ETV Bharat / bharat

ದೆಹಲಿ ವಿಧಾನಸಭೆ ಸಮಿತಿಯ ಮುಂದೆ ಹಾಜರಾದ ಫೇಸ್‌ಬುಕ್ ಮಾಜಿ ಉದ್ಯೋಗಿ

ಸೌಹಾರ್ದಯುತ ಸರ್ಕಾರಿ ಸಂಬಂಧ ಹೊಂದಿರುವ ಅಥವಾ ವಿಶೇಷ ರಾಜಕೀಯ ಸಂಬಂಧಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸರ್ಕಾರದೊಳಗೆ ಲಾಬಿ ಮಾಡುವಲ್ಲಿ ಭದ್ರತೆಯನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ..

author img

By

Published : Nov 13, 2020, 5:18 PM IST

ದೆಹಲಿ ವಿಧಾನಸಭೆ ಸಮಿತಿಯ ಮುಂದೆ ಹಾಜರಾದ ಫೇಸ್‌ಬುಕ್ ಮಾಜಿ ಉದ್ಯೋಗಿ
ದೆಹಲಿ ವಿಧಾನಸಭೆ ಸಮಿತಿಯ ಮುಂದೆ ಹಾಜರಾದ ಫೇಸ್‌ಬುಕ್ ಮಾಜಿ ಉದ್ಯೋಗಿ

ನವದೆಹಲಿ : ಸೋಷಿಯಲ್ ಮೀಡಿಯಾ ದೈತ್ಯ ಫೇಸ್​ಬುಕ್​ ಪೂರ್ವಭಾವಿಯಾಗಿ ಮತ್ತು ತ್ವರಿತವಾಗಿ ವರ್ತಿಸಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ಸುಲಭವಾಗಿ ತಪ್ಪಿಸಬಹುದಿತ್ತು ಎಂದು ಮಾಜಿ ಫೇಸ್‌ಬುಕ್ ಉದ್ಯೋಗಿಯೊಬ್ಬರು ದೆಹಲಿ ಅಸೆಂಬ್ಲಿ ಪ್ಯಾನೆಲ್‌ಗೆ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಾಮಾಜಿಕ ಮಾಧ್ಯಮವೇ ಕಾರಣ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಾಧಾ ನೇತೃತ್ವದ ಶಾಂತಿ ಮತ್ತು ಸಾಮರಸ್ಯ ಸಮಿತಿ ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಎಸ್ ಲಕ್ಕಿಯನ್ನು ಕರೆಸಿಕೊಂಡಿದೆ.

ಶಾಂತಿ ಮತ್ತು ಸಾಮರಸ್ಯದ ಸಮಿತಿಯ ಪ್ರಕಾರ, ಕಂಪನಿಯ ಉನ್ನತ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ಲಕ್ಕಿ ಮಾತನಾಡಿದರು. ಅಲ್ಲಿ ಅವರು ಸಾರ್ವಜನಿಕ ನೀತಿ ಮುಖ್ಯಸ್ಥರಂತಹ ಅತ್ಯಂತ ಮಹತ್ವದ ಹುದ್ದೆಗೆ, ಸೌಹಾರ್ದಯುತ ಸರ್ಕಾರಿ ಸಂಬಂಧ ಹೊಂದಿರುವ ಅಥವಾ ವಿಶೇಷ ರಾಜಕೀಯ ಸಂಬಂಧಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸರ್ಕಾರದೊಳಗೆ ಲಾಬಿ ಮಾಡುವಲ್ಲಿ ಭದ್ರತೆಯನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಈ ಅಭ್ಯಾಸವು 'ರಾಜಕೀಯವಾಗಿ ಅಜ್ಞೇಯತಾವಾದಿ ನಿರ್ವಹಣೆ' ನಿಲುವಿನ ಮೇಲೆ ಅನುಮಾನದ ಛಾಯೆಯನ್ನು ಮೂಡಿಸುತ್ತದೆ ಎಂದು ಹೇಳಿದ್ದಾರಂತೆ.

ನವದೆಹಲಿ : ಸೋಷಿಯಲ್ ಮೀಡಿಯಾ ದೈತ್ಯ ಫೇಸ್​ಬುಕ್​ ಪೂರ್ವಭಾವಿಯಾಗಿ ಮತ್ತು ತ್ವರಿತವಾಗಿ ವರ್ತಿಸಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ಸುಲಭವಾಗಿ ತಪ್ಪಿಸಬಹುದಿತ್ತು ಎಂದು ಮಾಜಿ ಫೇಸ್‌ಬುಕ್ ಉದ್ಯೋಗಿಯೊಬ್ಬರು ದೆಹಲಿ ಅಸೆಂಬ್ಲಿ ಪ್ಯಾನೆಲ್‌ಗೆ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಾಮಾಜಿಕ ಮಾಧ್ಯಮವೇ ಕಾರಣ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಾಧಾ ನೇತೃತ್ವದ ಶಾಂತಿ ಮತ್ತು ಸಾಮರಸ್ಯ ಸಮಿತಿ ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಎಸ್ ಲಕ್ಕಿಯನ್ನು ಕರೆಸಿಕೊಂಡಿದೆ.

ಶಾಂತಿ ಮತ್ತು ಸಾಮರಸ್ಯದ ಸಮಿತಿಯ ಪ್ರಕಾರ, ಕಂಪನಿಯ ಉನ್ನತ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ಲಕ್ಕಿ ಮಾತನಾಡಿದರು. ಅಲ್ಲಿ ಅವರು ಸಾರ್ವಜನಿಕ ನೀತಿ ಮುಖ್ಯಸ್ಥರಂತಹ ಅತ್ಯಂತ ಮಹತ್ವದ ಹುದ್ದೆಗೆ, ಸೌಹಾರ್ದಯುತ ಸರ್ಕಾರಿ ಸಂಬಂಧ ಹೊಂದಿರುವ ಅಥವಾ ವಿಶೇಷ ರಾಜಕೀಯ ಸಂಬಂಧಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸರ್ಕಾರದೊಳಗೆ ಲಾಬಿ ಮಾಡುವಲ್ಲಿ ಭದ್ರತೆಯನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಈ ಅಭ್ಯಾಸವು 'ರಾಜಕೀಯವಾಗಿ ಅಜ್ಞೇಯತಾವಾದಿ ನಿರ್ವಹಣೆ' ನಿಲುವಿನ ಮೇಲೆ ಅನುಮಾನದ ಛಾಯೆಯನ್ನು ಮೂಡಿಸುತ್ತದೆ ಎಂದು ಹೇಳಿದ್ದಾರಂತೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.