ETV Bharat / bharat

ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ: BSc ವಿದ್ಯಾರ್ಥಿ ಸೇರಿ ಐವರು ಸೆರೆ; 4 ಪಿಸ್ತೂಲ್ ವಶಕ್ಕೆ

author img

By

Published : Aug 18, 2023, 6:40 PM IST

Illegal Weapon Supply Racket busted: ಪಂಜಾಬ್​ನಲ್ಲಿ ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ತೊಡಗಿದ್ದ ಬಿಎಸ್ಸಿ ವಿದ್ಯಾರ್ಥಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ತಮ್ಮದೇ ಗ್ಯಾಂಗ್​ ಕಟ್ಟಿಕೊಂಡಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

Illegal weapon supply racket busted in Punjab, five, including a B Sc student held
ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ತೊಡಗಿದ್ದ ಬಿಎಸ್ಸಿ ವಿದ್ಯಾರ್ಥಿ ಸೇರಿ ಐವರು ಸೆರೆ

ಖನ್ನಾ (ಪಂಜಾಬ್​): ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಗ್ಯಾಂಗ್​ವೊಂದನ್ನು ಪಂಜಾಬ್​ ಪೊಲೀಸರು ಭೇದಿಸಿದ್ದು, ಬಿಎಸ್ಸಿ ವಿದ್ಯಾರ್ಥಿ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕು ಪಿಸ್ತೂಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 18ರಿಂದ 20 ವರ್ಷದೊಳಗಿನ ಯುವಕರು ಎಂದು ಖನ್ನಾ ಎಸ್​ಎಸ್​ಪಿ ಅಮ್​ನೀತ್​ ಕೋಂಡಾಲ್​ ತಿಳಿಸಿದ್ದಾರೆ.

''ಬಿಕ್ರಂಜೀತ್​ ಸಿಂಗ್​, ಜಶನ್​ಪ್ರೀತ್ ​ಸಿಂಗ್, ದಲ್​ಜೀತ್ ಸಿಂಗ್​ ಮತ್ತು ಜಶನ್​ದೀಪ್​ ಸಿಂಗ್ ಹಾಗೂ ವಪಿಂದರ್ ಸಿಂಗ್ ಬಂಧಿತರು. ಈ ಪೈಕಿ ನಾಲ್ವರು ಪಂಜಾಬ್​ ನಿವಾಸಿಗಳಿದ್ದು, ವಪಿಂದರ್​ ಸಿಂಗ್​ ಮಾತ್ರ ಮಧ್ಯಪ್ರದೇಶದ ಮೂಲದವ. ಈತ ಕಾಲೇಜೊಂದರಲ್ಲಿ ಬಿಎಸ್ಸಿ ಓದುತ್ತಿದ್ದಾನೆ. ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬಂದಿದ್ದರು. ನಂತರ ತಮ್ಮದೇ ಆದ ಶಸ್ತ್ರಾಸ್ತ್ರ ಪೂರೈಕೆ ಗ್ಯಾಂಗ್ ಕಟ್ಟಿಕೊಂಡಿದ್ದರು'' ಎಂದು ಎಸ್​ಎಸ್​ಪಿ ಅಮ್​ನೀತ್​ ಹೇಳಿದ್ದಾರೆ. ​

ಬಲೆಗೆ ಬಿದ್ದಿದ್ದು ಹೇಗೆ?: ''ಇತ್ತೀಚೆಗೆ ಎಸ್​ಪಿ ಪ್ರಜ್ಞಾ ಜೈನ್​ ಮಾರ್ಗದರ್ಶನದಲ್ಲಿ ದೋರಹಾ ಪ್ರದೇಶದಲ್ಲಿ ರಸ್ತೆ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸಂಚರಿಸುತ್ತಿದ್ದ ಬಿಕ್ರಂಜೀತ್​ ಸಿಂಗ್​, ಜಶನ್​ಪ್ರೀತ್ ​ಸಿಂಗ್, ದಲ್​ಜೀತ್ ಸಿಂಗ್​ ಹಾಗೂ ಜಶನ್​ದೀಪ್​ ಸಿಂಗ್​ನನ್ನು ತಪಾಸಣೆಗೆ ಒಳಪಡಿಸಿದಾಗ ಇವರ ಬಳಿಯಿದ್ದ ಬ್ಯಾಗ್​ನಲ್ಲಿ ಒಂದು ಪಿಸ್ತೂಲ್​ ಪತ್ತೆಯಾಗಿತ್ತು. ಈ ಕುರಿತು ಹೆಚ್ಚಿನ ತನಿಖೆಗೆ ಡಿಎಸ್​ಪಿ ಪವನ್​ಜೀತ್​ ಚೌಧರಿ ಹಾಗೂ ಕೇಂದ್ರ ಗುಪ್ತಚರ ವಿಭಾಗದ ಅಮನ್​ದೀಪ್​ ಸಿಂಗ್​ ನೇತೃತ್ವದ ತಂಡ ರಚನೆ ಮಾಡಲಾಗಿತ್ತು'' ಎಂದು ಎಸ್​ಎಸ್​ಪಿ ಮಾಹಿತಿ ನೀಡಿದ್ದಾರೆ.

''ಈ ತನಿಖೆಯ ಭಾಗವಾಗಿ ಬಂಧಿತ ನಾಲ್ವರನ್ನು ವಿಚಾರಣೆಗೆ ನಡೆಸಿದಾಗ ಪಿಸ್ತೂಲ್​ ಅನ್ನು ಮಧ್ಯಪ್ರದೇಶದ ಬಿಂದ್​ ಜಿಲ್ಲೆಯ ನಿವಾಸಿಯಾದ ವಪಿಂದರ್​ ಸಿಂಗ್​ನಿಂದ ಪಡೆಯಲಾಗಿದೆ ಎಂದು ಬಾಯ್ಬಿಟ್ಟಿದ್ದಾರೆ. ಅಂತೆಯೇ, ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ವಪಿಂದರ್​ ಸಿಂಗ್ ಮನೆ ಮೇಲೆ ದಾಳಿ ಆತನನ್ನು ಬಂಧಿಸಲಾಗಿದೆ. ಅಲ್ಲದೇ, ಈತ ಬಳಿಯಿಂದ ಮೂರು ಪಿಸ್ತೂಲ್​ಗಳನ್ನು ಜಪ್ತಿ ಮಾಡಲಾಗಿದೆ'' ಎಂದು ಅವರು ತಿಳಿಸಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಮಾರಾಟ: ''ಬಂಧಿತ ವಪಿಂದರ್​ ಸಿಂಗ್ ತನ್ನ ಓದಿನ ಸಮಯದಲ್ಲೇ ಮೊದಲಿಗೆ ಇತರರ ಆಜ್ಞೆಯಂತೆ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ಮಾಡುತ್ತಿದ್ದ. ನಂತರ ತನ್ನದೇ ಆದ ಗ್ಯಾಂಗ್​ ಕಟ್ಟಿಕೊಳ್ಳಲು ನಿರ್ಧರಿಸಿದ್ದ. ಈ ವೇಳೆ ಪಂಜಾಬ್​ನ ಬಿಕ್ರಂಜೀತ್​ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದಿದ್ದಾನೆ. ಆಗ ಇಬ್ಬರು ಸೇರಿಕೊಂಡು ಶಸ್ತ್ರಾಸ್ತ್ರ ಪೂರೈಕೆ ದಂಧೆ ಆರಂಭಿಸಿದ್ದಾರೆ. ಇಂದೋರ್​ನಲ್ಲಿ ಕಡಿಮೆ ಬೆಲೆಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಪಿಂದರ್​ ಖರೀದಿಸಿ ಪಂಜಾಬ್​ಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ರವಾನಿಸುತ್ತಿದ್ದ. ಈ ದಂಧೆಯಲ್ಲಿ ಇನ್ನಿಬ್ಬರು ಕೂಡ ಬಿಕ್ರಂಜೀತ್​ ಸಿಂಗ್​​ಗೆ ಸೋಶಿಯಲ್​ ಮೀಡಿಯಾದಲ್ಲಿ ಪರಿಚಯವಾಗಿದ್ದರು. ಸದ್ಯ ಇದುವರೆಗೆ ಈ ಗ್ಯಾಂಗ್​ ಎಷ್ಟು ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಹಾಗೂ ಮಾರಾಟ ಮಾಡಲಾಗಿದೆ ಎಂಬುವುದರ ಕುರಿತ ತನಿಖೆ ಮುಂದುವರೆದಿದೆ" ಎಂದು ಎಸ್​ಎಸ್​ಪಿ ಅಮ್​ನೀತ್​ ಮಾಹಿತಿ ನೀಡಿದರು.

ಇದನ್ನೂ ಓದಿ: Heroin: ಪಂಜಾಬ್​ನಲ್ಲಿ ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್​ ಜಪ್ತಿ; ನಾಲ್ವರ ಬಂಧನ, 3 ಪಿಸ್ತೂಲ್​ ವಶಕ್ಕೆ

ಖನ್ನಾ (ಪಂಜಾಬ್​): ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಗ್ಯಾಂಗ್​ವೊಂದನ್ನು ಪಂಜಾಬ್​ ಪೊಲೀಸರು ಭೇದಿಸಿದ್ದು, ಬಿಎಸ್ಸಿ ವಿದ್ಯಾರ್ಥಿ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕು ಪಿಸ್ತೂಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 18ರಿಂದ 20 ವರ್ಷದೊಳಗಿನ ಯುವಕರು ಎಂದು ಖನ್ನಾ ಎಸ್​ಎಸ್​ಪಿ ಅಮ್​ನೀತ್​ ಕೋಂಡಾಲ್​ ತಿಳಿಸಿದ್ದಾರೆ.

''ಬಿಕ್ರಂಜೀತ್​ ಸಿಂಗ್​, ಜಶನ್​ಪ್ರೀತ್ ​ಸಿಂಗ್, ದಲ್​ಜೀತ್ ಸಿಂಗ್​ ಮತ್ತು ಜಶನ್​ದೀಪ್​ ಸಿಂಗ್ ಹಾಗೂ ವಪಿಂದರ್ ಸಿಂಗ್ ಬಂಧಿತರು. ಈ ಪೈಕಿ ನಾಲ್ವರು ಪಂಜಾಬ್​ ನಿವಾಸಿಗಳಿದ್ದು, ವಪಿಂದರ್​ ಸಿಂಗ್​ ಮಾತ್ರ ಮಧ್ಯಪ್ರದೇಶದ ಮೂಲದವ. ಈತ ಕಾಲೇಜೊಂದರಲ್ಲಿ ಬಿಎಸ್ಸಿ ಓದುತ್ತಿದ್ದಾನೆ. ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬಂದಿದ್ದರು. ನಂತರ ತಮ್ಮದೇ ಆದ ಶಸ್ತ್ರಾಸ್ತ್ರ ಪೂರೈಕೆ ಗ್ಯಾಂಗ್ ಕಟ್ಟಿಕೊಂಡಿದ್ದರು'' ಎಂದು ಎಸ್​ಎಸ್​ಪಿ ಅಮ್​ನೀತ್​ ಹೇಳಿದ್ದಾರೆ. ​

ಬಲೆಗೆ ಬಿದ್ದಿದ್ದು ಹೇಗೆ?: ''ಇತ್ತೀಚೆಗೆ ಎಸ್​ಪಿ ಪ್ರಜ್ಞಾ ಜೈನ್​ ಮಾರ್ಗದರ್ಶನದಲ್ಲಿ ದೋರಹಾ ಪ್ರದೇಶದಲ್ಲಿ ರಸ್ತೆ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸಂಚರಿಸುತ್ತಿದ್ದ ಬಿಕ್ರಂಜೀತ್​ ಸಿಂಗ್​, ಜಶನ್​ಪ್ರೀತ್ ​ಸಿಂಗ್, ದಲ್​ಜೀತ್ ಸಿಂಗ್​ ಹಾಗೂ ಜಶನ್​ದೀಪ್​ ಸಿಂಗ್​ನನ್ನು ತಪಾಸಣೆಗೆ ಒಳಪಡಿಸಿದಾಗ ಇವರ ಬಳಿಯಿದ್ದ ಬ್ಯಾಗ್​ನಲ್ಲಿ ಒಂದು ಪಿಸ್ತೂಲ್​ ಪತ್ತೆಯಾಗಿತ್ತು. ಈ ಕುರಿತು ಹೆಚ್ಚಿನ ತನಿಖೆಗೆ ಡಿಎಸ್​ಪಿ ಪವನ್​ಜೀತ್​ ಚೌಧರಿ ಹಾಗೂ ಕೇಂದ್ರ ಗುಪ್ತಚರ ವಿಭಾಗದ ಅಮನ್​ದೀಪ್​ ಸಿಂಗ್​ ನೇತೃತ್ವದ ತಂಡ ರಚನೆ ಮಾಡಲಾಗಿತ್ತು'' ಎಂದು ಎಸ್​ಎಸ್​ಪಿ ಮಾಹಿತಿ ನೀಡಿದ್ದಾರೆ.

''ಈ ತನಿಖೆಯ ಭಾಗವಾಗಿ ಬಂಧಿತ ನಾಲ್ವರನ್ನು ವಿಚಾರಣೆಗೆ ನಡೆಸಿದಾಗ ಪಿಸ್ತೂಲ್​ ಅನ್ನು ಮಧ್ಯಪ್ರದೇಶದ ಬಿಂದ್​ ಜಿಲ್ಲೆಯ ನಿವಾಸಿಯಾದ ವಪಿಂದರ್​ ಸಿಂಗ್​ನಿಂದ ಪಡೆಯಲಾಗಿದೆ ಎಂದು ಬಾಯ್ಬಿಟ್ಟಿದ್ದಾರೆ. ಅಂತೆಯೇ, ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ವಪಿಂದರ್​ ಸಿಂಗ್ ಮನೆ ಮೇಲೆ ದಾಳಿ ಆತನನ್ನು ಬಂಧಿಸಲಾಗಿದೆ. ಅಲ್ಲದೇ, ಈತ ಬಳಿಯಿಂದ ಮೂರು ಪಿಸ್ತೂಲ್​ಗಳನ್ನು ಜಪ್ತಿ ಮಾಡಲಾಗಿದೆ'' ಎಂದು ಅವರು ತಿಳಿಸಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಮಾರಾಟ: ''ಬಂಧಿತ ವಪಿಂದರ್​ ಸಿಂಗ್ ತನ್ನ ಓದಿನ ಸಮಯದಲ್ಲೇ ಮೊದಲಿಗೆ ಇತರರ ಆಜ್ಞೆಯಂತೆ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ಮಾಡುತ್ತಿದ್ದ. ನಂತರ ತನ್ನದೇ ಆದ ಗ್ಯಾಂಗ್​ ಕಟ್ಟಿಕೊಳ್ಳಲು ನಿರ್ಧರಿಸಿದ್ದ. ಈ ವೇಳೆ ಪಂಜಾಬ್​ನ ಬಿಕ್ರಂಜೀತ್​ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದಿದ್ದಾನೆ. ಆಗ ಇಬ್ಬರು ಸೇರಿಕೊಂಡು ಶಸ್ತ್ರಾಸ್ತ್ರ ಪೂರೈಕೆ ದಂಧೆ ಆರಂಭಿಸಿದ್ದಾರೆ. ಇಂದೋರ್​ನಲ್ಲಿ ಕಡಿಮೆ ಬೆಲೆಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಪಿಂದರ್​ ಖರೀದಿಸಿ ಪಂಜಾಬ್​ಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ರವಾನಿಸುತ್ತಿದ್ದ. ಈ ದಂಧೆಯಲ್ಲಿ ಇನ್ನಿಬ್ಬರು ಕೂಡ ಬಿಕ್ರಂಜೀತ್​ ಸಿಂಗ್​​ಗೆ ಸೋಶಿಯಲ್​ ಮೀಡಿಯಾದಲ್ಲಿ ಪರಿಚಯವಾಗಿದ್ದರು. ಸದ್ಯ ಇದುವರೆಗೆ ಈ ಗ್ಯಾಂಗ್​ ಎಷ್ಟು ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಹಾಗೂ ಮಾರಾಟ ಮಾಡಲಾಗಿದೆ ಎಂಬುವುದರ ಕುರಿತ ತನಿಖೆ ಮುಂದುವರೆದಿದೆ" ಎಂದು ಎಸ್​ಎಸ್​ಪಿ ಅಮ್​ನೀತ್​ ಮಾಹಿತಿ ನೀಡಿದರು.

ಇದನ್ನೂ ಓದಿ: Heroin: ಪಂಜಾಬ್​ನಲ್ಲಿ ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್​ ಜಪ್ತಿ; ನಾಲ್ವರ ಬಂಧನ, 3 ಪಿಸ್ತೂಲ್​ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.