ಚೆನ್ನೈ (ತಮಿಳುನಾಡು): ಮುಂದಿನ ವಾರದೊಳಗೆ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಐಟಿ ಇಲಾಖೆ ಧರ್ಮ ಬೋಧಕ ಪಾಲ್ ದಿನಕರನ್ಗೆ ಸಮನ್ಸ್ ನೀಡಿದೆ.
ಮೂಲಗಳ ಪ್ರಕಾರ, ಐಟಿ ತಂಡವು ಕಾರುಣ್ಯ ವಿಶ್ವವಿದ್ಯಾಲಯದಿಂದ 5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ವಿದೇಶದಲ್ಲಿ ಹೂಡಿಕೆ ಮಾಡಿದ 120 ಕೋಟಿ ರೂ. ಬಹಿರಂಗಪಡಿಸದ ಆದಾಯವನ್ನು ಸಹ ಪತ್ತೆ ಮಾಡಿದೆ.
ಇದನ್ನೂ ಓದಿ: ತಮಿಳುನಾಡಿನಾದ್ಯಂತ 28 ಕಡೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ
ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ತಮಿಳುನಾಡಿನಾದ್ಯಂತ ಜೀಸಸ್ ಕಾಲ್ಸ್ ಸಂಸ್ಥೆಗೆ ಸಂಬಂಧಪಟ್ಟ 28 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ದಿವಂಗತ ಡಿಜಿಎಸ್ ದಿನಕರನ್ ಈ 'ಜೀಸಸ್ ಕಾಲ್ಸ್' ಸಂಸ್ಥೆ ಸ್ಥಾಪಿಸಿದರು. ಪ್ರಸ್ತುತ ಅವರ ಪುತ್ರ ಪಾಲ್ ದಿನಕರನ್ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ದಿನಕರನ್ ಪ್ರಮುಖ ಧರ್ಮ ಪ್ರಚಾರಕರಾಗಿದ್ದಾರೆ.