ ಹೆಸರಿನಲ್ಲಿ ಮತದಾನ ಮಾಡಲು ಬಂದಿದ್ದು ತಿಳಿದು ಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಈತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.

2ನೇ ಪ್ರಕರಣ:

ಇದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 123ರಲ್ಲಿ ನಿನ್ನೆ ಸಂಜೆ 5.55 ರ ಸುಮಾರಿಗೆ ಮತದಾರನೊಬ್ಬ ಮತ ಚಲಾಯಿಸಲು ಬಂದಾಗ ಆತನನ್ನು ನೋಡಿದ ಚುನಾವಣಾ ಏಜೆಂಟ್ ಈತನ ಹೆಸರು ಮೊಹಮ್ಮದ್ ಶಫಿಕ್ ಎಂಬುದಾಗಿ ತಿಳಿಸಿದ್ದಾರೆ. ಆ ವ್ಯಕ್ತಿಯ ಗುರುತಿನ ಚೀಟಿಯನ್ನು ನೋಡಲಾಗಿ ಅದರಲ್ಲಿ ಆಸಿಫ್ ಆಲಿ, ತಂದೆ ಹಂಝ ಎಂಬುದಾಗಿ ಇರುತ್ತದೆ. ಈತನನ್ನು ವಿಚಾರಿಸಿದ ಬಳಿಕ ಈತ ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ ಹಾಗೂ ಈತನನ್ನು ಇಮ್ರಾನ್ ಎಂಬಾತ ಕಳುಹಿಸಿರುವುದು ಎಂಬುದು ತಿಳಿದು ಬಂದಿದೆ. ಈತನನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3ನೇ ಪ್ರಕರಣ:

ಮತ್ತೆ ಇದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 122ರಲ್ಲಿ ಸಂಜೆ 5.45 ಗಂಟೆ ಸುಮಾರಿಗೆ ಅನ್ವರ್ ಎಂಬಾತ ಎರಡನೇ ಸಲ ಮತದಾನ ಮಾಡಲು ಬಂದಿದ್ದು, ಈಗಾಗಲೇ ಬೆಳಗ್ಗೆ 11 ಗಂಟೆಗೆ ಮತದಾನ ಮಾಡಿ ಹೋಗಿದ್ದಾನೆ.‌‌ ಈ ವೇಳೆ ಆತ ಎಡಗೈ ತೋರು ಬೆರಳಿಗೆ ಶಾಹಿ ಹಾಕಿದ ಸ್ಥಳವನ್ನು ಗಾಯ ಮಾಡಿಕೊಂಡು ಬಂದಿರುವುದು ಕಂಡು ಬಂದಿತ್ತು. ಉದ್ದೇಶಪೂರ್ವಕವಾಗಿಯೇ ಈತ ಮತ್ತೊಮ್ಮೆ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಇದು ಚುನಾವಣೆ ನೀತಿ ಸಂಹಿತೆ ಉಲಂಘಿಸಿರುವುದಾಗಿದೆ. ಹೀಗಾಗಿ ಈತನನ್ನೂ ದಸ್ತಗಿರಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಕಲಿ ಮತದಾನ ಮಾಡಲು ಬಂದ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ ಘಟನೆ ನಿನ್ನೆ ನಡೆದಿದೆ.

ಕಲ್ಲಡ್ಕದ ಗೋಳ್ತಮಜಲು ಗ್ರಾಮದ ಮಹಮ್ಮದ್ ಶಾಫಿ (23), ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ (19) ಹಾಗೂ ಅನ್ವರ್ (30) ದಸ್ತಗಿರಿಯಾದ ಆರೋಪಿಗಳು.

ಮೊದಲನೇ ಪ್ರಕರಣ:

ಮಂಗಳೂರು ಲೋಕಸಭಾ ಕ್ಷೇತ್ರದ 205ನೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 177‌ರಲ್ಲಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಹಮ್ಮದ್ ಶಾಫಿ ಎಂಬಾತನು ಮಜೀದ್ ರೆಹ್ಮಾನ್ ಎಂಬಾತನ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಆಧಾರ್ ಕಾರ್ಡ್ ಹಾಜರು ಪಡಿಸಿದ್ದಾನೆ. ಆದರೆ ಚುನಾವಣಾ ಏಜೆಂಟ್ ಈತನು‌ ಮಜೀದ್ ರೆಹ್ಮಾನ್ ಅಲ್ಲ ಎಂದು ಹೇಳಿದ್ದು, ಈ ಸಂದರ್ಭ ವಿಚಾರಣೆ ಮಾಡಿದಾಗ ಈತ ಮತ್ತೊಬ್ಬನ ಹೆಸರಿನಲ್ಲಿ ಮತದಾನ ಮಾಡಲು ಬಂದಿದ್ದು ತಿಳಿದು ಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಈತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.

2ನೇ ಪ್ರಕರಣ:

ಇದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 123ರಲ್ಲಿ ನಿನ್ನೆ ಸಂಜೆ 5.55 ರ ಸುಮಾರಿಗೆ ಮತದಾರನೊಬ್ಬ ಮತ ಚಲಾಯಿಸಲು ಬಂದಾಗ ಆತನನ್ನು ನೋಡಿದ ಚುನಾವಣಾ ಏಜೆಂಟ್ ಈತನ ಹೆಸರು ಮೊಹಮ್ಮದ್ ಶಫಿಕ್ ಎಂಬುದಾಗಿ ತಿಳಿಸಿದ್ದಾರೆ. ಆ ವ್ಯಕ್ತಿಯ ಗುರುತಿನ ಚೀಟಿಯನ್ನು ನೋಡಲಾಗಿ ಅದರಲ್ಲಿ ಆಸಿಫ್ ಆಲಿ, ತಂದೆ ಹಂಝ ಎಂಬುದಾಗಿ ಇರುತ್ತದೆ. ಈತನನ್ನು ವಿಚಾರಿಸಿದ ಬಳಿಕ ಈತ ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ ಹಾಗೂ ಈತನನ್ನು ಇಮ್ರಾನ್ ಎಂಬಾತ ಕಳುಹಿಸಿರುವುದು ಎಂಬುದು ತಿಳಿದು ಬಂದಿದೆ. ಈತನನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3ನೇ ಪ್ರಕರಣ:

ಮತ್ತೆ ಇದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 122ರಲ್ಲಿ ಸಂಜೆ 5.45 ಗಂಟೆ ಸುಮಾರಿಗೆ ಅನ್ವರ್ ಎಂಬಾತ ಎರಡನೇ ಸಲ ಮತದಾನ ಮಾಡಲು ಬಂದಿದ್ದು, ಈಗಾಗಲೇ ಬೆಳಗ್ಗೆ 11 ಗಂಟೆಗೆ ಮತದಾನ ಮಾಡಿ ಹೋಗಿದ್ದಾನೆ.‌‌ ಈ ವೇಳೆ ಆತ ಎಡಗೈ ತೋರು ಬೆರಳಿಗೆ ಶಾಹಿ ಹಾಕಿದ ಸ್ಥಳವನ್ನು ಗಾಯ ಮಾಡಿಕೊಂಡು ಬಂದಿರುವುದು ಕಂಡು ಬಂದಿತ್ತು. ಉದ್ದೇಶಪೂರ್ವಕವಾಗಿಯೇ ಈತ ಮತ್ತೊಮ್ಮೆ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಇದು ಚುನಾವಣೆ ನೀತಿ ಸಂಹಿತೆ ಉಲಂಘಿಸಿರುವುದಾಗಿದೆ. ಹೀಗಾಗಿ ಈತನನ್ನೂ ದಸ್ತಗಿರಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Intro:ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ದಲ್ಲಿ ನಕಲಿ ಮತದಾನ ಮಾಡಲು ಬಂದ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ ಘಟನೆ ನಿನ್ನೆ ನಡೆದಿದೆ.

ಕಲ್ಲಡ್ಕ, ಗೋಳ್ತಮಜಲು ಗ್ರಾಮದ, ರಾಮನಗರ ಮನೆಯ ಮಹಮ್ಮದ್ ಶಾಫಿ(23), ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್(19), ಅನ್ವರ್(30) ದಸ್ತಗಿರಿ ಯಾದ ಆರೋಪಿಗಳು.



Body:ಪ್ರಕರಣದ ಹಿನ್ನೆಲೆ: ಮಂಗಳೂರು ಲೋಕಸಭಾ ಕ್ಷೇತ್ರದ 205ನೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ 177ನೇ‌ ಮತಗಟ್ಟೆಯಲ್ಲಿ ಸಂಜೆ 6ಗಂಟೆ ಸುಮಾರಿಗೆ ಮಹಮ್ಮದ್ ಶಾಫಿ ಎಂಬಾತನು ಮಜೀದ್ ರೆಹ್ಮಾನ್ ಎಂಬಾತನ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಆಧಾರ್ ಕಾರ್ಡ್ ಹಾಜರು ಪಡಿಸಿದ್ದಾನೆ. ಆದರೆ ಚುನಾವಣಾ ಏಜೆಂಟ್ ಈತನು‌ ಮಜೀದ್ ರೆಹ್ಮಾನ್ ಅಲ್ಲ ಎಂದು ಹೇಳಿದ್ದು, ಈ ಸಂದರ್ಭ ವಿಚಾರಣೆ ಮಾಡಿದಾಗ ಈತ ಮತ್ತೊಬ್ಬನ ಹೆಸರಿನಲ್ಲಿ ಮತದಾನ ಮಾಡಲು ಬಂದಿದ್ದು, ತಿಳಿದು ಬಂದಿದೆ. ಈ‌ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಈತನ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.

ಎರಡನೆಯ ಪ್ರಕರಣ: ಮಂಗಳೂರು ಲೋಕಸಭಾ ಕ್ಷೇತ್ರದ 205ನೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ 123ನೇ ಮತಗಟ್ಟೆಯಲ್ಲಿ ಸಂಜೆ 5.55 ರ ಸುಮಾರಿಗೆ ಮತದಾರನೊಬ್ಬ ಮತ ಚಲಾಯಿಸಲು ಬಂದಾಗ ಆತನನ್ನು ನೋಡಿದ ಮತದಾರ ಏಜೇಂಟ್ ಇಮ್ರಾನ್ ರವರು ಈತನ ಹೆಸರು ಮೊಹಮ್ಮದ್ ಶಫಿಕ್ ಈತನಿಗೆ ಈ ಬೂತ್ ನಲ್ಲಿ ಮತದಾನ ಎಂಬುದಾಗಿ ತಿಳಿಸಿದ್ದಾರೆ. ಈ ಸಂದರ್ಭ ಮತದಾನ ಮಾಡಲು ಬಂದ ವ್ಯಕ್ತಿಯ ಗುರುತಿನ ಚೀಟಿಯನ್ನು ನೋಡಲಾಗಿ ಅದರಲ್ಲಿ ಆಸಿಫ್ ಆಲಿ, ತಂದೆ ಹಂಝ ಎಂಬುದಾಗಿ ಇರುತ್ತದೆ. ಈತನನ್ನು ವಿಚಾರಿಸಿದ ಬಳಿಕ ಈತ ಪರ್ಲಿಯಾ ನಿವಾಸಿ ಮೊಹಮ್ಮದ್ ಶಫೀಕ್ ಎಂದು ತಿಳಿದು ಬಂತು. ಈತ ತನ್ನನ್ನು ಇಮ್ರಾನ್ ಎಂಬಾತ ಕಳುಹಿಸಿರುವುದು ಎಂದು ತಿಳಿದು ಬಂದಿದೆ. ನಕಲಿ ಮತದಾನ ಮಾಡಬಾರದು ಎಂದು ತಿಳಿದು, ಉದ್ದೇಶ ಪೂರ್ವಕವಾಗಿ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಚುನಾವಣೆ ನೀತಿ ಸಂಹಿತೆ ಉಲಂಘಿಸಿರುವ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿರುತ್ತೆ .Conclusion:ಮೂರನೆಯ ಪ್ರಕರಣ: ಲೋಕಸಭಾ ಚುನಾವಣೆಯ 205 ನೇ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 122ರಲ್ಲಿ ಸಂಜೆ 5.45 ಗಂಟೆ ಸುಮಾರಿಗೆ ವ್ಯಕ್ತಿಯೋರ್ವ ಎರಡನೇ ಸಲ ಮತದಾನ ಮಾಡಲು ಬಂದ ಬಗ್ಗೆ ತಿಳಿದು ಬಂದಿರುತ್ತದೆ. ಈ‌ ಸಂದರ್ಭ ಆತನನ್ನು ವಿಚಾರಿಸಿದಾಗ ಆತನ ಹೆಸರು ಅನ್ವರ್ ತಿಳಿದು ಬಂದಿದೆ. ಬಳಿಕ ಆತನು ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಎರಡು ಸಲ ಬಂದಿರುತ್ತದೆ. ಈಗಾಗಲೇ ನಾನು ಬೆಳಗ್ಗೆ 11ಗಂಟೆಗೆ ಮತದಾನ ಮಾಡಿದ್ದೇನೆ.‌‌ ಈ ಸಂದರ್ಭ ಆತನ‌ ಎಡ ಕೈ ತೋರು ಬೆರಳಿಗೆ ಶಾಹಿ ಹಾಕಿದ ಸ್ಥಳವನ್ನು ನೋಡಿದಾಗ ಎಡ ಕೈ ತೋರು ಬೆರಳು ಗಿರಿ ಗಾಯ ಮಾಡಿ ತೆಗೆದಿರುವುದು ಕಂಡು ಬಂದಿತ್ತು. ಅಲ್ಲದೆ ತೋರು ಬೆರಳಿನಲ್ಲಿ ಸ್ವಲ್ಪ ಶಾಯಿ ಕಲೆ ಇರುವುದು ಕಂಡು ಬಂದಿದೆ. ಉದ್ದೇಶ ಪೂರ್ವಕವಾಗಿ ಮತ್ತೊಮ್ಮೆ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಇದು ಚುನಾವಣೆ ನೀತಿ ಸಂಹಿತೆ ಉಲಂಘಿಸಿರುವುದಾಗಿದೆ. ಮತಗಟ್ಟೆಯ ಅಧಿಕಾರಿ ರವರು ಮತದಾನ ಮುಗಿದ ಬಳಿ ದೂರು ನೀಡುತ್ತೇನೆ, ಮತದಾನ ಮುಗಿಯುವ ತನಕ ಈತನನ್ನು ಪಿರ್ಯಾದಿದಾರರ ಬಳಿ ಇರಿಸಿಕೊಳ್ಳುವಂತೆ ಈ ಸಂದರ್ಭ ತಿಳಿಸಿದ್ದರು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಡಿಮಸ್ಟರಿಂಗ್ ಸ್ಥಳದಲ್ಲಿ ಮತಗಟ್ಟೆಯ ಅಧಿಕಾರಿ ಯಾವುದೇ ದೂರು ನೀಡಲಿಲ್ಲ. ಅಲ್ಲದೆ ಅವರು ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ಈ ವಿಚಾರಕ್ಕೆ ಸಂಬಂದಿಸಿದಂತೆ ANNEXURE 6 ನ್ನು ಕೂಡ ನೀಡಿರುವುದಿಲ್ಲ. ನಕಲಿ ಮತದಾನ ಮಾಡಿದವರ ವಿರುದ್ಧ ಮತಗಟ್ಟೆಯ ಅಧಿಕಾರಿಯವರು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಹಾಗೂ ನಕಲಿ ಮತದಾನ ಮಾಡಲು ಬಂದ ಅನ್ವರ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.

Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.