ETV Bharat / briefs

ಮಂಡ್ಯ: ಕೊರೊನಾಗೆ ಆ್ಯಂಬುಲೆನ್ಸ್ ಚಾಲಕ ಬಲಿ

author img

By

Published : Apr 29, 2021, 7:15 PM IST

Updated : Apr 29, 2021, 8:11 PM IST

ಆರೋಗ್ಯದಲ್ಲಿ ಏರುಪೇರಾದ ಕಾರಣ ರುದ್ರೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದ ಕಾರಣ ರುದ್ರೇಶ್ ಸಾವನ್ನಪ್ಪಿದ್ದಾರೆ.

Mandya
Mandya

ಮಂಡ್ಯ: ಕೊರೊನಾಗೆ ಆ್ಯಂಬುಲೆನ್ಸ್ ಚಾಲಕ ಬಲಿಯಾಗಿರುವ ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ರುದ್ರೇಶ್(44) ಮೃತ ಚಾಲಕ. ಕಳೆದ 11 ವರ್ಷಗಳಿಂದ ರುದ್ರೇಶ್ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಮಳವಳ್ಳಿ ವಿಭಾಗದಲ್ಲಿ 108 ಆ್ಯಂಬುಲೆನ್ಸ್ ಡ್ರೈವರ್ ಆಗಿ ರುದ್ರೇಶ್ ಕೆಲಸ ಮಾಡುತ್ತಿದ್ದರು.10 ದಿನಗಳ ಹಿಂದೆ ಇವರಿಗೆ ಕೊರೊನಾ ಸೋಂಕು ತಗುಲಿತ್ತು.

ಆರಂಭದಲ್ಲಿ ಕೆ.ಎಂ.ದೊಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ರುದ್ರೇಶ್‍ಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ, ಆರೋಗ್ಯದಲ್ಲಿ ಏರುಪೇರಾದ ಕಾರಣ ರುದ್ರೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದ ಕಾರಣ ರುದ್ರೇಶ್ ಸಾವನ್ನಪ್ಪಿದ್ದಾರೆ.

ರುದ್ರೇಶ್ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಆಧಾರ ಸ್ತಂಭ ಆಗಿದ್ದರು. ಇದೀಗ ಇವರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.

ಇದನ್ನೂ ಓದಿ: ಕೃಷಿ ಸಚಿವರನ್ನೇ ತಡೆದು ನಿಲ್ಲಿಸಿ ಭತ್ತ, ಜೋಳದ ಬಾಕಿ ಹಣ ಕೇಳಿದ ರೈತ ಮುಖಂಡರು

ಮಂಡ್ಯ: ಕೊರೊನಾಗೆ ಆ್ಯಂಬುಲೆನ್ಸ್ ಚಾಲಕ ಬಲಿಯಾಗಿರುವ ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ರುದ್ರೇಶ್(44) ಮೃತ ಚಾಲಕ. ಕಳೆದ 11 ವರ್ಷಗಳಿಂದ ರುದ್ರೇಶ್ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಮಳವಳ್ಳಿ ವಿಭಾಗದಲ್ಲಿ 108 ಆ್ಯಂಬುಲೆನ್ಸ್ ಡ್ರೈವರ್ ಆಗಿ ರುದ್ರೇಶ್ ಕೆಲಸ ಮಾಡುತ್ತಿದ್ದರು.10 ದಿನಗಳ ಹಿಂದೆ ಇವರಿಗೆ ಕೊರೊನಾ ಸೋಂಕು ತಗುಲಿತ್ತು.

ಆರಂಭದಲ್ಲಿ ಕೆ.ಎಂ.ದೊಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ರುದ್ರೇಶ್‍ಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ, ಆರೋಗ್ಯದಲ್ಲಿ ಏರುಪೇರಾದ ಕಾರಣ ರುದ್ರೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದ ಕಾರಣ ರುದ್ರೇಶ್ ಸಾವನ್ನಪ್ಪಿದ್ದಾರೆ.

ರುದ್ರೇಶ್ ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಆಧಾರ ಸ್ತಂಭ ಆಗಿದ್ದರು. ಇದೀಗ ಇವರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.

ಇದನ್ನೂ ಓದಿ: ಕೃಷಿ ಸಚಿವರನ್ನೇ ತಡೆದು ನಿಲ್ಲಿಸಿ ಭತ್ತ, ಜೋಳದ ಬಾಕಿ ಹಣ ಕೇಳಿದ ರೈತ ಮುಖಂಡರು

Last Updated : Apr 29, 2021, 8:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.