ETV Bharat / city

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕ್ರೈಂ: ಅಂಕುಶ ಹಾಕಲು ಪೊಲೀಸ್ ಆಯುಕ್ತ ಕಮಲ್‌ ಪಂತ್ ಸಜ್ಜು

author img

By

Published : Jul 21, 2021, 4:04 PM IST

ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ನಗರದಲ್ಲಿ ಕೋವಿಡ್‌ ಅನ್‌ಲಾಕ್‌ ಆದ ನಂತರದ ದಿನಮಾನಗಳಲ್ಲಿ ಅಪರಾಧ ಜಗತ್ತು ತೆರೆದುಕೊಂಡಿದೆ. ಇವುಗಳಿಗೆ ಲಗಾಮು ಹಾಕಿ ನಗರವನ್ನು ಸುರಕ್ಷಿತವಾಗಿಸಲು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.

ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್
ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್

ಬೆಂಗಳೂರು: ಅನ್​ಲಾಕ್ ನಂತರ ನಗರದಲ್ಲಿ ದಿನೇ‌ ದಿನೇ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಮುಂದಾಗಿದ್ದಾರೆ.

ಇತ್ತೀಚೆಗೆ ನಗರದಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಮಾತನಾಡಿದ ಅವರು, ಯುನಿಯನ್ ಬ್ಯಾಂಕ್​ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಖುದ್ದು ಕೆಲ ಠಾಣೆಗಳಿಗೆ ಭೇಟಿ ನೀಡಿದ್ದೇನೆ. ಇಂತಹ ಘಟನೆ ನಡೆಯಲು ಕಾರಣವೇನು?. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಎಂಬುವುದರ ಬಗ್ಗೆ ಇನ್​ಸ್ಪೆಕ್ಟರ್​ಗೆ ಕೇಳಿದ್ದೇನೆ ಎಂದರು.

ಅಶೋಕ್ ನಗರ ಠಾಣೆ ವ್ಯಾಪ್ತಿಯಲ್ಲಿ ಅರುಣ್ ಕುಮಾರ್ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಬಬ್ಲಿ ಎಂಬಾತನ ಬಂಧನ ಮಾಡದ ವಿಚಾರ ಸಂಬಂಧ‌ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಅವರಿಂದ‌ ಮಾಹಿತಿ ಪಡೆಯಲಾಗಿದೆ.‌ ಈ ಬಗ್ಗೆ ಪ್ರತ್ಯೇಕ ತನಿಖೆ ಮಾಡಲು ಸಿಸಿಬಿ ಡಿಸಿಪಿ‌ ಬಸವರಾಜ ಅಂಗಡಿ ಅವರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಬಬ್ಲಿಯನ್ನ ಬಂಧಿಸದಿರಲು ನಿಖರ ಕಾರಣಗಳೇನು? ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಬರ್ಬರ ಕೊಲೆ!

ಬೆಂಗಳೂರು: ಅನ್​ಲಾಕ್ ನಂತರ ನಗರದಲ್ಲಿ ದಿನೇ‌ ದಿನೇ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಮುಂದಾಗಿದ್ದಾರೆ.

ಇತ್ತೀಚೆಗೆ ನಗರದಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಮಾತನಾಡಿದ ಅವರು, ಯುನಿಯನ್ ಬ್ಯಾಂಕ್​ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಖುದ್ದು ಕೆಲ ಠಾಣೆಗಳಿಗೆ ಭೇಟಿ ನೀಡಿದ್ದೇನೆ. ಇಂತಹ ಘಟನೆ ನಡೆಯಲು ಕಾರಣವೇನು?. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಎಂಬುವುದರ ಬಗ್ಗೆ ಇನ್​ಸ್ಪೆಕ್ಟರ್​ಗೆ ಕೇಳಿದ್ದೇನೆ ಎಂದರು.

ಅಶೋಕ್ ನಗರ ಠಾಣೆ ವ್ಯಾಪ್ತಿಯಲ್ಲಿ ಅರುಣ್ ಕುಮಾರ್ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಬಬ್ಲಿ ಎಂಬಾತನ ಬಂಧನ ಮಾಡದ ವಿಚಾರ ಸಂಬಂಧ‌ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಅವರಿಂದ‌ ಮಾಹಿತಿ ಪಡೆಯಲಾಗಿದೆ.‌ ಈ ಬಗ್ಗೆ ಪ್ರತ್ಯೇಕ ತನಿಖೆ ಮಾಡಲು ಸಿಸಿಬಿ ಡಿಸಿಪಿ‌ ಬಸವರಾಜ ಅಂಗಡಿ ಅವರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಬಬ್ಲಿಯನ್ನ ಬಂಧಿಸದಿರಲು ನಿಖರ ಕಾರಣಗಳೇನು? ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಬರ್ಬರ ಕೊಲೆ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.