ಮುಂಬೈ(ಮಹಾರಾಷ್ಟ್ರ): ದಿವಂಗತ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಒಂದು ದಿನದ ನಂತರ, ಗುರುವಾರ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕೇಂದ್ರೀಯ ತನಿಖಾ ದಳ (ಸಿಬಿಐ)ದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.
![Sushant Singh Rajput's CBI probe may not be like Narendra Dabholkar's probe: Sharad Pawar](https://etvbharatimages.akamaized.net/etvbharat/prod-images/mh-mum-01-sharad-pav-tweet-sushant-singh-7201153_20082020085413_2008f_1597893853_105.jpg)
![Sushant Singh Rajput's CBI probe may not be like Narendra Dabholkar's probe: Sharad Pawar](https://etvbharatimages.akamaized.net/etvbharat/prod-images/mh-mum-01-sharad-pav-tweet-sushant-singh-7201153_20082020085413_2008f_1597893853_351.jpg)
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ನರೇಂದ್ರ ದಾಭೋಲ್ಕರ್ ಅವರ ಕೊಲೆ ಪ್ರಕರಣದ ತನಿಖೆಯಂತಾಗದೇ ತನಿಖೆಯಲ್ಲಿ ಫಲಿತಾಂಶ ದೊರೆಯಲಿ ಎಂದು ಆಶಿಸಿದರು.
ಈ ಕುರಿತು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ನಲ್ಲಿ "ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮತ್ತು ತನಿಖಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರ ನೀಡುವ ಸುಪ್ರೀಂಕೋರ್ಟ್ ತೀರ್ಪನ್ನು ಮಹಾರಾಷ್ಟ್ರ ಸರ್ಕಾರ ಗೌರವಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಡಾ. ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದ ಸಿಬಿಐ ತನಿಖೆ 2014 ರಲ್ಲಿ ಪ್ರಾರಂಭವಾಯಿತು ಮತ್ತು ಬಗೆಹರಿಯದೇ ಉಳಿಯಿತು. ಈ ತನಿಖೆ ಹಾಗಾಗುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಪವಾರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.