ETV Bharat / bharat

4 ಸಾವಿರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ 'ತಂದೆ' ಸ್ಥಾನ ತುಂಬಿದ ಗುಜರಾತ್​ ಉದ್ಯಮಿ ಮಹೇಶ್​ ಸವಾನಿ

author img

By

Published : Dec 5, 2021, 5:37 PM IST

ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆ ಮಾಡಿಸಿಕೊಡುವ ಗುಜರಾತ್​ನ ಪಿಪಿ ಸವಾನಿ ಗ್ರೂಪ್​ ಈ ವರ್ಷವೂ 300 ಯುವತಿಯರಿಗೆ 'ತಾಳಿ ಭಾಗ್ಯ' ನೀಡಿದೆ..

A Mass wedding ceremony
4 ಸಾವಿರ ಹೆಣ್ಣು ಮಕ್ಕಳಿಗೆ ಮದುವೆ

ಸೂರತ್(ಗುಜರಾತ್): ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆ ಮಾಡಿಸಿಕೊಡುವ ಗುಜರಾತ್​ನ ಪಿಪಿ ಸವಾನಿ ಗ್ರೂಪ್​ ಈ ವರ್ಷವೂ 300 ಯುವತಿಯರಿಗೆ 'ತಾಳಿ ಭಾಗ್ಯ' ನೀಡಿದೆ.

ಗುಜರಾತ್​ನ ಸೂರತ್​ ಜಿಲ್ಲೆಯ ಸವಾನಿ ಗ್ರೂಪ್​ 2008ರಿಂದ ಬಡ ಮತ್ತು ತಂದೆಯನ್ನು ಕಳೆದುಕೊಂಡ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುತ್ತಾ ಬರುತ್ತಿದೆ.

ಈ ವರ್ಷವೂ ಕೂಡ 300 ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದೆ. ಈ ಮೂಲಕ ಸವಾನಿ ಗ್ರೂಪ್​ನ ಅಧ್ಯಕ್ಷ ಮಹೇಶ್​ ಸವಾನಿ 4 ಸಾವಿರ ಬಡ ಹೆಣ್ಣು ಮಕ್ಕಳಿಗೆ 'ತಂದೆ'ಯ ಸ್ಥಾನವನ್ನು ತುಂಬಿದ್ದಾರೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ಸವಾನಿ ಗ್ರೂಪ್​ನ ಅಧ್ಯಕ್ಷ ಮಹೇಶ್​ ಸವಾನಿ, ಕಂಪನಿಯಿಂದ ಪ್ರತಿವರ್ಷವೂ ಬಡ ಮತ್ತು ತಂದೆಯನ್ನು ಕಳೆದುಕೊಂಡ ಅನಾಥ ಹೆಣ್ಣು ಮಕ್ಕಳಿಗೆ ವಿವಾಹವನ್ನು ಮಾಡಿಸಲಾಗುತ್ತಿದೆ.

ಕೋವಿಡ್​ ಕಾರಣ ಈ ವರ್ಷ ಕೇವಲ 300 ಜೋಡಿಗೆ ಮದುವೆ ಮಾಡಿಸಲಾಗಿದೆ. ಇದರಲ್ಲಿ ಎಲ್ಲಾ ಜನಾಂಗದ ಹೆಣ್ಣು ಮಕ್ಕಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 20 ಕೆಜಿ ತೂಕ ಇಳಿಸಿದ ಖುಷ್ಬೂ ಸುಂದರ್: ನಟಿಯ ಹೊಸ ಲುಕ್​​ಗೆ ನೆಟ್ಟಿಗರು ಫಿದಾ

ಈವರೆಗೂ 4 ಸಾವಿರ ಹೆಣ್ಣು ಮಕ್ಕಳನ್ನು 'ಕನ್ಯಾದಾನ' ಮಾಡುವ ಮೂಲಕ ತಂದೆಯ ಸ್ಥಾನವನ್ನು ತುಂಬಲಾಗಿದೆ. ಇದಕ್ಕೆ ಹೆಮ್ಮೆ ಇದೆ ಎಂದು ಮಹೇಶ್​ ಸವಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗೃಹ ಸಚಿವ ಹರ್ಷ ಸಾಂಘ್ವಿ ಮತ್ತು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್ ಪಾಲ್ಗೊಂಡಿದ್ದರು.

ಸೂರತ್(ಗುಜರಾತ್): ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆ ಮಾಡಿಸಿಕೊಡುವ ಗುಜರಾತ್​ನ ಪಿಪಿ ಸವಾನಿ ಗ್ರೂಪ್​ ಈ ವರ್ಷವೂ 300 ಯುವತಿಯರಿಗೆ 'ತಾಳಿ ಭಾಗ್ಯ' ನೀಡಿದೆ.

ಗುಜರಾತ್​ನ ಸೂರತ್​ ಜಿಲ್ಲೆಯ ಸವಾನಿ ಗ್ರೂಪ್​ 2008ರಿಂದ ಬಡ ಮತ್ತು ತಂದೆಯನ್ನು ಕಳೆದುಕೊಂಡ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುತ್ತಾ ಬರುತ್ತಿದೆ.

ಈ ವರ್ಷವೂ ಕೂಡ 300 ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದೆ. ಈ ಮೂಲಕ ಸವಾನಿ ಗ್ರೂಪ್​ನ ಅಧ್ಯಕ್ಷ ಮಹೇಶ್​ ಸವಾನಿ 4 ಸಾವಿರ ಬಡ ಹೆಣ್ಣು ಮಕ್ಕಳಿಗೆ 'ತಂದೆ'ಯ ಸ್ಥಾನವನ್ನು ತುಂಬಿದ್ದಾರೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ಸವಾನಿ ಗ್ರೂಪ್​ನ ಅಧ್ಯಕ್ಷ ಮಹೇಶ್​ ಸವಾನಿ, ಕಂಪನಿಯಿಂದ ಪ್ರತಿವರ್ಷವೂ ಬಡ ಮತ್ತು ತಂದೆಯನ್ನು ಕಳೆದುಕೊಂಡ ಅನಾಥ ಹೆಣ್ಣು ಮಕ್ಕಳಿಗೆ ವಿವಾಹವನ್ನು ಮಾಡಿಸಲಾಗುತ್ತಿದೆ.

ಕೋವಿಡ್​ ಕಾರಣ ಈ ವರ್ಷ ಕೇವಲ 300 ಜೋಡಿಗೆ ಮದುವೆ ಮಾಡಿಸಲಾಗಿದೆ. ಇದರಲ್ಲಿ ಎಲ್ಲಾ ಜನಾಂಗದ ಹೆಣ್ಣು ಮಕ್ಕಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 20 ಕೆಜಿ ತೂಕ ಇಳಿಸಿದ ಖುಷ್ಬೂ ಸುಂದರ್: ನಟಿಯ ಹೊಸ ಲುಕ್​​ಗೆ ನೆಟ್ಟಿಗರು ಫಿದಾ

ಈವರೆಗೂ 4 ಸಾವಿರ ಹೆಣ್ಣು ಮಕ್ಕಳನ್ನು 'ಕನ್ಯಾದಾನ' ಮಾಡುವ ಮೂಲಕ ತಂದೆಯ ಸ್ಥಾನವನ್ನು ತುಂಬಲಾಗಿದೆ. ಇದಕ್ಕೆ ಹೆಮ್ಮೆ ಇದೆ ಎಂದು ಮಹೇಶ್​ ಸವಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗೃಹ ಸಚಿವ ಹರ್ಷ ಸಾಂಘ್ವಿ ಮತ್ತು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.