ಬಾರಾಮುಲ್ಲಾ(ಜಮ್ಮು ಮತ್ತು ಕಾಶ್ಮೀರ): ಭದ್ರತಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿರುವುದಾಗಿ ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನೆ ಈ ಕಾರ್ಯಾಚರಣೆ ನಡೆಸಿದೆ.
ಸಾವನ್ನಪ್ಪಿದ ಭಯೋತ್ಪಾದಕನನ್ನು ಜಾವೇದ್ ಅಹ್ ವಾನಿ ಎಂದು ಗುರುತಿಸಲಾಗಿದೆ. ಅಕ್ಟೋಬರ್ 20ರಂದು ವಾನ್ಪೋಹ್ ಎಂಬಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಕೊಂದಿದ್ದ ಗುಲ್ಜಾರ್ ಎಂಬಾತನಿಗೆ ವಾನಿ ಸಹಕರಿಸಿದ್ದ. ಇಷ್ಟೇ ಅಲ್ಲದೇ, ಬಾರಾಮುಲ್ಲಾದಲ್ಲಿ ಓರ್ವ ಅಂಗಡಿ ಮಾಲೀಕನನ್ನು ಈತ ಟಾರ್ಗೆಟ್ ಮಾಡಿದ್ದ ಎಂದು ತಿಳಿದುಬಂದಿದೆ.
ಗುಲ್ಜಾರ್ನನ್ನು ಅಕ್ಟೋಬರ್ 20ರಂದೇ ಕೊಲ್ಲಲಾಗಿತ್ತು. ಈಗ ಹತ್ಯೆಗೊಳಗಾದ ಭಯೋತ್ಪಾದಕ ಜಾವೇದ್ ಅಹ್ ವಾನಿ ಗುಲ್ಜಾರ್ನ ಸಹಚರನಾಗಿದ್ದ ಎಂದು ಜಮ್ಮು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಭಯೋತ್ಪಾದಕನಿಂದ ಒಂದು ಪಿಸ್ತೂಲ್, ಒಂದು ಲೋಡೆಡ್ ಮ್ಯಾಗಜೀನ್ ಮತ್ತು ಒಂದು ಪಾಕ್ ಗ್ರೆನೇಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷಿ ಕಿರಣ್ ಗೋಸಾವಿ ಪೊಲೀಸ್ ವಶ