ETV Bharat / bharat

ಕಾರು ಪಾರ್ಕಿಂಗ್​​ ಗಲಾಟೆ: ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಗನ ಕೊಲೆ

author img

By

Published : Oct 26, 2022, 4:18 PM IST

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪಾರ್ಕಿಂಗ್​​ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯ ತಲೆ ಮೇಲೆ ಇಟ್ಟಿಗೆಗಳನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

man-beaten-to-death-over-parking-issue-in-ups-ghaziabad
ಪಾರ್ಕಿಂಗ್​​ ವಿಚಾರಕ್ಕೆ ವ್ಯಕ್ತಿಯ ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಲೆ

ಗಾಜಿಯಾಬಾದ್​ (ಉತ್ತರ ಪ್ರದೇಶ): ಪಾರ್ಕಿಂಗ್​​ ವಿಚಾರಕ್ಕೆ ನಡೆದ ಗಲಾಟೆಯು ಓರ್ವ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆಯಿತು. ಮೃತನನ್ನು 35 ವರ್ಷದ ವರುಣ್​ ಎಂದು ಗುರುತಿಸಲಾಗಿದೆ.

ಇಲ್ಲಿನ ತೀಲಾ ಮೋರ್​ ಪ್ರದೇಶದಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಉಪಹಾರ ಗೃಹದ ಮುಂದೆ ಈ ಘಟನೆ ಜರುಗಿದೆ. ವರುಣ್​ ತಮ್ಮ ಕಾರನ್ನು ಪಾರ್ಕ್​​​ ಮಾಡಿದ್ದರು. ಇದರ ಪಕ್ಕದಲ್ಲೇ ಮತ್ತೊಂದು ಕಾರು ಪಾರ್ಕ್​ ಮಾಡಲಾಗಿತ್ತು. ಆದರೆ, ಈ ಎರಡು ಕಾರುಗಳ ಮಧ್ಯೆ ಡೋರ್​ ಓಪನ್​ ಮಾಡಲು ಸಾಧ್ಯವಾಗದಷ್ಟು ಕಡಿಮೆ ಅಂತರವಿತ್ತು ಎನ್ನಲಾಗಿದೆ.

ಗಾಜಿಯಾಬಾದ್‌ನಲ್ಲಿ ಕಾರು ಪಾರ್ಕಿಂಗ್​​ ಗಲಾಟೆ

ಇದೇ ವಿಷಯವಾಗಿ ವರುಣ್​ ಮತ್ತು ಇನ್ನೋರ್ವ ವ್ಯಕ್ತಿಯ ನಡುವೆ ವಾಗ್ವಾದ ಆರಂಭವಾಗಿ, ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಟ್ಟಿಗೆಗಳನ್ನು ತೆಗೆದುಕೊಂಡ ಆರೋಪಿಯು ವರುಣ್​ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಇದರ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.

ಕೊಲೆಯಾದ ವರುಣ್​ ನಿವೃತ್ತ ಪೊಲೀಸ್​ ಅಧಿಕಾರಿಯ ಮಗ ಎಂದೂ ಹೇಳಲಾಗಿದೆ. ಹೆಚ್ಚುವರಿ ಎಸ್​ಪಿ ಜ್ಞಾನೇಂದ್ರ ಕುಮಾರ್​ ಸಿಂಗ್​ ಹಾಗೂ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮತ್ತೊಂದೆಡೆ, ಮೃತ ವ್ಯಕ್ತಿಯ ಕುಟುಂಬಸ್ಥರು ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಸ್ಥಳೀಯ ಪೊಲೀಸ್​ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನ: ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡೇಟು

ಗಾಜಿಯಾಬಾದ್​ (ಉತ್ತರ ಪ್ರದೇಶ): ಪಾರ್ಕಿಂಗ್​​ ವಿಚಾರಕ್ಕೆ ನಡೆದ ಗಲಾಟೆಯು ಓರ್ವ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆಯಿತು. ಮೃತನನ್ನು 35 ವರ್ಷದ ವರುಣ್​ ಎಂದು ಗುರುತಿಸಲಾಗಿದೆ.

ಇಲ್ಲಿನ ತೀಲಾ ಮೋರ್​ ಪ್ರದೇಶದಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಉಪಹಾರ ಗೃಹದ ಮುಂದೆ ಈ ಘಟನೆ ಜರುಗಿದೆ. ವರುಣ್​ ತಮ್ಮ ಕಾರನ್ನು ಪಾರ್ಕ್​​​ ಮಾಡಿದ್ದರು. ಇದರ ಪಕ್ಕದಲ್ಲೇ ಮತ್ತೊಂದು ಕಾರು ಪಾರ್ಕ್​ ಮಾಡಲಾಗಿತ್ತು. ಆದರೆ, ಈ ಎರಡು ಕಾರುಗಳ ಮಧ್ಯೆ ಡೋರ್​ ಓಪನ್​ ಮಾಡಲು ಸಾಧ್ಯವಾಗದಷ್ಟು ಕಡಿಮೆ ಅಂತರವಿತ್ತು ಎನ್ನಲಾಗಿದೆ.

ಗಾಜಿಯಾಬಾದ್‌ನಲ್ಲಿ ಕಾರು ಪಾರ್ಕಿಂಗ್​​ ಗಲಾಟೆ

ಇದೇ ವಿಷಯವಾಗಿ ವರುಣ್​ ಮತ್ತು ಇನ್ನೋರ್ವ ವ್ಯಕ್ತಿಯ ನಡುವೆ ವಾಗ್ವಾದ ಆರಂಭವಾಗಿ, ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಟ್ಟಿಗೆಗಳನ್ನು ತೆಗೆದುಕೊಂಡ ಆರೋಪಿಯು ವರುಣ್​ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಇದರ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.

ಕೊಲೆಯಾದ ವರುಣ್​ ನಿವೃತ್ತ ಪೊಲೀಸ್​ ಅಧಿಕಾರಿಯ ಮಗ ಎಂದೂ ಹೇಳಲಾಗಿದೆ. ಹೆಚ್ಚುವರಿ ಎಸ್​ಪಿ ಜ್ಞಾನೇಂದ್ರ ಕುಮಾರ್​ ಸಿಂಗ್​ ಹಾಗೂ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮತ್ತೊಂದೆಡೆ, ಮೃತ ವ್ಯಕ್ತಿಯ ಕುಟುಂಬಸ್ಥರು ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಸ್ಥಳೀಯ ಪೊಲೀಸ್​ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನ: ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.