ಬೆಂಗಳೂರು: ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಸಚಿವಾಲಯದಲ್ಲಿ ಸಣ್ಣ ಸರ್ಜರಿ ಮಾಡಿಸಿದ್ದಾರೆ.
![IAS officers transfer in CM BSY's Ministry](https://etvbharatimages.akamaized.net/etvbharat/prod-images/kn-bng-02-iastransfer-kalasad-script-7201951_19102019201115_1910f_1571496075_796.jpg)
ಡಾ. ಎಸ್. ಸೆಲ್ವಕುಮಾರ್ರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್ರನ್ನು ಎತ್ತಂಗಡಿ ಮಾಡಲಾಗಿದೆ. ಇನ್ನು ಡಾ. ವಿಶಾಲ್ರನ್ನು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಿಎಂ ಸಚಿವಾಲಯವನ್ನು ಪ್ರಧಾನಮಂತ್ರಿ ಕಚೇರಿ ರೀತಿಯಲ್ಲೇ ಆಡಳಿತ ವ್ಯವಸ್ಥೆಯನ್ನು ಉನ್ನತೀಕರಿಸಲು ಯಡಿಯೂರಪ್ಪ ಸೂಚನೆ ನೀಡಿದ್ದು, ಈ ಸಂಬಂಧ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.