ETV Bharat / bharat

ಸಿಧು ವಿರುದ್ಧ ಯುದ್ಧ ಘೋಷಿಸಿದ ಕ್ಯಾಪ್ಟನ್​​.. ಪಂಜಾಬ್ ಸಿಎಂ ಆಗುವುದನ್ನ ತಪ್ಪಿಸಲು ಬಲಿಷ್ಠ ಅಭ್ಯರ್ಥಿ ಕಣಕ್ಕೆ.. - ಕಾಂಗ್ರೆಸ್​​ ಪಂಜಾಬ್​

ಸಿಧು ಅವರ ಸೋಲು ಖಚಿತಪಡಿಸುವ ಉದ್ದೇಶದಿಂದ ಪಿಪಿಸಿಸಿ ಅಧ್ಯಕ್ಷರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುತ್ತೇನೆ ಎಂದಿದ್ದಾರೆ. ಡ್ರಾಮಾ ಮಾಸ್ಟರ್​​ ಆಗಿರುವ ಸಿಧು ನಾಯಕತ್ವದಲ್ಲಿ ಕಾಂಗ್ರೆಸ್​ ಎರಡು ಅಂಕಿ ಗೆಲುವು ಸಾಧಿಸಲು ಹೆಣಗಾಡಲಿದೆ..

Amarinder Singh
Amarinder Singh
author img

By

Published : Sep 22, 2021, 9:26 PM IST

ಚಂಡೀಗಢ : ಪಂಜಾಬ್​ ಕಾಂಗ್ರೆಸ್​ನಲ್ಲಿ ರಾಜಕೀಯ ವೈರತ್ವ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್​ ಸಿಂಗ್ ಹಾಗೂ ಕಾಂಗ್ರೆಸ್​ ಅಧ್ಯಕ್ಷರಾಗಿರುವ ನವಜೋತ್​ ಸಿಂಗ್​ ನಡುವಿನ ಮುಸುಕಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣ ಗೋಚರವಾಗುತ್ತಿಲ್ಲ.

ಪಂಜಾಬ್​ ಕಾಂಗ್ರೆಸ್ ರಾಜಕೀಯ ಕಚ್ಚಾಟಕ್ಕೆ ಈಗಾಗಲೇ ಮುಖ್ಯಮಂತ್ರಿ ಅಮರೀಂದರ್​​ ಸಿಂಗ್​ ತಲೆದಂಡವಾಗಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಪಂಜಾಬ್​​ ಪ್ರದೇಶ ಕಾಂಗ್ರೆಸ್​​ ಅಧ್ಯಕ್ಷ ನವಜೋತ್ ಸಿಂಗ್​ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಸಿಧು ಓರ್ವ 'ಡ್ರಾಮಾ ಮಾಸ್ಟರ್​'. ಮುಂದಿನ ಚುನಾವಣೆಯಲ್ಲಿ ಅವರ ಸೋಲಿಗಾಗಿ ಬಲಿಷ್ಠ ಅಭ್ಯರ್ಥಿಯನ್ನ ಕಣಕ್ಕಿಳಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. 2022ರಲ್ಲಿ ಪಂಜಾಬ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಸಿಧು ಅವರ ಸೋಲು ಖಚಿತಪಡಿಸುವ ಉದ್ದೇಶದಿಂದ ಪಿಪಿಸಿಸಿ ಅಧ್ಯಕ್ಷರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುತ್ತೇನೆ ಎಂದಿದ್ದಾರೆ. ಡ್ರಾಮಾ ಮಾಸ್ಟರ್​​ ಆಗಿರುವ ಸಿಧು ನಾಯಕತ್ವದಲ್ಲಿ ಕಾಂಗ್ರೆಸ್​ ಎರಡು ಅಂಕಿ ಗೆಲುವು ಸಾಧಿಸಲು ಹೆಣಗಾಡಲಿದೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದ ಅಮರೀಂದರ್ ಸಿಂಗ್​, ಅವರಿಗೆ ಪಾಕ್ ಪ್ರಧಾನಿ ಜೊತೆ ನಂಟಿದೆ. ಸಿಎಂ ಆಗುವುದಕ್ಕೆ ನನ್ನ ವಿರೋಧವಿದೆ ಎಂದಿದ್ದರು.

ಇದನ್ನೂ ಓದಿರಿ: ದೇಶದ ಭದ್ರತೆ ದೃಷ್ಟಿಯಿಂದ ಸಿಧು ಪಂಜಾಬ್‌ ಸಿಎಂ ಆಗೋಕೆ ನನ್ನ ವಿರೋಧವಿದೆ.. ಕ್ಯಾ. ಅಮರೀಂದರ್ ಸಿಂಗ್

ಈ ಹಿಂದಿನಿಂದಲೂ ಅಮರೀಂದರ್​ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಮುಸುಕಿನ ಗುದ್ದಾಟ ಮುಂದುವರೆದಿತ್ತು. ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗುವುದಕ್ಕೂ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಖುದ್ದಾಗಿ ಅಮರೀಂದರ್​ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸದಾಗಿ ಚರಣ್​​ಜಿತ್​ ಸಿಂಗ್​​ ಚನ್ನಿ ಸಿಎಂ ಆಗಿದ್ದಾರೆ.

ಚಂಡೀಗಢ : ಪಂಜಾಬ್​ ಕಾಂಗ್ರೆಸ್​ನಲ್ಲಿ ರಾಜಕೀಯ ವೈರತ್ವ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್​ ಸಿಂಗ್ ಹಾಗೂ ಕಾಂಗ್ರೆಸ್​ ಅಧ್ಯಕ್ಷರಾಗಿರುವ ನವಜೋತ್​ ಸಿಂಗ್​ ನಡುವಿನ ಮುಸುಕಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣ ಗೋಚರವಾಗುತ್ತಿಲ್ಲ.

ಪಂಜಾಬ್​ ಕಾಂಗ್ರೆಸ್ ರಾಜಕೀಯ ಕಚ್ಚಾಟಕ್ಕೆ ಈಗಾಗಲೇ ಮುಖ್ಯಮಂತ್ರಿ ಅಮರೀಂದರ್​​ ಸಿಂಗ್​ ತಲೆದಂಡವಾಗಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಪಂಜಾಬ್​​ ಪ್ರದೇಶ ಕಾಂಗ್ರೆಸ್​​ ಅಧ್ಯಕ್ಷ ನವಜೋತ್ ಸಿಂಗ್​ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಸಿಧು ಓರ್ವ 'ಡ್ರಾಮಾ ಮಾಸ್ಟರ್​'. ಮುಂದಿನ ಚುನಾವಣೆಯಲ್ಲಿ ಅವರ ಸೋಲಿಗಾಗಿ ಬಲಿಷ್ಠ ಅಭ್ಯರ್ಥಿಯನ್ನ ಕಣಕ್ಕಿಳಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. 2022ರಲ್ಲಿ ಪಂಜಾಬ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಸಿಧು ಅವರ ಸೋಲು ಖಚಿತಪಡಿಸುವ ಉದ್ದೇಶದಿಂದ ಪಿಪಿಸಿಸಿ ಅಧ್ಯಕ್ಷರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುತ್ತೇನೆ ಎಂದಿದ್ದಾರೆ. ಡ್ರಾಮಾ ಮಾಸ್ಟರ್​​ ಆಗಿರುವ ಸಿಧು ನಾಯಕತ್ವದಲ್ಲಿ ಕಾಂಗ್ರೆಸ್​ ಎರಡು ಅಂಕಿ ಗೆಲುವು ಸಾಧಿಸಲು ಹೆಣಗಾಡಲಿದೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದ ಅಮರೀಂದರ್ ಸಿಂಗ್​, ಅವರಿಗೆ ಪಾಕ್ ಪ್ರಧಾನಿ ಜೊತೆ ನಂಟಿದೆ. ಸಿಎಂ ಆಗುವುದಕ್ಕೆ ನನ್ನ ವಿರೋಧವಿದೆ ಎಂದಿದ್ದರು.

ಇದನ್ನೂ ಓದಿರಿ: ದೇಶದ ಭದ್ರತೆ ದೃಷ್ಟಿಯಿಂದ ಸಿಧು ಪಂಜಾಬ್‌ ಸಿಎಂ ಆಗೋಕೆ ನನ್ನ ವಿರೋಧವಿದೆ.. ಕ್ಯಾ. ಅಮರೀಂದರ್ ಸಿಂಗ್

ಈ ಹಿಂದಿನಿಂದಲೂ ಅಮರೀಂದರ್​ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಮುಸುಕಿನ ಗುದ್ದಾಟ ಮುಂದುವರೆದಿತ್ತು. ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗುವುದಕ್ಕೂ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಖುದ್ದಾಗಿ ಅಮರೀಂದರ್​ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸದಾಗಿ ಚರಣ್​​ಜಿತ್​ ಸಿಂಗ್​​ ಚನ್ನಿ ಸಿಎಂ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.