ETV Bharat / bharat

ಭಾರಿ ಮಳೆಗೆ 36 ಗಂಟೆಗಳಲ್ಲಿ 10 ಜನ ಬಲಿ.. 4 ತಿಂಗಳಲ್ಲಿ 432 ಮಂದಿ ಸಾವು

author img

By

Published : Sep 25, 2021, 10:20 AM IST

ಹಿಮಾಚಲ ಪ್ರದೇಶದಲ್ಲಿ ಕಳೆದ 36 ಗಂಟೆಗಳಲ್ಲಿ ಮಳೆಯ ಆರ್ಭಟಕ್ಕೆ 10 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, ಭಾರಿ ಮಳೆಯಿಂದಾಗಿ 9 ಗೋಶಾಲೆಗಳು ಸೇರಿದಂತೆ 16 ಮನೆಗಳು ಧ್ವಂಸಗೊಂಡಿವೆ.

Himachal
ಭಾರಿ ಮಳೆ

ಶಿಮ್ಲಾ/ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಕಳೆದ 36 ಗಂಟೆಗಳಲ್ಲಿ ವಿಪರೀತ ಮಳೆಯಿಂದಾಗಿ ಕನಿಷ್ಠ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಕಳೆದ 130 ದಿನಗಳಲ್ಲಿ 432 ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದಿದೆ.

ಮಳೆಯಿಂದ ಸಾಕಷ್ಟು ಮನೆಗಳಿಗೆ ಹಾನಿ ಉಂಟಾಗಿದ್ದು, ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ 1,108 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಭಾರಿ ಮಳೆಯಿಂದಾಗಿ 9 ಗೋಶಾಲೆಗಳು ಸೇರಿದಂತೆ 16 ಮನೆಗಳು ಧ್ವಂಸಗೊಂಡಿವೆ. ಭೂಕುಸಿತದಿಂದಾಗಿ 123 ರಸ್ತೆಗಳಲ್ಲಿ ಸಂಚಾರ ಬಂದ್​ ಆಗಿದೆ. ಮೂಲಗಳ ಪ್ರಕಾರ ಹಮೀರ್‌ಪುರದಲ್ಲಿ 18 ರಸ್ತೆಗಳು, ಮಂಡಿಯಲ್ಲಿ 9, ಕಾಂಗ್ರಾದಲ್ಲಿ 6 ರಸ್ತೆಗಳು ಬಂದ್​ ಆಗಿವೆ.

ಶಿಮ್ಲಾ ಜಿಲ್ಲಾ ಉಪ ಆಯುಕ್ತ ಆದಿತ್ಯ ನೇಗಿ ಮಾತನಾಡಿ, ರಸ್ತೆ ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ರು. ಗುರುವಾರ ಸಂಜೆ ಭೂಕುಸಿತ ಸಂಭವಿಸಿದ ಹಿನ್ನೆಲೆ ಕಿನ್ನೌರ್ ಜಿಲ್ಲೆಯ ಪುವಾರಿಯಿಂದ ಕಾಜಾದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಸಹ ನಿರ್ಬಂಧಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ 130 ದಿನಗಳಲ್ಲಿ ಮಳೆಯ ಆರ್ಭಟಕ್ಕೆ 12 ಜನರು ನಾಪತ್ತೆಯಾಗಿದ್ದಾರೆ. 857 ಮನೆಗಳು ಮತ್ತು 700 ಗೋಶಾಲೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: REET ಪರೀಕ್ಷೆಗೆ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿ 6 ಜನ ದುರ್ಮರಣ

ಶಿಮ್ಲಾ/ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಕಳೆದ 36 ಗಂಟೆಗಳಲ್ಲಿ ವಿಪರೀತ ಮಳೆಯಿಂದಾಗಿ ಕನಿಷ್ಠ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಕಳೆದ 130 ದಿನಗಳಲ್ಲಿ 432 ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದಿದೆ.

ಮಳೆಯಿಂದ ಸಾಕಷ್ಟು ಮನೆಗಳಿಗೆ ಹಾನಿ ಉಂಟಾಗಿದ್ದು, ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ 1,108 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಭಾರಿ ಮಳೆಯಿಂದಾಗಿ 9 ಗೋಶಾಲೆಗಳು ಸೇರಿದಂತೆ 16 ಮನೆಗಳು ಧ್ವಂಸಗೊಂಡಿವೆ. ಭೂಕುಸಿತದಿಂದಾಗಿ 123 ರಸ್ತೆಗಳಲ್ಲಿ ಸಂಚಾರ ಬಂದ್​ ಆಗಿದೆ. ಮೂಲಗಳ ಪ್ರಕಾರ ಹಮೀರ್‌ಪುರದಲ್ಲಿ 18 ರಸ್ತೆಗಳು, ಮಂಡಿಯಲ್ಲಿ 9, ಕಾಂಗ್ರಾದಲ್ಲಿ 6 ರಸ್ತೆಗಳು ಬಂದ್​ ಆಗಿವೆ.

ಶಿಮ್ಲಾ ಜಿಲ್ಲಾ ಉಪ ಆಯುಕ್ತ ಆದಿತ್ಯ ನೇಗಿ ಮಾತನಾಡಿ, ರಸ್ತೆ ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ರು. ಗುರುವಾರ ಸಂಜೆ ಭೂಕುಸಿತ ಸಂಭವಿಸಿದ ಹಿನ್ನೆಲೆ ಕಿನ್ನೌರ್ ಜಿಲ್ಲೆಯ ಪುವಾರಿಯಿಂದ ಕಾಜಾದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಸಹ ನಿರ್ಬಂಧಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ 130 ದಿನಗಳಲ್ಲಿ ಮಳೆಯ ಆರ್ಭಟಕ್ಕೆ 12 ಜನರು ನಾಪತ್ತೆಯಾಗಿದ್ದಾರೆ. 857 ಮನೆಗಳು ಮತ್ತು 700 ಗೋಶಾಲೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: REET ಪರೀಕ್ಷೆಗೆ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿ 6 ಜನ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.