ಮುಂಬೈ : ಕೊಂಕಣ್ ರೈಲ್ವೆ ಮಾರ್ಗದ ಪೆಡ್ನೆ ( ಗೋವಾ) ಬಳಿ ಸುರಂಗ ಕುಸಿತದಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಈ ವರ್ಷದ ಮಾನ್ಸೂನ್ ಅವಧಿಯ ಮೊದಲ ಮತ್ತು ದೊಡ್ಡ ದುರಂತ ಎಂದು ಇದನ್ನು ಪರಿಗಣಿಸಲಾಗಿದೆ. ರೈಲ್ವೆ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದೆ.
ಘಟನೆ ಬಳಿಕ ರೈಲು ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ. ಎರ್ನಾಕುಲಂ- ಹಜ್ರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ಮಡಗಾಂವ್- ಲೊಂಡಾ- ಮಿರಾಜ್ ಪುಣೆ - ಪನವೆಲ್ -ಕಲ್ಯಾಣ್ ಮಾರ್ಗವಾಗಿ ಸಂಚರಿಸಲಿದೆ.
ಲೋಕಮಾನ್ಯ ತಿಲಕ್ - ತಿರುವನಂತಪುರಂ ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ಮಡಗಾಂವ್- ಲೊಂಡಾ- ಮಿರಾಜ್- ಪುಣೆ- ಪನವೆಲ್ ಮಾರ್ಗವಾಗಿ ತೆರಳಲಿದೆ. ನವದೆಹಲಿ- ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್ಪ್ರೆಸ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ಪನವೆಲ್-ಪುಣೆ-ಮಿರಾಜ್- ಲೊಂಡಾ-ಮಡಗಾಂವ್ ಮಾರ್ಗವಾಗಿ ಸಂಚರಿಸಲಿದೆ.
ಇನ್ನು, ಹಜ್ರತ್ ನಿಜಾಮುದ್ದೀನ್-ಎರ್ನಾಕುಲಂ-ಹಜ್ರತ್ ನಿಜಾಮುದ್ದೀನ್ ವಾರದ ಡುರಾಂಟೊ ಎಕ್ಸ್ಪ್ರೆಸ್ ವಿಶೇಷ ರೈಲು ( ಎರಡು ಟ್ರಿಪ್ಗಳು) ಪುಣೆ -ಲೊಂಡಾ-ಮಡಗಾಂವ್ ಮಾರ್ಗದ ಮೂಲಕ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.