ಜೈಪುರ(ರಾಜಸ್ಥಾನ): ಗೋಧಿ ತುಂಬಿದ ಟ್ರಕ್ನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ಮೈರಾ ಘಾಟಾದಲ್ಲಿ ಭಾನುವಾರ ನಡೆದಿದೆ.
![ಗೋಧಿ ತುಂಬಿದ್ದ ಲಾರಿ ಪಲ್ಟಿ: ನಾಲ್ವರು ಸಾವು, ಆರು ಮಂದಿಗೆ ಗಾಯ](https://etvbharatimages.akamaized.net/etvbharat/prod-images/rj-cor-cor-04-majoraccidentinchittorgarh-vio-10194_07112021161000_0711f_1636281600_124.jpg)
ಮೈರಾ ಘಾಟಾ ಪ್ರದೇಶದಿಂದ ಗೋಧಿ ತುಂಬಿಕೊಂಡು ಬಂದ ಲಾರಿ ಹೆದ್ದಾರಿಗೆ ಬರುವ ವೇಳೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
![Truck filled with wheat overturned in Rajasthan's Chittaurgarh district, four died, six injured](https://etvbharatimages.akamaized.net/etvbharat/prod-images/rj-cor-cor-04-majoraccidentinchittorgarh-vio-10194_07112021161000_0711f_1636281600_120.jpg)
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ರತನ್ ಕುಮಾರ್, ಚಿತ್ತೋರಗಢ ಬಿಜೆಪಿ ಶಾಸಕ ಚಂದ್ರಭನ್ ಸಿಂಗ್ ಅಕ್ಯಾ, ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಮಾಜಿ ಜಿಲ್ಲಾಧ್ಯಕ್ಷ ಹರ್ಷವರ್ಧನ್ ಸಿಂಗ್ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಒಡಿಶಾ: ಗ್ರಾಮದ ಮೇಲೆ 20ಕ್ಕೂ ಹೆಚ್ಚು ಬಾಂಬ್ ದಾಳಿ, 30 ಮನೆಗಳಿಗೆ ಹಾನಿ