ETV Bharat / bharat

ಗರ್ಭಧರಿಸಲು ಸಾಧ್ಯವಾಗದ ಹಿನ್ನಲೆ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಿಸಿದ ಮಹಿಳೆ

author img

By ETV Bharat Karnataka Team

Published : Jan 6, 2024, 11:26 AM IST

ಮಹಿಳೆಯೊಬ್ಬಳು ತಮ್ಮ ತಾಯ್ತನದ ಆಸೆ ಪೂರೈಕೆಗೆ ನವಜಾತ ಶಿಶು ಕದ್ದು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

woman caught kidnapping newborn baby
woman caught kidnapping newborn baby

ನವದೆಹಲಿ: ತಾಯ್ತನದ ತುಡಿತದಲ್ಲಿದ್ದ ಹಲವು ಬಾರಿ ಗರ್ಭ ಧರಿಸಲು ವಿಫಲವಾದ ಹಿನ್ನಲೆ ಮಹಿಳೆಯೊಬ್ಬಳು ನವಜಾತ ಹೆಣ್ಣು ಶಿಶುವನ್ನು ಅಪಹರಿಸಿದ ಘಟನೆ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

19 ವರ್ಷದ ಸಮಯಪುರ್​ ಬಡ್ಲಿ ಎಂಬ ಮಹಿಳೆ ರಾಷ್ಟ್ರ ರಾಜಧಾನಿಯಲ್ಲಿನ ಬಾಬಾ ಸಾಹೇಬ್​​ ಅಂಬೇಡ್ಕರ್​ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ಕೆಲವೇ ಸಮಯದಲ್ಲಿ ಹೆರಿಗೆ ಕೋಣೆಯಿಂದ ಮಗುವನ್ನು ಅಪರಿಚಿತ ಮಹಿಳೆ ಅಪಹರಿಸಿದ್ದಾರೆ ಎಂದು ಮಗು ಕಳೆದುಕೊಂಡ ತಾಯಿ ಪೊಲೀಸರಿಗ ದೂರು ನೀಡಿದ ಹಿನ್ನಲೆ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಕುರಿತು ಮಾತನಾಡಿರುವ ಪೋಲಿಸ್​ ಡೆಪ್ಯೂಟಿ ಕಮಿಷನರ್​ ರೋಹಿಣಿ ಸಿಂಗ್​​ ಸಿಧು, ಮಗು ಹುಟ್ಟಿದ ಕೆಲವೇ ಸಮಯದಲ್ಲಿ ಮಗುವನ್ನು ತಾಯಿಯಿಂದ ಅಪಹರಿಸಲಾಗಿದೆ. ಈ ಕುರಿತು ತನಿಖೆ ನಡೆಸುವಾಗ ಆಸ್ಪತ್ರೆ ಹೊರಗೆ ಅಳವಡಿಸಿದ್ದ ಸಿಸಿಟಿವಿ ಫೋಟೆಜ್​ಗಳ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮಹಿಳೆಯೊಬ್ಬಳ ಬಿಎಸ್​ಎ ಆಸ್ಪತ್ರೆಯ ಕಾರಿಡಾರ್​ನಲ್ಲಿ ನವಜಾತ ಶಿಶು ಹಿಡಿದು ತೆರಳುತ್ತಿರುವುದು ಕಂಡು ಬಂದಿದೆ.

ಈ ಮಹಿಳೆಯ ಚಲನವನ ಪತ್ತೆಗಾಗಿ ಈ ಮಾರ್ಗ ಮತ್ತು ಆಸ್ಪತ್ರೆಯ ಸುತ್ತಮುತ್ತಲಿನ 500 ಸಿಸಿಟಿವಿ ಫೋಟೆಜ್​ ಅನ್ನು ಪರಿಶೀಲಿಸಲಾಯಿತು. ಒಂದು ಸಿಸಿಟಿವಿ ಫೋಟೆಜ್​ನಲ್ಲಿ ಮೆಟ್ರೋ ಸ್ಟೇಷನ್​ ಬಳಿ, ಮಹಿಳೆ ಅಹರಿಸಿದ ಮಗುವನ್ನು ಹಿಡಿದು ಇ ರಿಕ್ಷಾ ಹತ್ತುತ್ತಿರುವುದು ಕಂಡು ಬಂದಿತು.

ಇ ರಿಕ್ಷಾವನ್ನು ಪತ್ತೆ ಮಾಡಿ, ಚಾಲಕನ ವಿಚರಣೆ ನಡೆಸಿದಾಗ ಮಹಿಳೆಯ ಸುಳಿವು ಪತ್ತೆಯಾಗಿದೆ. 23 ವರ್ಷದ ಬಾಡ್ಲಿ ನಿವಾಸಿ ಈ ಕೃತ್ಯ ಎಸಗಿರುವುದು ಕಂಡು ಬಂದಿದೆ. ಮಹಿಳೆಯು ಮಗುವನ್ನು ಹೊಂದುವ ಬಯಕೆ ವಿಫಲವಾದ ಹಿನ್ನಲೆ, ಮಗು ಹೊಂದ ಬೇಕು ಎಂಬ ಆಸೆ ಪೂರೈಕೆ ಮಾಡಲು ಈ ರೀತಿ ಮಗುವನ್ನು ಅಪಹರಿಸಿದ್ದಾಗಿ ತಿಳಿಸಿದ್ದಾರೆ. ಸದ್ಯ ಮಗುವನ್ನು ಆಕೆಯಿಂದ ಪಡೆಯಲಾಗಿದ್ದು, ಮಗುವ ಆರೋಗ್ಯಯುತವಾಗಿದೆ ಎಂದು ತಿಳಿಸಿದ್ದಾರೆ.

ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್​ ಸಮ್ಮತಿ:

ಮಾನಸಿಕ ಖಿನ್ನತೆ ಹಿನ್ನಲೆ 29 ವಾರದ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ ವಿಧವೆಯ ಮನವಿಗೆ ದೆಹಲಿ ಹೈಕೋರ್ಟ್​ ಪುರಸ್ಕರಿಸಿದ್ದು, ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ನೇತೃತ್ವದ ಪೀಠ ಇದಕ್ಕೆ ಗರ್ಭಪಾತಕ್ಕೆ ಅನುಮತಿ ನೀಡಿದೆ.

2023ರ ಫೆಬ್ರವರಿಯಲ್ಲಿ ಮದುವೆಯಾದ ಮಹಿಳೆ ಅಕ್ಟೋಬರ್​​ನಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಈ ವೇಳೆ ಆಕೆ 20 ವಾರಗಳ ಗರ್ಭವತಿಯಾಗಿದ್ದಳು. ಡಿಸೆಂಬರ್​ನಲ್ಲಿ ಆಕೆ ಮಾನಸಿಕ ಸ್ಥಿತಿಯು ಕುಗ್ಗಿದ್ದು, ಈ ಸಂಬಂಧ ಏಮ್ಸ್​​ ಕೂಡ ಪರಿಶೀಲನೆ ನಡೆಸಿ, ಮಹಿಳೆ ಗಂಭೀರ ಮಾನಸಿಕ ಸಮಸ್ಯೆ ಅಪಾಯ ಹೊಂದಿರುವುದಾಗಿ ವರದಿ ನೀಡಿತು. ಬಳಿಕ ಮಹಿಳೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ರನ್ನು ರಾಜ್ಯಸಭೆಗೆ​ ಆಯ್ಕೆ ಮಾಡಿದ ಆಪ್​

ನವದೆಹಲಿ: ತಾಯ್ತನದ ತುಡಿತದಲ್ಲಿದ್ದ ಹಲವು ಬಾರಿ ಗರ್ಭ ಧರಿಸಲು ವಿಫಲವಾದ ಹಿನ್ನಲೆ ಮಹಿಳೆಯೊಬ್ಬಳು ನವಜಾತ ಹೆಣ್ಣು ಶಿಶುವನ್ನು ಅಪಹರಿಸಿದ ಘಟನೆ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

19 ವರ್ಷದ ಸಮಯಪುರ್​ ಬಡ್ಲಿ ಎಂಬ ಮಹಿಳೆ ರಾಷ್ಟ್ರ ರಾಜಧಾನಿಯಲ್ಲಿನ ಬಾಬಾ ಸಾಹೇಬ್​​ ಅಂಬೇಡ್ಕರ್​ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ಕೆಲವೇ ಸಮಯದಲ್ಲಿ ಹೆರಿಗೆ ಕೋಣೆಯಿಂದ ಮಗುವನ್ನು ಅಪರಿಚಿತ ಮಹಿಳೆ ಅಪಹರಿಸಿದ್ದಾರೆ ಎಂದು ಮಗು ಕಳೆದುಕೊಂಡ ತಾಯಿ ಪೊಲೀಸರಿಗ ದೂರು ನೀಡಿದ ಹಿನ್ನಲೆ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಕುರಿತು ಮಾತನಾಡಿರುವ ಪೋಲಿಸ್​ ಡೆಪ್ಯೂಟಿ ಕಮಿಷನರ್​ ರೋಹಿಣಿ ಸಿಂಗ್​​ ಸಿಧು, ಮಗು ಹುಟ್ಟಿದ ಕೆಲವೇ ಸಮಯದಲ್ಲಿ ಮಗುವನ್ನು ತಾಯಿಯಿಂದ ಅಪಹರಿಸಲಾಗಿದೆ. ಈ ಕುರಿತು ತನಿಖೆ ನಡೆಸುವಾಗ ಆಸ್ಪತ್ರೆ ಹೊರಗೆ ಅಳವಡಿಸಿದ್ದ ಸಿಸಿಟಿವಿ ಫೋಟೆಜ್​ಗಳ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮಹಿಳೆಯೊಬ್ಬಳ ಬಿಎಸ್​ಎ ಆಸ್ಪತ್ರೆಯ ಕಾರಿಡಾರ್​ನಲ್ಲಿ ನವಜಾತ ಶಿಶು ಹಿಡಿದು ತೆರಳುತ್ತಿರುವುದು ಕಂಡು ಬಂದಿದೆ.

ಈ ಮಹಿಳೆಯ ಚಲನವನ ಪತ್ತೆಗಾಗಿ ಈ ಮಾರ್ಗ ಮತ್ತು ಆಸ್ಪತ್ರೆಯ ಸುತ್ತಮುತ್ತಲಿನ 500 ಸಿಸಿಟಿವಿ ಫೋಟೆಜ್​ ಅನ್ನು ಪರಿಶೀಲಿಸಲಾಯಿತು. ಒಂದು ಸಿಸಿಟಿವಿ ಫೋಟೆಜ್​ನಲ್ಲಿ ಮೆಟ್ರೋ ಸ್ಟೇಷನ್​ ಬಳಿ, ಮಹಿಳೆ ಅಹರಿಸಿದ ಮಗುವನ್ನು ಹಿಡಿದು ಇ ರಿಕ್ಷಾ ಹತ್ತುತ್ತಿರುವುದು ಕಂಡು ಬಂದಿತು.

ಇ ರಿಕ್ಷಾವನ್ನು ಪತ್ತೆ ಮಾಡಿ, ಚಾಲಕನ ವಿಚರಣೆ ನಡೆಸಿದಾಗ ಮಹಿಳೆಯ ಸುಳಿವು ಪತ್ತೆಯಾಗಿದೆ. 23 ವರ್ಷದ ಬಾಡ್ಲಿ ನಿವಾಸಿ ಈ ಕೃತ್ಯ ಎಸಗಿರುವುದು ಕಂಡು ಬಂದಿದೆ. ಮಹಿಳೆಯು ಮಗುವನ್ನು ಹೊಂದುವ ಬಯಕೆ ವಿಫಲವಾದ ಹಿನ್ನಲೆ, ಮಗು ಹೊಂದ ಬೇಕು ಎಂಬ ಆಸೆ ಪೂರೈಕೆ ಮಾಡಲು ಈ ರೀತಿ ಮಗುವನ್ನು ಅಪಹರಿಸಿದ್ದಾಗಿ ತಿಳಿಸಿದ್ದಾರೆ. ಸದ್ಯ ಮಗುವನ್ನು ಆಕೆಯಿಂದ ಪಡೆಯಲಾಗಿದ್ದು, ಮಗುವ ಆರೋಗ್ಯಯುತವಾಗಿದೆ ಎಂದು ತಿಳಿಸಿದ್ದಾರೆ.

ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್​ ಸಮ್ಮತಿ:

ಮಾನಸಿಕ ಖಿನ್ನತೆ ಹಿನ್ನಲೆ 29 ವಾರದ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ ವಿಧವೆಯ ಮನವಿಗೆ ದೆಹಲಿ ಹೈಕೋರ್ಟ್​ ಪುರಸ್ಕರಿಸಿದ್ದು, ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ನೇತೃತ್ವದ ಪೀಠ ಇದಕ್ಕೆ ಗರ್ಭಪಾತಕ್ಕೆ ಅನುಮತಿ ನೀಡಿದೆ.

2023ರ ಫೆಬ್ರವರಿಯಲ್ಲಿ ಮದುವೆಯಾದ ಮಹಿಳೆ ಅಕ್ಟೋಬರ್​​ನಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಈ ವೇಳೆ ಆಕೆ 20 ವಾರಗಳ ಗರ್ಭವತಿಯಾಗಿದ್ದಳು. ಡಿಸೆಂಬರ್​ನಲ್ಲಿ ಆಕೆ ಮಾನಸಿಕ ಸ್ಥಿತಿಯು ಕುಗ್ಗಿದ್ದು, ಈ ಸಂಬಂಧ ಏಮ್ಸ್​​ ಕೂಡ ಪರಿಶೀಲನೆ ನಡೆಸಿ, ಮಹಿಳೆ ಗಂಭೀರ ಮಾನಸಿಕ ಸಮಸ್ಯೆ ಅಪಾಯ ಹೊಂದಿರುವುದಾಗಿ ವರದಿ ನೀಡಿತು. ಬಳಿಕ ಮಹಿಳೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ರನ್ನು ರಾಜ್ಯಸಭೆಗೆ​ ಆಯ್ಕೆ ಮಾಡಿದ ಆಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.