ETV Bharat / bharat

ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಬಲಿ: ಬಂದೂಕಿದ್ದರೂ ಗುಂಡು ಹಾರಿಸುವುದು ಹೇಗೆಂದು ಗೊತ್ತಿರಲಿಲ್ಲ! - did not know how to shoot

ಕಾಡಾನೆ ದಾಳಿಗೆ ಸಿಲುಕಿ ಫಾರೆಸ್ಟ್​ ಗಾರ್ಡ್ ಒಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಅಸ್ಸಾಂ ನ ಮೋರಿಗಾಂವ್ ಅರಣ್ಯದಲ್ಲಿ ನಡೆದಿದೆ. ಆದ್ರೆ ವಿಪರ್ಯಾಸ ಎಂಥದ್ದು ಗೊತ್ತೇ? ಮುಂದೆ ಓದಿ..

wild elephant attack
wild elephant attack
author img

By

Published : Mar 6, 2023, 1:09 PM IST

ಮೋರಿಗಾಂವ್ (ಅಸ್ಸಾಂ) : ಇಲ್ಲಿನ ಧರ್ಮತುಲ್ ಪ್ರಾದೇಶಿಕ ಅರಣ್ಯಾಧಿಕಾರಿಗಳ ಕಛೇರಿಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರ ಸಹೋದ್ಯೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲ್ಲೀ ಪ್ರದೇಶದ ದಹಾಲಿ ಹೆಸರಿನ ಸ್ಥಳದ ಬಳಿ ಶನಿವಾರ ಕಾಡಾನೆಯೊಂದು ದಾಳಿ ಮಾಡಿ ಸ್ಥಳೀಯ ವ್ಯಕ್ತಿ ಅದೀಪ್ ಕೋನ್ವಾರ್ ಎಂಬಾತನನ್ನು ಕೊಂದು ಹಾಕಿತ್ತು. ಹೀಗಾಗಿ ಮೂವರು ಫಾರೆಸ್ಟ್​ ಗಾರ್ಡ್​ಗಳು ಈ ಆನೆಯನ್ನು ಹುಡುಕಿಕೊಂಡು ಅರಣ್ಯಕ್ಕೆ ಹೋಗಿದ್ದರು.

ಆದರೆ ಆನೆ ಇವರಿಗೆ ಕಾಣಿಸಿದಾಗ ಇವರಲ್ಲಿ ಇಬ್ಬರಿಗೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಲು ಸಾಧ್ಯವಾಗಿಲ್ಲ. ಬಂದೂಕು ಬಳಸುವುದು ಹೇಗೆಂದು ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆನೆ ಇವರ ಮೇಲೆ ದಾಳಿ ಮಾಡಿದಾಗ ಇಬ್ಬರು ಗಾರ್ಡ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಓರ್ವ ಗಾರ್ಡ್​ ಘನಕಾಂತ ದಾಸ್ ಮೃತಪಟ್ಟಿದ್ದಾನೆ. ಮತ್ತೋರ್ವ ಗೋಪಾಲ್ ಸೈಕಿಯಾ ಎಂಬಾತ ಗಾಯಗೊಂಡಿದ್ದಾನೆ. ಅರಣ್ಯ ಸಿಬ್ಬಂದಿಗೆ ಬಂದೂಕುಗಳನ್ನು ನಿರ್ವಹಿಸುವ ತರಬೇತಿ ನೀಡಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಮೃತ ಅರಣ್ಯ ಸಿಬ್ಬಂದಿಯ ಕುಟುಂಬದವರು ಹೇಳಿದ್ದಾರೆ.

ಮತ್ತೊಂದೆಡೆ, ಈ ದುರಂತ ಘಟನೆಯು ರಾಜ್ಯದ ಅರಣ್ಯ ರಕ್ಷಕರಿಗೆ ನೀಡಲಾಗುವ ಶಸ್ತ್ರ ಬಳಕೆ ತರಬೇತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಕಾಡು ಪ್ರಾಣಿಗಳನ್ನು ವಿಶೇಷವಾಗಿ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಪ್ರದೇಶಗಳಲ್ಲಿ ಬಂದೂಕುಗಳನ್ನು ಬಳಸುವ ಆಧುನಿಕ ತರಬೇತಿ ವ್ಯವಸ್ಥೆಯ ಅಗತ್ಯವನ್ನು ಎತ್ತಿ ತೋರಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯಿಂದ ಪಾಠ ಕಲಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿ : ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಕಾಡಾನೆಯೊಂದು ಇಬ್ಬರನ್ನು ತುಳಿದು ಕೊಂದು ಹಾಕಿದೆ. ಕಡಂಬೂರು ಅರಣ್ಯ ಪ್ರದೇಶದ ಕುಂರಿ ಬುಡಕಟ್ಟು ಗ್ರಾಮದ ಬೊಮ್ಮೇಗೌಡರ್ (55) ಮತ್ತು ಸಿಧುಮರಿ (65) ಮೃತಪಟ್ಟವರು. ಭಾನುವಾರ ಸಂಜೆ ತಟ್ಟಪಾಲಂ ಬಳಿ ಈ ಘಟನೆ ನಡೆದಿದೆ. ಬೊಮ್ಮೇಗೌಡ ಮತ್ತು ಸಿಧುಮರಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಬೈಕ್ ಮೇಲೆ ಹೊರಟಿದ್ದಾಗ ಕಾಡಾನೆ ಅವರ ಮೇಲೆ ದಾಳಿ ಮಾಡಿದೆ. ನಾಲ್ವರೂ ತಮ್ಮ ವಾಹನಗಳನ್ನು ಬಿಟ್ಟು ಓಡಿದ್ದಾರೆ. ಆದರೆ, ಆನೆ ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಬೊಮ್ಮೇಗೌಡ ಮತ್ತು ಸಿದ್ದುಮರಿ ಆನೆ ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ಸತ್ಯಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿದ ನಂತರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇಡುಕ್ಕಿ ಬಳಿ ಮನೆಗಳ ಮೇಲೆ ಕಾಡಾನೆ ದಾಳಿ: ಸ್ಥಳೀಯವಾಗಿ ಮುರಿವಾಲಂಕೊಂಪನ್ ಎಂದು ಕರೆಯಲ್ಪಡುವ ಪುಂಡಾನೆಯೊಂದು ಶುಕ್ರವಾರ ಮುಂಜಾನೆ ಇಡುಕ್ಕಿಯ ಚಿನ್ನಕ್ಕನಾಲ್ ಬಳಿಯ ಮುತ್ತಮ್ಮ ಕಾಲೋನಿಯಲ್ಲಿ ನಾಲ್ಕು ಮನೆಗಳ ಮೇಲೆ ದಾಳಿ ಮಾಡಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಮಧ್ಯಾಹ್ನ 12.30 ರ ಸುಮಾರಿಗೆ ಅಣ್ಣಲಕ್ಷ್ಮಿ, ಪ್ಲಾವಡಿಯನ್, ಮುನಿಯಾಂಡಿ ಮತ್ತು ಪಾಂಡಯ್ಯನವರ ಒಡೆತನದ ಮನೆಗಳ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ : 3 ದಿನಗಳ ಸತತ ಕಾರ್ಯಾಚರಣೆ: ಕಡಬದಲ್ಲಿ ನರಹಂತಕ ಕಾಡಾನೆ ಸೆರೆ

ಮೋರಿಗಾಂವ್ (ಅಸ್ಸಾಂ) : ಇಲ್ಲಿನ ಧರ್ಮತುಲ್ ಪ್ರಾದೇಶಿಕ ಅರಣ್ಯಾಧಿಕಾರಿಗಳ ಕಛೇರಿಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರ ಸಹೋದ್ಯೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲ್ಲೀ ಪ್ರದೇಶದ ದಹಾಲಿ ಹೆಸರಿನ ಸ್ಥಳದ ಬಳಿ ಶನಿವಾರ ಕಾಡಾನೆಯೊಂದು ದಾಳಿ ಮಾಡಿ ಸ್ಥಳೀಯ ವ್ಯಕ್ತಿ ಅದೀಪ್ ಕೋನ್ವಾರ್ ಎಂಬಾತನನ್ನು ಕೊಂದು ಹಾಕಿತ್ತು. ಹೀಗಾಗಿ ಮೂವರು ಫಾರೆಸ್ಟ್​ ಗಾರ್ಡ್​ಗಳು ಈ ಆನೆಯನ್ನು ಹುಡುಕಿಕೊಂಡು ಅರಣ್ಯಕ್ಕೆ ಹೋಗಿದ್ದರು.

ಆದರೆ ಆನೆ ಇವರಿಗೆ ಕಾಣಿಸಿದಾಗ ಇವರಲ್ಲಿ ಇಬ್ಬರಿಗೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಲು ಸಾಧ್ಯವಾಗಿಲ್ಲ. ಬಂದೂಕು ಬಳಸುವುದು ಹೇಗೆಂದು ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆನೆ ಇವರ ಮೇಲೆ ದಾಳಿ ಮಾಡಿದಾಗ ಇಬ್ಬರು ಗಾರ್ಡ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಓರ್ವ ಗಾರ್ಡ್​ ಘನಕಾಂತ ದಾಸ್ ಮೃತಪಟ್ಟಿದ್ದಾನೆ. ಮತ್ತೋರ್ವ ಗೋಪಾಲ್ ಸೈಕಿಯಾ ಎಂಬಾತ ಗಾಯಗೊಂಡಿದ್ದಾನೆ. ಅರಣ್ಯ ಸಿಬ್ಬಂದಿಗೆ ಬಂದೂಕುಗಳನ್ನು ನಿರ್ವಹಿಸುವ ತರಬೇತಿ ನೀಡಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಮೃತ ಅರಣ್ಯ ಸಿಬ್ಬಂದಿಯ ಕುಟುಂಬದವರು ಹೇಳಿದ್ದಾರೆ.

ಮತ್ತೊಂದೆಡೆ, ಈ ದುರಂತ ಘಟನೆಯು ರಾಜ್ಯದ ಅರಣ್ಯ ರಕ್ಷಕರಿಗೆ ನೀಡಲಾಗುವ ಶಸ್ತ್ರ ಬಳಕೆ ತರಬೇತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಕಾಡು ಪ್ರಾಣಿಗಳನ್ನು ವಿಶೇಷವಾಗಿ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಪ್ರದೇಶಗಳಲ್ಲಿ ಬಂದೂಕುಗಳನ್ನು ಬಳಸುವ ಆಧುನಿಕ ತರಬೇತಿ ವ್ಯವಸ್ಥೆಯ ಅಗತ್ಯವನ್ನು ಎತ್ತಿ ತೋರಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯಿಂದ ಪಾಠ ಕಲಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿ : ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಕಾಡಾನೆಯೊಂದು ಇಬ್ಬರನ್ನು ತುಳಿದು ಕೊಂದು ಹಾಕಿದೆ. ಕಡಂಬೂರು ಅರಣ್ಯ ಪ್ರದೇಶದ ಕುಂರಿ ಬುಡಕಟ್ಟು ಗ್ರಾಮದ ಬೊಮ್ಮೇಗೌಡರ್ (55) ಮತ್ತು ಸಿಧುಮರಿ (65) ಮೃತಪಟ್ಟವರು. ಭಾನುವಾರ ಸಂಜೆ ತಟ್ಟಪಾಲಂ ಬಳಿ ಈ ಘಟನೆ ನಡೆದಿದೆ. ಬೊಮ್ಮೇಗೌಡ ಮತ್ತು ಸಿಧುಮರಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಬೈಕ್ ಮೇಲೆ ಹೊರಟಿದ್ದಾಗ ಕಾಡಾನೆ ಅವರ ಮೇಲೆ ದಾಳಿ ಮಾಡಿದೆ. ನಾಲ್ವರೂ ತಮ್ಮ ವಾಹನಗಳನ್ನು ಬಿಟ್ಟು ಓಡಿದ್ದಾರೆ. ಆದರೆ, ಆನೆ ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಬೊಮ್ಮೇಗೌಡ ಮತ್ತು ಸಿದ್ದುಮರಿ ಆನೆ ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ಸತ್ಯಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿದ ನಂತರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇಡುಕ್ಕಿ ಬಳಿ ಮನೆಗಳ ಮೇಲೆ ಕಾಡಾನೆ ದಾಳಿ: ಸ್ಥಳೀಯವಾಗಿ ಮುರಿವಾಲಂಕೊಂಪನ್ ಎಂದು ಕರೆಯಲ್ಪಡುವ ಪುಂಡಾನೆಯೊಂದು ಶುಕ್ರವಾರ ಮುಂಜಾನೆ ಇಡುಕ್ಕಿಯ ಚಿನ್ನಕ್ಕನಾಲ್ ಬಳಿಯ ಮುತ್ತಮ್ಮ ಕಾಲೋನಿಯಲ್ಲಿ ನಾಲ್ಕು ಮನೆಗಳ ಮೇಲೆ ದಾಳಿ ಮಾಡಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಮಧ್ಯಾಹ್ನ 12.30 ರ ಸುಮಾರಿಗೆ ಅಣ್ಣಲಕ್ಷ್ಮಿ, ಪ್ಲಾವಡಿಯನ್, ಮುನಿಯಾಂಡಿ ಮತ್ತು ಪಾಂಡಯ್ಯನವರ ಒಡೆತನದ ಮನೆಗಳ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ : 3 ದಿನಗಳ ಸತತ ಕಾರ್ಯಾಚರಣೆ: ಕಡಬದಲ್ಲಿ ನರಹಂತಕ ಕಾಡಾನೆ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.