ETV Bharat / bharat

'ಭಾರತದ ಸೋಲಿಗೆ BJP ಸರ್ಕಾರವೇ ಕಾರಣ, ಪಾಕ್​ ಜೊತೆ ಮ್ಯಾಚ್​​ ಫಿಕ್ಸಿಂಗ್ ಮಾಡಿಸಿ ಸೋಲಿಸಿದೆ': ಟಿಕಾಯತ್​

ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋಲು ಕಾಣಲು ಭಾರತೀಯ ಜನತಾ ಪಾರ್ಟಿ ನೇರ ಹೊಣೆ ಎಂದು ರಾಕೇಶ್ ಟಿಕಾಯತ್​ ಆರೋಪ ಮಾಡಿದ್ದಾರೆ.

author img

By

Published : Oct 27, 2021, 3:11 AM IST

rakesh tikait
rakesh tikait

ಬಾಗ್‌ಪತ್(ಉತ್ತರ ಪ್ರದೇಶ): ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಸಂಪೂರ್ಣ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ತರಹೇವಾರಿ ಮಾತು ಕೇಳಿ ಬರಲು ಶುರುವಾಗಿವೆ. ಅಸಾದುದ್ದೀನ್​ ಓವೈಸಿ ಬೆನ್ನಲ್ಲೇ ಇದೀಗ ರಾಕೇಶ್ ಟಿಕಾಯತ್​ ಕೂಡ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.

ಪಾಕ್​ ಜೊತೆ ಕೇಂದ್ರ ಬಿಜೆಪಿ ಮ್ಯಾಚ್​​ ಫಿಕ್ಸಿಂಗ್ ಮಾಡಿಸಿ ಸೋಲಿಸಿದೆ': ಟಿಕಾಯತ್​

ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದಿರುವ ಅವರು, ಮ್ಯಾಚ್​ ಫಿಕ್ಸಿಂಗ್ ಮಾಡುವ ಮೂಲಕ ಬಿಜೆಪಿ ಸರ್ಕಾರ ಪಾಕಿಸ್ತಾನದ ಕೈಯಲ್ಲಿ ಟೀಂ ಇಂಡಿಯಾ ಸೋಲಿಸಿದೆ ಎಂದಿದ್ದಾರೆ. ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ಮಾತನಾಡಿರುವ ಅವರು,ಭಾರತದ ಸೋಲಿಗೆ ಬಿಜೆಪಿ ನೇರ ಹೊಣೆ. ಪಾಕ್​ ವಿರುದ್ಧ ಭಾರತ ಸೋಲು ಕಂಡರೆ ತಮಗೆ ವಿವಿಧ ಸಮುದಾಯಗಳ ಮತಗಳು ಬರುತ್ತವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದ ಕಾರಣ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿಸುವ ಮೂಲಕ ಟೀಂ ಇಂಡಿಯಾ ಸೋಲಿಸಿದ್ದಾರೆ. ಫಿಕ್ಸಿಂಗ್ ಮೂಲಕ ಟೀಂ ಇಂಡಿಯಾ ಸೋಲಿಸಬಹುದು ಎಂಬುದು ಬಿಜೆಪಿಗೆ ಗೊತ್ತಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಪಾಕ್​​ನ ಪ್ರತಿ ಗಲ್ಲಿಯಲ್ಲೂ ಇಂಥವರು ಇದ್ದಾರೆ; ವರುಣ್​ ಚಕ್ರವರ್ತಿ ಅಣಕಿಸಿದ ಪಾಕ್​ ಮಾಜಿ ಕ್ರಿಕೆಟರ್​

ಮೋದಿ ಸರ್ಕಾರಕ್ಕೆ ಕೇವಲ ಮತಗಳು ಬೇಕು. ದೇಶದೊಂದಿಗೆ ಯಾವುದೇ ರೀತಿಯ ಬಾಂಧವ್ಯ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ ಎಲ್ಲರ ದಾರಿ ತಪ್ಪಿಸುತ್ತಿದೆ. ದೇಶದ ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ಕೃಷಿ ಕಾನೂನು ರೈತರಿಗೆ ಕಪ್ಪು ಚುಕ್ಕೆಯಾಗಿದ್ದು, ಕೇಂದ್ರ ಸರ್ಕಾರ ಈಗಾಗಲೇ ದೇಶದ ಅರ್ಧಭಾಗ ಮಾರಾಟ ಮಾಡಿದೆ ಎಂದರು.

ಬಾಗ್‌ಪತ್(ಉತ್ತರ ಪ್ರದೇಶ): ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಸಂಪೂರ್ಣ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ತರಹೇವಾರಿ ಮಾತು ಕೇಳಿ ಬರಲು ಶುರುವಾಗಿವೆ. ಅಸಾದುದ್ದೀನ್​ ಓವೈಸಿ ಬೆನ್ನಲ್ಲೇ ಇದೀಗ ರಾಕೇಶ್ ಟಿಕಾಯತ್​ ಕೂಡ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.

ಪಾಕ್​ ಜೊತೆ ಕೇಂದ್ರ ಬಿಜೆಪಿ ಮ್ಯಾಚ್​​ ಫಿಕ್ಸಿಂಗ್ ಮಾಡಿಸಿ ಸೋಲಿಸಿದೆ': ಟಿಕಾಯತ್​

ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದಿರುವ ಅವರು, ಮ್ಯಾಚ್​ ಫಿಕ್ಸಿಂಗ್ ಮಾಡುವ ಮೂಲಕ ಬಿಜೆಪಿ ಸರ್ಕಾರ ಪಾಕಿಸ್ತಾನದ ಕೈಯಲ್ಲಿ ಟೀಂ ಇಂಡಿಯಾ ಸೋಲಿಸಿದೆ ಎಂದಿದ್ದಾರೆ. ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ಮಾತನಾಡಿರುವ ಅವರು,ಭಾರತದ ಸೋಲಿಗೆ ಬಿಜೆಪಿ ನೇರ ಹೊಣೆ. ಪಾಕ್​ ವಿರುದ್ಧ ಭಾರತ ಸೋಲು ಕಂಡರೆ ತಮಗೆ ವಿವಿಧ ಸಮುದಾಯಗಳ ಮತಗಳು ಬರುತ್ತವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದ ಕಾರಣ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿಸುವ ಮೂಲಕ ಟೀಂ ಇಂಡಿಯಾ ಸೋಲಿಸಿದ್ದಾರೆ. ಫಿಕ್ಸಿಂಗ್ ಮೂಲಕ ಟೀಂ ಇಂಡಿಯಾ ಸೋಲಿಸಬಹುದು ಎಂಬುದು ಬಿಜೆಪಿಗೆ ಗೊತ್ತಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಪಾಕ್​​ನ ಪ್ರತಿ ಗಲ್ಲಿಯಲ್ಲೂ ಇಂಥವರು ಇದ್ದಾರೆ; ವರುಣ್​ ಚಕ್ರವರ್ತಿ ಅಣಕಿಸಿದ ಪಾಕ್​ ಮಾಜಿ ಕ್ರಿಕೆಟರ್​

ಮೋದಿ ಸರ್ಕಾರಕ್ಕೆ ಕೇವಲ ಮತಗಳು ಬೇಕು. ದೇಶದೊಂದಿಗೆ ಯಾವುದೇ ರೀತಿಯ ಬಾಂಧವ್ಯ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ ಎಲ್ಲರ ದಾರಿ ತಪ್ಪಿಸುತ್ತಿದೆ. ದೇಶದ ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ಕೃಷಿ ಕಾನೂನು ರೈತರಿಗೆ ಕಪ್ಪು ಚುಕ್ಕೆಯಾಗಿದ್ದು, ಕೇಂದ್ರ ಸರ್ಕಾರ ಈಗಾಗಲೇ ದೇಶದ ಅರ್ಧಭಾಗ ಮಾರಾಟ ಮಾಡಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.