ETV Bharat / bharat

ಲಾಕ್​ಡೌನ್​ ಸಮಯದಲ್ಲಿ ಪ್ರಾಣಿಗಳ ಆಹಾರಕ್ಕಾಗಿ 60 ಲಕ್ಷ ಮಂಜೂರು ಮಾಡಿದ ಸಿಎಂ ಪಟ್ನಾಯಕ್​ - ಪ್ರಾಣಿಗಳ ಆಹಾರಕ್ಕಾಗಿ 60 ಲಕ್ಷ ಮಂಜೂರು ಮಾಡಿದ ಸಿಎಂ ಪಟ್ನಾಯಕ್​

ಲಾಕ್​ಡೌನ್​ ಸಮಯದಲ್ಲಿ ಪ್ರಾಣಿಗಳ ಆಹಾರಕ್ಕಾಗಿ ಒಡಿಶಾ ಸಿಎಂ ಪಟ್ನಾಯಕ್​ 60 ಲಕ್ಷ ರೂ. ಮಂಜೂರು ಮಾಡಿದ್ದಾರೆ.

Rs 60 lakh for feeding stray animals  feeding stray animals amid COVID19 lockdown  COVID19 lockdown in odisha  Naveen Patnaik for stray animals  Odisha CM sanctions Rs 60 lakh  ಪ್ರಾಣಿಗಳ ಆಹಾರಕ್ಕಾಗಿ 60 ಲಕ್ಷ ಮಂಜೂರು  ಪ್ರಾಣಿಗಳ ಆಹಾರಕ್ಕಾಗಿ 60 ಲಕ್ಷ ಮಂಜೂರು ಮಾಡಿದ ಸಿಎಂ ಪಟ್ನಾಯಕ್​ ಸಿಎಂ ಪಟ್ನಾಯಕ್​ ಸುದ್ದಿ,
ಪ್ರಾಣಿಗಳ ಆಹಾರಕ್ಕಾಗಿ 60 ಲಕ್ಷ ಮಂಜೂರು ಮಾಡಿದ ಸಿಎಂ ಪಟ್ನಾಯಕ್​
author img

By

Published : May 10, 2021, 2:33 PM IST

ಭುವನೇಶ್ವರ: 14 ದಿನಗಳ ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ಎಲ್ಲಾ ನಗರ ಪಾಕೆಟ್‌ಗಳಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಮಂಜೂರು ಮಾಡಿದ್ದಾರೆ.

ಸಾಂಕ್ರಾಮಿಕ ಕೊರೊನಾ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಆದ್ದರಿಂದ ನಾಯಿಗಳು ಮತ್ತು ದನಕರುಗಳು ಆಹಾರದಿಂದ ವಂಚಿತವಾಗುತ್ತಿವೆ. ಪ್ರಾಣಿಗಳ ಆಹಾರಕ್ಕಾಗಿ ಸಿಎಂ ಪರಿಹಾರ ನಿಧಿಯಿಂದ 60 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಐದು ನಗರಸಭೆ, 48 ಪುರಸಭೆಗಳು ಮತ್ತು 61 ಅಧಿಸೂಚಿತ ಪ್ರದೇಶ ಮಂಡಳಿಗಳಲ್ಲಿ (ಎನ್‌ಎಸಿ) ಈ ಹಣ ಲಭ್ಯವಾಗಲಿದೆ ಎಂದು ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂಸೇವಾ ಸಂಸ್ಥೆಗಳ ಮೂಲಕ ಪ್ರಾಣಿಗಳಿಗೆ ಆಹಾರವನ್ನು ಒದಗಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಂಡಿಕೋಲೆ ಪ್ರದೇಶದ ಮಹಾ ವಿನಾಯಕ್ ದೇವಸ್ಥಾನದಲ್ಲಿ ಸ್ಥಳೀಯ ಆಡಳಿತವು ಭಾನುವಾರ ಕೋತಿಗಳು, ನಾಯಿಗಳು ಮತ್ತು ಹಸುಗಳಿಗೆ ಆಹಾರವನ್ನು ವಿತರಿಸಿದೆ ಎಂದು ಜಾಜ್‌ಪುರ ಜಿಲ್ಲೆಯ ವರದಿಯೊಂದು ತಿಳಿಸಿದೆ.

ಮೇ 5 ರಿಂದ ಪ್ರಾರಂಭವಾದ ಲಾಕ್‌ಡೌನ್ ಹಂತದಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.

ಕಳೆದ ಬಾರಿ ಲಾಕ್ ಡೌನ್ ಸಮಯದಲ್ಲಿ ಒಡಿಶಾದಲ್ಲಿ ಸಮುದಾಯ ಪ್ರಾಣಿಗಳಿಗೆ ಆಹಾರಕ್ಕಾಗಿ ಹಣವನ್ನು ಹಂಚಿಕೆ ಮಾಡಿದ್ದಕ್ಕಾಗಿ ಪಟ್ನಾಯಕ್ ಅವರಿಗೆ ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಇಂಡಿಯಾ ಪ್ರಶಸ್ತಿ ನೀಡಿತು.

ಭುವನೇಶ್ವರ: 14 ದಿನಗಳ ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ಎಲ್ಲಾ ನಗರ ಪಾಕೆಟ್‌ಗಳಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಮಂಜೂರು ಮಾಡಿದ್ದಾರೆ.

ಸಾಂಕ್ರಾಮಿಕ ಕೊರೊನಾ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಆದ್ದರಿಂದ ನಾಯಿಗಳು ಮತ್ತು ದನಕರುಗಳು ಆಹಾರದಿಂದ ವಂಚಿತವಾಗುತ್ತಿವೆ. ಪ್ರಾಣಿಗಳ ಆಹಾರಕ್ಕಾಗಿ ಸಿಎಂ ಪರಿಹಾರ ನಿಧಿಯಿಂದ 60 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಐದು ನಗರಸಭೆ, 48 ಪುರಸಭೆಗಳು ಮತ್ತು 61 ಅಧಿಸೂಚಿತ ಪ್ರದೇಶ ಮಂಡಳಿಗಳಲ್ಲಿ (ಎನ್‌ಎಸಿ) ಈ ಹಣ ಲಭ್ಯವಾಗಲಿದೆ ಎಂದು ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂಸೇವಾ ಸಂಸ್ಥೆಗಳ ಮೂಲಕ ಪ್ರಾಣಿಗಳಿಗೆ ಆಹಾರವನ್ನು ಒದಗಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಂಡಿಕೋಲೆ ಪ್ರದೇಶದ ಮಹಾ ವಿನಾಯಕ್ ದೇವಸ್ಥಾನದಲ್ಲಿ ಸ್ಥಳೀಯ ಆಡಳಿತವು ಭಾನುವಾರ ಕೋತಿಗಳು, ನಾಯಿಗಳು ಮತ್ತು ಹಸುಗಳಿಗೆ ಆಹಾರವನ್ನು ವಿತರಿಸಿದೆ ಎಂದು ಜಾಜ್‌ಪುರ ಜಿಲ್ಲೆಯ ವರದಿಯೊಂದು ತಿಳಿಸಿದೆ.

ಮೇ 5 ರಿಂದ ಪ್ರಾರಂಭವಾದ ಲಾಕ್‌ಡೌನ್ ಹಂತದಲ್ಲಿ ಪ್ರಾಣಿಗಳಿಗೆ ಆಹಾರವನ್ನು ನೀಡುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.

ಕಳೆದ ಬಾರಿ ಲಾಕ್ ಡೌನ್ ಸಮಯದಲ್ಲಿ ಒಡಿಶಾದಲ್ಲಿ ಸಮುದಾಯ ಪ್ರಾಣಿಗಳಿಗೆ ಆಹಾರಕ್ಕಾಗಿ ಹಣವನ್ನು ಹಂಚಿಕೆ ಮಾಡಿದ್ದಕ್ಕಾಗಿ ಪಟ್ನಾಯಕ್ ಅವರಿಗೆ ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಇಂಡಿಯಾ ಪ್ರಶಸ್ತಿ ನೀಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.