ETV Bharat / briefs

ಮಗನ ಅಭಿನಯದ ಬಗ್ಗೆ ಸುಮಲತಾ ಏನಂತಾರೆ?

ಮಂಡ್ಯ ನಗರದ ಕೆ.ಆರ್. ವೃತ್ತದಲ್ಲಿನ ಸಂಜಯ ಚಿತ್ರಮಂದಿರದಲ್ಲಿ ಪುತ್ರ ಅಭಿಷೇಕ್​ ನಟಿಸಿರುವ ಮೊದಲ ಚಿತ್ರದ ಪ್ರಮೋಷನ್​ ಅನ್ನು ಸಂಸದೆ ಸುಮಲತಾ ಅಂಬರೀಶ್​ ವೀಕ್ಷಿಸಿದರು. ಅಮರ್​ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಂಡ್ಯ ಅಭಿವೃದ್ಧಿ ಯೋಜನೆಗೆ ಕೇಂದ್ರದ ಸಹಕಾರ ಸಿಗುವ ವಿಶ್ವಾಸವನ್ನು ಸುಮಲತಾ ವ್ಯಕ್ತಪಡಿಸಿದರು.

author img

By

Published : May 31, 2019, 6:33 PM IST

ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ ಅಮರ್​ ಪ್ರಮೋಷನ್​ನಲ್ಲಿ ಸುಮಲತಾ

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಪುತ್ರ ಅಭಿಷೇಕ್ ನಟಿಸಿರುವ ಮೊದಲ ಚಿತ್ರ ಅಮರ್​ ಪ್ರಮೋಷನ್​ಗಾಗಿ ಚಿತ್ರಮಂದಿರಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದರು.

ನಗರದ ಕೆ.ಆರ್. ವೃತ್ತದಲ್ಲಿರುವ ಸಂಜಯ ಚಿತ್ರಮಂದಿರಕ್ಕೆ ಆಗಮಿಸಿದ್ದ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಆಗ ಬಾಲ್ಕಾನಿಯಿಂದಲೇ ಅಭಿಮಾನಿಗಳತ್ತ ಕೈ ಬೀಸಿದ ಸುಮಲತಾ ಕೃತಜ್ಞತೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಸಂಸದೆ ಸುಮಲತಾ ಅಂಬರೀಶ್​ ಅವರು, ಪುತ್ರನ ಅಭಿನಯದ ಅಭಿಮಾನಿಗಳು ಹೇಳಬೇಕು‌. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಮಂಡ್ಯ ಅಭಿಮಾನಿಗಳಂತೆ ಎಲ್ಲ ಜಿಲ್ಲೆಯ ಅಭಿಮಾನಿಗಳು ಸಹ ಈ ಚಿತ್ರವನ್ನು ಸಂತಸದಿಂದ ಸ್ವಾಗತಿಸುವ ವಿಶ್ವಾಸವಿದೆ ಎಂದರು.

ನನಗೆ ಅಂಬಿ ಅಭಿನಯದ ಒಲವಿನ ಉಡುಗೊರೆ ಹಾಡು ತುಂಬಾ ಇಷ್ಟ, ಹಾಗಾಗಿ ಆ ಹಾಡನ್ನು ಚಿತ್ರಕ್ಕೆ ಅಳವಡಿಸಿದ್ದಕ್ಕೆ ಸುಮಲತಾ ಸಂತಸ ವ್ಯಕ್ತಪಡಿಸಿದರು.

ಸಂಸದರಾಗಿ ಪ್ರಮಾಣವಚನ ಸ್ವೀಕಾರ: ಜೂನ್ 5 ಅಥವಾ 6 ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ಇರಬಹುದು. ಅಂದು ದೆಹಲಿಗೆ ಹೋಗಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸುಮಲತಾ ಉತ್ತರಿಸಿದರು.

ಇನ್ನು ನನಗೆ ಕೇಂದ್ರದ ಯಾವ ಸಚಿವ ಸ್ಥಾನವೂ ಬೇಡ. ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು. ಅನೇಕ ಜನಪರ ಯೋಜನೆ, ಚಟುವಟಿಕೆಗಳಿದ್ದು, ಅವುಗಳಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ನೂತನ ಸಂಸದೆ ಹೇಳಿದ್ರು.

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಪುತ್ರ ಅಭಿಷೇಕ್ ನಟಿಸಿರುವ ಮೊದಲ ಚಿತ್ರ ಅಮರ್​ ಪ್ರಮೋಷನ್​ಗಾಗಿ ಚಿತ್ರಮಂದಿರಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದರು.

ನಗರದ ಕೆ.ಆರ್. ವೃತ್ತದಲ್ಲಿರುವ ಸಂಜಯ ಚಿತ್ರಮಂದಿರಕ್ಕೆ ಆಗಮಿಸಿದ್ದ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಆಗ ಬಾಲ್ಕಾನಿಯಿಂದಲೇ ಅಭಿಮಾನಿಗಳತ್ತ ಕೈ ಬೀಸಿದ ಸುಮಲತಾ ಕೃತಜ್ಞತೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಸಂಸದೆ ಸುಮಲತಾ ಅಂಬರೀಶ್​ ಅವರು, ಪುತ್ರನ ಅಭಿನಯದ ಅಭಿಮಾನಿಗಳು ಹೇಳಬೇಕು‌. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಮಂಡ್ಯ ಅಭಿಮಾನಿಗಳಂತೆ ಎಲ್ಲ ಜಿಲ್ಲೆಯ ಅಭಿಮಾನಿಗಳು ಸಹ ಈ ಚಿತ್ರವನ್ನು ಸಂತಸದಿಂದ ಸ್ವಾಗತಿಸುವ ವಿಶ್ವಾಸವಿದೆ ಎಂದರು.

ನನಗೆ ಅಂಬಿ ಅಭಿನಯದ ಒಲವಿನ ಉಡುಗೊರೆ ಹಾಡು ತುಂಬಾ ಇಷ್ಟ, ಹಾಗಾಗಿ ಆ ಹಾಡನ್ನು ಚಿತ್ರಕ್ಕೆ ಅಳವಡಿಸಿದ್ದಕ್ಕೆ ಸುಮಲತಾ ಸಂತಸ ವ್ಯಕ್ತಪಡಿಸಿದರು.

ಸಂಸದರಾಗಿ ಪ್ರಮಾಣವಚನ ಸ್ವೀಕಾರ: ಜೂನ್ 5 ಅಥವಾ 6 ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ಇರಬಹುದು. ಅಂದು ದೆಹಲಿಗೆ ಹೋಗಿ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸುಮಲತಾ ಉತ್ತರಿಸಿದರು.

ಇನ್ನು ನನಗೆ ಕೇಂದ್ರದ ಯಾವ ಸಚಿವ ಸ್ಥಾನವೂ ಬೇಡ. ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು. ಅನೇಕ ಜನಪರ ಯೋಜನೆ, ಚಟುವಟಿಕೆಗಳಿದ್ದು, ಅವುಗಳಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ನೂತನ ಸಂಸದೆ ಹೇಳಿದ್ರು.

Intro:ಮಂಡ್ಯ: ನೂತನ ಸಂಸದೆ ಸುಮಲತಾ ಅಂಬರೀಶ್ ತಮ್ಮ ಪುತ್ರನ ಚಿತ್ರ ಅಮರ್ ಪ್ರಮೋಷನ್‌ಗಾಗಿ ಚಿತ್ರಮಂದಿರಕ್ಕೆ ಆಗಮಿಸಿ ಅಭಿಮಾನಿಗಳ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು.
ನಗರದ ಕೆ.ಆರ್. ವೃತ್ತದಲ್ಲಿರುವ ಸಂಜಯ ಚಿತ್ರ ಮಂದಿರಕ್ಕೆ ಆಗಮಿಸಿದ ಸುಮಲತಾ ಅಂಬರೀಶ್‌ರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಬಾಲ್ಕಾನಿಗೆ ಆಗಮಿಸಿ ಚಿತ್ರ ವೀಕ್ಷಕರಿಗೆ ಕೈ ಬೀಸಿ ಕೃತಜ್ಞತೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಪುತ್ರನ ಅಭಿನಯದ ಬಗ್ಗೆ ನಾನು ಹೇಳಬಾರದು, ಅಭಿಮಾನಿಗಳು ಹೇಳಬೇಕು‌. ಉತ್ತಮ ಪ್ರತಿಕ್ರಿಯೆ ಇದ್ದು ಮಂಡ್ಯ ಅಭಿಮಾನಿಗಳಂತೆ ಇತರೆ ಜಿಲ್ಲೆಯ ಅಭಿಮಾನಿಗಳು ಚಿತ್ರ ಸ್ವಾಗತಿಸುವ ವಿಶ್ವಾಸವಿದೆ ಎಂದರು.
ನನಗೆ ಅಂಬಿ ಅಭಿನಯದ ಒಲವಿನ ಉಡುಗೊರೆ ಹಾಡು ತುಂಬಾ ಇಷ್ಟಾ. ಹಾಗಾಗಿ ನಾನೇ ಹೇಳಿ ಆ ಹಾಡನ್ನು ಈ ಚಿತ್ರಕ್ಕೆ ಹಾಕಿಸಲಾಗಿದೆ ಎಂದರು.
ಇನ್ನು ಸಂಸದರಾಗಿ ಪ್ರಮಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಜೂನ್ 5 ಅಥವಾ 6 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರಬಹುದು. ಅಂದು ದೆಹಲಿಗೆ ಹೋಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದರು.
ಮೋದಿ ಸಂಪುಟದಲ್ಲಿ ನಿಮ್ಮ ಹೆಸರೂ ಇತ್ತೇ ಎಂಬ ಪ್ರಶ್ನೆಗೆ‌‌. ನನಗೆ ಮಂತ್ರಿ ಸ್ಥಾನ ಬೇಡ. ಅಭಿವೃದ್ಧಿಗೆ ಸಹಕಾರ ನೀಡದರೆ ಅಷ್ಟೇ ಸಾಕು. ನಮ್ಮ ಪ್ರಾಜೆಕ್ಟ್‌‌ಗಳಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದರು‌Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.