ETV Bharat / briefs

ಮಲೆನಾಡಲ್ಲಿ ವರುಣನ ಅಬ್ಬರ... ಗರಿಗೆದರಿದ ಕೃಷಿ ಚಟುವಟಿಕೆಗಳು - undefined

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಗುರುವಾರಸುರಿಯುತ್ತಿರುವ ಮಳೆಯಲ್ಲಿ ಕೊಡೆ ಹಿಡುದು ಸಾಗುತ್ತಿರುವ ಪಾದಚಾರಿ
author img

By

Published : Jun 14, 2019, 12:02 PM IST

ಚಿಕ್ಕಮಗಳೂರು: ಕಳೆದ ಎರಡು ತಿಂಗಳಿಂದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಮಲೆನಾಡಿನ ಜನರಿಗೆ ಎರಡು ದಿನಗಳಿಂದ ಸುರಿಯುತ್ತಿರೋ ಮಳೆ ಸಂತಸ ಮೂಡಿಸಿದೆ. ಮಲೆನಾಡಲ್ಲಿನ ವರುಣನ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಎರಡು ದಿನಗಳಿಂದ ಮಳೆ ಅಬ್ಬರ ಹೆಚ್ಚಾಗಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಮಳೆಯ ವಿಳಂಬದಿಂದ ಕಂಗಾಲಾಗಿದ್ದ ರೈತರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ತುಂಬ ಕೃಷಿ ಸಂಬಂಧಿ ಕೆಲಸಗಳು ಚುರುಕುಗೊಂಡಿವೆ. ಹೀಗೆ ಮುಂದುವರಿದಲ್ಲಿ ಬೆಳೆಯ ಫಸಲು ಚೆನ್ನಾಗಿ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಸತೀಶ್​ ಜೈನ್.

ಧರ್ಮಸ್ಥಳ, ಹೊರನಾಡು ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳಿಗೆ ಬರುತ್ತಿರುವ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಸ್ಥಳೀಯ ಕುಮಾರ್​ ಮನವಿ ಮಾಡಿದರು.

ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಬೆಳಗ್ಗೆಯಿಂದಲೂ ಕಪ್ಪನೆಯ ಕಾರ್ಮೋಡ ಕವಿದಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗುರುಳಿವೆ. ಇನ್ನೊಂದು ಕಡೆ ನಿಧಾನವಾಗಿ ನದಿಗಳ ಹರಿವಿನಲ್ಲಿಯೂ ಹೆಚ್ಚಳ ಕಂಡು ಬರುತ್ತಿದೆ. ಎನ್.ಆರ್.ಪುರದಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಒಟ್ಟಾರೆ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಮಂದಹಾಸ ಮೂಡಿದೆ.

ಚಿಕ್ಕಮಗಳೂರು: ಕಳೆದ ಎರಡು ತಿಂಗಳಿಂದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಮಲೆನಾಡಿನ ಜನರಿಗೆ ಎರಡು ದಿನಗಳಿಂದ ಸುರಿಯುತ್ತಿರೋ ಮಳೆ ಸಂತಸ ಮೂಡಿಸಿದೆ. ಮಲೆನಾಡಲ್ಲಿನ ವರುಣನ ಅಬ್ಬರ ಜೋರಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಎರಡು ದಿನಗಳಿಂದ ಮಳೆ ಅಬ್ಬರ ಹೆಚ್ಚಾಗಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಮಳೆಯ ವಿಳಂಬದಿಂದ ಕಂಗಾಲಾಗಿದ್ದ ರೈತರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ತುಂಬ ಕೃಷಿ ಸಂಬಂಧಿ ಕೆಲಸಗಳು ಚುರುಕುಗೊಂಡಿವೆ. ಹೀಗೆ ಮುಂದುವರಿದಲ್ಲಿ ಬೆಳೆಯ ಫಸಲು ಚೆನ್ನಾಗಿ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಸತೀಶ್​ ಜೈನ್.

ಧರ್ಮಸ್ಥಳ, ಹೊರನಾಡು ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳಿಗೆ ಬರುತ್ತಿರುವ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಸ್ಥಳೀಯ ಕುಮಾರ್​ ಮನವಿ ಮಾಡಿದರು.

ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಬೆಳಗ್ಗೆಯಿಂದಲೂ ಕಪ್ಪನೆಯ ಕಾರ್ಮೋಡ ಕವಿದಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗುರುಳಿವೆ. ಇನ್ನೊಂದು ಕಡೆ ನಿಧಾನವಾಗಿ ನದಿಗಳ ಹರಿವಿನಲ್ಲಿಯೂ ಹೆಚ್ಚಳ ಕಂಡು ಬರುತ್ತಿದೆ. ಎನ್.ಆರ್.ಪುರದಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಒಟ್ಟಾರೆ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಮಂದಹಾಸ ಮೂಡಿದೆ.

Intro:R_Kn_Ckm_06_130619_Rain_Rajkumar_Ckm_pkg_7202347Body:

ಚಿಕ್ಕಮಗಳೂರು :-

ಬಿಸಿಲಿನ ಧಗೆಗೆ ಕಂಗೆಟ್ಟು ಕಳೆದೆರಡು ತಿಂಗಳಿಂದ ಆಕಾಶ ನೋಡುತ್ತಿದ್ದ ಮಲೆನಾಡಿನ ಜನರು ಎರಡು ದಿನಗಳಿಂದ ಸುರಿಯುತ್ತಿರೋ ಮಳೆಗೆ ಕಂಗಾಲಾಗಿದ್ದಾರೆ. ಬಯಲುಸೀಮೆಯಲ್ಲಿ ಸಾಧಾರಣ ಮಳೆಯಾದರೇ ಮಲೆನಾಡಲ್ಲಿ ವರುಣನ ಅಬ್ಬರ ಜೋರಾಗಿದೆ. ಬೀಸುತ್ತಿರುವ ಗಾಳಿ ಮತ್ತು ಗುಡುಗು - ಸಿಡಿಲಿಗೆ ಜನ ಭಯ ಭೀತರಾಗಿದ್ದಾರೆ. ಮಲೆನಾಡ ಭಾರಿ ಮಳೆ ಗಾಳಿಗೆ ರಸ್ತೆ ಬದಿಯ ಮರಗಳು ಧರೆಗುರುಳುತ್ತಿವೆ.ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ......

ಹೌದು ಕಳೆದ 35 ವರ್ಷಗಳಲ್ಲಿ ಕಂಡು ಕೇಳರಿಯದ ಮಳೆ ಸುರಿದು, ಮಲೆನಾಡು ಅಲ್ಲೋಲ-ಕಲ್ಲೋಲವನ್ನೇ ಸೃಷ್ಚಿಮಾಡಿತ್ತು. ನದಿಗಳು ಅಪಾಯದ ಮಟ್ಟ ಮೀರಿ ಹರಿದಿದ್ದವು. ಈ ಬಾರಿಯೂ ಅಂತದ್ದೇ ಮಳೆ ಸುರಿಯುತ್ತಾ ಎಂಬ ಆತಂಕ ಮಲೆನಾಡಿಗರಲ್ಲಿ ಕಾಡುತ್ತಿದೆ. ಎರಡೇ ದಿನದ ಮಳೆಗೆ ಜನ ಹೈರಾಣಾಗಿದ್ದಾರೆ. ಬೀಸುತ್ತಿರುವ ಗಾಳಿ, ಸುರಿಯುತ್ತಿರೋ ಮಳೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಸುರಿಯುತ್ತಿರೋ ಮಳೆ ಜನಜೀವನವನ್ನು ಕಂಗಾಲಾಗಿಸಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಬೆಳಗ್ಗಿನಿಂದಲೂ ಕಪ್ಪನೆಯ ಕಾರ್ಮೋಡ ಕವಿದಿದ್ದು ಎಡೆಬಿಡದೆ ಮಳೆ ಸುರಿದು, ಸಾಕಷ್ಟು ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ಬಿದ್ದು ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡಿದೆ.

ನಿನ್ನೆ ಕೂಡ ಸುರಿದ ಧಾರಕಾರ ಮಳೆಯಿಂದಾ ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ಬಿದ್ದು ಟ್ರಾಫಿಕ್ ಜಾಮ್ ಆಗಿತ್ತು. ಆಗ ಖಾಸಗಿ ವಾಹನಗಳ ಮಾಲೀಕರೇ ಶೇರ್ ಹಾಕಿಕೊಂಡು ಮರವನ್ನ ತೆರವು ಮಾಡಿದ್ದರು. ಕಳೆದ ಎರಡೂ ದಿನಗಳಿಂದಾ ಸುರಿಯುತ್ತಿರುವ ಮಳೆಯಿಂದಾ ನಿಧಾನವಾಗಿ ನದಿಗಳ ಹರಿವಿನಲ್ಲಿಯೂ ಹೆಚ್ಚಳ ಕಂಡು ಬರುತ್ತಿದೆ. ಜೊತೆಗೆ ಭಾರೀ ಗಾಳಿಗೆ ಎನ್.ಆರ್.ಪುರದಲ್ಲಿಯೂ ಬೃಹತ್ ಮರವೊಂದು ರಸ್ತೆಗೆ ಬಿದ್ದಿದೆ. ಮನೆಯ ಮೇಲೆ ಬಿದ್ದು ಜನ ಪರದಾಡುವಂತ ಸ್ಥಿತಿ ನಿರ್ಮಾಣ ಸೃಷ್ಟಿಯಾಗಿದೆ.

ಒಟ್ಟಾರೆಯಾಗಿ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಒಂದೆಡೆ ಜೋರು ಗಾಳಿ, ಮತ್ತೊಂದೆಡೆ ಭಾರೀ ಮಳೆಗೆ ಜೈ ಕೂಡ ಹೈರಾಣಾಗಿದ್ದಾರೆ. ಈ ಮಧ್ಯೆ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಮಳೆಗಾಳಿಯಿಂದ ಕಂಗಾಲಾಗಿದ್ದಾರೆ.....

byte:-1 ಕುಮಾರ್......ಸ್ಥಳೀಯರು
byte:-2 ಸತೀಶ್ ಜೈನ್......ಸ್ಥಳೀಯರು (ಹಸಿರು ಶಾಲು ಹಾಕಿರುವ ವ್ಯಕ್ತಿ)

Conclusion:ರಾಜಕುಮಾರ್.......
ಈ ಟಿವಿ ಭಾರತ್......
ಚಿಕ್ಕಮಗಳೂರು.......

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.