ETV Bharat / bharat

ಸಂಬಂಧಿಕರಿದ್ದೂ ಏಕಾಂಗಿಯಾಗಿದ್ದ ಮಹಿಳೆಗೆ ಆಟೋಚಾಲಕನೇ ಆಪತ್ಬಾಂಧವ: ಕೋಟಿ ಮೌಲ್ಯದ ಮನೆ ಕೊಟ್ಟು ಮಹಿಳೆಯ ಔದಾರ್ಯ

ಪಡೆದ ಉಪಕಾರಕ್ಕೆ ಕೃತಜ್ಞತೆ ತೋರದ ಜನರನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮಹಿಳೆ ತನಗೆ ಸೇರಿದ 1 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ ಮೂರಂತಸ್ತಿನ ಮನೆಯನ್ನು ಆಟೋರಿಕ್ಷಾ ಚಾಲಕನಿಗೆ ಬರೆದುಕೊಟ್ಟಿದ್ದಾರೆ. ಇಂಥದ್ದೊಂದು ಕುತೂಹಲಕಾರಿ ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.

author img

By

Published : Nov 15, 2021, 5:33 PM IST

Updated : Nov 15, 2021, 6:06 PM IST

woman donates 3 storied house
ಮೂರಂತಸ್ತಿನ ಮನೆಯನ್ನು ಆಟೋ ರಿಕ್ಷಾದನಿಗೆ ಬರೆದುಕೊಟ್ಟ ಮಹಿಳೆ

ಕಟಕ್ (ಒಡಿಶಾ)​: ಇಲ್ಲೊಬ್ಬ ಮಹಿಳೆ ತನಗೆ ಸೇರಿದ 1 ಕೋಟಿಗೂ ಅಧಿಕ ಬೆಲೆಬಾಳುವ ಮೂರಂತಸ್ತಿನ ಮನೆಯನ್ನು ಆಟೋರಿಕ್ಷಾ ಚಾಲಕನಿಗೆ ಬರೆದುಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಒಡಿಶಾದ ಕಟಕ್​ ನಿವಾಸಿ ಮಿನಾತಿ ಪಟ್ನಾಯಕ್​ ಎಂಬ ಮಹಿಳೆ 25 ವರ್ಷಗಳಿಂದ ತಮ್ಮ ಕುಟುಂಬಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕಾಗಿ ಅವರ ಇಡೀ ಆಸ್ತಿಯನ್ನೇ ಬಡ ಆಟೋ ರಿಕ್ಷಾ ಚಾಲಕನಿಗೆ ಬರೆದುಕೊಟ್ಟು ಔದಾರ್ಯ ಮೆರೆದರು.

ಕೋಟಿ ಮೌಲ್ಯದ ಮನೆ ಕೊಟ್ಟು ಮಹಿಳೆಯ ಔದಾರ್ಯ

ಬುಧ ಸಮಾಲ್​ ಎಂಬ ಆಟೋ ರಿಕ್ಷಾ ಓಡಿಸುವ ವ್ಯಕ್ತಿ ಮಿನಾತಿ ಪಟ್ನಾಯಕ್​ ಅವರ ಕುಟುಂಬಕ್ಕೆ 25 ವರ್ಷಗಳಿಂದ ಚಿರಪರಿಚಿತ. ಅವರ ಕುಟುಂಬಸ್ಥರ ಸಂಚಾರಕ್ಕಾಗಿ ಬುಧ ಸಮಾಲ್​ ಆಟೋ ರಿಕ್ಷಾವೇ ಮೂಲವಾಗಿತ್ತು.

ಈ ಮಧ್ಯೆ 6 ತಿಂಗಳ ಅವಧಿಯಲ್ಲಿ ಮಿನಾತಿ ಪಟ್ನಾಯಕ್​ ಅವರ ಪತಿ ಹಾಗೂ ಮಗ ತೀರಿಕೊಂಡಿದ್ದರು. ಇದರಿಂದ ಏಕಾಂಗಿಯಾದ ಅವರನ್ನು ರಿಕ್ಷಾ ಚಾಲಕ ಬುಧ ಸಮಾಲ್​ ಮತ್ತು ಅವನ ಪತ್ನಿ ನೋಡಿಕೊಳ್ಳುತ್ತಿದ್ದರು.

ಸಂಬಂಧಿಕರಿದ್ದರೂ ಏಕಾಂಗಿಯಂತಾದ ಮಿನಾತಿ ಪಟ್ನಾಯಕ್​ ಅವರು ಬೇಸತ್ತು, ಇದೀಗ ಮನೆಯನ್ನು ರಿಕ್ಷಾ ಚಾಲಕನ ಹೆಸರಿಗೆ ಬರೆದು ಉಯಿಲು ಮಾಡಿಸಿದ್ದಾರೆ.

'2020ರಲ್ಲಿ ನನ್ನ ಪತಿ ತೀರಿಕೊಂಡರೆ, 2021ರಲ್ಲಿ ನನ್ನ ಮಗನನ್ನು ಕಳೆದುಕೊಂಡೆ. ಇದರಿಂದ ಜೀವನದಲ್ಲಿ ಒಂಟಿಯಾದೆ. ಸಂಬಂಧಿಕರಿದ್ದರೂ ಯಾರೂ ಕೂಡ ನನ್ನ ನೆರವಿಗೆ ಬರಲಿಲ್ಲ. ಬುಧ ಸಮಾಲ್​ ಕುಟುಂಬ ನನ್ನನ್ನು ಹಾರೈಕೆ ಮಾಡುತ್ತಿದೆ. ಇವರ ನಿಸ್ವಾರ್ಥ ಸೇವೆಗಾಗಿ ನನ್ನ ಆಸ್ತಿಯನ್ನು ಅವರ ಹೆಸರಿಗೇ ಬರೆದಿದ್ದೇನೆ' ಎಂದು ಪಟ್ನಾಯಕ್​ ಹೇಳಿದರು.

ರಿಕ್ಷಾ ಚಾಲಕನ ನಿಸ್ವಾರ್ಥ ಸೇವೆಗೆ ಈಗ ಕೋಟಿ ರೂಪಾಯಿ ಆಸ್ತಿ ಒಲಿದುಬಂದಿದೆ.

ಕಟಕ್ (ಒಡಿಶಾ)​: ಇಲ್ಲೊಬ್ಬ ಮಹಿಳೆ ತನಗೆ ಸೇರಿದ 1 ಕೋಟಿಗೂ ಅಧಿಕ ಬೆಲೆಬಾಳುವ ಮೂರಂತಸ್ತಿನ ಮನೆಯನ್ನು ಆಟೋರಿಕ್ಷಾ ಚಾಲಕನಿಗೆ ಬರೆದುಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಒಡಿಶಾದ ಕಟಕ್​ ನಿವಾಸಿ ಮಿನಾತಿ ಪಟ್ನಾಯಕ್​ ಎಂಬ ಮಹಿಳೆ 25 ವರ್ಷಗಳಿಂದ ತಮ್ಮ ಕುಟುಂಬಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕಾಗಿ ಅವರ ಇಡೀ ಆಸ್ತಿಯನ್ನೇ ಬಡ ಆಟೋ ರಿಕ್ಷಾ ಚಾಲಕನಿಗೆ ಬರೆದುಕೊಟ್ಟು ಔದಾರ್ಯ ಮೆರೆದರು.

ಕೋಟಿ ಮೌಲ್ಯದ ಮನೆ ಕೊಟ್ಟು ಮಹಿಳೆಯ ಔದಾರ್ಯ

ಬುಧ ಸಮಾಲ್​ ಎಂಬ ಆಟೋ ರಿಕ್ಷಾ ಓಡಿಸುವ ವ್ಯಕ್ತಿ ಮಿನಾತಿ ಪಟ್ನಾಯಕ್​ ಅವರ ಕುಟುಂಬಕ್ಕೆ 25 ವರ್ಷಗಳಿಂದ ಚಿರಪರಿಚಿತ. ಅವರ ಕುಟುಂಬಸ್ಥರ ಸಂಚಾರಕ್ಕಾಗಿ ಬುಧ ಸಮಾಲ್​ ಆಟೋ ರಿಕ್ಷಾವೇ ಮೂಲವಾಗಿತ್ತು.

ಈ ಮಧ್ಯೆ 6 ತಿಂಗಳ ಅವಧಿಯಲ್ಲಿ ಮಿನಾತಿ ಪಟ್ನಾಯಕ್​ ಅವರ ಪತಿ ಹಾಗೂ ಮಗ ತೀರಿಕೊಂಡಿದ್ದರು. ಇದರಿಂದ ಏಕಾಂಗಿಯಾದ ಅವರನ್ನು ರಿಕ್ಷಾ ಚಾಲಕ ಬುಧ ಸಮಾಲ್​ ಮತ್ತು ಅವನ ಪತ್ನಿ ನೋಡಿಕೊಳ್ಳುತ್ತಿದ್ದರು.

ಸಂಬಂಧಿಕರಿದ್ದರೂ ಏಕಾಂಗಿಯಂತಾದ ಮಿನಾತಿ ಪಟ್ನಾಯಕ್​ ಅವರು ಬೇಸತ್ತು, ಇದೀಗ ಮನೆಯನ್ನು ರಿಕ್ಷಾ ಚಾಲಕನ ಹೆಸರಿಗೆ ಬರೆದು ಉಯಿಲು ಮಾಡಿಸಿದ್ದಾರೆ.

'2020ರಲ್ಲಿ ನನ್ನ ಪತಿ ತೀರಿಕೊಂಡರೆ, 2021ರಲ್ಲಿ ನನ್ನ ಮಗನನ್ನು ಕಳೆದುಕೊಂಡೆ. ಇದರಿಂದ ಜೀವನದಲ್ಲಿ ಒಂಟಿಯಾದೆ. ಸಂಬಂಧಿಕರಿದ್ದರೂ ಯಾರೂ ಕೂಡ ನನ್ನ ನೆರವಿಗೆ ಬರಲಿಲ್ಲ. ಬುಧ ಸಮಾಲ್​ ಕುಟುಂಬ ನನ್ನನ್ನು ಹಾರೈಕೆ ಮಾಡುತ್ತಿದೆ. ಇವರ ನಿಸ್ವಾರ್ಥ ಸೇವೆಗಾಗಿ ನನ್ನ ಆಸ್ತಿಯನ್ನು ಅವರ ಹೆಸರಿಗೇ ಬರೆದಿದ್ದೇನೆ' ಎಂದು ಪಟ್ನಾಯಕ್​ ಹೇಳಿದರು.

ರಿಕ್ಷಾ ಚಾಲಕನ ನಿಸ್ವಾರ್ಥ ಸೇವೆಗೆ ಈಗ ಕೋಟಿ ರೂಪಾಯಿ ಆಸ್ತಿ ಒಲಿದುಬಂದಿದೆ.

Last Updated : Nov 15, 2021, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.