ಕಾಸರಗೋಡು(ಕೇರಳ): ಎರಡು ಮುಂಗುಸಿಗಳನ್ನು ಕೊಂದ ಕಿಡಿಗೇಡಿಗಳು, ಅದನ್ನು ಮರಕ್ಕೆ ನೇತು ಹಾಕಿರುವ ವಿಲಕ್ಷಣ ಘಟನೆ ಜಿಲ್ಲೆಯ ಕುಂಬದಾಜೆ ಎಂಬಲ್ಲಿ ನಡೆದಿದೆ.
ಇಲ್ಲಿನ ಖಾಸಗಿ ವ್ಯಕ್ತಿಗೆ ಸೇರಿದ ಸ್ಥಳವೊಂದರಲ್ಲಿ ಈ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ತಿರುವನಂತಪುರಂನಲ್ಲಿ ಗರ್ಭಿಣಿ ಬೆಕ್ಕನ್ನು ಕೊಂದು ಇದೇ ರೀತಿ ನೇಣಿಗೆ ಹಾಕಲಾಗಿತ್ತು. ಇದಾದ ಬೆನ್ನಲ್ಲೇ ಮುಂಗುಸಿಗಳನ್ನು ಕೊಂದು ನೇಣು ಹಾಕಿರುವ ಘಟನೆ ಮಾನವನ ಹಿಂಸಾತ್ಮಕ ಮನೋಭಾವದ ಪರಿಯನ್ನು ತೋರಿಸುತ್ತಿದೆ.
ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮುಂಗುಸಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.