ETV Bharat / bharat

ವೃದ್ಧೆಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಕಾಪಾಡಿದ ಲೆ.ಗವರ್ನರ್​ ತಮಿಳಿಸೈ ಸೌಂದರರಾಜನ್​

author img

By

Published : Jan 14, 2022, 6:38 PM IST

ಸಮಾಜಮುಖಿ ಕಾರ್ಯಗಳಿಂದ ಮೆಚ್ಚುಗೆಗೆ ಪಾತ್ರರಾಗಿರುವ ಪುದುಚೇರಿಯ ಲೆಫ್ಟಿನೆಂಟ್​ ಗವರ್ನರ್​ ಇದೀಗ ಮತ್ತೊಮ್ಮೆ ಹೃದಯ ಗೆಲ್ಲುವ ಕೆಲಸ ಮಾಡಿದ್ದಾರೆ.

Governor Tamilisai turned as Doctor and treated old lady
Governor Tamilisai turned as Doctor and treated old lady

ಚೆನ್ನೈ(ತಮಿಳುನಾಡು): ಪುದುಚೇರಿಯ ಲೆ.ಗವರ್ನರ್​ ಆಗಿರುವ ಡಾ.ತಮಿಳಿಸೈ ಸೌಂದರರಾಜನ್​ ವೃದ್ಧೆಯೋರ್ವರ ಪ್ರಾಣ ಕಾಪಾಡಿದ್ದಾರೆ.

ಪೊಂಗಲ್​ ಹಬ್ಬಾಚರಣೆ ಮಾಡಲು ಚೆನ್ನೈಗೆ ತೆರಳಿದ್ದ ತಮಿಳಿಸೈ ಇಂದು ಬೆಳಗ್ಗೆ ಸಾಲಿಗ್ರಾಮದ ನಿವಾಸದಲ್ಲಿ ಹಬ್ಬದ ಸಿದ್ಧತೆಯಲ್ಲಿದ್ದರು. ಈ ವೇಳೆ ವೃದ್ಧೆಯೊಬ್ಬರು ಪ್ರಜ್ಞೆತಪ್ಪಿ ಬಿದ್ದರು. ಇದನ್ನು ನೋಡಿರುವ ರಾಜ್ಯಪಾಲೆ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದರು.

ಚಿಕಿತ್ಸೆ ನೀಡಿ ವೃದ್ಧೆಯ ಪ್ರಾಣ ಉಳಿಸಿದ ಗವರ್ನರ್​ ತಮಿಳಿಸೈ ಸೌಂದರರಾಜನ್​

ತಮಿಳಿಸೈ ವೃತ್ತಿಪರ ವೈದ್ಯೆಯಾಗಿದ್ದು, ವೃದ್ಧೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದರ ಬೆನ್ನಲ್ಲೇ 108 ಆ್ಯಂಬುಲೆನ್ಸ್​ಗೆ ಕರೆ ಮಾಡಿ, ಖಾಸಗಿ ಆಸ್ಪತ್ರೆಗೆ ರವಾನಿಸಿದರು.

ಪುದುಚೇರಿಯ ಲೆ.ಗವರ್ನರ್​ ಆಗಿರುವ ಡಾ.ತಮಿಳಿಸೈ ಹೆಚ್ಚುವರಿಯಾಗಿ ತೆಲಂಗಾಣ ರಾಜ್ಯಪಾಲೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಚೆನ್ನೈನ ಮದ್ರಾಸ್ ಮೆಡಿಕಲ್​ ಕಾಲೇಜ್​​ನಿಂದ ಇವರು ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 30-45 ನಿಮಿಷಗಳ ಕೆಟ್ಟ ಬ್ಯಾಟಿಂಗ್​​​ ಪ್ರದರ್ಶನದಿಂದ ಸರಣಿ ಕೈತಪ್ಪಿತು: ಕೊಹ್ಲಿ

ಕಳೆದ ಕೆಲ ದಿನಗಳ ಹಿಂದೆ ಪುದುಚೇರಿಯ ಆಂಥೋನಿಯಾರ್​ ಚರ್ಚ್​ ಬಸ್​ ನಿಲ್ದಾಣದಿಂದ ತವಲಕುಪ್ಪಂ ಜಂಕ್ಷನ್​​ವರೆಗೆ ಸರ್ಕಾರಿ ಬಸ್‌ನಲ್ಲಿ ಸಂಚರಿಸಿ ಗಮನ ಸೆಳೆದಿದ್ದರು.

ಚೆನ್ನೈ(ತಮಿಳುನಾಡು): ಪುದುಚೇರಿಯ ಲೆ.ಗವರ್ನರ್​ ಆಗಿರುವ ಡಾ.ತಮಿಳಿಸೈ ಸೌಂದರರಾಜನ್​ ವೃದ್ಧೆಯೋರ್ವರ ಪ್ರಾಣ ಕಾಪಾಡಿದ್ದಾರೆ.

ಪೊಂಗಲ್​ ಹಬ್ಬಾಚರಣೆ ಮಾಡಲು ಚೆನ್ನೈಗೆ ತೆರಳಿದ್ದ ತಮಿಳಿಸೈ ಇಂದು ಬೆಳಗ್ಗೆ ಸಾಲಿಗ್ರಾಮದ ನಿವಾಸದಲ್ಲಿ ಹಬ್ಬದ ಸಿದ್ಧತೆಯಲ್ಲಿದ್ದರು. ಈ ವೇಳೆ ವೃದ್ಧೆಯೊಬ್ಬರು ಪ್ರಜ್ಞೆತಪ್ಪಿ ಬಿದ್ದರು. ಇದನ್ನು ನೋಡಿರುವ ರಾಜ್ಯಪಾಲೆ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದರು.

ಚಿಕಿತ್ಸೆ ನೀಡಿ ವೃದ್ಧೆಯ ಪ್ರಾಣ ಉಳಿಸಿದ ಗವರ್ನರ್​ ತಮಿಳಿಸೈ ಸೌಂದರರಾಜನ್​

ತಮಿಳಿಸೈ ವೃತ್ತಿಪರ ವೈದ್ಯೆಯಾಗಿದ್ದು, ವೃದ್ಧೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇದರ ಬೆನ್ನಲ್ಲೇ 108 ಆ್ಯಂಬುಲೆನ್ಸ್​ಗೆ ಕರೆ ಮಾಡಿ, ಖಾಸಗಿ ಆಸ್ಪತ್ರೆಗೆ ರವಾನಿಸಿದರು.

ಪುದುಚೇರಿಯ ಲೆ.ಗವರ್ನರ್​ ಆಗಿರುವ ಡಾ.ತಮಿಳಿಸೈ ಹೆಚ್ಚುವರಿಯಾಗಿ ತೆಲಂಗಾಣ ರಾಜ್ಯಪಾಲೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಚೆನ್ನೈನ ಮದ್ರಾಸ್ ಮೆಡಿಕಲ್​ ಕಾಲೇಜ್​​ನಿಂದ ಇವರು ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 30-45 ನಿಮಿಷಗಳ ಕೆಟ್ಟ ಬ್ಯಾಟಿಂಗ್​​​ ಪ್ರದರ್ಶನದಿಂದ ಸರಣಿ ಕೈತಪ್ಪಿತು: ಕೊಹ್ಲಿ

ಕಳೆದ ಕೆಲ ದಿನಗಳ ಹಿಂದೆ ಪುದುಚೇರಿಯ ಆಂಥೋನಿಯಾರ್​ ಚರ್ಚ್​ ಬಸ್​ ನಿಲ್ದಾಣದಿಂದ ತವಲಕುಪ್ಪಂ ಜಂಕ್ಷನ್​​ವರೆಗೆ ಸರ್ಕಾರಿ ಬಸ್‌ನಲ್ಲಿ ಸಂಚರಿಸಿ ಗಮನ ಸೆಳೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.