ETV Bharat / city

ಮಂಗಳೂರು ವಿಮಾನ‌ ದುರಂತ ಸಂಭವಿಸಿ ನಾಳೆಗೆ 10 ವರ್ಷ: ಅಂದಿನ ಅಪರ ಡಿಸಿ ಹೇಳಿದ್ದಿಷ್ಟು! - ಮಂಗಳೂರು ವಿಮಾನ‌ ದುರಂತ ನ್ಯೂಸ್​

ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ 2010 ಮೇ 22 ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದ ಕುರಿತು ಆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಭಾಕರ್ ಶರ್ಮಾ ಅವರು ಘಟನೆಯ ಕುರಿತು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಂಗಳೂರು ವಿಮಾನ‌ ದುರಂತ ಕುರಿತು  ಪ್ರಭಾಕರ್ ಶರ್ಮ ಅಭಿಪ್ರಾಯ
ಮಂಗಳೂರು ವಿಮಾನ‌ ದುರಂತ ಕುರಿತು ಪ್ರಭಾಕರ್ ಶರ್ಮ ಅಭಿಪ್ರಾಯ
author img

By

Published : May 21, 2020, 7:14 PM IST

ಮಂಗಳೂರು; ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ರನ್​ವೇ ಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ದುರಂತಕ್ಕೆ ನಾಳೆಗೆ ಹತ್ತು ವರ್ಷ ತುಂಬುತ್ತಿದೆ. 2010 ಮೇ 22 ರಂದು ನಡೆದ ಈ ದುರ್ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿದ್ದರು. 135 ವಯಸ್ಕರು, 19 ಮಕ್ಕಳು, 4 ಶಿಶುಗಳು ಮತ್ತು 6 ಸಿಬ್ಬಂದಿ ಸಾವನ್ನಪ್ಪಿದ್ದರು. ಎಂಟು ಮಂದಿ ಬದುಕುಳಿದಿದ್ದರು. ದುಬೈನಿಂದ ಬಂದ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ, ಆಳ ಪ್ರದೇಶಕ್ಕೆ ಉರುಳಿದ ದುರ್ಘಟನೆ ಸಂಭವಿಸಿತ್ತು. ಈ ಘಟನೆ ನಡೆದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರು ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಭಾಕರ್ ಶರ್ಮ ಅವರು ಅಂದು ನಡೆದ ಘಟನೆಯ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ಮಂಗಳೂರು ವಿಮಾನ‌ ದುರಂತ ಕುರಿತು ಪ್ರಭಾಕರ್ ಶರ್ಮಾ ಅಭಿಪ್ರಾಯ

ಮಂಗಳೂರು; ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ರನ್​ವೇ ಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ದುರಂತಕ್ಕೆ ನಾಳೆಗೆ ಹತ್ತು ವರ್ಷ ತುಂಬುತ್ತಿದೆ. 2010 ಮೇ 22 ರಂದು ನಡೆದ ಈ ದುರ್ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿದ್ದರು. 135 ವಯಸ್ಕರು, 19 ಮಕ್ಕಳು, 4 ಶಿಶುಗಳು ಮತ್ತು 6 ಸಿಬ್ಬಂದಿ ಸಾವನ್ನಪ್ಪಿದ್ದರು. ಎಂಟು ಮಂದಿ ಬದುಕುಳಿದಿದ್ದರು. ದುಬೈನಿಂದ ಬಂದ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ, ಆಳ ಪ್ರದೇಶಕ್ಕೆ ಉರುಳಿದ ದುರ್ಘಟನೆ ಸಂಭವಿಸಿತ್ತು. ಈ ಘಟನೆ ನಡೆದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರು ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಭಾಕರ್ ಶರ್ಮ ಅವರು ಅಂದು ನಡೆದ ಘಟನೆಯ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ಮಂಗಳೂರು ವಿಮಾನ‌ ದುರಂತ ಕುರಿತು ಪ್ರಭಾಕರ್ ಶರ್ಮಾ ಅಭಿಪ್ರಾಯ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.