ETV Bharat / briefs

ಬಾರ್ ಕೌನ್ಸಿಲ್‌ ಅಧ್ಯಕ್ಷೆಯನ್ನು ಗುಂಡಿಕ್ಕಿ ಕೊಲೆಗೈದ ವಕೀಲ! - ಬಾರ್​ ಕೌನ್ಸಿಲ್​

ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ವಕೀಲನೊಬ್ಬ ಬಾರ್​ ಕೌನ್ಸಿಲ್​ ಅಧ್ಯಕ್ಷೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಬಾರ್​ ಕೌನ್ಸಿಲ್​ ಅಧ್ಯಕ್ಷೆ
author img

By

Published : Jun 12, 2019, 6:03 PM IST

ಆಗ್ರಾ: ಉತ್ತರಪ್ರದೇಶದ ಬಾರ್​ ಕೌನ್ಸಿಲ್​ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ದರವೀಶ್​ ಪುಷ್ಪಾಂಜಲಿ ಯಾದವ್​ ಅವರನ್ನು ವಕೀಲನೊಬ್ಬ ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹೊಸದಾಗಿ ಆಯ್ಕೆಯಾಗಿದ್ದ ಮಹಿಳಾ ಬಾರ್​ ಕೌನ್ಸಿಲ್​ ಅಧ್ಯಕ್ಷೆ ದರವೀಶ್​ ಪುಷ್ಪಾಂಜಲಿ ಯಾದವ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಕೆಯ ಮೇಲೆ ಕೋರ್ಟ್​ನ ವಕೀಲನೋರ್ವ ಗುಂಡಿನ ಸುರಿಮಳೆಗೈದಿದ್ದಾನೆ. ತದನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ಮಾಡಿರುವ ವಕೀಲನನ್ನು ಮನೀಷ್​ ಶರ್ಮಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೊಳಗಾಗಿದ್ದರು.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಆಗ್ರಾ: ಉತ್ತರಪ್ರದೇಶದ ಬಾರ್​ ಕೌನ್ಸಿಲ್​ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ದರವೀಶ್​ ಪುಷ್ಪಾಂಜಲಿ ಯಾದವ್​ ಅವರನ್ನು ವಕೀಲನೊಬ್ಬ ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹೊಸದಾಗಿ ಆಯ್ಕೆಯಾಗಿದ್ದ ಮಹಿಳಾ ಬಾರ್​ ಕೌನ್ಸಿಲ್​ ಅಧ್ಯಕ್ಷೆ ದರವೀಶ್​ ಪುಷ್ಪಾಂಜಲಿ ಯಾದವ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಕೆಯ ಮೇಲೆ ಕೋರ್ಟ್​ನ ವಕೀಲನೋರ್ವ ಗುಂಡಿನ ಸುರಿಮಳೆಗೈದಿದ್ದಾನೆ. ತದನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ಮಾಡಿರುವ ವಕೀಲನನ್ನು ಮನೀಷ್​ ಶರ್ಮಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೊಳಗಾಗಿದ್ದರು.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Intro:Body:

ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿದ್ದಾಗಲೇ ಯುಪಿಯಲ್ಲಿ ಬಾರ್​ ಕೌನ್ಸಿಲ್​ ಅಧ್ಯಕ್ಷೆಯ ಗುಂಡಿಕ್ಕಿ ಕೊಲೆ! 



ಆಗ್ರಾ: ಕಳೆದೆರಡು ದಿನಗಳ ಹಿಂದೆ ಉತ್ತರಪ್ರದೇಶದ ಬಾರ್​ ಕೌನ್ಸಿಲ್​ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ದರವೀಶ್​ ಪುಷ್ಪಾಂಜಲಿ ಯಾದವ್​ ಅವರನ್ನ ಹಾಡುಹಗಲೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ. 



ಹೊಸದಾಗಿ ಆಯ್ಕೆಯಾಗಿದ್ದ ಮಹಿಳಾ ಬಾರ್​ ಕೌನ್ಸಿಲ್​ ದರವೀಶ್​ ಅವರನ್ನ ಸ್ವಾಗತ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಕೆಯ ಮೇಲೆ ಕೋರ್ಟ್​ನ ನ್ಯಾಯಮೂರ್ತಿವೋರ್ವ ಗುಂಡಿನ ಸುರಿಮಳೆಗೈದಿದ್ದಾರೆ. ತದನಂತರ ತಾನು ಗುಂಡು ಹಾರಿಸಿಕೊಂಡಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 



ದಾಳಿ ಮಾಡಿರುವ ನ್ಯಾಯಮೂರ್ತಿಯನ್ನ ಮನೀಷ್​ ಶರ್ಮಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಲಾಯರ್ಸ್​ ಹಾಗೂ ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೊಳಗಾಗಿರುವ ಘಟನೆ ಸಹ ನಡೆದಿದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.